Monday, September 27, 2010
‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’
Thursday, September 2, 2010
Hai 9483478030… Bye 9448657473… & ವೈಶಾಕ್ ಕಾಲಿಂಗ್ ಸುಧಾಕರ್.....
Saturday, June 26, 2010
‘ ಈಜು ಕಲಿಯೂ ಮುಂಚೆ ಸಾವಿನ ಮನೆಯ ಕದ ತಟ್ಟಿ ಬಂದ ಆ ದಿನದ ನೆನಪು…’
ಬೆಳಿಗ್ಗೆ ಸರಿಯಾಗಿ 5.40 ಎಚ್ಚರ ಅಯೀತು. ಅಲ್ಲೇ ಕಿಟಕಿ ಪಕ್ಕ ಸಣ್ಣದಾಗಿ ಮಳೆ ಹನಿ ಬೀಳೋ ಸದ್ದು. ‘ವಾ.... ಮಳೆ ! ಸ್ವಿಮ್ಮಿಂಗ್ ಏನ್ ಮಾಡೋದಪ್ಪ?...’ ಅನ್ನಿಸಿತು. ಕೂಡಲೆ ಎದ್ದು Computer ಆನ್ ಮಾಡಿ ಡೌನ್ಲೋಡ್ ಗೆ ಹಾಕಿ ನಂತರ ಬಾತ್ರೂಮ್ ಗೇ ಹೋಗಿ ಫ್ರೆಶ್ ಆಗೀ ಬಂದೆ. ಮಳೆ ಸ್ವಲ್ಪ ಕಡಿಮೆ ಆಗಿದೆ ಅನ್ನಿಸಿತು. ಸರಿ ಸ್ವಿಮ್ಮಿಂಗ್ ಹೋಗೋಣ ಅಂತ ಗಾಡಿ ಸ್ಟಾರ್ಟ್ ಮಾಡಿ ಮನೆಯಿಂದ ಹೊರಟೆ. ಮಳೆಗೆ ಇಡೀ ಮೈಸೂರು ಒದ್ದೆ ಆಗಿತ್ತು. ನಮ್ಮ ಮನೆ ಮುಂದೆ ಇದ್ದ ಟಾರ್ ರೋಡ್ ಅನ್ನು ಗುಡಿಸಿ.. ಒರೆಸಿ.. ಸಾರಿಸಿದ ಹಾಗ ಇತ್ತು. ನಮ್ಮ ಮನೆ ರಸ್ತೇಲಿ ನೆಟ್ಟಿದ್ದ ಮಹಾಗನಿ, ಹೊಂಗೆ, ಮೇ ಫ್ಲೋವರ್ ಮುಂತಾದ ಮರಗಳೆಲ್ಲ ಸ್ನಾನಾ ಮಾಡಿ ಫ್ರೆಶ್ ಆಗೀ ನಿಂತಿರುವ ರೀತಿ ಇತ್ತು. ಕೆಲವೊಂದು ಕಡೆ ಗುಲ್ಮೊಹರ್(ಮೇ ಫ್ಲೋವರ್) ನ ಕೆಂಪು ಹೂವುಗಳು ಮಳೆ ಗಾಳಿಗೆ ಉದುರಿ ರಸ್ತೆಗೆಲ್ಲ ರೆಡ್ ಕಾರ್ಪೆಟ್ ಹಾಸಿದಂತೆ ಕಾಣುತಿತ್ತು.
ಗಾಡಿ ಸ್ಟ್ಯಾಂಡಿನಲ್ಲಿ ಹೆಚ್ಚಿಗೆ ಗಾಡಿಗಳು ಇರಲಿಲ್ಲ. ನಾನು ನನ್ನ ಗಾಡಿ ನಿಲ್ಲಿಸಿ Entrance ಗೆ ಬಂದೆ. Entranceನಲ್ಲಿ ಟಿಕೆಟ್ ಕೌಂಟರ್ ಇದೆ. ಅಲ್ಲೆ ಪಕ್ಕ ಬಲಕ್ಕೆ ಒಂದು ಪ್ಯಾಸೇಜ್ ಲ್ಲಿ ಟಿಕೆಟ್ ಹರಿಯುವವನು (ಪಾಸು ಚೆಕ್ ಕೂಡ ಮಾಡ್ತಾನೆ...) ನಿಂತಿರ್ತನೆ. ಅವನಿಗೆ ಪಾಸು ತೋರಿಸಿ ಒಳಗೆ ಎಂಟರ್ ಆದೆ. ಅಲ್ಲಿ ಎಂಟರ್ ಆದ ಕೊಡಲೇ ಎಡ ಹಾಗು ಬಲಕ್ಕೆ ಒಂದೊಂದು ದೊಡ್ಡ ಸಂಪಿಗೆ ಮರ ಸಿಗುತ್ತದೆ. ಹಾಗೆ ಇನ್ನು ಎರಡು ಹೆಜ್ಜೆ ಮುಂದೆ ಹೋದರೆ ಕಾಣುತ್ತೆ ಸ್ವಿಮ್ಮಿಂಗ್ ಪೂಲ್. ಮೈಸೂರ್ ಗೆ ಅತ್ಯಂತ ದೊಡ್ಡದು ಈ ಮೈಸೂರು ಯೂನಿವೆರ್ಸಿಟಿ ಸ್ವಿಮ್ಮಿಂಗ್ ಪೂಲ್.
ಹಾಗೆ ಇದ್ದಕಿದ್ದಂತೆ ನನಗೆ ಫೆಬ್ರುವರಿ 2005 ರಲ್ಲಿ ಉತ್ತರ ಕರ್ನಾಟಕದಲ್ಲಿನ ಪ್ರಸಿದ್ದ ಸ್ಥಳ ‘ಉಳವಿ’ ಹತ್ತಿರ ಇರುವ ‘ಗುಂದು’ ಅನ್ನೋ ಊರಿನ ಸಮೀಪ ಇದ್ದ ‘ಕಾನೇರಿ’ ನದಿಯ ದಡದಲ್ಲಿ ನಡೆದ ಒಂದು ಘಟನೆ ನೆನಪಾಯೀತು. ಆಗ ಇನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಟ್ರೇನಿಂಗ್ ನಲ್ಲಿ ಇದ್ದೆ. ಉಳವಿಯಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತದೆ. ಅಲ್ಲಿ ಜನರು ಜಾತ್ರೆ ಯಿಂದ ವಾಪಸ್ಸು ಕಾಡು ದಾರಿಯಲ್ಲಿ ಬರುವಾಗ ಕಾಡಿನಲ್ಲಿ ಬೆಳೆದಿರುವ ನಾಗ ಬೆತ್ತ ಗಿಡದಲ್ಲಿ ಬೆತ್ತದ ಕೋಲನ್ನು(Stick) ಕಡಿದುಕೊಂಡು ಮನೆಗೆ ತೆಗೆದುಕೊಂಡು ಹೋಗ್ತಾರೆ. ಹೀಗೆ ಜಾತ್ರೆ ಯಿಂದ ಬರುವಾಗ ಬೆತ್ತವನ್ನು ತಂದರೆ ಮನೆಗೆ ಒಳ್ಳೆಯದಾಗುತ್ತೆದೆ ಅನ್ನೋ ನಂಬಿಕೆ. ಹೀಗೆ ಬೆತ್ತ ಕಡಿಯಲು ಕಾಡು ನುಗ್ಗಿ ಇಡೀ ಕಾಡು ಹಾಳು ಮಾಡ್ತಾರೆ ಅಂತ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಉಳವಿ ಜಾತ್ರೆ ಟೈಮ್ ನಲ್ಲಿ ಉಳವಿ ಸುತ್ತ ಮುತ್ತ ಮೈನ್ ರೋಡ್ ನಲ್ಲಿ 6 – 7 ಚೆಕ್ ಪೋಸ್ಟ್ ಮಾಡಿ ಅಲ್ಲಿ 15 - 20 ಜನರನ್ನು ಡೆಪ್ಯೂಟ್ ಮಾಡ್ತಾರೆ. ಅಲ್ಲಿ ಜಾತ್ರ ಮುಗಿಯುವಷ್ಟು ದಿನ Day & Night ಶಿಫ್ಟ್ ನಲ್ಲಿ Staff ಗಳು ಜಾತ್ರೆಗೆ ಹೋಗಿ ಬರೋ ಗಾಡಿಗಳನ್ನೆಲಾ ಚೆಕ್ ಮಾಡಿ ಬೆತ್ತ ಇದ್ದರೆ Seizeಮಾಡಬೇಕು. ಹಾಗೆ ನನ್ನನ್ನು ಸೇರಿ 15 ಜನರನ್ನ (ನನ್ನ Batch Foresterಗಳನ್ನು) ‘ಗುಂದು’ ಗೆ ಹಾಕಿದ್ದರು.
ಎರಡನೆ ದಿನ ನನ್ನ ಫ್ರೆಂಡ್ಸ್ ಎಲ್ಲಾ jolly ಆಗೀ ನೀರಿನಲ್ಲಿ ಈಜುವುದನ್ನು ನೋಡಿ, ನನಗೂ ಆಸೆಯಾಗಿ ನೀರಿಗಿಳಿದೆ. ನಾನು 1st & 2nd P U ನಲ್ಲಿದ್ದಾಗ ಫ್ರೆಂಡ್ಸ್ ಜೊತೆ ಮೈಸೂರ್ ಇಂದ 25 kms ದೂರದಲ್ಲಿರೋ ಬಲಮುರಿ ಹಾಗು ಎಡಮುರಿ ಅನ್ನೋ ಚಿಕ್ಕ ಫಾಲ್ಸ್ಗೆ ಕಾಲೇಜ್ ಬನ್ಕ್ ಮಾಡಿ ತಿಂಗಳಿಗೆ 1 ಬಾರಿನಾದರು ಹೋಗ್ತಾ ಇದ್ದೆ. ಅಲ್ಲಿ 3 – 4 ಅಡಿ ಆಳದಲ್ಲಿ ಕೈ ಕಾಲು ಆಡಿಸಿದ್ದ ಅನುಭವ ಬಿಟ್ರೆ, ಬೇರೆ ಯಾವತ್ತು ನೀರಿನಲ್ಲಿ ಈಜಾಡಿರಲಿಲ್ಲ. ಆ ಧೈರ್ಯದ ಮೇಲೆ ನದಿಗೆ ಬಿದ್ದು ಈಜಲು ಶುರುಮಾಡಿದೆ. ದಡದಿಂದ ಸುಮಾರು 10 ಅಡಿ ಈಜಿ ಮುಂದೆ ಹೋದೆ . ಎಲ್ಲ ಸರಿಯಾಗೆ ಇತ್ತು. ಕೈ ಕಾಲನ್ನು ನೀರಿನಲ್ಲಿ ಸ್ಯಕ್ಲಿಂಗ್ (cycling) ರೀತಿ ಅಡಿಸ್ತಾ ಇದ್ದೆ. ಗ್ರಚಾರ ಅಂತಾರಲ್ಲ ಹಾಗೆ, ಯಾಕೋ ಒಮ್ಮೆ ಇದಕಿದ್ದಂತೆ ಈಗ ನೀರಿನ ಆಳ ಎಷ್ಟಿದೆ ನೋಡೋಣ ಅಂತ ಅನ್ನಿಸಿ ಕೈ ಕಾಲು ಆಡಿಸುವುದನ್ನು ಬಿಟ್ಟೆ ನೋಡಿ...., ಅಬ್ಬಾ….! ಕಾಲಿಗೆ ಏನು ಸಿಕ್ತಿಲ್ಲ... ಇದ್ದಕಿದ್ದಂತೆ ಮುಳುಗಲು ಶುರು ಮಾಡಿದೆ... ಎಷ್ಟೇ ಪ್ರಯತ್ನಪಟ್ಟರು ಕೈ ಕಾಲು ಆಡಿಸಲು ಆಗ್ತಾ ಇಲ್ಲ. ಒಂದ್ ಸಲ ನೀರ್ ಕುಡಿದು, ಉಸಿರು ಸಿಕ್ಕಿ, ನೀರು ನೆತ್ತಿಗೆ ಏರಿದ ಹಾಗೆ ಆಗೀ ಕೆಮ್ಮಿದೆ. ಯಾಕೋ ಇವತ್ತು ನಾನು ಬದುಕಿ ಉಳಿಯೋದಿಲ್ಲ ಅನ್ನಿಸಿಬಿಟ್ಟಿತು! ಜೀವ ಭಯ ಒಮ್ಮೆಲೆ ಮನಸ್ಸಿಗೆ ನುಗ್ಗಿ ಬಂತು. ಪಕ್ಕದಲ್ಲೇ ಈಜುತಿದ್ದ ಯಾದವ್ ಅನ್ನುವವನಿಗೆ ನಾನು ಹೇಗೂ ಕಷ್ಟ ಪಟ್ಟು ‘ ರೀ... ಯಾದವ್.. ಯಾಕೋ ಮುಳಗುತ್ತ ಇದ್ದೀನಿ ಸ್ವಲ್ಪ ಕೈ ಕೊಡಿ...’ ಅಂದು ಪುನಃ ಮುಳುಗಿದೆ. ಅವನು ನಾನು ತಮಾಷೆ ಮಾಡ್ತಾ ಇದ್ದೀನಿ ಅಂತ ‘ಯೆ.. ಸಾಕು ಬನ್ನಿ ಸುಧಾಕರ್ ಡ್ರಾಮಾ ಮಾಡಬೇಡಿ..’ ಅಂತ ಹೇಳಿ, ಈಜಿ ಮುಂದೆ ಹೋದ. ನೀರನಲ್ಲಿ ಮುಳಗುತ್ತಿದ್ದ ನನಗೆ ಆ ಕ್ಷಣದಲ್ಲೂ ಯಾದವ್ ಮೇಲೆ ಸಿಕ್ಕಪಟ್ಟೆ ಕೋಪ ಬಂತು. ತಕ್ಷಣ ಪಕ್ಕ ನೋಡಿದೆ ಇನ್ನೊಬ್ಬ Batch mate ನರೇಶ್ ಕಾಣಿಸಿದ. ಅವನು ಸ್ನಾನ ಮುಗಿಸಿ ಎದ್ದು ದಡದಲ್ಲಿ ಟವಲ್ ನಿಂದ ಮೈ ಒರೆಸಿಕೊಳ್ತಾ ಇದ್ದ. ನಾನು ‘ ನರೇಶ………’ ಅಂತ ಕೂಗಿ ಪುನ ಮುಳುಗಿದ. ಕೈ ಮೇಲೆ ಇತ್ತು. ಅಬ್ಬ.. ಇವತ್ತಿಗೂ ನರೇಶ್ ನನ್ನ ಕೆಲವು ಸಲ ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳುತೇನೆ. ನನಗೆ ಈಜು ಬಾರದೆ ಮುಳುಗುತ್ತಿದ್ದನು ನೋಡಿದ ಅವನು ತಕ್ಷಣ ನೀರಿಗೆ ಧುಮುಕಿ ಹತ್ತಿರ ಬಂದು ಕೈ ಚಾಚಿ ನೀಡಿದ. ಅವನ ಕೈ ಮುಟ್ಟಿದ ಆ ಕ್ಷಣ ನನಗೆ ಪುನರ್ಜನ್ಮವಾದಂತೆ ಆಯಿತು. ಹಾಗೆ ನರೇಶನ ಕೈ ಹಿಡಿದುಕೊಂಡು ತಕ್ಷಣ ನೀರಿನ ಮೇಲಕೆ ಬಂದೆ. ಹಾಗೆ ಅವನ್ನ ಹಿಡ್ಕೊಂಡೆ ದಡ ಸೇರಿದೆ. ಏನ್ ಒಂಥರಾ ಷಾಕ್ ಆಗೀ Trance ಗೆ ಹೋಗಿಬಿಟ್ಟೆ. ನರೇಶ ಪುನಃ ಮೈ ಒರಸಿಕೊಂಡು ಬಂದು‘ ಏನೋ ಮಾರಾಯ ಈಜು ಬರೋಲ್ಲ ಅಂದ್ರೆ ಯಾಕ ಅಷ್ಟು ದೂರ ಹೋಗ್ಬೇಕು?..’ ಅಂದ. ಯಾದವ್ ಬಂದು ‘ರೀ ಸುಧಾಕರ್. ಸಾರೀ ಮಾ.. ನನಗೆ ನಿಜವಾಗಲು ನಿಮಗೆ ಈಜು ಬಾರದೆ ಇರೋ ವಿಷಯ ಗೊತ್ತಿರಲಿಲ್ಲ...’ ಅಂದ. ನಾನು 2 ದಿನ ಇಡೀ ಗರ ಬಡಿದವನಂತೆ ಆಗಿ ಬಿಟ್ಟಿದ್ದೆ. ಏನೋ ಒಂಥರಾ ಸಾವಿನ ಹತ್ತಿರ ಹೋಗಿ ಬಂದ ಅನುಭವ. ಅವತ್ತು ನನ್ನ ಅಪ್ಪಾಜಿಯನ್ನು ಮನಸ್ಸಿನಲ್ಲೇ ಸ್ವಲ್ಪ ಬೈದುಕೊಂಡೆ. ನನನ್ನು ಚಿಕ್ಕ ವಯಸ್ಸಿನಲ್ಲೆ ಅವರು ಸ್ವಿಮ್ಮಿಂಗ್ ಸೇರಿಸಿದ್ರೆ ,ಇವತ್ತು ಹಾಗಾಗುತ್ತಿರಲಿಲ್ಲ ಅನ್ನಿಸಿತು.
