Monday, September 27, 2010

‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

ಮಹಾಭಾರತ ’ ಮತ್ತು ‘ ರಾಮಾಯಣ ’ ಈ ಎರಡು ಹಿಂದೂ ಧಾರ್ಮಿಕ ಕೃತಿಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ಲೆಕ್ಕವಿಲ್ಲ. ಅದರಲ್ಲೂ ಮಹಾಭಾರತವನ್ನು ಓದುವಾಗ ಪ್ರತಿ ಬಾರಿ ಹೊಸ ಹೊಸ ವಿಚಾರಗಳು ಗೋಚರವಾಗುತ್ತೆ. ಮಹಾಭಾರತದ ಮೂಲ ಕಥೆಗಳು ಹಾಗು ಕೆಲವು ದಿನಪತ್ರಿಕೆ, ಕೆಲವು ಮ್ಯಾಗಜಿನ್ ಗಳಲ್ಲಿ ಮಹಾಭಾರತಕ್ಕೆ ಸಂಬಂದಿಸಿದಂತೆ ಪ್ರಕಟವಾಗೋ ಉಪಕಥೆಗಳು, ಇವೆರಡನ್ನು ತಾಳೆ ಹಾಕಿ ಕಥೆಗಳ ಮಧ್ಯ ಲಿಂಕ್ ಕೊಡೂದು, ಅದರ ಬಗ್ಗೆ ಸ್ನೇಹಿತರು ಹಾಗು ನನ್ನ ಅಣ್ಣ ಶಶಿಯೊಡನೆ ಚರ್ಚೆಯನ್ನು ಆಗಾಗ ಮಾಡುತ್ತಾ ಇರುತ್ತೇನೆ. ನಾವು ನಮ್ಮ ಬಾಲ್ಯದಲ್ಲಿ ನಮ್ಮ ಭಾಷಾ ಪಟ್ಯ ಪುಸ್ತಕಗಳಲ್ಲಿ ಈ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಕೆಲವು ವೀರರ ಹಾಗು ಅವರ ಸಂಕಿಪ್ತ ಜೀವನ ಚರಿತ್ರೆಗಳನ್ನೂ ಓದಿರುತ್ತೇವೆ. ಪ್ರೈಮರಿಯಲ್ಲಿದ್ದಾಗ ಏಕಲವ್ಯನ ಬಗ್ಗೆ ಓದಿ ಇಡಿ ಮಹಾಭಾರತದ ಕಥೆಯಲ್ಲಿ ಅವನೇ ಪರಾಕ್ರಮಿ ಅನ್ನಿಸಿತ್ತು ಹಾಗೆ ಹೈಸ್ಕೊಲ್ ನಲ್ಲಿ ಮಹಾಭಾರತದ ಕಥೆ ಓದು ಹಾಗು ವಿಶ್ಲೇಷಣೆ ನಡುವೆ ನನಗೆ ಕೆಲವೊಮ್ಮೆ ಅರ್ಜುನ ಕೆಲವೊಮ್ಮೆ ಕರ್ಣನು ಪರಾಕ್ರಮಿ ಅನ್ನಿಸುತ್ತಿದ್ದರು. ನಮ್ಮ ಊರು ಕಾಡುಕೊತ್ತನ ಹಳ್ಳಿಯಲ್ಲಿ ನಡೆಯುತ್ತಿದ ‘ ಕುರುಕ್ಷೇತ್ರ - ಧರ್ಮ ರಾಜ್ಯ ಸ್ಥಾಪನೆ ’ ಎಂಬ ಪೌರಾಣಿಕ ನಾಟಕದಲ್ಲಿ ಕುರುರಾಯ ಧುರ್ಯೋಧನನ ಪಾತ್ರಕಿದ್ದ ಬೇಡಿಕೆ ಹಾಗು ಅವನ ಪಾತ್ರದ ಡೈಲಾಗ್ಸ್, ದರ್ಬಾರ್ ಸೀನ್ ಗಳನ್ನು ನೋಡಿ ಧುರ್ಯೋಧನನೇ ಎಲ್ಲಾರಿಗಿಂತ ವೀರನಿರಬೇಕು ಅಂತ ಕೂಡ ಅನ್ನಿಸಿತ್ತು. ನಂತರ ಟಿ.ವಿ.ಯಲ್ಲಿ ಬರುತ್ತಿದ ಮಹಾಭಾರತ ಸೀರಿಯಲ್ ನ ಫುಲ್ ಎಪಿಸೋಡ್ ಅನ್ನು ಪುನ ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ನೋಡಿದಾಗ ಇಡೀ ಮಹಾಭಾರತ ಕಥೆಗೆ ಒಂದು ರೀತಿ ಕೃಷ್ಣನೇ ಮೂಲ ಹಾಗು ಅವನೇ ಎಲ್ಲಾರಿಗಿಂತ ಬುದ್ದಿವಂತ, ಚತುರ, ಬಲಶಾಲಿ ಅನ್ನೋ ನಿರ್ಧಾರ ಮಾಡಿದ್ದೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿ ಓದಿದ ನಂತರ ಅವರ ಕಾದಂಬರಿಗಳ ಫುಲ್ ಸೀರೀಸ್ ಓದಲು ಶುರು ಮಾಡಿದ ಮೇಲೆ ಹಾಗು ನನ್ನ ಅಣ್ಣ ಶಶಿಯ ಸಲಹೆ ಮೇರೆಗೆ ಭೈರಪ್ಪನವರ ಪ್ರಶಸ್ತಿ ಪುರಸ್ಕ್ರತ ಕಾದಂಬರಿಯಾದ ‘ಪರ್ವ’ ವನ್ನು ಓದಿದೆ. ಮಹಾಭಾರತದ ಪಾತ್ರಗಳನ್ನು ಎಲ್ಲರಂತೆ ಅತೀಶಯೂ ಶಕ್ತಿ ಇರೂ ದೇವಮಾನವರಾಗಿ ಚಿತ್ರಿಸದೆ ಅವರನ್ನೆಲ್ಲಾ ಕಲಿಯುಗದಲ್ಲಿ ಇರೋ ಸಾಮಾನ್ಯ ಮನುಷ್ಯರಂತೆ ಭೈರಪ್ಪನವರು ಚಿತ್ರಿಸಿದ್ದಾರೆ. ಆ ಕಾದಂಬರಿಯಲ್ಲಿ ಭೀಮನ ಪಾತ್ರವನ್ನು ಹೆಚ್ಚಾಗಿ ಗಮನದಲ್ಲಿ ಇಟ್ಟುಕೊಂಡು, ಭೀಮನ ಬಗ್ಗೆ ಸ್ವಲ್ಪ ಓತ್ತು ಕೊಟ್ಟು ಬರೆಯಲಾಗಿರುವುದರಿಂದ ಸಹಜವಾಗಿ ‘ ಪರ್ವ ’ ಓದಿದ ಮೇಲೆ ಭೀಮನೇ ಮಹಾಭಾರತ ಕಥೆಯ ನಿಜವಾದ ಪರಾಕ್ರಮಿ ಹಾಗು ಬಲಶಾಲಿ ಎಂದು ಅನ್ನಿಸದೇ ಇರಲಾರದು.
ಸೊ ಹಾಗೆ ಮಹಾಭಾರತದ ಕಥೆ ಪಾತ್ರಗಳು ಅವುಗಳ ವಿಶ್ಲೇಷಣೆಯಲ್ಲಿ ಅವಾಗವಾಗ ಮುಳುಗೂ ನನಗೆ ಮೊನ್ನೆ ಇಂಟರ್ನೆಟ್ನಲ್ಲಿ ಜಾಲಡುತಿದ್ದಾಗ ಮಹಾಭಾರತ ಕಥೆಯ ಅನೇಕ ವೀರರ ಪಟ್ಟಿ ಯಲ್ಲಿ ‘ ಬಾರ್ಬರಿಕ ’ ಅನ್ನೋ ಹೆಸರನ್ನು ಮೊದಲನೆ ಸರಿ ನೋಡಿದೆ. ಅವನ ಕಥೆ ಅನ್ನು ಸಂಪೂರ್ಣವಾಗಿ ಹೆಕ್ಕಿ ತೆಗೆದು ಓದಿದ ಮೇಲೆ ಅನ್ನಿಸಿತು ಈ ಬಾರ್ಬರಿಕನೆ ಇಡಿ ಮಹಾಭಾರತ ಕಥೆಯ ಅಪ್ರತಿಮ ವೀರ ಕ್ಷತ್ರಿಯ ಹಾಗು ಮಹಾ ಪರಾಕ್ರಮಿ ಎಂದು. ಆದರೆ ಅಷ್ಟೆಲ್ಲ ಶಕ್ತಿ, ಚಾಣಾಕ್ಷತನ ಇದ್ದು ಅವನು ಮಹಾಭಾರತ ಕಥೆಯಲ್ಲಿ ಸರಿಯಾಗಿ ಬೆಳಕಿಗೆ ಬರಲು ಆಗಲಿಲ್ಲ , ಬರುವುದಕ್ಕೆ ಶ್ರೀ ಕೃಷ್ಣನು ಬಿಡಲಿಲ್ಲ. ಸರಿಯಾದ ಅವಕಾಶ ಹಾಗು ಫೋರಂ ಸಿಕ್ಕಿದ್ದರೆ ಇವತ್ತು ನಮ್ಮ ಜನ ಅರ್ಜುನ, ಕರ್ಣ, ಧುರ್ಯೋದನ, ಭೀಮ, ಏಕಲವ್ಯ ಮುಂತಾದವರಿಗಿಂತ ಬಾರ್ಬರಿಕನನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಇದ್ದರು ಅನ್ನಿಸುತ್ತೆ.
ಈ ಬಾರ್ಬರಿಕನ್ನು ಬೇರೆ ಯಾರು ಅಲ್ಲ... ಭೀಮನ ಮಗನಾದ ಘಟೂತ್ಕಚನ ಪುತ್ರ. ಅಂದರೆ ಭೀಮ ಹಾಗು ಹಿಡಂಬಿಯ ಮೊಮ್ಮಗ. ಈ ಬಾರ್ಬರಿಕನು ‘ಯಕ್ಷ ’ನ ಅವತಾರ ಎಂದು ಹೇಳಲಾಗುತ್ತೆ. ಇದೆ ಯಕ್ಷ ಪಾಂಡವರು ವನವಾಸದಲ್ಲಿದ್ದಾಗ ಸರೋವರದ ಬಳಿ ತನ್ನ ಪ್ರಶ್ನೆಗೆ ಉತ್ತರಿಸದೆ ನೀರು ಕುಡಿದ ಭೀಮರ್ಜುನಾದಿ ಹಾಗು ನಕುಲ ಸಹದೇವರನ್ನು ಮೂರ್ಚೆಗೊಳಿಸಿದ್ದ. ಬಾರ್ಬರಿಕನು ತನ್ನ ತಾಯೀ ಮುರ್ವಿಯ (ಯಾದವರ ರಾಜ ಮರುವಿನ ಮಗಳು) ಬಳಿ ಯುದ್ದ ಕೌಶಲ್ಯಗಳನ್ನು ಕಲಿತನೆಂದು ಹೇಳಲಾಗುತ್ತೆ. ಬಾರ್ಬರಿಕನು ಬಾಲ್ಯ ಹಾಗು ಯ್ಯೋವನಾಸ್ಥೆಯಲ್ಲಿಯೇ ಅತಿ ಪರಾಕ್ರಮಿಯಾಗಿದ್ದು ಅವನ ಧೀರತನ ಹಾಗು ಪರಾಕ್ರಮ ನೋಡಿ, ಅದನ್ನು ಮೆಚ್ಚಿ ಶಿವನು ಅವನಿಗೆ 3 ಬಾಣಗಳನ್ನು ವರವಾಗಿ ನೀಡಿದ್ದನು. ಹಾಗಾಗಿ ಬಾರ್ಬರಿಕಗೆ ‘ತೀನ್ ಬಾಣ್ ದಾರಿ’ ಎಂಬ ಹೆಸರು ಕೂಡ ಉಂಟು. ಶಿವನಂತೆ ಅಗ್ನಿ ದೇವನೂ ಬಾರ್ಬರಿಕನ ಪರಾಕ್ರಮ ಮೆಚ್ಚಿ ಅವನಿಗೆ ಒಂದು ಬಿಲ್ಲನ್ನು ನೀಡಿದ್ದನು. ಶಿವ ಕೊಟ್ಟ ಬಾಣ ಹಾಗು ಅಗ್ನಿದೇವ ಕೊಟ್ಟ ಬಿಲ್ಲು ಇವೆರಡರಿಂದ ಬಾರ್ಬರಿಕನು ಇಡೀ ಮೂರುಲೋಕದಲ್ಲಿ ಯಾರನ್ನಾದರು ಜಯೀಸಬಹುದಾಗಿತ್ತು.