ಪುನಃ 12 ಫೀಟ್ ನ ಒಂದು ತುದಿಯಲ್ಲಿಗೆ ಬಂದು, Back Stroke ನಲ್ಲಿ ಸ್ವಿಮ್ ಮಾಡುತ್ತ ಮನಸಿನಲ್ಲಿ ಹಾಗೆ ನನ್ನ ಫ್ರೆಂಡ್ ‘Dr, ದಿಲೀಪ್’ ನ ನೆನೆಸಿಕೊಂಡೆ, ಅವತ್ತು ಸಂಜೆ ಅವನು ಸಿಕ್ಕಿಲ್ಲ ಅಂದ್ರೆ ಇವತ್ತು ನಾನು ಈಜು ಕಲಿಯೋಕೆ ಸಾಧ್ಯನೇ ಇರ್ತಿರಲಿಲ್ಲವೇನೋ ಅನ್ನಿಸಿತು. 2 ತಿಂಗಳ ಹಿಂದ ತಾನೆ ಅವನು ಅನೆಸ್ತೆಶಿಯಾದಲ್ಲಿ P G ಮುಗಿಸಿ ಬಿಜಾಪುರದಿಂದ ಮೈಸೂರ್ ಗೆ ವಾಪಾಸಾಗಿದ್ದ.
ಇದೆಲ್ಲ ಯೋಚನೆ ಮಾಡ್ತಾ ಹಾಗೆ ಸ್ವಿಮ್ಮಿಂಗ್ ಪೂಲ್ ನ ಒಂದು ಬದಿಯಲ್ಲಿನ ಸೆಂಟರ್ ನಲ್ಲಿ ಇದ್ದ ಒಂದು Exit ಸ್ಪೇಸ್ ಮೇಲೆ ತೂಗು ಹಾಕಿದ್ದ 'ಅಜಂತಾ' ಗಡಿಯಾರವನ್ನು ನೋಡಿದೆ. ಆದು 7.10 ತೋರಿಸ್ತಾ ಇತ್ತು. ಇನ್ನು 5 ನಿಮಿಷ ಇದೆ, ಲಾಸ್ಟ್ ಒಂದು Length ಮಾಡಿ ಹೊರಡೋಣ ಅಂತ ಅಂದುಕೊಂಡು, ಪುನಃ ನೀರಿನಲ್ಲಿ ಮುಳುಗಿ 12 ಫೀಟ್ ಕಡೆ ಸ್ವಿಮ್ ಮಾಡಲು ಶುರು ಮಾಡಿದೆ.
Saturday, June 5, 2010
ರಾಗಿ ತೂರುವ ಹಾಡಿನಿಂದ ತಾನ್ಸೇನ್ ನ ‘ದೀಪಕ್ ರಾಗ’ದವರೆಗೆ…
ಅಪ್ಪಾಜಿ ಚಂದ್ರ ಆಂಟಿ ಹಾಗು ಅಂಕಲ್ ಮಾತು ಕೇಳಿ ‘ ಸರ್ ಹಿಂದಿನ ಕಾಲದಲ್ಲಿ ರಾಗಿ ಹಾಗು ಬತ್ತನಾ ಗದ್ದೆ ಹಾಗು ರಸ್ತೆಗಳಲ್ಲಿ ತೋರುತಿದ್ದಾಗ ಒಂದು ಹಾಡು ಹೇಳ್ತಾ ಇದ್ದರು ನೆನಪಿದಿಯಾ ಸರ್?..’ ಅಂತ ಪಾಪಣ್ಣ ಅಂಕಲ್ ಗೆ ಕೇಳಿದರು. ಪಾಪಣ್ಣ ಅಂಕಲ್ ‘ಅದೇನೋ ಹೇಳ್ತಾರೆ ಸರ್… ಈಗ ನೆನಪಿಗೆ ಬರ್ತಾ ಇಲ್ಲ ’ಅಂದ್ರು. ಅದಕ್ಕೆ ಅಪ್ಪಾಜಿ ‘ ಸರ್ ಬತ್ತ ಹಾಗು ರಾಗಿನ ಗಾಳಿಗೆ ತುರುವಾಗ ಅವರು ತೂರೋ ದಿಕ್ಕಿನಲ್ಲೇ ಗಾಳಿ ಬರಲಿ ಅಂತ ಹೊಯಿಲ್ ಗೋ ವಾಸುದೇವ... ಹೊಯಿಲ್ ಗೋ... ಅಂತಾರೆ, ಕೆಲವು ಸಲ ಕಾಕತಾಳಿಯ ಅನ್ನುವಂತೆ ಅವರು ಆ ರೀತಿ ಹೇಳಿದ ತಕ್ಷಣ ಗಾಳಿನು ಬೀಸಿಬಿಡುತ್ತೆ… ಹಾಗೆ ಈಗ ನಾವು ಅ ಹಾಡು ಹೇಳಿ ಗಾಳಿ ಬರಿಸ್ಕೋಬೇಕು… ಥೂ… ಏನ್ ಶೆಕೆ ಅಪ್ಪ...’ ಅಂತ ನಿಟ್ಟುಸಿರು ಬಿಟ್ಟರು. ಯಾಕೋ ಶೆಕೆ ಹೆಚ್ಚಾದಂತೆ ಆಗೀ ನಾನು ನಾನ್ ರೂಮಿಗೆ ಹೋಗಿ ಫ್ಯಾನಿನ ಸ್ಪೀಡನ್ನು ೫ ಕ್ಕೆ ಏರಿಸಿ ಹಾಗೆ ಹಾಸಿಗೆ ಮೇಲೆ ಉರುಳಿಕೊಂಡೆನು. ಪಾಪಣ್ಣ ಅಂಕಲ್, ಚಂದ್ರ ಆಂಟಿ, ಪುಟ್ಟು ಎಲ್ಲರೂ ಲೇಟ್ ಅಯೀತು ಪುನಃ ಇನ್ನೊಮ್ಮೆ ಬರ್ತೀವಿ ಅಂತ ಹೇಳಿ ಹೊರಟರು.
ನನಗಂತು ಅಪ್ಪಾಜಿ ಹೇಳಿದ ‘ಹೊಯಿಲ್ ಗೋ ವಾಸುದೇವ…’ ಅನ್ನೋ ಒಂದು ಹಾಡಿನಿಂದ ಗಾಳಿಯನ್ನು (ಅದರೆ ದಿಕ್ಕು ಹಾಗು ವೇಗವನ್ನು) ಕಂಟ್ರೋಲ್ ಮಾಡೋದು ನಿಜನಾ?... ಈ ರೀತಿ ನೈಸರ್ಗಿಕ ಶಕ್ತಿಗಳನ್ನು ಮನುಷ್ಯ ಯಾವಾಗಲಾದರು ನಿಜವಾಗಿಯೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದನಾ?... ಇದು ಸಾಧ್ಯನಾ?... ಅಂತೆಲ್ಲ ಯೋಚಿಸಿದೆ. ಹಾಗೆ ಯಾವುದಾದ್ರು ವಿಷಯಗಳನ್ನು ಅದರಲ್ಲೂ ಮೂಢ ನಂಬಿಕೆ ಹಾಗು ವಿಜ್ಞಾನ ವಿಷಯಗಳಿಗೆ ತಾಳೆ ಹಾಕಿಕೊಂಡಿರು ಕುತೂಹಲಕಾರಿ ವಿಷಯಗಳನ್ನ ಕುರಿತು ಯೋಚಿಸುವಾಗ ನನ್ನ ಒಳಮನಸ್ಸು (ಸಬ್ ಕಾನ್ಷಿಯಸ್ ಮೈಂಡ್) ತಕ್ಷಣ Respond ಮಾಡುತ್ತೆ. ಈ ಬಾರಿ ಅದು ತಾನ್ ಸೇನ್ ನ ಹೆಸರನ್ನು ಸೂಚಿಸುವ ಮೂಲಕ Respond ಮಾಡಿತ್ತು. YES ಕರೆಕ್ಟ್!!!! ಮಹಾರಾಜ್ ಅಕ್ಬರ್ ಆಸ್ಥಾನದಲ್ಲಿದ್ದ ಪ್ರಖ್ಯಾತ ಗಾಯಕ ತಾನ್ಸೇನ್ ಹೀಗೆ ಪ್ರಕೃತಿಯ(ನೈಸರ್ಗಿಕ) ಶಕ್ತಿ ಗಳನ್ನೂ ತನ್ನ ಸಂಗೀತದ ಮೂಲಕ ನಿಯಂತ್ರಿಸುತಿದ್ದನಂತೆ!. ತಾನ್ಸೇನ್ ತನ್ನ ಸಂಗೀತದಿಂದ ಹಾಗು ರಾಗಗಳಿಂದ ಅದ್ಬುತಗಳನ್ನು ಸೃಷ್ಟಿಸುತಿದ್ದನಂತೆ. ತಾನ್ಸೇನ್ ಅವನು ಹಾಡುತಿದ್ದ ವಿಶಿಷ್ಟ ರಾಗದಿಂದ ಚಿತ್ರ ಬಿಡಿಸುತಿದ್ದ, ಮಳೆ ಬರಿಸುತಿದ್ದ ಅಷ್ಟೆ ಅಲ್ಲದೆ ‘ದೀಪಕ ರಾಗ’ ಹಾಡಿ ಖಾಲಿ ಶೂನ್ಯದಿಂದ ಬೆಂಕಿ ಹತ್ತಿಸಿ, ದೀಪಗಳು ಉರಿಯುವಂತೆ ಮಾಡುತಿದ್ದನಂತೆ. ನಾನು ಟೈಮ್ ನೋಡಿದೆ 10.25 Pm ಅಗಿತ್ತು. ಏನ್ ಇಷ್ಟು ಬೇಗ ಮಲಗೋದು? ಅಂತ ಯೋಚಿಸಿ ಎದ್ದು ಕಂಪ್ಯೂಟರ್ ಆನ್ ಮಾಡಿ ಇಂಟರ್ನೆಟಗೆ ಕನೆಕ್ಟ್ ಆದೆ. ಅಡ್ರೆಸ್ ಬಾರ್ ನಲ್ಲಿ ಗೂಗಲ್ ಅಂತ ಟೈಪ್ ಮಾಡಿ, ಗೂಗಲ್ ನ ಸೈಟ್ ನಲ್ಲಿ ತಾನ್ಸೇನ್ ಮತ್ತು ಅವನ ಸಂಗೀತದ ಬಗ್ಗೆ ಗೂಗಲ್ ಮಾಡಿದೆ. ಮುಂದಿನ 1 ಗಂಟೆ ಕ್ರಿ.ಷ. 1525 ಕ್ಕೆ ಹೋಗಿ ತಾನ್ಸೇನ್ ಬಗ್ಗೆ ಇಂಟರ್ನೆಟ್ನಲ್ಲಿ ಲಭ್ಯವಿದ್ದ ಎಲ್ಲಾ ಮಾಹಿತಿ ಜಾಲಾಡಿ ವಾಪಸು ಬಂದೆ.
ತಾನ್ಸೇನ್ ಸಾಕಷ್ಟು ಜನ ತಿಳಿದಿರುವ ಹಾಗೆ ಅವನ ಮೂಲ ಮತ ಇಸ್ಲಾಂ ಅಲ್ಲ. ತಾನ್ಸೇನ್ ಒಬ್ಬ ಬ್ರಾಹ್ಮಣ. ಅವನು ಹುಟ್ಟಿದ್ದು ಕ್ರಿ.ಷ.1492ರಲ್ಲಿ ಅಂತ ಕೆಲವೊಂದು ದಾಖಲೆಗಳು ತಿಳಿಸಿದರೆ ಮತ್ತೆ ಕೆಲವು ಕ್ರಿ.ಷ. 1506 ಅಂತ ತಿಳಿಸುತ್ತವೆ. ತಾನ್ಸೇನ್ ನ ಹುಟ್ಟಿದ ವರ್ಷದ ಬಗ್ಗೆ ಇನ್ನು ಗೊಂದಲವಿದೆ. ಗ್ವಾಲಿಯರ್ ಹತ್ತಿರವಿರುವ ‘ಬೆಹತ್’ ಎಂಬ ಗ್ರಾಮದಲ್ಲಿ ವಾಸವಿದ್ದ ಮಕರಂದ ಪಾಂಡೆ ದಂಪತಿಗಳಿಗೆ ಹಲವು ವರ್ಷ ಮಕ್ಕಳಿರಲಿಲ್ಲವಂತೆ. ಒಂದು ದಿನ ಆ ದಂಪತಿಗಳು ಆ ಊರಿನಲ್ಲಿ ಬೀಡು ಬಿಟ್ಟಿದ್ದ ಸಂತ ಪೀರ್ ಮೊಹಮ್ಮೆದ್ ಘಾಸ್ ಹತ್ತಿರ ಹೋಗಿ ಬೇಡಿಕೊಂಡಾಗ, ಅವನು ಅವರಿಬ್ಬರಿಗೆ ಆಶಿರ್ವದಿಸಿ ಮಕರಂದ ಪಾಂಡೆಯ ಬಲಗೈಗೆ ಒಂದು ದಾರ ಕಟ್ಟಿದನಂತೆ. ಆ ಘಟನೆ ನೆಡೆದ ಕೆಲವೇ ದಿನದಲ್ಲಿ ಮಕರಂದ ಪಾಂಡೆ ಮಡದಿಯು ಒಂದು ಗಂಡುಮಗುವಿಗೆ ಜನ್ಮ ಕೊಟ್ಟಳು. ಮಕರಂದ ಪಾಂಡೆಯು ಆ ಮಗುವಿಗೆ ‘ರಾಮ್ ತನು’ ಎಂದು ಹೆಸರಿಟ್ಟನು. ಈ ರಾಮ್ ತನುನೇ ಮುಂದೆ ಭಾರತದ ಅತ್ಯಂತ ಪ್ರಖ್ಯಾತ ಸಂಗೀತಗಾರ ‘ತಾನ್ಸೇನ್’ ಆಗಿ ಬೆಳೆದ. ತಾನ್ಸೇನ್ ನನ್ನು ಅವನ ತಂದೆ ತಾಯಿ ಪ್ರೀತಿಯಿಂದ ‘ತನ’ ಮತ್ತು ‘ಮುಕುಲ್’ ಅಂತ ಕರೆಯುತಿದ್ದರಂತೆ. ತಾನ್ಸೇನ್ ನಿಗೆ ಬಾಲ್ಯದಲ್ಲಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಅಭ್ಯಾಸವಾಗಿತ್ತು. ಅವನು ಪ್ರಕೃತಿಯಲ್ಲಿ ಕೇಳಿಬರುವ ಎಲ್ಲ ಶಬ್ದಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತಿದ್ದನಂತೆ. ಒಮ್ಮೆ ತಾನ್ಸೇನನು ಕಾಡಿನಲ್ಲಿ ಪಕ್ಷಿ ಗಳ ಕಲರವ ಕೇಳುತಿದ್ದಾಗ ಯಾವೂದೊ ಒಂದು ಪಕ್ಷಿಯು ವಿಚಿತ್ರವಾಗಿ ಒಂದು ಇಂಪಾದ ರಾಗ ಹೊರಡಿಸಿದಾಗ ಅಲ್ಲೇ ಇದ್ದ ಒಂದು ಚಿಕ್ಕ ಒಣಗಿದ ಗಿಡದ ಬಳ್ಳಿಯು ಬೆಂಕಿ ಹತ್ತಿಕೊಂಡಿತಂತೆ!. ಈ ಘಟನೆಯೇ ಅವನು ಮುಂದೆ ದೀಪಕ್ ರಾಗ ಕಂಡುಹಿಡಿಯಲು ಪ್ರೇರಣೆಯಾಯಿತು ಅಂತ ಒಂದು ಕತೆ ಹೇಳುತ್ತದೆ. ಒಮ್ಮೆ ಅವನು ಕಾಡಿನ ದಾರಿಯಲ್ಲಿ ಹುಲಿಯ ಧ್ವನಿಯನ್ನು ಅನುಕರಣೆ ಮಾಡುತಿದ್ದಾಗ ಅದನ್ನು ಕೇಳಿದ ಹರಿದಾಸ್ ಎಂಬ ಸಂಗೀತದ ಗುರು ಇವನ ಪ್ರತಿಭೆಯನ್ನು ಮೆಚ್ಚಿ, ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ,ತಮ್ಮ ಎಲ್ಲ ಸಂಗೀತದ ವಿದ್ಯೆಯನ್ನು ಅವನಿಗೆ ಧಾರೆ ಎರೆಯಲು ನಿರ್ಧರಿಸಿದರು. ಅವರಿಂದ ಸಾಕಷ್ಟು ವಿದ್ಯಾ ಕಲಿತ ಮೇಲೆ ತಾನ್ಸೇನ್ ಅವರ ತಂದೆಗೆ ಹುಷಾರಿಲ್ಲದ ಕಾರಣ ಅವರಲ್ಲಿಗೆ ಹಿಂದಿರುಗಿದ. ಪುನ ಕೆಲ ಕಾಲ ಬಿಟ್ಟು ಅವರ ತಂದೆಯ ಮಾತಿನಂತೆ ಮೊಹಮ್ಮೆದ್ ಘಾಸ್ ಎಂಬುವರ ಹತ್ತಿರ ಸಂಗೀತ ಅಭ್ಯಾಸ ಮಾಡಲು ಸೇರಿದನು. ಅಲ್ಲಿ ಸಂಗೀತ ಕ್ಷೇತ್ರದಲ್ಲಿ ಉನ್ನತವಾಗಿ ಪರಿಣಿತಿ ಪಡೆದು ಗ್ವಾಲಿಯರ್ ರಾಜನ ಆಸ್ತಾನದಲ್ಲಿ ಗಾಯಕನಾಗಿ ಸೇರಿದ. ಅಲ್ಲಿ ಆಸ್ತಾನದಲ್ಲಿ ಸೇವಕಿಯಗಿದ್ದ ‘ಹುಸನಿ’ ಎಂಬವಳನ್ನು ಮದುವೆಯಾದ ಅಂತ ಹಲವು ಪುಸ್ತಕಗಳು ತಿಳಿಸುತ್ತವೆ. ತಾನ್ಸೇನ್ ನ ಖ್ಯಾತಿ ದಿನದಿಂದ ಬೆಳದಂತೆ. ಅಕ್ಬರ್ ಮಹಾರಾಜನು ಆ ಗ್ವಾಲಿಯರ್ ರಾಜನಿಗೆ ತಾನ್ಸೇನ್ ನನ್ನು ತನ್ನ ಆಸ್ತಾನಕ್ಕೆ ಕಳುಹಿಸಲು ಆದೇಶಿಸಿದ.
ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ತುಂಬಾ ಬೇಗ ಪ್ರಸಿದ್ದಿಯಾದ. ಅಲ್ಲಿಯ ಜನರಿಗೆ ಅವನು ಸಂಗೀತದ ಮಾಂತ್ರಿಕ ಎಂದು ಅರಿವಾಯಿತು. ತಾನ್ಸೇನ್ ನು ಸಂಗೀತ ಲೋಕದಲ್ಲಿರುವ ಎಲ್ಲ ರಾಗಗಳ ಮೇಲೆ ನಿಯಂತ್ರಣ ಹೊಂದಿದ್ದಾನೆ ಮತ್ತು ಅವುಗಳನ್ನು ಹಾಡುವ ಮೂಲಕ ಅದ್ಬುತ ಹಾಗು ವಿಸ್ಮಯ ಗಳನ್ನೂ ಸೃಷ್ಟಿಸುತಾನೇ ಎಂದೆಲ್ಲ ಜನ ಹೇಳುತ್ತ ಇದ್ದರು. ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ದಿನಾಲೂ ಅಕ್ಬರ್ ಮಹಾರಾಜನಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಹಾಗು ಬೆಳಗಿನ ಜಾವದಲ್ಲಿ ಎದ್ದೇಳಲು ಸಹಾಯವಾಗುವಂತೆ ಇಂಪಾದ ರಾಗಗಳನ್ನು ಹಾಡುತ್ತಿದ್ದನು ಅಂತ ಹೇಳಲಾಗಿದೆ. ತಾನ್ಸೇನ್ ನು ಭಾರತದ ಶಾಸ್ತ್ರಿಯ ಸಂಗೀತದ ರಾಗವನ್ನು ಅರೇಬಿಕ್ ಹಾಗು ಪೆರ್ಸಿಯ ರಾಗಗಳೊಂದಿಗೆ ಸೇರಿಸಿ ಹೊಸದಾದ ರಾಗಗಳನ್ನೂ ಸೃಷ್ಟಿಸುತ್ತಿದ್ದ. ಒಮ್ಮೆ ಅಕ್ಬರನ ಸೈನಿಕರು ಕಾಡಿನಲ್ಲಿ ಒಂದು ಕಾಡಾನೆಯನ್ನು ಹಿಡಿದುಕೊಂಡು ಬಂದು, ಅದನ್ನು ಪಳಗಿಸುವಲ್ಲಿ ವಿಫಲರಾಗಿ ನಂತರ ಆ ಕಾಡಾನೆಯು ಅರಮನೆ ಆವರಣದಲ್ಲಿ ಸಿಕ್ಕ ಸಿಕಲ್ಲಿ ನುಗ್ಗಿ ಇನ್ನೇನು ಸಾಕಷ್ಟು ಹಾನಿ ಮಾಡಬೇಕು ಅನ್ನುವಷ್ಟರಲ್ಲಿ ತಾನ್ಸೇನ್ ನು ತನ್ನ ಒಂದು ವಿಶಿಷ್ಟ ರಾಗದಿಂದ ಆನೆಗೆ ಮೋಡಿ ಮಾಡಿ ಅದನ್ನು ಪಳಗಿಸಿ ನಿಯಂತ್ರಣಕ್ಕೆ ಬರುವಂತೆ ಮಾಡಿದನು. ಅಷ್ಟೇ ಅಲ್ಲದೆ ‘ಸಂಧ್ಯಾ ರಾಗ’ ಎಂಬ ರಾಗವನ್ನು ತಾನ್ಸೇನ್ ನು ಬೆಳಗಿನ ಅಥವಾ ಮಧ್ಯಾನದ ಹೊತ್ತು ಹಾಡುತ್ತಿದ್ದರೆ, ಸೂರ್ಯನ ಕಿರಣಗಳು ಮಂಕಾಗಿ, ಅವನು ಹಾಡುತಿದ್ದ ಸುತ್ತ ಮುತ್ತ ವಾತವರಣದಲ್ಲಿ ಸಂಜೆಯಾಗಿದೆ ಏನೋ ಎಂಬಂತೆ ಬಾಸವಾಗುತ್ತಿತಂತೆ!. ತಾನ್ಸೇನ್ ನು ಅಕ್ಬರನ ಆಸ್ತಾನದಲ್ಲಿ ಬರೀ ಗಾಯಕನಲ್ಲದೆ ಆ ಕಾಲದಲ್ಲಿ ಅವನ(ಅಕ್ಬರನ) ಆಸ್ತಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ ೯ ಜನರಲ್ಲಿ ಅಂದ್ರೆ ನವರತ್ನಗಳು ಎಂದು ಕರೆಯುತಿದ್ದವರಲ್ಲಿ ಪ್ರಮುಖನಾಗಿದ್ದ.[ ಅಕ್ಬರನ ಆಸ್ತಾನದಲ್ಲಿದ್ದ ನವರತ್ನಗಳು ಎಂದು ಹೆಸರಾಗಿದ್ದವರು ಯಾರು ಯಾರೆಂದರೆ... 1) ಅಬುಲ್ ಫಾಜ್ಲ್ – ‘ಅಕ್ಬರ್ ನಾಮ’ ಕೃತಿಯ ಲೇಖಕ. ಇವನು ಅಕ್ಬರ್ ನ ಆಸ್ತಾನದಲ್ಲಿ ಆಡಳಿತಕಾರಿಯಗಿದ್ದ. 2) ಫೈಜಿ - ಅಬುಲ್ ಫಾಜ್ಲ್ ನ ತಮ್ಮ. ಅಕ್ಬರ್ ಮಗನ ಗುರು ಹಾಗು ಒಳ್ಳೆ ಕವಿ. 3) ತಾನ್ಸೇನ್ 4) ಬೀರ್ ಬಲ್ – ಬೀರ್ ಬಲ್ ನ ಬಗ್ಗೆ ಕೇಳದವರಿಲ್ಲ ಬಿಡಿ. ಆದರು ಬೀರ್ ಬಲ್ ‘ಬ್ರಹ್ಮ’ ಎಂಬ ಕಾವ್ಯನಾಮದೊಂದಿಗೆ ಅನೇಕ ಕವಿತೆ ರಚಿಸಿರುವುದು ಅನೇಕ ಜನರಿಗೆ ಗೊತಿಲ್ಲದ ವಿಷಯವಾಗಿದೆ. ಅವುಗಳು ಈಗಲೂ ಭರತ್ ಪುರ್ ನ ವಸ್ತುಸಂಗ್ರಹಾಲಯದಲ್ಲಿದೆ. ಬೀರ್ ಬಲ್ ನ್ನು ಅಫ್ಘಾನಿ ಬುಡ ಕಟ್ಟು ಸೈನ್ಯದೊಂದಿಗಿನ ಯುದ್ದದಲ್ಲಿ ಮರಣಿಸಿದನು. 5) ರಾಜ ತೊದರ್ ಮಲ್ – ಅಕ್ಬರ್ ನ ವಿತ್ತ ಮಂತ್ರಿ 6) ರಾಜ ಮಾನ್ ಸಿಂಗ್ – ಅಂಬರ್ ಸಂಸ್ಥಾನದ ರಜಪುತ್ ರಾಜ 7) ಅಬ್ದುಲ್ ರಹಿಮ್ ಖಾನ್ – ಅಕ್ಬರ್ ಆಸ್ತಾನದ ಕವಿ 8) ಫಾಗಿರ್ ಅಜಿಯಾ ದಿನ್ 9) ಮುಲನ್ ದೋ ಪೈಝಾ, ಇವರಿಬ್ಬರು ಅಕ್ಬರ್ ನ ಆಪ್ತ ಸಲಹಗಾರರಾಗಿದ್ದರಂತೆ]
ಅಕ್ಬರನು ತಾನ್ಸೇನ್ ಗೆ ಪ್ರೀತಿಯಿಂದ ‘ ಮಿಯನ್ ’ ಎಂಬ ಬಿರುದು ಕೊಟ್ಟಿದ. ಎಲ್ಲರೂ ತಾನ್ಸೇನ್ ನನ್ನು ‘ ‘ಮಿಯನ್ ತಾನ್ಸೇನ್’ ’ಎಂದೆ ಕೂಗತೊಡಗಿದ್ದರು. ‘ಮಿಯನ್’ ಎಂದರೆ ಕಲಿತಿರುವ ಮನಷ್ಯ ಎಂದರ್ಥವಂತೆ. ಅಕ್ಬರ್ ನೊಂದಿಗೆ ತಾನ್ಸೇನ್ ನ ಈ ಆತ್ಮಿಯ ಒಡನಾಟ ಅನೇಕ ಜನರಿಗೆ ಹಿಡಿಸಲಿಲ್ಲ. ಅನೇಕರು ಅಸೂಯೆ ಪಟ್ಟರು. ಹೇಗಾದರೂ ಮಾಡಿ ಅವನನ್ನು ಒಂದು ಬಾರಿ ಯಾವುದಾದರು ಸವಾಲಿನಲ್ಲಿ ಸೋಲಿಸಿ ಅಥವಾ ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಕ್ಬರ್ ರಾಜನಿಂದ ದೂರ ಮಾಡಬೇಕು ಎಂದು ಅವನ ವೈರಿಗಳು ಹೊಂಚು ಹಾಕಿ, ಅಕ್ಬರ್ ರಾಜನ ಬಳಿಗೆ ಹೋಗಿ ತಾನ್ಸೇನ್ ನು ಈಗ ಹೊಸ ರಾಗ ಕಲಿತಿದ್ದು, ಆ ರಾಗ ಹಾಡಿದರೆ ದೀಪಗಳು ತಾವಾಗಿಯೇ ಹತ್ತಿಕೊಳ್ಳುತ್ತವೆಯಂತೆ ಎಂದು ಹೇಳಿದರು. ಅಕ್ಬರನಿಗೆ ಆಶ್ಚರ್ಯವಾಗಿ ತಾನ್ಸೇನ್ ನನ್ನು ಕರೆಸಿ ಈ ಬಗ್ಗೆ ವಿಚಾರಿಸಲಾಗಿ ತಾನ್ಸೇನ್ ನು ಹೌದು ಆ ರೀತಿಯ ಒಂದು ರಾಗವಿದ್ದು ಅದಕ್ಕೆ ‘ದೀಪಕ್ ರಾಗ’ ಎಂದು ಹೆಸರು, ಅದನ್ನು ಹಾಡಿದರೆ ಸುತ್ತ ಮುತ್ತಲಿನ ವಾತವರಣವು ಬಿಸಿಯಾಗಿ ದೀಪಗಳಿದ್ದರೆ ಹತ್ತಿಕೊಳ್ಳುತವೆ. ಆದರೆ ಆ ರಾಗ ಹಾಡಿದರೆ ನನ್ನ ದೇಹದಲ್ಲಿ ಉಷ್ಣ ಹೆಚ್ಚಾಗಿ ನನ್ನ ದೇಹವೇ ಉರಿದು ಹೋಗುವ ಸಾಧ್ಯತೆ ಹೆಚ್ಚು, ಹಾಗಾಗಿ ನಾನು ‘ದೀಪಕ್ ರಾಗ’ವನ್ನು ಹಾಡುವುದಿಲ್ಲ ಎಂದು ತಿಳಿಸಿದನು. ಆದರೆ ರಾಜ ಅಕ್ಬರನು ನೀನು ದೀಪಕ್ ರಾಗವನ್ನು ಹಾಡಲೇಬೇಕು ಅಂತ ಒತ್ತಾಯ ಮಾಡಿದಾಗ ತಾನ್ಸೇನ್ ನು 15 ದಿನಗಳ ಕಾಲಾವಕಾಶವನ್ನು ಕೇಳಿಕೊಂಡನು. ತಾನ್ಸೇನ್ ನು ದೀಪಕ್ ರಾಗ ಹಾಡಿ ಮುಗಿಸಿದ ಕೂಡಲೆ ಅವನ ದೇಹದ ತಾಪಮಾನ ಜಾಸ್ತಿ ಆಗಿ ತಾನು ಉರಿದು ಹೋಗುವ ಮುನ್ನ ಯಾರಾದರು ಮಳೆ ಬರಿಸುವಂತಹ ‘ ಮೇಘ ಮಲ್ಹರ್’ ಎಂಬ ರಾಗವನ್ನು ಹಾಡಬೇಕು. ಅದನ್ನು ಹಾಡಿದರೆ ವಾತಾವರಣ ತಂಪಾಗಿ ತಾನ್ಸೇನ್ ನ ಜೀವ ಉಳಿಯಬಹುದು. ಹಾಗಾಗಿ ತಾನ್ಸೇನ್ ನು ಆ ರಾಗವನ್ನು ತನ್ನ ಮಗಳಿಗೆ(ಕೆಲವರ ಪ್ರಕಾರ ಅವನ ಪತ್ನಿಗೆ) ಈ ‘ ಮೇಘ ಮಲ್ಹರ್’ ರಾಗ ಹೇಳಿಕೊಡುತ್ತಾನೆ. 15 ದಿನ ಕಳೆದು ರಾಜ ಅಕ್ಬರ್ ನ ಆಸ್ತಾನದಲ್ಲಿ ತಾನ್ಸೇನ್ ನು ‘ದೀಪಕ್ ರಾಗ’ ಹಾಡಲು ಎಲ್ಲ ಸಿದ್ಧತೆ ಮಾಡಿಕೊಂಡು ಹಾಡಲು ಶುರುಮಾಡಿದನು. ಅರಮನೆಯಲಿದ್ದ ಗಿಡ ಮರಗಳ ಎಲೆ ಎಲ್ಲ ಒಣಗಿ ಉದುರಿದವು, ಅರಮನೆ ಕೊಳದಲಿದ್ದ ನೀರು ಬೆಚ್ಚಗಾಗಿ ಕುದಿಯತೊಡಗಿತು, ಸುತ್ತ ಮುತ್ತಲಿದ್ದ ಹಕಿಗಳು ಹಾರಡ ತೊಡಗಿದವು ಇಡೀ ವಾತವರಣವು ಬಿಸಿಯಾಗಿ ಆಸ್ತಾನದ ಸುತ್ತ ಎಣ್ಣೆ ತುಂಬಿಸಿ ಇಟ್ಟಿದ್ದ ದೀಪಗಳೆಲ್ಲಾ ಒಮ್ಮೆಲೇ ‘ದಿಗ್’ ಎಂದು ಹತ್ತಿಕೊಂಡವಂತೆ!!!.