ಹೀಗೆ ಬಾರ್ಬರಿಕನಿಗೆ ಮಹಾಭಾರತದ ಯುದ್ದವು ಶುರು ಆಗೀರುವ ವಿಚಾರ ತಿಳಿದು ತನ್ನ ತಾಯೀ ಮರುವಿಯ ಬಳಿ ‘ಮಹಾಭಾರತದ ಯುದ್ದನೋಡಲು ತುಂಬಾ ಆಸೆಯಾಗುತಿದೆ, ಯುದ್ದ ಹೇಗೆ ನೆಡೆಯುತ್ತೆ ಅಂತ ನೋಡಿ ಬರುವೆ’ ಅಂತ ಹೇಳಿ, ಅವಳ ಅನುಮತಿ ಪಡೆದು ತನ್ನ 3 ಬಾಣ ಹಾಗು ಬಿಲ್ಲನ್ನು ತೆಗೆದುಕೊಂಡು ತನ್ನ ನೀಲಿ ಕುದುರೆ ಏರಿ ಕುರುಕ್ಷೇತ್ರಕ್ಕೆ ಬಂದನು. ಅಲ್ಲಿ ಕೃಷ್ಣನು ಪಾಂಡವರ ಹಾಗು ಕೌರವನ ಕಡೆಯ ಮುಖ್ಯಸ್ಥರನ್ನು ಕರೆಸಿ ಈ ಕುರುಕ್ಷೇತ್ರ ಯುದ್ದದ ನಿಯಮಗಳು, ರೊಪುರೇಷಗಳನ್ನು ಚರ್ಚಿಸುತಿದ್ದನು. ಹೀಗೆ ಮಾತಿನ ನಡುವೆ ಕೃಷ್ಣನು ‘ಈ ಯುದ್ದ ಎಷ್ಟು ದಿನ ನೆಡೆಯಬಹುದು ?’ ಎಂದು ಎಲ್ಲರಲ್ಲಿ ಕೇಳಲಾಗಿ ಭೀಷ್ಮನು 20 ದಿನ, ದ್ರೋಣ 25 ದಿನ, ಕರ್ಣ 30 ದಿನ, ಅರ್ಜುನ 18 ದಿನ ಎಂದು ಕ್ರಮವಾಗಿ ಹೇಳಿದರು. ಆದರೆ ಬಾರ್ಬರಿಕನು ಮಧ್ಯ ಎದ್ದು ನಿಂತ ಎಲ್ಲರಿಗೂ ತನ್ನ ಪ್ರಣಾಮಗಳನ್ನು ತಿಳಿಸಿ ‘ಈ ಮಹಾಭಾರಥದ ಯುದ್ದವನ್ನು ಮುಗಿಸಲು ತನಗೆ ಕೇವಲ ಒಂದು ಗಂಟೆ ಸಾಕು !’ ಅಂತ ಹೇಳಿದನು. ಕೃಷ್ಣ ಸೇರಿದಂತೆ ಆಸ್ಥಾನದಲ್ಲಿ ನೆರದಿದ್ದ ಎಲ್ಲಾ ಹಿರಿಯರಿಗೂ ಬಾರ್ಬರಿಕನ ಮಾತು ಕೇಳಿ ಅವಕ್ಕಾದರು. ಕೃಷ್ಣ ಎದ್ದು ಬಂದು ಬಾರ್ಬರಿಕನಿಗೆ ತನ್ನ ಮಾತನ್ನು ಈಗಲೇ ನಿರೂಪಿಸಲು ತಿಳಿಸಿದನು. ಬಾರ್ಬರಿಕನು ಕೃಷ್ಣ ನೊಡನೆ ಬಯಲಿಗೆ ಬಂದು ‘ಏನನ್ನೂ ತೋರಿಸಲಿ?’ ಎಂದು ಕೇಳಿದನು. ಆಗ ಕೃಷ್ಣನು ತನ್ನ ಮುಂದೆ ಸ್ವಲ್ಪ ದೂರದಲ್ಲಿ ಇದ್ದ ಒಂದು ಅರಳಿ ಮರ ತೋರಿಸಿ ‘ಒಂದೆ ಬಾಣದಲ್ಲಿ ಅರಳಿ ಮರದಲ್ಲಿ ಇರೋ ಎಲ್ಲಾ ಎಲೆಗಳನ್ನೂ ತೂತು ಮಾಡು’ ಅಂತ ಹೇಳಿದನು. ಹಾಗೆ ಹೇಳಿದ ಕೃಷ್ಣನು ತನ್ನ ಮಾಯಾ ಶಕ್ತಿ ಯಿಂದ ಆ ಅರಳಿ ಮರದ ಒಂದು ಎಲೆಯನ್ನು ತನ್ನ ಕಾಲ ಪಾದದ ಕೆಳೆಗೆ ಅವಿತಿಟ್ಟು ಕೊಂಡನು. ಬಾರ್ಬರಿಕನು ತನ್ನ 3 ಬಾಣಗಳಲ್ಲಿ ಒಂದನ್ನು ತೆಗೆದು ಅದನ್ನು ಮಂತ್ರಿಸಿ, ಧನಸ್ಸಿಗೇರಿಸಿ ಎಳೆದು ಬಿಟ್ಟನು. ಆ ಬಾಣವು ಅರಳಿ ಮರದಲ್ಲಿ ಇದ್ದ ಎಲ್ಲ ಎಲೆಗಳನ್ನು ತೂತು ಮಾಡಿ ನಂತರ ಕೃಷ್ಣನು ಎಲೆ ಅವಿತುಕೊಂಡಿದ್ದ ಪಾದದ ಬಳಿ ಬಂದು, ಒಂದು ಸುತ್ತು ಹಾಕಿ ಪುನ ಬಾರ್ಬರಿಕ ಕೈ ಸೇರಿತು. ಕೃಷ್ಣ ತನ್ನ ಪಾದವನ್ನು ಸರಿಸಿ ನೋಡಿದಾಗ, ಅವನಿಗೆ ಆಶ್ಚರ್ಯವಾಗುವಂತೆ ತಾನು ಅವಿತಿಟ್ಟುಕೊಂಡಿದ್ದ ಆ ಎಲೆಯು ತೂತಗಿತ್ತು !
ಕೃಷ್ಣನಿಗೆ ತುಂಬಾ ಸಂತೋಷವಾಗಿ ‘ಬಾರ್ಬರಿಕ, ಇಡಿ ಲೋಕವು ನಿನ್ನಂಥ ವೀರ ಪರಾಕ್ರಮಿಯನ್ನು ಇದುವರೆಗೆ ನೋಡಿಲ್ಲ’ ಎಂದು ಹೋಗಳಿ, ಅವನು ಯುದ್ದದಲ್ಲಿ ಯಾರ ಕಡೆ ಸೇರಬಯಸುತ್ತಾನೆ? ಎಂದು ಕೇಳಿದಾಗ, ಬಾರ್ಬರಿಕನು ತನಗೆ ತನ್ನ ತಾತ ಭೀಮನ ಕಡೆ ಸೇರಿ ಯುದ್ದ ಮಾಡಲು ಇಚ್ಛೆ ಇದ್ದರು, ತಾನು ಯುದ್ದ ನೋಡಲು ತನ್ನ ತಾಯೀಯ ಬಳಿ ಅನುಮತಿ ಕೇಳಿ ಹೊರಡುವ ವೇಳೆಯಲ್ಲಿ ತಾನು ಯುದ್ದದಲ್ಲಿ ಭಾಗವಹಿಸುವುದಾದರೆ ಅದು ಯಾರೋ ಯುದ್ದದಲ್ಲಿ ಸೋಲುತ್ತಿರುತ್ತಾರೋ ಅಂಥವರ ಕಡೆ ಸೇರುತ್ತೇನೆ ಎಂದುಮಾತು ಕೊಟ್ಟಿರುವುದಾಗಿ ತಿಳಿಸಿದನು. ಕೃಷ್ಣನು ಈ ಮಾತು ಕೇಳಿ ಈ ಬಾರ್ಬರಿಕನ್ನು ತನ್ನ ನಿರ್ಧಾರದಂತೆ ನೆಡೆದು ಯುದ್ದದಲ್ಲಿ ಭಾಗವಹಿಸಿದರೆ ಪಾಂಡವರಿಗೆ ಹಾಗು ಧರ್ಮಕ್ಕೆ ಉಳಿಗಾಲವಿಲ್ಲ ಎಂದು ಯೋಚಿಸಿ, ಹಾಗೆ ಇದಲ್ಲದೆ ಇವನು ಯುದದಲ್ಲಿ ಭಾಗವಹಿಸಿದರೆ ಒಂದು ಸಲ ಪಾಂಡವರು ಸೂಲಬಹುದು, ಒಂದು ಸಲ ಕೌರವರು ಸೂಲಬಹುದು, ಹಾಗೆ ಈ ಬಾರ್ಬರಿಕನು