ತಾನ್ಸೇನ್ ನು ಕೂಡಲೇ ಹಾಡುವುದನ್ನು ನಿಲ್ಲಿಸಿ, ಆಸ್ತಾನದಿಂದ ಹಾಗು ಅರಮನೆಯ ಹೊರಗೆ ಓಡಿ ಊರ ಮಧ್ಯದಲ್ಲಿದ್ದ ಬಯಲಿನಲ್ಲಿ ನಿಂತನು. ಅಷ್ಟರಲ್ಲಾಗಲೇ ಅವನು ಹೇಳಿಕೊಟ್ಟ ‘ ಮೇಘ ಮಲ್ಹರ್’ ರಾಗವನ್ನು ಅವನ ಮಗಳು ಹಾಡಲಾರಂಭಿಸಿದ್ದಳಂತೆ. ಕೆಲ ಹೊತ್ತಿನಲ್ಲೇ ಜೋರಾಗಿ ಮಳೆಯಾಗಿ, ಇಡೀ ವಾತಾವರಣ ತಂಪಾಗಿ ತಾನ್ಸೇನ್ ನ ದೇಹದ ಉಷ್ಣವೂ ಕಡಿಮೆಯಾಗಿ ಅವನ ಜೀವ ಉಳಿದುಕೊಂಡಿತು.
ಈ ಕಥೆಯನ್ನು ಗುಜರಾತ್ ಕಡೆಯ ಜನಗಳು ಇನ್ನೊಂದು ರೀತಿ ಹೇಳುತ್ತಾರೆ. ತಾನ್ಸೇನ್ ನು ಆ ರೀತಿ ‘ದೀಪಕ್ ರಾಗ’ ಹಾಡಿ ದೀಪಗಳನ್ನು ಹತ್ತಿಸಿದ ಮೇಲೆ ದೇಹದ ಉಷ್ಣ ಜಾಸ್ತಿಯಾಗಿ ಅಕ್ಬರ್ ನ ಆಸ್ತಾನ ಬಿಟ್ಟು ಊರೂರು ಅಲೆಯುತ್ತ ‘ವದ್ ನಗರ’ಕ್ಕೆ ಬಂದನಂತೆ. ಅಲ್ಲಿ ‘ತನ’ ಮತ್ತು ‘ರಿರಿ’ ಎಂಬ ಇಬ್ಬರು ಚಿಕ್ಕ ಹುಡುಗಿಯರು ಇದ್ದರು.ಅವರು ಆ ಚಿಕ್ಕ ವಯಸ್ಸಿಗೆ ತುಂಬಾ ಚೆನ್ನಾಗಿ ಸಂಗೀತ ಕಲಿತಿದ್ದರಂತೆ. ಆ ಹುಡುಗಿಯರಿಗೆ ತಾನ್ಸೇನ್ ಎಂಬ ಮಹಾ ಸಂಗೀತಗಾರ ಈ ರೀತಿ ನರಳುತ್ತ ತಮ್ಮ ಊರಿಗೆ ಬಂದಿರುವ ವಿಷಯ ಗೊತ್ತಾಗಿ ಅವನ ಬಳಿ ಹೋಗಿ ‘ ಮೇಘ ಮಲ್ಹರ್’ ರಾಗ ಹಾಡಿ ಅವನ ವ್ಯಾಧೆಯನ್ನು ದೂರ ಮಾಡಿ ಅವನ ಜೀವ ಉಳಿಸಿದರಂತೆ. ಈ ವಿಷಯ ಅಕ್ಬರ್ ನ ಕಿವಿಗೆ ಬಿದ್ದು ಅವನು ಆ ಇಬ್ಬರು ಹುಡುಗಿಯರನ್ನು ತನ್ನ ಆಸ್ತಾನಕ್ಕೆ ಕರೆಸಲು ಅಪ್ಪಣೆ ಮಾಡಿ, ಆ ಹುಡುಗಿಯರು ಬರಲು ಒಪ್ಪದಿದ್ದಾಗ ಸೈನಿಕರನ್ನು ಕಳುಹಿಸಿ ಬಲವಂತವಾಗಿ ಕರೆತರಲು ನಿರ್ಧರಿಸಿದನು. ಈ ವಿಷಯ ‘ತನ’ ಮತ್ತು ‘ರಿರಿ’ ಗೆ ಗೊತ್ತಾಗಿ ‘‘ತಾವು ಹಾಡುವುದೇನಿದ್ದರು ಅದು ದೇವರಿಗೆ ಮಾತ್ರ, ಡೆಲ್ಲಿ ಸುಲ್ತಾನರಿಗೆ ಅಲ್ಲ!’’ ಅಂತೆ ಹೇಳಿ ಇಬ್ಬರು ಆ ಊರಿನ ಮಧ್ಯದಲ್ಲಿ ಇದ್ದ ಬಾವಿಗೆ ಹಾರಿ ಪ್ರಾಣ ತ್ಯಜಿಸಿದರಂತೆ. ಅ ಊರಿನವರು ಅ ಬಾವಿ ಸುತ್ತ ಸುಂದರ ಉದ್ಯಾನವನವನ್ನು ಕಟ್ಟಿದ್ದಾರೆ. ಅಹಮದಾಬಾದ್ ನಿಂದ 60 Kms ದೊರದಲ್ಲಿರು ಈ ‘ವದ್ ನಗರ’ದಲ್ಲಿರೋ ಆ ಬಾವಿ ಇವತ್ತಿಗೂ ಒಂದು ಪ್ರೇಕ್ಷಣಿಯ ಸ್ಥಳವಾಗಿದೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಯವರು ಆ ‘ವದ್ ನಗರ’ ಊರಿನವರೇ. ತಾನ್ಸೇನ್ ಬಗ್ಗೆ ಅನೇಕ ಚಲನ ಚಿತ್ರ ಗಳು ಬಂದಿವೆ. 1943 ರಲ್ಲಿ ಜಯಂತ ದೇಸಾಯಿ ನಿರ್ದೆಶಿಸಿದ್ದ ‘’ತಾನ್ಸೇನ್’’ ಚಿತ್ರಕ್ಕೆ ಕೇಂ ಚಂದ್ ಪ್ರಕಾಶ್ ಅದ್ಬುತ ಸಂಗೀತ ನೀಡಿದ್ದರಂತೆ. ಆ ಚಿತ್ರದ ಒಂದು ಹಾಡದ ‘ ಜಗ ಮಗ್ ಜಗ ಮಗ್ ದಿಯಾ ಜಲವೋ…’ ಎಂಬ ಹಾಡಿನಲ್ಲಿ ‘ದೀಪಕ್ ರಾಗ’ ಅಳವಡಿಸಲಾಗಿದೆಯಂತೆ. ತಕ್ಷಣ ಆ ಹಾಡನ್ನು ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ಕೇಳಿದೆ. 2-3 ಬಾರಿ ಕೇಳಿದಾಗ ಮೇಲೆ ಹಾಡೇನೋ ಇಷ್ಟವಾಯಿತು ಆದರೆ ಬೇಸಿಗೆ ಶೆಕೆಯ ಕಾರಣ ಬಂದ ಬೆವರು ಬಿಟ್ಟರೆ, ನನಗೆ ವಾತಾವರಣ ಬಿಸಿಯಾದ ಯಾವ ಅನುಭವ ಬರಲಿಲ್ಲ!. ತಾನ್ಸೇನ್ ನು ದುರ್ಬರಿ ಕನಡ, ಮಿಯನ್ ಕಿ ತೋಡಿ, ಮಿಯನ್ ಕಿ ಮಲ್ಹರ್, ಮಿಯ ಕಿ ಸಾರಂಗ್ ಅನ್ನೋ ರಾಗ ರಚಿಸಿದ್ದಾನೆ. ಪ್ರಖ್ಯಾತ ದ್ರುಪದ ಶೈಲಿಯಲ್ಲಿ ಹಾಡುವುದನ್ನು ಮೊದಲಿಗೆ ಶುರು ಮಾಡಿದ್ದೂ ತಾನ್ಸೇನ್ ನನೆ ಅನ್ನುತ್ತಾರೆ. ತಾನ್ಸೇನ್ ನು 1589 ರಲ್ಲಿ ಮರಣ ಹೊಂದಿದ ನಂತರ ಅವನನ್ನು ಗ್ವಾಲಿಯರ್ ನಲ್ಲಿರುವ ಅವನ 2ನೇ ಗುರು ಮೊಹಮ್ಮೆದ್ ಘಾಸ್ ನ ಸಮಾಧಿ ಹತ್ತಿರ ಮಣ್ಣು ಮಾಡಿದರಂತೆ. ತಾನ್ಸೇನ್ ನ ಮರಣದ ಸಮಯದಲ್ಲಿ ಅಕ್ಬರ್ ಅವನ ಪಕ್ಕದಲ್ಲಿದನಂತೆ.
ತಾನ್ಸೇನ್ ನ ಸಮಾದಿ ಪಕ್ಕ ಒಂದು ಹುಣಸೇ ಮರ ಇದೆ. ಆ ಮರದ ಎಲೆಯನ್ನು ಜಿಗಿದರೆ ಯಾರಾದರು ಸರಿ, ಅವರ ಧ್ವನಿ ಸುಧಾರಿಸುವುದು ಅಂತ ಇವತ್ತಿಗೂ ಜನ ನಂಬುತ್ತಾರೆ. ಪ್ರತಿವರ್ಷ ಡಿಸೆಂಬರ್ ನಲ್ಲಿ ಗ್ವಾಲಿಯರ್ ನಲ್ಲಿ ಒಂದು ವಾರ್ಷಿಕ ಸಂಗೀತೋತ್ಸವ ವನ್ನು ತಾನ್ಸೇನ್ ನ ನೆನಪಿಗೋಸ್ಕರ ನಡೆಸುತ್ತಾರೆ. ಏನೇ ಹೇಳಿ ನಮ್ಮ ಭಾರತದಲ್ಲಿ ಇಂತಹ ಒಬ್ಬ ಮಹಾನ್ ಸಂಗೀತಗಾರನಿದ್ದ ಅನ್ನೋದೆ ಒಂದು ಹೆಮ್ಮೆಯ ವಿಷಯ.
Monday, May 3, 2010
ನಾನು ಮೊದಲ ಸಲ ಮೊಬೈಲ್ ನಲ್ಲಿ ‘ಹಲೋ’ ಅಂದಾಗ….
Saturday, April 24, 2010
2005ರ ನನ್ನ Birthday...
ನನ್ನ ರೂಂ (ರೂಂ 8) ನಂ ಟ್ರೈನಿಂಗ್ ಕ್ಯಾಂಪಸ್ ನ ಒಂದು ತುದಿಲೀ ಇತು. ನಮ್ ಟ್ರೈನಿಂಗ್ ಹುಡುಗರು ಎಲ್ಲಾ ನನ್ನ ರೂಂಗೆ ಬರ್ತಾ ಇದ್ದರು. ಕಾರ್ಡ್ಸ್ ಆಡೋಕೆ, ಮ್ಯೂಸಿಕ್ ಕೇಳೋಕೆ, Discussion ಮಾಡೋಕೆ, ಲೈಟ್ ಆಗೀ ಪಾರ್ಟಿ ಮಾಡೋಕೆ, ಇನ್ನು ಏನ್ ಏನೋ ಕೆಲಸಗಳಿಗೆ ನನ್ನ ರೂಂ ಫೇಮಸ್ ಆಗಿತ್ತು. Even ಟ್ರೈನಿಂಗ್ ಫೋನ್ ಕೂಡ ನಮ್ ರೂಂ ನಲ್ಲೆ ಇತ್ತು. ರೂಂ8 It was Noting But a Club!.
ನಾನು, ಗಿರಿ, ರಾಕೇಶ್, ಅನಿಲ್ ಎಲ್ಲ ಅಕ್ಕ ಪಕ್ಕ ರೂಂ ನಲ್ಲಿ ಇದ್ದೆವು. 68 ಜನ ಟ್ರೈನೀಸ್ ನಲ್ಲಿ ಮಜೋರಿಟಿ ನಾರ್ತ್ ಕರ್ನಾಟಕ ಹುಡುಗರು ಇದ್ದರು. ನನಗೆ ತಿಳಿದಿರೋ ಹಾಗೆ ನಾರ್ತ್ ಕರ್ನಾಟಕ ಜನ ನಮ್ಮ ಸೌತ್ ಕರ್ನಾಟಕ (ಅಂದ್ರೆ ಮೈಸೂರ್, ಮಂಡ್ಯ, ತುಮಕೂರ್, ಹಾಸನ್) ಜನರ ರೀತಿ ಹಾರ್ಡ್Rash ಇಲ್ಲ. ಅವರು ತುಂಬಾ ಸಾಫ್ಟ್ & Humbel ಜನ. ಟ್ರೈನಿಂಗ್ ನಲ್ಲಿ ನಾವು ಸ್ವಲ್ಪ ಜನ ಅಂದ್ರೆ ನಾನು, ರೋಹಿತ್, ರಾಕಿ, ಅನಿಲ್ ಇವರೆಲ್ಲ Rash ಬಾಯ್ಸ್ ಅಂತ ಹೇಳ್ತಾ ಇದ್ದರು. ಅದರಲ್ಲೂ ನನಗೆ ಬ್ಯಾಡ್ ಬಾಯ್(Bad Boy) ಅನ್ನೋ ಪಟ್ಟ ಸಿಕ್ಕಿತು ( Especially ಕರಾಟೆ ಪ್ರಾಕ್ಟೀಸ್ ನಲ್ಲಿ ನಾನು & ಗಿರೀಶ್ ಫೈಟ್ ಮಾಡುವಾಗ, ಅವನ ಕೈನ ನಾನು ಫ್ರ್ಯಾಕ್ಚರ್ ಮಾಡಿದಾಗ!!!). ಅಡಿವೆಪ್ಪನಿಗೆ ಸುಮಾರು ಜನ ಟ್ರೈನೀಸ್ ಮರ್ಯಾದಿ ಕೊಡ್ತಾ ಇದ್ದರು. ಆದರೆ ನಾನು ಮತ್ತೆ ಇನ್ನು ಇತರ ಹುಡುಗರು ಬರಿ ಉಲ್ಟಾ ಮಾತಾಡುತ್ತ ಇದ್ದೆವು. ನನ್ನ ಕಂಡರೆ ಭಯಂಕರ ಉರಿ ಅವನಿಗೆ!. ಯಾವಾಗಲು ‘ ಏ ಸುಧಾಕರ್, ನೀನು ಟ್ರೈನಿಂಗ್ ನಲ್ಲಿ Groupism ಮಾಡ್ತಿಯೇನೋ. ನಿನ್ನನ್ನ ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಹಾಕ್ತೀನಿ’ ಅಂತ ಇದ್ದ. ನನ್ನ ಮೇಲೆ ಕಂಪ್ಲೈಂಟ್ ಹೇಳಲು ಯಾವಾಗಲು ಚಾನ್ಸ್ ಕಾಯ್ತಿದ್ದ
ತಕ್ಷಣ ಆಲ್ಮೋಸ್ಟ್ ಲಾಸ್ಟ್ Row ನಲ್ಲಿ ಕೂತಿದ್ದ ನಾನು, ರಾಕಿ, ಅನಿಲ್ ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಕುಲಕರ್ಣಿ ಸರ್ ‘ ಯಾಕ್ರಿ PT ಕ್ಲಾಸ್ ತಗೊಳಲ್ಲ? ಏನಾಯೀತು?’ ಅಂತ ಕೇಳಿದ್ರು. ಅಡಿವೆಪ್ಪ ಶುರು ಮಾಡಿಬಿಟ್ಟನಲ್ಲಪ್ಪ ‘ ಸರ್ ಇವರ್ಯಾರು ನನ್ನ ಮಾತು ಕೇಳಲ್ಲ, ಆ ಸುಧಾಕರ್ Groupism ಮಾಡ್ತಾನೆ, ಅವನ ಜೊತೆ ರಾಕೇಶ್, ಅನಿಲ್ ಇನ್ನು ಸುಮಾರು ಜನ ನನಗೆ ತಿರುಗಿ ಉಲ್ಟಾ ಮಾತಾಡುತ್ತಾರೆ’ ಅಂತ ಕಂಪ್ಲೈಂಟ್ ಮಾಡಿದ. ACF ಕುಲಕರ್ಣಿ ‘ ಸುಧಾಕರ್ ಸ್ಟ್ಯಾಂಡ್ ಅಪ್’ ಅಂದ್ರು ನಾನು ಎದ್ದು ನಿಂತೆ. ಅವರು ‘ಏನ್ರೀ ಇದೆಲ್ಲ?’ ಅಂದ್ರು. ನಾನು ‘ ಸರ್ ನಮ್ಮದೇನೂ ತಪಿಲ್ಲ... ಬೇಕಂತನೆ ಸಿಕ್ಕಪಟ್ಟೆ ಓಡಿಸ್ತಾರೆ, ನಮ್ಮೇಲೆ ಯಾಕ ಸಿಟ್ಟು ಅವರಿಗೆ ಅಂತ ಗೊತ್ತಿಲ್ಲ... ಸುಮ್ಮ ಸುಮ್ಮನೆ ಕಂಪ್ಲೈಂಟ್ ಮಾಡ್ತಾ ಇದ್ದರೆ, Groupism ಅಂದ್ರೆ ನನಗೆ ಏನು ಅಂತಾನೆ ಗೊತ್ತಿಲ್ಲ… ನನ್ನ ಯಾಕ ಅದನ ಮಾಡ್ಲೀ…’ ಅಂತ ನನ್ನ ಮಾತು ಮುಗಿಸೋವಷ್ಟರಲ್ಲಿ ACF ಅವರು ‘SHUT UP ಸುಧಾಕರ್….. ಡೋಂಟ್ ಆಕ್ಟ್ ಸ್ಮಾರ್ಟ್. ಟ್ರೈನಿಂಗ್ ನಲ್ಲಿ ಟ್ರೈನೀ ತರಾ ಇರೋದು ಕಲಿತಿಕೋ....’ ಅಂತ ಹೇಳಿ ಅಡಿವೆಪ್ಪನ ಕಡೆ ತಿರುಗಿ ‘ ರೀ ಅಡಿವೆಪ್ಪ ಇವತ್ತು ಯಾರೆಲ್ಲ PT ಮಾಡದೆ Boycott ಮಾಡಿ ಗಲಾಟೆ ಮಾಡಿದರು ಅವರನ್ನೆಲ್ಲಾ ಮಧ್ಯಾನ ಫೀಲ್ಡ್ ವರ್ಕ್ ಟೈಂನಲ್ಲಿ ಅದೇ ಗ್ರೌಂಡ್ ನಲ್ಲಿ... ಬಿಸಿಲಿನಲ್ಲಿ ಓಡಿಸಿ… ಅದೇ ಇವರ ಪನಿಶ್ಮೆಂಟ್... ಈಗ ಹೋಗಿ...’ ಅಂತ ಹೇಳಿ ಏನೋ ಬರಿಯೋಕೆ ಬೋರ್ಡ್ ಕಡೆ ತಿರುಗಿದರು. ಅಡಿವೆಪ್ಪ ಒಂದು ಸಲ ನನ್ನ ಕಡೆ ನೋಡಿ, ಲೈಟ್ ಆಗೀ ಸ್ಮೈಲ್ ಬೇರೆ ಕೊಟ್ಟ!!! ನಂತರ ಅಲ್ಲಿಂದ ಹೊರಟುಹೋದ. ಸುಮಾರು ಹುಡುಗರು ನನ್ನ ಕಡೆ ತಿರುಗಿ ‘ಅಯ್ಯೋ ಪಾಪ’ ಅನ್ನೋ ರೀತಿ ನೋಡಿದರು.
ಸರಿ ಮಧ್ಯಾನ ಊಟದ ಟೈಮ್ ನಲ್ಲಿ ನನ್ನ ರೂಂ ಮೆಟ್ಸ್ ಎಲ್ಲರಿಗೂ ‘ ‘ಇವತ್ತು ಸುಧಾಕರ್ ನ Birthday, ಇವತ್ತೆ ಅವನಿಗೆ ಭರ್ಜರಿ ಪನಿಶ್ಮೆಂಟ್’ ಅಂತ ಹೇಳ್ತಾಇದ್ದರು . ಊಟದ ಹಾಲ್ ನಲ್ಲಿ ಅವತು ನನ್ನ Birthday & ಪನಿಶ್ಮೆಂಟ್ ವಿಷಯವೇ ಸೆಂಟರ್ ಆಪ್ಫ್ ಅಟ್ರ್ಯಕ್ಶನ್. ನಮ್ಮ ಟ್ರೈನಿಂಗ್ ನಲ್ಲಿ ಇದ್ದ 6 ಜನ Ladies ಪೈಕಿ ಯೋಗೇಶ್ವರಿ ಬಂದು ‘ ರೀ ಸುಧಾಕರ್ ಹೋಗಿ ACF ಹತ್ರ, ಇವತ್ತು ನನ್ನ Birthday, ಪನಿಶ್ಮೆಂಟ್ ನಾಳೆ ತೊಗೋತೀನಿ ಸಾರ್!!!!??? ಅಂತ ಕೇಳ್ಕೋಳಿ’ ಅನ್ನೋ ಖತರ್ನಾಕ್ ಸಲಹೆ ಕೊಟ್ಟಳು. ಸರಿ ಊಟ ಅಯೀತು ಕಾಕೀ ಶರ್ಟ್ & ಕಾಕೀ ನಿಕ್ಕರ್ ಹಾಕಿಕೊಂಡು ರೂಂನಿಂದ ಹೊರಡುವಾಗ ನನ್ನ ತಂಗಿ ರಾಜಮಣಿ ಕಾಲ್ ಮಾಡಿದಳು. ಫೋನ್ ನಲ್ಲಿ ಅವಳು ‘ ಲೋಕು (ಮೈ ಪೆಟ್ ನೇಮ್) ಹ್ಯಾಪಿ Birthday ಕಣೋ… ಏನ್ ಫುಲ್ ಜಾಲಿನಾ ಇವತ್ತು? ಯಾರ ಯಾರ ಏನ್ ಏನ್ ಗಿಫ್ಟ್ ಕೊಟ್ಟರೋ?’ ಅಂದಳು. ಆಗ ನಾನು ‘ ಇವತ್ತು ನನ್ನ Birthday ಸೂಪರ್ ಕಣೆ, ನಮ್ ACF ಸಕ್ಕತ್ತಾಗಿರೋ ಗಿಫ್ಟ್ ಕೊಟ್ಟಿದಾರೆ, ಎಲ್ಲ ನಿನಗೆ ನೈಟ್ ಡಿಟೈಲ್ ಆಗೀ ಹೇಳ್ತಿನಿ’ ಅಂತ ಹೇಳಿ ಫೋನ್ ಇಟ್ಟೆ.
ಸರಿ ನಂತರ ಅಡಿವೆಪ್ಪ ಬಂದು ನನ್ನ ಸೇರಿದಂತೆ 5 ಜನರ ಹೆಸರು ಹೇಳಿ ‘ನೀವೆಲ್ಲ 2 ರಿಂದ 4 ಗಂಟೆ ವರೆಗೆ ಜಾಗಿಂಗ್ ಟ್ರ್ಯಕ್ ನಲ್ಲಿ ಓಡಿ...’ ಅಂತ ಹೇಳಿ, ನಾವು ಸರಿಯಾಗೀ ಓಡುತೀವೊ ಇಲ್ಲವೋ ಅಂತ ನೋಡಲು ಒಬ್ಬ ಟ್ರೈನೀನ ಕಾವಲು ಹಾಕಿ ಹೋದ. ಅವತ್ತು ಸಿಕ್ಕಪಟ್ಟೆ ಬಿಸಿಲು. ಧಾರವಾಡದ ಬಿಸಿಲು ಅಂದ್ರೆ ಕೇಳಬೇಕೆ??? ಒಂದು 40 ನಿಮಿಷ ಅಯೀತು. ಮಧ್ಯದಲ್ಲಿ ಯಾರೋ ಅಡಿವೆಪ್ಪ ಹತ್ತಿರ ಹೋಗಿ ‘ಇವತ್ತು ಸುಧಾಕರ್ ನ Birthday, ಯಾಕೆ ಪನಿಶ್ಮೆಂಟ್ ಕೊಟ್ಟಿರಿ?’ ಅಂತ ಹೇಳಿದ್ದಾರೆ. ನಂತರ ಅವನು ಬಂದು ‘ಏ ಸುಧಾಕರ ಸಾಕು ನೀನು ಓಡ ಬೇಡ ಕಣೋ, ಯಾಕೋ ನಿನ್ನ Birthday ಅಂತ ಹೇಳಿಲ್ಲ ನೀನೂ...ನಿಲ್ಲಿಸೋ’ ಅಂದ. ನಾನು ನಿಂತು, ಒಂದು ಸಲ ಅವನ ಕಡೆ ಲುಕ್ ಕೊಟ್ಟು ಪುನ್ಹ ಓಡೋಕೆ ಶುರುಮಾಡಿದೆ. ಅವನಿಗೂ ಏನ್ ಅನ್ನಿಸಿತೋ ಏನೋ ಅಲ್ಲಿಂದ ಹೊರಟು ಹೋದ. So ಅವತ್ತು ನಮ್ಮ 5 ಜನಕ್ಕೂ ಫುಲ್ ಸುಸ್ತೋ ಸುಸ್ತು.
ಸಂಜೆ 4 ಗಂಟೆ ಅಯೀತು. ಟೀ ಬ್ರೇಕ್. ನಂತರ ಗೇಮ್ಸ್ ನಲ್ಲಿ ಯಾಕೋ ಅಡಿವೆಪ್ಪ ಮಂಕಾಗಿ ಇದ್ದ. ನಾನು ಮಾಮೂಲೀ ಹುಡುಗರ ಜೊತೆ ಕೂಳೆ (Masti) ಮಾಡಿಕೊಂಡೆ ಇದ್ದೆ. ಅವತ್ತು ಮೆಸ್ಸಿ(Mess)ಗೆ ಸಾಮಾನು ತರುವವರ ಹತ್ತಿರ ಎಲ್ಲರಿಗೂ ಕೊಡೋಣ ಅಂತ ಸ್ವೀಟ್ಸ್ ತರಿಸಿದೆ. ಸಂಜೆ ಸ್ನಾನ ಮಾಡಿದ ಕೂಡಲೆ ನನ್ನ ಮನಸ್ಸಿನಲ್ಲಿ ಈಗ ACF ಹತಿರ ಹೋಗಿ ‘ ಸರ್, ಈವತು ನನ್ನ Birthday, ಸ್ವೀಟ್ ತಗೋಳಿ...’ ಅಂದ್ರೆ ಅವರ Expression ಹೇಗಿರುತ್ತೆ? ಅಂತ ಯೋಚಿಸಿ. ಕೊಡಲೇ ಸ್ವೀಟ್ ಪ್ಯಾಕೆಟ್ ತೆಗೆದುಕೊಂಡು ನನ್ನ ಸೈಕಲ್ ನಲ್ಲಿ (ಟ್ರೈನಿಂಗ್ ಚೀಫ್ ಹೊಸ್ಮಟ್ ರವರು ಎಲ್ಲರಿಂದ 2000 ರು ಕಲೆಕ್ಟ್ ಮಾಡಿ ಸೈಕಲ್ ಕೊಡಿಸಿದ್ದರು) ACF ಚೇಂಬರ್ಗೆ ಹೋದೆ. But ಅವರು ಅಲ್ಲಿ ಇರಲಿಲ್ಲ. Peonನಿಂದ ಅವರು 20 ನಿಮಿಷ ಹಿಂದೆ ಬೆಳಗಾಂನಲ್ಲಿ ಇರುವ ತಮ್ಮಮನೆಗೆ ಹೋದರೆಂದು ತಿಳಿಯಿತು. ತಕ್ಷಣ ಫೋನ್ ಮಾಡಿದೆ. ಫೋನ್ ರಿಂಗ್ ಅಗುತ್ತಿದ್ದಂತೆ ಅವರು ‘ ಹಲೋ ಯಾರು?’ಅಂದರು. ನಾನು ‘ ಸರ್ ಗುಡ್ ಇವಿನಿಂಗ್, ಸುಧಾಕರ್ ಸರ್’ ಅಂದೆ. ಅವರು ‘ಏನ್ ಹೇಳಿ… ಏನ್ ಪುನ್ಹ ಅಡಿವೆಪ್ಪ ಹಾಗು ನಿಮ್ಮದು ಗಲಾಟೆನ?’ ಅಂದ್ರು. ನಾನು 'ಹಾಗೇನು ಇಲ್ಲ ಸರ್… ಇವತ್ತು ನನ್ನ Birthday.ನಿಮಗೆ ಸ್ವೀಟ್ ಕೊಡೋಣ ಅಂತ ಬಂದಿದೆ. ನೀವು ಇರಲಿಲ್ಲ, ಎಲ್ಲಿ ಇದ್ದೀರಿ? ಅಂತ ಫೋನ್ ಮಾಡಿದೆ ಅಷ್ಟೇ’ ಅಂದೆ. ಅವರು ‘ಓಹ್ಹ್ಹ್…’ ಅಂದು ಒಂದು 5-6 ಸೆಕೆಂಡ್ ಬಿಟ್ಟು ಫೋನ್ ಕಟ್ ಮಾಡಿದರು. ನನಗಂತು ಏನೋ ಮನಸ್ಸಿಗೆ ಒಂದು ರೀತಿ ಸಮಾಧಾನ ಅಯೀತು. ಹಾಯ್ ಎನ್ನಿಸಿತು!!. ನಾನು ನನ್ನ Birthday.ವಿಷಯ ಹೇಳಿದಾಗ ಅವರ ಮುಖ ಹೇಗಾಯಿತೋ ಅನ್ನೋ ಕಲ್ಪನೆ ಮಾಡಿಕೊಳ್ಳುತ ರೂಂ ಗೆ ಬಂದೆ. ಬಂದ 15 ನಿಮಿಷಕ್ಕೆ ಶರತ್ ಶೆಟ್ಟಿ ಫೋನ್ ಮಾಡಿ ‘ಸುಧಾ ಲೇ... ACF ಬಂದಿದ್ದರೆ. ಮೆಸ್ ಹತ್ತಿರ ಬರ್ಲಾ ಮಗಾ...’ ಅಂದ ತಕ್ಷಣ ಸೈಕಲ್ ತಗೊಂಡು ಮೆಸ್ ಹತ್ತಿರ ಹೋದೆ. ಅಲ್ಲಿ ACF ಸುತ್ತ ಎಲ್ಲ ಟ್ರೈನೀಸ್ ನಿಂತಿದ್ದರು. ACF ನನ್ನ ಹತ್ತಿರ ಬಂದು ‘I’m Sorry ಸುಧಾಕರ್… ನಿಮ್ಮ Birthday ದಿನನೇ ಪನಿಶ್ಮೆಂಟ್ ಕೊಟ್ಟುಬಿಟ್ಟೆ. ಯಾವುದೆ ಹಾರ್ಡ್ ಫೀಲಿಂಗ್ಸ್ ಇಟ್ಟು ಕೊಳ್ಳಬೇಡಪ್ಪ… ನಾನು 10 kms ದೂರ ಹೋಗಿದೆ, ಯಾಕೋ ಬೇಜಾರ್ ಆಗಿ ವಾಪಸ್ ಬಂದೆ’ ಅಂತ ಹೇಳಿ ಬೇರೆ ಟ್ರೈನೀಸ್ ಕಡೆ ತಿರುಗೀ ‘ ನೀವಾರು ಯಾರದ್ರು ಹೇಳ್ಬಾರ್ದ ಅವನ Birthday ಅಂತ?’ ಅಂದು, ಸ್ವೀಟ್ ತಗೊಂಡು ತಿಂದು ಪುನ್ಹ Wishes ಹೇಳಿ ಹೊರಟುಹೋದರು. ನಂತರ ಎಲ್ಲರಿಗೂ ಸ್ವೀಟ್ಸ್ ಕೊಟ್ಟು Birthday ಸೆಲೆಬ್ರೆಟ್ ಮಾಡಿ ನನ್ನ ರೂಂ ಗೆ ಹೋದೆ. ಅವತು ನನ್ನ ಮೈಂಡ್ ಫುಲ್ Calm ಆಗಿ ಇತ್ತು. ACF ಪಾಪ ಒಳ್ಳೆಯವರು ಅನ್ನಿಸ್ತು. Next ಯಾವಗಲಾದ್ರು ಚಾನ್ಸ್ ಸಿಕ್ಕಿದಾಗ ಅಡಿವೆಪ್ಪ ನನ್ನನ್ನು ಸಿಕ್ಕಿಸಿದ ಹಾಗೆ ನಾನು ಅವನನ್ನು ಸಿಕ್ಕಿಸಬೇಕು ಅನಿಸ್ತು.