ಎರಡು ಕಡೆ ಯುದ್ದ ಮಾಡುವಂತಾಗಿ ಎಲ್ಲರೂ ಸತ್ತು ಅವನೊಬ್ಬನೆ ಉಳಿಯೂ ಸಾಧ್ಯತೆ ಕೂಡ ಹೆಚ್ಚು ಎಂದು ಕೊಂಡು, ಇದಕ್ಕೆ ತಡೆ ಹಾಕಬೇಕು ಅಂತ ನಿರ್ಧರಿಸಿ ಕೃಷ್ಣನು ಬಾರ್ಬರಿಕನಿಗೆ ನಿನ್ನ ಗುರು ಯಾರು? ಎಂದು ಕೇಳಲು, ಬಾರ್ಬರಿಕನು ತಾನು ಈ ಎಲ್ಲ ವಿದ್ಯೆಯನ್ನು ಅಭ್ಯಾಸ ಮಾಡುವಾಗ ಕೃಷ್ಣನನ್ನೇ ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದರಿಂದ, ನೀನೆ ನನ್ನ ಗುರು ಎಂದು ತಿಳಿಸಿದನು. ಕೃಷ್ಣನು ಇದೇ ಮಾತನ್ನು ನಿರಿಕ್ಷಿಸುತಿದ್ದವನಂತೆ, ಹಾಗಾದರೆ ನನ್ನ ಗುರುದಕ್ಷಿಣೆ ನೀಡುವುದಿಲ್ಲವೆ? ಎಂದು ಕೇಳಿದನು. ಬಾರ್ಬರಿಕನು ಏನು ಬೇಕು? ಅಪ್ಪಣೆಯಾಗಲಿ… ಎಂದಾಗ ಕೃಷ್ಣನು ‘ಗುರುದಕ್ಷಿಣೆಯಾಗಿ ನಿನ್ನ ತಲೆಯನ್ನು ನನಗೆ ನೀಡು’ ಎಂದನು. ಬಾರ್ಬರಿಕನು ಎರಡನೇ ಯೋಚನೆ ಮಾಡದೇ ತನ್ನ ತಲೆಯನ್ನು ತನ್ನ ಬಾಣದಿಂದ ಕತ್ತರಿಸಿ ಕೃಷ್ಣನಿಗೆ ಅರ್ಪಿಸಿದನು. ಕೃಷ್ಣನು ಅವನ ತ್ಯಾಗವನ್ನು ಮೆಚ್ಚಿ ನಿನ್ನನ್ನು ಕಲಿಯುಗದಲ್ಲಿ ‘ಶ್ಯಾಮ’ ಎಂಬ ಹೆಸರಿನಲ್ಲಿ ಜನ ಪೂಜಿಸಲಿ ಎಂಬ ವರ ಕೊಟ್ಟನು. ಬಾರ್ಬರಿಕನು ಕೃಷ್ಣನಲ್ಲಿ ಈ ಮಹಾಭಾರಥದ ಯುದ್ದವನ್ನು ನೋಡಬೇಕೆಂದು ಬಹು ಆಸೆ ಇಟ್ಟು ಕೊಂಡಿದ್ದು, ಹಾಗಾಗಿ ಈ ಯುದ್ದ ಮುಗಿಯುವವರೆಗೂ ತನ್ನ ತಲೆಯನ್ನು ಜೀವಂತವಾಗಿ ಇಟ್ಟು ಯುದ್ದ ನೋಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡನು. ಕೃಷ್ಣನು ಅದರಂತೆ ಯುದ್ದ ನಡೆಯುವ ಸಮೀಪದ ಬೆಟ್ಟದಲ್ಲಿ (ಎತ್ತರವಾದ ಸ್ಥಳದಲ್ಲಿ) ಅವನ ತಲೆಯನ್ನು ಎರಡು ಬೂಂಬಿಗೆ ಸಿಕ್ಕಿಸಿ ಯುದ್ದ ನೋಡುವಂತೆ ಅನುಕೂಲ ಮಾಡಿಕೊಟ್ಟ ಎಂಬುದು ಕಥೆ.
ಮುಂದುವರೆದು ಮಹಾಭಾರತ ಯುದ್ದವು ಅರ್ಜುನ ಹೇಳಿದಂತೆ 18 ದಿನಕ್ಕೆ ಮುಗಿದ ಮೇಲೆ ಕೌರವರೆಲ್ಲ ಹತರಾದ ನಂತರ ಪಾಂಡವರಲ್ಲಿ ಯುದ್ದದಲ್ಲಿ ಯಾರು ಹೆಚ್ಚು ಪರಾಕ್ರಮದಿಂದ ಹೋರಾಡಿದರು ಎಂಬ ವಿಷಯವಾಗಿ ಚರ್ಚೆ ಶುರುವಾಯಿತು, ಅವರು ಅ ಬಗ್ಗೆ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದೆ ಇದ್ದಾಗ ಕೃಷ್ಣನು ‘ ನಮ್ಮೆಲ್ಲರಿಗಿಂತ ಬಾರ್ಬರಿಕನು ಪರಾಕ್ರಮಿ… ಈ ಯುದ್ದವನ್ನು ಸಂಪೂರ್ಣವಾಗಿ ಹಾಗು ಸರಿಯಾಗಿ ನೋಡಿರುವವನು ಎಂದರೆ ಅವನೊಬ್ಬನೆ… ಅವನನ್ನೇ ಕೇಳೋಣ’ ಎಂದು ಹೇಳಿ, ಎಲ್ಲರನ್ನು ಬಾರ್ಬರಿಕನ ತಲೆ ಇರುವಲ್ಲಿಗೆ ಕರೆದು ಕೊಂಡು ಬಂದು, ಯುದ್ದದಲ್ಲಿ ಪಾಂಡವರ ಕಡೆ ಯಾರು ಹೆಚ್ಚು ಪರಾಕ್ರಮವಾಗೀ ಹೋರಾಡಿದರು ? ಎಂದು ಕೇಳಲಾಗಿ, ಅದಕ್ಕೆ ಬಾರ್ಬರಿಕನು ನಗುತ್ತೆ ‘ನಿಮ್ಮೆಲ್ಲರಿಗಿಂಥ ಹೆಚ್ಚು ಬಲಶಾಲಿ, ಪರಾಕ್ರಮಿ ಹಾಗು ಈ ಯುದ್ದ ನಿಮ್ಮಂತೆ ಗೆಲ್ಲಲು ಸಹಾಯ ಮಾಡಿದ ವ್ಯಕ್ತಿ ಬೇರೆಯಾರು ಅಲ್ಲ… ಕೃಷ್ಣ ! ಎಂದು ತಿಳಿಸಿದನು. ಅವನೆ ಯುದ್ದಕ್ಕೆ ಕಾರಣ ಕರ್ತ, ಅವನಿಂದಲೇ ನಿಮಗೆ ಗೆಲವು. ರಣರಂಗದಲ್ಲಿ ಎಲೆಲ್ಲೂ ಕೃಷ್ಣನ ಸುದರ್ಶನ ಚಕ್ರವು ಕೌರವರ ಕಡೆಯವರನ್ನು ಕತ್ತರಿಸಿ ಹಾಕುತಿತ್ತು’ ಎಂದು ತಿಳಿಸಿ, ಯುದ್ದ ನೋಡಲು ಅನುವು ಮಾಡಿಕೊಟ್ಟ ಕೃಷ್ಣನಿಗೆ ವಂದನೆ ಸಲ್ಲಿಸಿ ಬಾರ್ಬರಿಕನು ಪ್ರಾಣ ಬಿಟ್ಟನು. ಅವನು ಪ್ರಾಣ ಬಿಟ್ಟ ದಿನ ಶುಕ್ಲ ಪಕ್ಷ, ಫಾಲ್ಗುಣ ಮಾಸದ 12ನೇ ದಿನ. ಅವನ ತಲೆಯನ್ನು ತೆಗೆದು ಕೊಂಡು ಹೋಗಿ ‘ಖತು’ ಎಂಬ ಸ್ಥಳದಲ್ಲಿ ಹೊಳಲಾಯಿತು. ‘ಖತು’ ಎಂದರೆ ಈಗಿನ ‘ರಾಜಸ್ಥಾನ’. ಕಲಿಯುಗದಲ್ಲಿ ಒಮ್ಮೆ ಒಂದು ಹಸು ಬಾರ್ಬರಿಕನ ತಲೆ ಹೂಳಿರುವ ಜಾಗದಲ್ಲಿ ನಿಂತು ತನ್ನ ಕೆಚ್ಚಲಿನಿಂದ ಹಾಲು ಸೋರಿಸಲು ಶುರುಮಾಡಿತಂತೆ. ಜನ ಆಶ್ಚರ್ಯ ಗೊಂಡು ಆ ಜಾಗ ಅಗೆದಾಗ ಅಲ್ಲಿ ಅವರಿಗೆ ಬಾರ್ಬರಿಕನ ತಲೆ ಸಿಕ್ಕಿತಂತೆ. ಅದನ್ನು ಅವರು ಒಬ್ಬ ಬ್ರಾಮ್ಮಣನಿಗೆ ನೀಡಿದರಂತೆ. ಬ್ರಾಮ್ಮಣನು ಅದನ್ನು ಸುಮಾರು ದಿನ ಪೂಜಿಸಿದನೆಂದು ಹೇಳಲಾಗುತ್ತೆ. ಹೀಗಿರುವಾಗ ಖತು ಸಂಸ್ಥಾನದ ರಾಜ ರೂಪ್ ಸಿಂಗ್ ಚೌಹಾನ್ ಗೆ ಅವನ ಮನೆ ದೇವರು ಕನಸಿನಲ್ಲಿ ಬಂದು ಈ ಬಾರ್ಬರಿಕನ ತಲೆಯನ್ನು ಒಂದು ದೇವಸ್ತಾನ ಕಟ್ಟಿ ಪ್ರತಿಷ್ಟಾಪಿಸಿ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲು ಹೇಳಿತಂತೆ. ಅದರಂತೆ ರಾಜ ರೊಪ್ ಸಿಂಗ್ ನು ಕ್ರಿ. ಪೂ. 1027 ರಲ್ಲಿ ದೇವಸ್ಥಾನ ಕಟ್ಟಿಸಿ ಬಾರ್ಬರಿಕನ ತಲೆ ಹಾಗು ಒಂದು ಮೂರ್ತಿಯನ್ನು ಪ್ರತಿಷ್ಟಾಪಿಸಿಸಿದನು. ಈ ದೇವಸ್ಥಾನವನ್ನು 1720 ರಲ್ಲಿ ದೀವಾನ್ ಅಭಯ್ ಸಿಂಗ್ ನು ಈಗಿನ ಸ್ಥಿತಿಗೆ ಪುನರ್ ನಿರ್ಮಾಣ ಮಾಡಿದನು. ಬಾರ್ಬರಿಕನು ರಾಜಸ್ಥಾನದಲ್ಲಿ ಈಗ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೇ. ಈ ಖತುಶ್ಯಾಮಿಜೀಗೆ ಅಪಾರ ಭಕ್ತ ಸಮುದಾಯವೇ ಉಂಟು. ಹೋಳಿಯ 3-4 ದಿನ ಮುಂಚೆ ರಾಜಸ್ಥಾನದಲ್ಲಿ ನಡೆಯುವ ಫಾಲ್ಗುಣ ಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