Saturday, April 10, 2010
ಗಿಟಾರ್... ಆತ್ಮದ ಶಾಪ… & ದೇ ಡೈಡ್ ಯಂಗ್…
ಆವತ್ತು ಮಾರ್ಚ್ 31, 1993 ಸಮಯ: ಬೆಳಗಿನ ಜಾವ 12.30, ಸ್ಥಳ : ಕಾರೋಲ್ಕೋ ಸ್ಟುಡಿಯೊಸ್ (ಈಗಿನ ಸ್ಕ್ರೀನ್ ಗೇಮ್ಸ್) ವಿಲ್ ಮಿಂಗ್ಟನ್, ನಾರ್ತ್ ಕ್ಯಾರೊಲಿನ, ಬ್ರೂಸ್ಲೀ ಮಗ ಬ್ರಾಂಡನ್ ಲೀಯ ನಾಯಕತ್ವದ ಚಿತ್ರ THE CROW ಚಿತ್ರೀಕರಣ ನೆಡಿತಾಇತ್ತು. ಚಿತ್ರೀಕರಣ ಶೇಕಡಾ 90% ಮುಗಿದಿತ್ತು. ಇನ್ನು ಬರಿ 8 ದಿನಗಳ ಚಿತ್ರೀಕರಣ ಬಾಕಿ ಇತು. ನಾಯಕ ಎರಿಕ್ ಡ್ರವೆನ್(ಬ್ರಾಂಡನ್ ಲೀ) ತನ್ನ ಹಾಗು ತನ್ನ ಗರ್ಲ್ ಫ್ರೆಂಡ್ ಅಪಾರ್ಟಮೇಂಟ್ನಲ್ಲಿ ಅವನ ಗರ್ಲ್ ಫ್ರೆಂಡ್ ನನ್ನು ಹೊಡೆದು ಮಾನಭಂಗ ಮಾಡುವಾಗ ಅಪಾರ್ಟಮೇಂಟ್ಗೆ ನುಗ್ಗುವ ಸೀನ್. ಅಗ್ಗ ಪ್ಲೇಬಾಯ್ (ಮೈಕಲ್ ಮಸ್ಸಿ) ಎಂಬ ವಿಲನ್ ಲೀ ಗೆ ಶೋಟ್ ಮಾಡ್ಬೇಕಾಗಿರುತ್ತೆ. ಶೂಟಿಂಗ್ ಶೇಡ್ಯೋಲ್ ಪ್ರಕಾರ ಎಲ್ಲ ನಡೆದಿತ್ತು. ಬ್ರಾಂಡನ್ ಲೀ ‘Hang Man’s joke’ ಎಂಬ ಫ್ರೇಸ್ ಇದ್ದ ಟೀ-ಶರ್ಟ್ ಮೇಲೆ ಬ್ಲಾಕ್ ಜಾಕೆಟ್ ಹಾಕಿಕೊಂಡು ರೂಮಿಗೆ ನುಗ್ಗುತ್ತಾನೆ. ಮೈಕಲ್ ಮಸ್ಸಿ ತನ್ನ ಬಳಿ ಇದ್ದ .44 ಕ್ಯಾಲಿಬೇರ್ ರಿವಾಲ್ವರ್ ಇಂದ 10-12 ಅಡಿ ದೂರದಿಂದ ಬ್ರಾಂಡನ್ ಲೀಗೆ ಗುಂಡು ಹಾರಿಸುತ್ತಾನೆ. ತಕ್ಷಣ ಬ್ರಾಂಡನ್ ಲೀ ತನ್ನ ಬಲ ಪಕ್ಕೆ ಹಿಡಿದುಕೊಂಡು ಕೆಳಗೆ ಬೀಳುತ್ತಾನೆ, ಬಿದ್ದು ತನಗೆ ತೀವ್ರವಾಗಿ ಗಾಯವಾಗಿದೆ ಎಂದು ಸನ್ನೆ ಮಾಡಿ ತೋರಿಸ್ತಾನೆ. ಆದರೆ ಎಲ್ಲರು ಅವರವರ ಪಾತ್ರದ ಅಭಿನಯದಲ್ಲಿ ತಲ್ಲಿನರಾಗಿದ್ದರಿಂದ ಯಾರಿಗೂ ತಕ್ಷಣ ಬ್ರಾಂಡನ್ ಲೀನ ಗಮನಿಸಲು ಸಾಧ್ಯವಾಗಿಲ್ಲ. ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ‘ಕಟ್’ ಅಂತ ಹೇಳೋ ಮುಂಚೆ ಮೈಕಲ್ ಮಸ್ಸಿ ಹಾರಿಸಿದ್ದ ಬುಲೆಟ್ ಬ್ರಾಂಡನ್ ಲೀ ನ ಹೊಟ್ಟೆಯನ್ನು ದೊಡ್ಡ ತೂತು ಮಾಡಿ ಜೀರ್ಣಾಅಂಗದ ಅಕ್ಕಪಕ್ಕ ಇದ್ದ ಎಷ್ಟೋ ಅಂಗಗಳನ್ನು ಸೀಳಿ ಹೋಗಿ ಬೆನ್ನ ಮೊಳೆ ಪಕ್ಕ ಲಾಡ್ಜ್ ಆಗಿತ್ತು. ಬ್ರಾಂಡನ್ ಲೀ ಗೆ ಬಿದ್ದಿರುವುದು ನಿಜವಾದ ಗುಂಡು ಅಂತ ತಿಳಿದ ತಕ್ಷಣ ಅವನ್ನು ನ್ಯೂ ಹನೋವೆರ್ ಹಾಸ್ಪಿಟಲ್ ಗೆ ಕರೆದು ಕೊಂಡು ಹೋಗಿ 6 ತಾಸು ಆಪರೇಷನ್ ಮಾಡಿ ಬುಲೆಟ್ ತೆಗೆದರು. ಗುಂಡು ತೆಗೆಯುವಾಗ ಹಾಗು ಆಪರೇಷನ್ ವೇಳೆಯಲ್ಲಿ ತುಂಬಾ ರಕ್ತ ಸ್ರಾವವಾಗಿ, ಅವನಿಗೆ 60 ಪಿಂಟ್(28 ಲೀಟರ್) ರಕ್ತ ಕೊಡಲಾಗಿತು. ಇಷ್ಟಾದರು ಬ್ರಾಂಡನ್ ಲೀ ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುಂಡು ತಗುಲಿದ 13 ತಾಸು ಬಳಿಕ ಅವನು ಮೃತನಾದ. ಮಾರ್ಚ್ 31st 1993 ರ ಮಧ್ಯಾನ 1.03 ನಿಮಿಷಕ್ಕೆ ಬ್ರಾಂಡನ್ ಲೀ ಸತ್ತಿದ್ದಾನೆಂದು ಘೋಷಿಸಲಾಯಿತು. ಸಾಯಲು ಕಾರಣ (Cause Of Death) ವನ್ನು GSW – Gun Shot Wound ಎಂದು ದಾಖಲಿಸಲಾಯಿತು. ಆಗ ಅವನಿಗೆ ಕೇವಲ 28 ವರ್ಷ ಹಾಗು ಅವನ ಪ್ರೇಯಸಿ ಎಲಿಜ ಒಟ್ಟಿಗೆ ಅವನ ಮದುವೆಗೆ ಇನ್ನು ಬರೇ 2 ವಾರ ಬಾಕಿ ಇತ್ತು…
BRANDON BRUCE LEE(01-02-1965 – 31-03-1993)
ಈ ಪ್ರಕರಣದ ಬಗ್ಗೆ ತನಿಖೆ ನಡೆದಾಗ ಶೋಟಿಂಗ್ ಸಿಬ್ಬಂದಿಗಳ ಬೇಜವಾಬ್ದಾರಿತನ ಹಾಗು ಅನಾನುಭಾವಿ ಕೆಲಸಗಾರರುಗಳೇ ಕಾರಣ ಎಂದು ವರದಿಮಾಡಿದರು. ಯಾರಿಗೂ ಗೊತ್ತಿಲ್ಲದ ಹಾಗೆ ನಕಲಿ ಗುಂಡಿನ ಜಾಗದಲ್ಲಿ ಅಸಲಿ ಗುಂಡು ಲೋಡ್ ಆಗಿ ಬ್ರಾಂಡನ್ ಲೀ ನ ಬಲಿಪಡೆದಿತ್ತು. ಗುಂಡು ಹಾರಿಸಿದ್ದ ಮೈಕಲ್ ಮಸ್ಸಿ ಹಿಂದೆನೂ ಒಂದು ಕ್ಯಾಮೆರಾ ಇದ್ದು, ಅದು ಬ್ರಾಂಡನ್ ಲೀ ಗುಂಡು ತಗುಲಿದುದ್ದನ್ನು ಸರಿಯಾಗಿ ಸೆರೆ ಹಿಡಿದಿತ್ತಂತೆ. ಆದರೆ ಅದನ್ನು ಡೆವಲಪ್ ಮಾಡದೆ ಹಾಗೆ ನಾಶಪಡಿಸಿದರಂತೆ. ಚಿತ್ರ ನಟ ಮೈಕಲ್ ಮಸ್ಸಿ ಬ್ರಾಂಡನ್ ಲೀ ಸಾವಿಗೆ ಕಾರಣನಲ್ಲ ಇದು ಕೇವಲ ಆಕಸ್ಮಿಕ ಅಪಘಾತ ಎಂದು ಪರಿಗಣಿಸಿ ಅವನ ಮೇಲೆ ಯಾವ ಕ್ರಿಮಿನಲ್ ಆರೋಪವನ್ನು ಹೊರಿಸಲಿಲ್ಲ. ಈ ಬಗ್ಗೆ ಅವನ ತಾಯೀ ಲಿಂಡಾ ಲೀ ಚಿತ್ರ ತಂಡದವರ ಮೇಲೆ ಕೇಸು ಹಾಕಿ, ಬಹಿರಂಗ ಪಡಿಸದ ಅನುಕಂಪ ಮೊತ್ತವನ್ನು ಪಡೆದರು. ಬ್ರಾಂಡನ್ ಲೀ ಯಾ ಸಂಸ್ಕಾರದ ದಿನ ಅವನ ತಾಯೀ ಜಗತ್ತಿನ ಎಲ್ಲ ಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಚಿತ್ರೀಕರಣದ ವೇಳೆಯಲ್ಲಿ ಸುರಕ್ಷಿತ ಕ್ರಮಗಳ (safety measures) ಬಗ್ಗೆ ಹೆಚ್ಚು ಸೀರಿಯಸ್ ಆಗಿರಲು ಮನವಿಮಾಡಿಕೊಂಡರು.
ಬ್ರಾಂಡನ್ ಲೀ ನನ್ನು ವಾಶಿಂಗ್ಟನ್ನ ಸಿಟಲ್ ನಲ್ಲಿರುವ ಲೇಕ್ ವ್ಯೂ ಸೆಮೆಂಟರಿ ಪಾರ್ಕ್ ನಲ್ಲಿ ಅವನ ತಂದೆ ಬ್ರೂಸ್ ಲೀ ಸಮಾಧಿ ಪಕ್ಕ ಹೂಳಲಾಯಿತು. ಆ ಜಾಗವನ್ನು ತನ್ನ ತಾಯೀ ಲಿಂಡಾ ಲೀ ತನ್ನ ಸಾವಿನ ನಂತರ ತನಗಾಗಿ ಮೀಸಲಿಟ್ಟಿಕೊಂಡಿದ್ದಳಂತೆ.
THE CROW ಚಿತ್ರದ ಚಿತ್ರೀಕರಣವು 90% ಮುಗಿದು ಬಾಕಿ ಕೆಲವೊಂದು ಸೀನ್ ಗಳನ್ನು ಬ್ರಾಂಡನ್ ಲೀ ಯ ಗೈರಿನಲ್ಲಿ ಅವನ ಡೂಪ್ ಬಳಸಿ ಹಾಗೆ ಕೆಲವು ಸ್ಪೆಷಲ್ ಎಫೆಕ್ಟ್ ಬಳಸಿ ಮುಗಿಸಲಾಯಿತು. ಚಿತ್ರ ಮುಗಿಸಲು ಅವನ ಪ್ರೇಯಸಿ ಎಲಿಜ ಹಾಲ್ಟ್ನ್ ಹಾಗು ಅವಳ ತಾಯೀ ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ಗೆ ತುಂಬಾ ಸಹಕರಿಸಿದರು. THE CROW ಕೊನೆಗೆ ಮೇ 1994ರಲ್ಲಿ ಬಿಡುಗಡೆಗೊಂಡಿತು. ಹಾಗು ನಿರೀಕ್ಷೆಗೂ ಮೀರಿ ಚಿತ್ರ ಜನಪ್ರಿಯವಾಯಿತು.
THE CROW ಚಿತ್ರೀಕರಣದ ವೇಳೆ ಬ್ರಾಂಡನ್ ಲೀ ಸಾವಲ್ಲದೇ ಇನ್ನು ಅನೇಕ ಅಪಘಾತಗಳು ಸಂಭವಿಸಿದವಂತೆ ಶೂಟಿಂಗ್ ನ ಮೊದಲನೆ ದಿನವೇ ಮೆಟಲ್ ಗ್ರೈಂಡರ್ಗೆ ಹೈ ಟೆನ್ಶನ್ ವೈರ್ ಶಾರ್ಟ್ ಆಗೀ ಒಬ್ಬ ಆಚಾರಿಯ(carpenter) ತನ್ನ ಮುಖ,ಎದೆ ಎಲ್ಲ ಸುಟ್ಟಿಕೊಂಡನಂತೆ, ಇನ್ನೊಬ್ಬ ಕೆಲಸಗಾರನ ಕೈಗೆ scredriver ಸೀಳಿ ನುಗಿತಂತೆ, ಯಾರಿಗೂ ತಿಳಿಯದ ರೀತಿ ಒಂದು ಇಡೀ ಲಾರಿ ತುಂಬಾ ಇದ್ದ ಶೂಟಿಂಗ್ ಸೆಟ್ ನ ಸಾಮಾನು ಬೆಂಕಿಗೆ ಯಲ್ಲಿ ಬೆಂದುಹೋಯಿತಂತೆ, ಸ್ಟಂಟ್ ಮ್ಯಾನ್ ಒಬ್ಬನು ಮೇಲಿಂದ ಬಿದ್ದು ಕೈ,ಕಾಲು,ಎದೆ ಮೂಳೆ(ರಿಬ್ಸ್) ಎಲ್ಲಾ ಮುರಿದುಕೊಂದಡನಂತೆ. ಮತ್ತು ಮಾರ್ಚ್ 1993 ರ ಮೊದಲ ವಾರ ಬಿರುಗಾಳಿ ಬಂದು ಶೂಟಿಂಗ್ ಸೆಟ್ ನ ಅನೇಕ ಭಾಗವನ್ನು ಹಾಳುಮಾಡಿತಂತೆ.
ಬ್ರಾಂಡನ್ ಲೀ ಯಂತೆ ಅವನ ತಂದೆ ಬ್ರೂಸ್ ಲೀ ಕೂಡ ಕೇವಲ ತಮ್ಮ 32 ವಯಸ್ಸಿನಲ್ಲೇ ಅತ್ಯಂತ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಬ್ರೂಸ್ ಲೀ ಕೂಡ ತನ್ನ ಕಡೆ ಚಿತ್ರ ‘ದಿ ಗೇಮ್ ಆಫ್ ದಿ ಡೆತ್ ’ ನ ಸ್ಕ್ರಿಪ್ಟ್ ಅನ್ನು ನಾಯಕಿ ಬೆಟ್ಟಿ ಟಿಂಗ್ ಪೆಯಿಯೊಂದಿಗೆ ತನ್ನಮನೆಯಲ್ಲಿ ಚರ್ಚಿಸುತ್ತಿದ್ದಾಗ ಅವನಿಗೆ ತಲೆನೋವು ಬಂತಂತೆ. ಆಗ ಬೆಟ್ಟಿ EQUAGESIC ಅನ್ನು ಅಸ್ಪಿರ್ನ್ ಮಾತ್ರೆ ನೀಡಿದಳು. ಅದನ್ನು ನುಂಗಿ ಮಲಗಿದ ಬ್ರೂಸ್ ಲೀ ಪುನಃ ಎದ್ದೇಳಲೇಇಲ್ಲವಂತೆ. ಬ್ರೂಸ್ ಲೀ ಸಾವಿನ ಬಗ್ಗೆ ಜನರಿಗೆ ಸಾಕಷ್ಟು ಸಂಶಯವಿತ್ತು. ಅವನನ್ನು ಅವನ ವೈರಿಗಳು ಕೊಲೆ ಮಾಡಿದರು, ಅವನನ್ನು ಹೊಡೆದಾಟದಲ್ಲಿ ಮುಗಿಸಲಾಯಿತು, DRUGS OVERDOSE ಇಂದ ಕೊಲ್ಲಲಾಯಿತು ಅಂತೆಲ್ಲ ವದಂತಿ ಇದ್ದವಂತೆ. ಅದರೆ ಅವನ್ ಮರಣೋತ್ತರ ಪರೀಕ್ಷೆ ಮಾಡಿದ ಡಾಕ್ಟರ ಬ್ರೂಸ್ ಲೀ ಗೆ Medicine ನ ವ್ಯತ್ಯಾಸ ಹಾಗು ಇನ್ನಿತರ ಕಾರಣಗಳಿಂದ ಅವನ ಮೆದಳು ಉಬ್ಬಿ, ಅವನು ಗಾಢ ನಿದ್ರೆಗೆ ಹೋಗಿ ಪುನಃ ಎಚ್ಚರವಾಗದೆ ಮೃತಪಟ್ಟಿದಾನೆ ಎಂದು ಘೋಷಿಸಿದರು.
BRUCE LEE(27-11-1940 – 20-07-1973)
ಇದೆಲ್ಲರ ನಡುವೆ ತಂದೆ ಮಗ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಲು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಎಂಬ ಚಿಕ್ಕ ಸನ್ಯಾಸಿ(Monk) ನ ಶಾಪ ಕಾರಣ ಎಂದು ಸಾಕಷ್ಟು ಜನ ನಂಬಿದ್ದಾರೆ. ಬ್ರೂಸ್ ಲೀ ಗೆ ಯಾವಾಗಲು ಒಂದು ಕನಸು ಬೀಳುತ್ತಿತಂತೆ. ಆ ಕನಸಿನಲ್ಲಿ ಒಂದು ಧ್ವನಿ ‘ನಿನ್ನ ಅಪ್ಪ ತನ್ನ 64 ನೇ ವಯಸ್ಸಿನಲ್ಲಿ ಸಾಯುತ್ತಾನೆ, ನೀನು ಅವನ ಆಯಸ್ಸಿನ ಅರ್ಧದಷ್ಟು ಸಹ ಬದುಕುವುದಿಲ್ಲ’ ಎಂದು ಹೇಳಿತಂತೆ. ಈ ಬಗ್ಗೆ ಬ್ರೂಸ್ ಲೀ ಯು ಅವನ ಅಪ್ಪ ಬಳಿ ವಿಚಾರಿಸಿದಾಗ ಅವನ ಅಪ್ಪ ‘ಅದು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಯಾ ಧ್ವನಿ, ಅವನು ಸಾಯುವಾಗ ನನ್ನ ಸಮಾಧಿ ಪಕ್ಕ ಯಾರನ್ನು ಹೂಳಬೇಡಿ ಎಂದಿದ್ದ. ಆದರೆ ಅಲ್ಲಿ ನಿನ್ನ ತಾತ ನನ್ನು ಹೂತಿದ್ದಾರೆ’ ಅಂದನಂತೆ. ಯಾವಾಗ ಬ್ರೂಸ್ ಲೀ ಗೆ ಅ ಧ್ವನಿ ಕನಸಿನಲ್ಲಿ ಬರುವುದು ಹೆಚ್ಚಾಯಿತೋ ಆಗ ಅವನು ಹಾಂಗ್ ಕಾಂಗ್ ಬಿಟ್ಟು ಅಮೆರಿಕಾಗೆ ಬಂದು ಬಿಟ್ಟ. ಅಮೆರಿಕಾಗೆ ಬಂದರು ಸಹ ಅ ಧ್ವನಿ ಅವನ ಕನಸಿನಲ್ಲಿ ಬಂದು ಕಾಡುವುದು ತಪ್ಪಲಿಲ್ಲವಂತೆ. ಒಂದು ದಿನಇದ್ದಕಿದ್ದಂತೆ ಪುನ ಅ ಧ್ವನಿ ಕನಸಿನಲ್ಲಿ ಬಂದು ‘ ನೀನು ನಿನ್ನ ಜೀವನದಲ್ಲಿ ತುಂಬಾ ಸಾಧಿಸಿ ನಿನ್ನ 32ನೆ ವಯಸ್ಸಿಗೆ ಸಾಯುತ್ತಿಯ ಹಾಗು ನಿನ್ನ ಮಗ ಕೂಡ ಅವನಿಗೆ ಮಕ್ಕಳಾಗುವ ಮೊದಲೆ ಸಾಯುತ್ತಾನೆ’ ಅಂದಿತಂತೆ. ಅದರಂತೆ ಬ್ರೂಸ್ ಲೀ ಯ ತಂದೆ 64 ನೆ ವಯಸ್ಸಿಗೆ ತೀರಿಕೊಂಡರು. ಬ್ರೂಸ್ ಲೀ 1973 ರಲ್ಲಿ ತನ್ನ 32 ವಯಸ್ಸಿನಲ್ಲಿ ಸತ್ತ. ಸಾಯುವ ಮೊದಲೆ ಅವನು ಆ ಧ್ವನಿಯಿಂದ ಪಾರಗಲು ಇತರ ಫೆನ್ಗ್ಷಿ ಮಾಸ್ಟರ್ ಬಳಿ ಹೋಗಿ ಪರಿಹಾರ ಗಳನ್ನೂ ಕೇಳಿದ್ದನಂತೆ. ಹಾಗೆ ಅವನ ಮಗ ಕೂಡ ಅವನ ತನ್ನ ಮದುವೆ ಇನ್ನು 2 ವಾರವಿದೆ ಅಂತನೇ ದಾರುಣವಾಗಿ ಚಿತ್ರಿಕರಣದ ವೇಳೆ ಸತ್ತ. ಇವತ್ತು ಕೂಡ ಬ್ರೂಸ್ ಲೀ ಯಾ ಫ್ಯಾಮಿಲಿ ಅಂದ್ರೆ ಅವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ಒಂದೂ Divorce ಆಗಿದ್ದರೆ, ಇಲ್ಲಾ ಸತ್ತುಹೋಗಿದ್ದಾರೆ, ಇಲ್ಲ ಅಂದ್ರೆ ದೀವಾಳಿಯಾಗಿದ್ದರೆ ಮತ್ತು ಅವರು ಇವೆಲ್ಲ ಆ ಫೆನ್ಗ್ಷಿ ಮಾಸ್ಟರ್ ಸುಂಗ್ ಲಿಯ ಆತ್ಮದ ಶಾಪ ಅಂತರಂತೆ...
ಇದೆಲ್ಲಾ ಓದಿದ ನಂತರ, ಪುನಃ ನಾನೂ ನನ್ನ ಕಂಪ್ಯೂಟರ್ ನಲ್ಲಿದ್ದ ‘THE CROW’ ಸಿನಿಮಾ ದ 65 ನಿಮಿಷ 11 ಸೆಕೆಂಡ್ ನಲ್ಲಿ ಬರುವ ಆ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ಸೀನ್ ನೋಡಿ, ಹಾಗೆ 11 ನಿಮಿಷ 46 ಸೆಕೆಂಡ್ ನಲ್ಲಿ ಬರುವ ಬ್ರಾಂಡನ್ ಲೀ (ಎರಿಕ್ ದ್ರವೆನ್) ಕೊಲೆಯಾಗು ಸೀನ್ ನೋಡಿ ಕಂಪ್ಯೂಟರ್ Off ಮಾಡಿದ ನಂತರ ನನ್ನ ಮನಸ್ಸಿನಲ್ಲಿ ಇವೆಲ್ಲ ನಿಜವೆ?... ಯಾವುದೋ ಆತ್ಮದ ಶಾಪ ಒಬ್ಬ ಮನುಷ್ಯನ ಜೀವನವನ್ನು ಇಷ್ಟರಮಟ್ಟಿಗೆ ಹಾಳುಮಾಡುತ್ತದೆಯೇ? ಅನ್ನೋ ಪ್ರಶ್ನೆ ಮೂಡಿ, ಉತ್ತರ ಸಿಗದೆ ಹಾಗೆ ಸುಮ್ಮನಾದೆ...
Wednesday, March 31, 2010
‘ಎಷ್ಟು ಖರ್ಚು ಮಾಡಿದರು ನಿನ್ನನ ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅನ್ನೋ ಕೊರಗು…
ನಿನ್ನ ಹೆಸರು ಕೇಳಿದರೆ ಏನೋ ರೋಮಾಂಚನ!!!! ನನಗಷ್ಟೇ ಅಲ್ಲ ಜಗತ್ತಿನ ಬಹಳಷ್ಟು ಜನಕ್ಕೆ. ವಿಶ್ವದಾದ್ಯಂತ ನಿನ್ನನ್ನು ಎಲ್ಲರೂ ಈ ಭೂಮಿಯ ಮೋಸ್ಟ್ charismatic ಪ್ರಾಣಿ ಅಂತರೆ. ನಿನ್ನ ರಾಜಗಂಭಿರ್ಯ, ನಿನ್ನ ಬಲಶಾಲಿತನ, ನಿನ್ನ ಬುದ್ದಿವಂತಿಕೆ ಎಂಥವರಲ್ಲಿಯು ಅಚ್ಚರಿ ಹುಟ್ಟಿಸದೆ ಇರಲಾರದು. ಒಬ್ಬ ಮನುಷ್ಯ ಏನೆಲ್ಲಾ ಗುಣಗಳು ತನ್ನಲ್ಲಿರಬೇಕು ಅಂತ ಬಯಸುತ್ತಾನೋ ಆ ಗುಣಗಳೆಲ್ಲ ನಿನ್ನಲ್ಲಿ ವಂಶಪರ್ಯಂಪರವಾಗಿ ಬಂದಿದೆ ಅನಿಸುತ್ತದೆ. ನಿನಗೆ ಆಂಗ್ಲರು Tiger ಅಂತ ಇಟ್ಟಿರೋ ಹೆಸರಿನ ಮೂಲ ಯಾವುದು ಗೊತ್ತ? ಅದು ಗ್ರೀಕ್ ನ TIGRIS ಎಂಬ ಶಬ್ದದಿಂದ ಬಂದಿರುತ್ತದೆ . ಈ TIGRIS ಪದವು ಪೆರ್ಸಿಯ ಮೂಲದಾಗಿದ್ದು ಅದು ಬಾಣ (Arrow) ಎಂಬ ಅರ್ಥವನ್ನು ಹಾಗು ಪ್ರಾಣಿಯ ವೇಗವನ್ನು ಸೂಚಿಸುತ್ತದೆಯಂತೆ.
ಹಿಂದಿನಿಂದಲೂ ನೀನೊಂಥರ ‘Big sport thing’ ಅಂತಾರಲ್ಲ ಹಾಗೆ. ಹಿಂದಿನ ರಾಜ ಮಹಾರಾಜರಿಗೆ ನಿನ್ನ ಬೇಟೆ ಆಡುವುದೇ ಒಂದು ಹೆಮ್ಮೆಯ ವಿಷಯವಾಗಿತ್ತಂತೆ. ಕಾಡಿನಲ್ಲಿ ಮಚನ್ ಕಟ್ಟಿ ನಿಮ್ಮವರನ್ನ ಬೇಟೆ ಆಡುತ್ತಾ ಇದ್ದರು. ಹಾಗೆ ಊರಿನವರೆಲ್ಲಾ ಸೇರಿ ನಿನ್ನನು ಹೆದರಿಸಿ ಓಡಿಸಿ ಒಂದು ಕಡೆ ಸೇರಿಸಿ ಬೇಟೆ ಆಡುತ್ತಾ ಇದ್ದರು. ನನಗಂತು ನಿನ್ನ ಚರ್ಮ ಎಂದರೆ ತುಂಬಾ ಇಷ್ಟ. ಅ ಚರ್ಮದ ಮೇಲೆ ಇರೋ ಪಟ್ಟಿಗಳು ಎಂಥ ನೋಡುಗರನ್ನು ಸೆಳೆಯುತ್ತವೆ. ನಿಮ್ಮಲ್ಲಿ ಎಷ್ಟೋ ಹುಲಿಗಳಿಗೆ 100ಕಿಂತ ಹೆಚ್ಚು ಪಟ್ಟಿಗಳಿರುತ್ತವೆಯಂತೆ. ಇನ್ನೊಂದು ವಿಸ್ಮಯಕಾರಿ ಅಂಶ ಎಂದರೆ ನಿಮ್ಮಲೂ ನಮ್ಮ ಮನುಷ್ಯರ ಕೈ ಬೆರಳಿನ ಗುರುತಿನ ಹಾಗೆ ಒಂದು ಹುಲಿಯ ಚರ್ಮದ ಪಟ್ಟಿ, ಪಟ್ಟಿಯರೀತಿ, ವಿನ್ಯಾಸ ಇನ್ನೊಂದು ಹುಲಿಯ ತರಹ ಇರುವುದಿಲ್ಲ.(ಯಾವುದೇ 2 ಹುಲಿಗೆ ಒಂದೆ ರೀತಿ ಪಟ್ಟಿ ಇರುವುದಿಲ್ಲ)
ಸಾಂಸ್ಕೃತಿಕವಾಗಿಯೂ ಜಗತ್ತಿನಲ್ಲಿ ನಿನಗೆ ಎಷ್ಟು ಮನ್ನಣೆ ಉಂಟು ಗೊತ್ತ? ಏಷಿಯಾ ಹಾಗು ಸುತ್ತಮುತ್ತ ಎಷ್ಟೋ ರಾಷ್ಟ್ರಗಳಲ್ಲಿ ಕಾಡಿನರಾಜ ಎಂದು ಸಿಂಹದ ಬದಲಾಗಿ ನಿನ್ನ ಆಯ್ಕೆಮಾಡಿದ್ದರೆ. ಚೀನಾ ದೇಶದ ಮುಖ್ಯ ರಾಶಿ ಪ್ರಾಣಿ ನೀನು. ನಮ್ಮ ಇತಿಹಾಸ, ಪುರಾಣ ನೋಡಿದರು ನಿನ್ನ ಉಲ್ಲೇಖವೇ. ಹೊಯ್ಸಳ ಸಾಮ್ರಾಜ್ಯದ ಚಿನ್ನ್ಹೆ, ತಾಯೀ ಚಾಮುಂಡೇಶ್ವರಿಯ ವಾಹನ, ಸ್ವಾಮಿ ಐಯ್ಯಪ್ಪನ ವಾಹನ, etc. ಅಷ್ಟೇ ಅಲ್ಲದೆ jungle book ಎಂಬ ಕಾದಂಬರಿಯಲ್ಲಿ ನಿನ್ನನ್ನು ಒಮ್ಮೆ ವಿಲ್ಲನ್ (ಶೇರ್ ಖಾನ್) ಆಗಿ ಸಹ ತೋರಿಸಲಾಗಿದೆ. ಮತ್ತೆ ನನ್ನ ಫೇವರಿಟ್ ಕಾರ್ಟೂನ್ calvin & hobbes ನಲ್ಲಿ calvin ನ imaginary ಫ್ರೆಂಡ್ಆಗಿ (doll) ಇಡೀ ಜಗತ್ತಿನಲ್ಲಿ ಮಿಂಚಿದ್ದಿಯ.
ಮೊನ್ನೆ ಅನಿಮಲ್ ಪ್ಲಾನೆಟ್ ಎಂಬ ಚಾನೆಲ್ 73 ದೇಶದಲ್ಲಿ ನೆಡಸಿದ ಜಗತಿನ ಅತ್ಯಂತ ಅಚ್ಚು ಮೆಚ್ಚು ಪ್ರಾಣಿ ಸಮೀಕ್ಷೆಯೆಲ್ಲಿ ನಿನ್ನನೇ ಹೆಚ್ಹು ಜನ ಆಯ್ಕೆ ಮಾಡಿದ್ದಾರೆ. ಹುಲಿ 21%, ನಾಯೀ 20%, ಡಾಲ್ಫಿನ್ 13% , ಕುದುರೆ 10%, ಸಿಂಹ 9%, ಹಾವುಗಳು 8% ಹಾಗು ಉಳಿದ ಮುಂತಾದ ಪ್ರಾಣಿಗಳು.
ನಿನ್ನನ್ನ ನಾನು ವೈಲ್ಡ್ ಆಗೀ ನೋಡಬೇಕು ಅಂತ ಪಣತೋಟ್ಟಿ 2001ರಿಂದಲೂ ಹುಡುಕಲು ಶುರುಮಾಡಿದೆ. 3 ದಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿನ್ನ ಸೆನ್ಸಸ್ಗೆ ಬಂದು 40-50 ಕಿಲೋಮೀಟರ ಕೋರ್ ಜೋನನಲ್ಲೆಲ್ಲೆ ಅಲೆದೆ. ನಿನ್ನನ್ನು ಹುಡುಕಲು ಹೋಗಿ ಕಾಡಿನಮೇಲೆ ಪ್ರೀತಿ ಉಂಟಾಗಿ ಫಾರೆಸ್ಟ್ ಡಿಪಾರ್ಟ್ಮಂಟ ಸೇರಿ ಪುನ್ಹಃ ನಿನ್ನನ್ನು ಈ ಬಾರಿ ನೋಡಲೇ ಬೇಕೆಂದು wildlife ರೀಜನ್ ನ ಇನ್ಟಿರಿಯರ್ ಜಾಗಕೆ ಡೇಪ್ಟೇಷನ್ ಬಂದು ಹಗಲು ರಾತ್ರೀ ಸುತ್ತಿದೆಷ್ಟು? ಮೈಸೂರ್ zooಗೆ ಹೋದಾಗ ಯಾವ ಪ್ರಾಣಿನು ನೋಡದೆ ಸೀದಾ ನಿನ್ನ ಮನೆ ಹತಿರ ಬಂದು ಕಣ್ಣುತುಂಬ ನಿನ್ನ ನೋಡಿ ಸಂತೋಷ ಪಡುತ್ತಿದ್ದೆ. ಇವತ್ತು ಇದನ್ನೆಲ್ಲಾ ಯಾಕೆ ನಿಂಗೆ ಬರೆದು ಹೇಳ್ತಾ ಇದ್ದಿನಿ ಅಂದ್ರೆ ನಾನು ಸೆನ್ಸಸ್ಗೆ ಹೋದಾಗ ಅಂದರೆ 2002 ರಲ್ಲಿ ನೀನು ಮತ್ತು ಇತರ ಎಲ್ಲ ಹುಲಿಗಳ ಸಂಖ್ಯೆ 3642(Tigers ಲೆಫ್ಟ್ ಇನ್ ವೈಲ್ಡ್ ಇನ್ ಇಂಡಿಯಾ) ಅಂತ ತಿಳಿಸಿದರು. ಅದೇ 2009 - 10 ರ ಸೆನ್ಸಸ್ ರಿಪೂರ್ಟನಲ್ಲಿ ನಿಮ್ಮಗಳ ಸಂಖ್ಯೆ ಕೇವಲ 1411. ಯಾಕೋ ನಿನ್ನ ವೈಲ್ಡ್ ಆಗೀ ಕಾಡಿನಲ್ಲಿ ನೋಡಬೇಕು ಎಂಬ ಕನಸು ಕನಸಾಗೇ ಉಳಿಯುತ್ತಾ ಅಂತ ಡೌಟ್.
ನಿಮ್ಮಗಳ ಸಂಖ್ಯೆ ಇಷ್ಟು ಕಡಿಮೆಯಾಗಲು ಕಾರಣ ನಿನಗೆ ಗೊತ್ತ? ಮೊದಲಿಗೆ ನಮ್ಮಜನಗಳು ನಿಮ್ಮ ಕಾಡನ್ನು ಹಾಳುಮಾಡ್ತಾಇರೊದು. ಅವರು ಹೀಗೆ ಮಾಡಿದರೆ ನೀನು ಎಲ್ಲಿ ಇರ್ತೀಯ? ಜಾಗವೇ ಇಲ್ಲದೆ ನಿನ್ನ ಸಂಥಾನಾಭಿವ್ರುದ್ಧಿಯು ಹೇಗೆ ಸಾಧ್ಯ? ಅಂತೆಲ್ಲ ನಮ್ಮ ಜನಗಳು ಯೋಚನೆ ಮಾಡುವುದೇ ಇಲ್ಲ. ಎರಡನೆ ಕಾರಣ ಅಂದ್ರೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಮತ್ತು ನಿನ್ನ ದೇಹಕ್ಕಿರುವ ಬೆಲೆ. ನಮ್ಮ ದೇಶದಲ್ಲಿ 2008 ರಲ್ಲಿ 28 ಹುಲಿ, 2007 ರಲ್ಲಿ 30 ಹಾಗು 2009 ರಲ್ಲಿ 65 ಹುಲಿಗಳನ್ನು ಕೊಂದಿದ್ದಾರೆ. ಕೇಳಿದರೆ ಮೈಜುಮ್ಮಯೆನ್ನುತೆ ಅಲ್ಲಾ? ಅದು ಬರೀ ಸಿಕ್ಕಿ ಕೇಸ್ ಬುಕ್ ಅಗೀರೋ ಸಂಖ್ಯೆ, ಸಹಜ ಸಾವು ಅಂತ, ಬೆಳಕಿಗೆ ಬರದೆ ಇರೋಂಥಹ ಸಂಖ್ಯೆ ಇನ್ನು ಜಾಸ್ತಿ. ಭಾರತದಲ್ಲಿ 1994 – 2004 ರ ತನಕ 10 ವರ್ಷಗಳಲ್ಲಿ 684 ಹುಲಿ ಬೇಟೆ ಪ್ರಕರಣಗಳು ದಾಖಲಾಗಿವೆ.
ಈಗ ನಾನು ಹೇಳೋ ವಿಷಯ ಕೇಳಿದ್ರೆ ನಿನ್ನಷ್ಟು ಆಶ್ಚರ್ಯ ಹಾಗು ಅಸಹ್ಯ ಪಡೋ ಪ್ರಾಣಿ ಭೊಮಿ ಮೇಲೆ ಮತ್ತೊಂದು ಇರಲಾರದು. ಇವತ್ತಿನಂತೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಬೆಲೆ ಬರೊಬ್ಬರಿ $ 10000 ಡಾಲರ್ಸ್!!!. ಅದು ಇಡಿಯಾಗಿ. ನಿನ್ನ ಕತ್ತರಿಸಿ ತುಂಡು ತುಂಡು ಮಾಡಿ ಮಾರಿದರೆ ನಿನ್ನ ಬೆಲೆ ಆಗ $ 50000…!!!! ನಿಮಗಳಿಗೆ ಗೊತಿಲ್ಲದ ಹಾಗೆ ಮನುಷ್ಯರು ನಿಮಗೆ ಹೇಗೆ ಬೆಲೆ ನಿರ್ಧಾರ ಮಾಡಿದರೆ ನೋಡು. ನಿನ್ನ ದೇಹದ ಪ್ರತಿ ಭಾಗ ಕೂಡಾ ಬೇಡಿಕೆಯಲ್ಲಿದೆ. ನಿನ್ನ ದೇಹದ ಭಾಗಗಳನ್ನು ಹೆಚ್ಚಾಗಿ ಏಷಿಯಾ ಹಾಗು ಸುತ್ತ ಮುತ್ತಲ್ಲಿ ಸಂಪ್ರದಾಯಕ ಔಷಧಿಗೆ ಬಳಸುತ್ತಾರೆ. ನಿನ್ನ ಬ್ರೈನ್ ಮೊಡವೆ ಹಾಗು ಆಲಸ್ಯ ಓಡಿಸುವ ಔಷಧಿಗೆ, ನಿನ್ನ ಮೀಸೆ ಹಲ್ಲುನೋವಿಗೆ, ಕಣ್ಣು ಮೂಗು ಮಲೇರಿಯಾ ಔಷಧಿಗೆ. ಮೂಳೇಗಳು ಹುಣ್ಣು ಹಾಗು ಟೈಫೈಡ ನಿವಾರಿಸಲು. ನಿನ್ನ ಅತ್ಯಾಕರ್ಶಕ ಚರ್ಮದ ಬೆಲೆ ಗೊತ್ತ? ಕನಿಷ್ಟ ಎಂದರು $ 15000. ಹಾಂಕಾಂಗ್ ನಲ್ಲಿ ನಿನ್ನ ಮೂಳೇಪುಡಿ ಕೆಜಿಗೆ $ 3600 ಅಂತೆ. ತೈವಾನ್ ನಲ್ಲಿ ನಿನ್ನ ಕಣ್ಣುಗಳ ಬೆಲೆ $175 – $250… ನಿನ್ನನ್ನು ಔಷಧಿಗೆ ಬರಿ ಏಷಿಯಾ ಅಲ್ಲದೆ ಲಂಡನ, ಬರ್ಮಿಂಗಹಾಂ, ಮಾನ್ಚಿಸ್ಟರ್, ಮುಂತಾದ ದೇಶಗಳಲ್ಲೂ ಉಪಯೋಗಿಸುತ್ತಾರೆ. 1998 ರಲ್ಲಿ WWF ಎಂಬ ಸಂಸ್ಥೆಯು ಜಕಾರ್ಥ ಎಂಬಲ್ಲಿ ನಡುರಸ್ತೆಯಲ್ಲಿ 2 ಹುಲಿ ಮರಿಗಳನ್ನೂ ಪೆಟ್ ಶಾಪ್ ನಲ್ಲಿ ಓಪನ್ ಆಗೀ ಮಾರುತ್ತಿದ್ದರ ಬಗ್ಗೆ ವರದಿ ಮಾಡಿತ್ತು.
ಭಾರತದಲ್ಲೆ ಅಲ್ಲ ವಿಶ್ವದಲೆಲ್ಲಾ ನಿಮ್ಮ ಜನಗಳ ಸಂತತಿ ಅಳಿವಿನಲ್ಲಿದೆ. ಇವತ್ತು ಒಟ್ಟರೆ ವಿಶ್ವದಾದ್ಯಂತ ಕಾಡಿನಲ್ಲಿ ಬದುಕಿರುವ ಹುಲಿಗಳ ಸಂಖ್ಯ 3000 –4000 ಅಷ್ಟೇ. ಇದೆ 100 ವರ್ಷಗಳ ಹಿಂದೆ ಅದು 100000 ಇತ್ತು !!!. ನಿಮಲ್ಲಿದ್ದ 9 ಜಾತಿ ಹುಲಿಗಳಲ್ಲಿ ಈಗಾಗಲೇ 3 ಜಾತಿ ಹುಲಿಗಳು (ಬಾಲಿ, ಜಾವನ್ ಮತ್ತು ಕ್ಯಾಸ್ಪಿಯನ್) 1970 ರಲ್ಲೇ ವಿನಾಶಗೊಂಡಿದ್ದು ಉಳಿದ ಜಾತಿಗಳಾದ ಬಂಗಾಲ ಹುಲಿ – 1411, ಇಂಡೊಚೀನ ಹುಲಿ – 600 ರಿಂದ ೮೦೦, ದಕ್ಷಿಣ ಚೀನಾ ಹುಲಿ ಕಾಡಿನಲ್ಲಿ ಇದ್ದ ಎಲ್ಲ ಹುಲಿ ವಿನಶಗೊಂದಿದ್ದು ಬರಿ zooನಲ್ಲಿ 15 ರಿಂದ 20 ಹುಲಿ ಇದೆ, ಸೈಬಿರಿಯಾದ ಹುಲಿ - ಅಂದಾಜು 400, ಸುಮಾತ್ರದ ಹುಲಿ 300 ರಿಂದ 350 ಕಡೆಯದಗೀ ಮಲ್ಲೆಶಿಯಾದ ಹುಲಿ 400 ಇವೆ ಎಂದು ಅಂದಾಜಿಸಲಾಗಿದೆ.
ಸಂಸಾರ್ ಚಂದ್,ತಿನ್ಲಿ, ಮೊಹಮ್ಮೆದ್ ಯಾಕುಬ್, ಶಬೀರ್ ಹಸ್ಸನ್ ಖುರೇಷಿ ಅಂತ ಪಾಪಿ ಗಳು ನಿನ್ನ ವಂಶವನ್ನೇ ನಿರ್ಮೂಲನ ಮಾಡಲು ಪಣತೊಟ್ಟಿರುವಂತೆ ನಿನ್ನವರನ್ನು ಬೇಟೆ ಆಡಿ ಕೊಂದು ಹೊರದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು (ಸದ್ಯ ಈಗ ಎಲ್ಲರೂ ಜೈಲಿನಲ್ಲಿದ್ದಾರೆ). ಕಡೇಲಿ ಹೇಳಿದನಲ್ಲ ಖುರೇಷಿ ಅಂತ ಅವನನ್ನು January 2000ರಲ್ಲಿ ಕಾಗಾ ಎಂಬ ಕೇಸ್ ನಲ್ಲಿ ಹಿಡಿದಾಗ ಅವನಿಂದ ವಶ ಪಡಿಸಿಕೊಂಡ ವಸ್ತುಗಳ ಲಿಸ್ಟ್ ನೋಡಿದರೆ ಸುಸ್ತಾಗುತ್ತೆ... 70 ಚಿರತೆ ಚರ್ಮ, 18000 ಚಿರತೆ ಉಗುರು, 4 ನಿಮ್ಮವರ(ಹುಲಿ) ಚರ್ಮ, 132 ನಿಮ್ಮವರ(ಹುಲಿ) ಉಗುರು, 221 ಕೃಷ್ಣ ಮೃಗದ ಚರ್ಮ. ಇಂಥ ನೀಚಜನರಿಗೆ ಏನು ಶಿಕ್ಷೆ ಕೊಡಬೇಕು ನೀನೆ ಹೇಳು…?
ಹೇಗೋ ಸದ್ಯ ಈಗ ಜನ ಎಚ್ಚೆತ್ತುಕೂಂಡಿದ್ದಾರೆ. ಎಲ್ಲಾ ಕಡೆ ನಿನ್ನ ಹಾಗು ನಿಮ್ಮವರನ್ನು ಉಳಿಸುವ ಜಾಥ ನಡೀತಾ ಇದೆ. ನೀನು ಆಹಾರ ಸರಪಳಿಯಲ್ಲಿರೂ ಮುಖ್ಯ ಜೀವಿ, ನೀನೇ ಹೋದರೆ ಇಡೀ ecosystem ಹಾಳಾಗುತ್ತೆ. ನಾನಂತು ನನ್ನ ಸ್ನೇಹಿತರಿಗೆ, ನನ್ನ ಜೊತೆ ಕೆಲ್ಸಮಾಡುವವರಿಗೆ ಆಗಾಗ ನಿನ್ನನು ಉಳಿಸಲು ನಮ್ ಕೈಯಲಿ ಎನ್ ಎನ್ ಮಾಡಬಹುದು ಅಂತ ಹೇಳ್ತಾ ಇರ್ತೆನೆ.
‘ ಆದಷ್ಟು ಕಾಡನ್ನು ಅದರ ಪರಿಸರವನ್ನು ಹಾಳು ಮಾಡಬೇಡಿ’
‘ಒಳ್ಳೆ ಜವಬ್ದಾರಿ ಪ್ರವಾಸಿಗರಾಗಿ ವರ್ತಿಸಿ’
‘ಕಾಡಿಗೆ ಹೋದಾಗ ಅಲ್ಲಿ ಹೆಜ್ಜೆ ಗುರುತು ಬಿಟ್ಟು ಏನು ಬಿಡಬೇಡಿ ಹಾಗೆ ಅಲ್ಲಿಂದ ವಾಪಸ್ಸು ಬರುವಾಗ ನೆನಪು ಬಿಟ್ಟು ಏನನ್ನೂ ತರಬೇಡಿ’
‘ಬೇಟೆ ಹಾಗು ಬೇಟೆ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋಗಿ ತಿಳಿಸಿ’
‘ನಿರ್ಧಾರ ತೆಗೆದುಕೊಳೊ ಅಧಿಕಾರಿಗಳಿಗೆ (prime minister & local MP) ಹುಲಿ ಅಳಿವಿನಂಚಿನಲ್ಲಿರುವುದರ ಬಗ್ಗೆ ಪತ್ರ ಬರೆಯಿರಿ’
ಎಂದೆಲ್ಲ ಹೇಳ್ತಾ ಇರ್ತೆನೆ. ನಿನ್ನನು ಉಳಿಸಲು ನನ್ನ ಕೈಲೀ ಏನು ಸಾಧ್ಯವೂ ಅದನ್ನೆಲ್ಲಾ ಮಾಡ್ತಾ ಇದ್ದೇನೆ. ಅದರೆ ಎಲ್ಲಿವರಗೆ ಫಾರೆಸ್ಟ್ ಡಿಪಾರ್ಟ್ಮಂಟನಲ್ಲಿ ಖಾಲಿ ಇರುವ ಪೋಸ್ಟ್ ಗಳನ್ನೂ ಭರ್ತಿ ಮಾಡುವುದಿಲ್ಲವೊ, ಕಾಡಿನ ಅಕ್ಕಪಕ್ಕ ಇರುವ ಜನರನ್ನು, ಊರನ್ನು ಸ್ಥಳಾಂತರ ಮಾಡುವುದಿಲ್ಲವೂ ಅಲ್ಲಿಯವರೆಗೂ ನಿನ್ನನ್ನು, ನಿಮ್ಮವರನ್ನು ಉಳಿಸೋದು ಕಷ್ಟ.
ನಮ್ಮ ಭಾರತ ಸರ್ಕಾರ ಕೂಡ ಮುಂದಿನ 5 ವರ್ಷಕ್ಕೆ ನಿನ್ನನ್ನು ಹಾಗು ನಿಮ್ಮವರನ್ನು ಉಳಿಸಲು $150 million dollars ಅನುದಾನವನ್ನು ಮಿಸಲಿಟ್ಟಿದೆ. ಜಗತ್ತಿನಾದ್ಯಂತ ನಿನ್ನನು ಉಳಿಸಲು ಸಾವಿರಾರು ಕೊಟ್ಯಾಂತರ ರೂಪಾಯಿಯನ್ನು ವ್ಯಯಿಸುತ್ತಿದ್ದಾರೆ. ಆದರೆ ಈಗ ಸಧ್ಯ ನನ್ನಲಿ ಇರುವ ಕೊರಗು ಏನೆಂದರೆ ‘ ಎಷ್ಟು ಖರ್ಚು ಮಾಡಿದರು ನಿನ್ನನು ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅಂತ.
ಇಂತಿ
ಜಗತ್ತಿನಲ್ಲಿ ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುವವ....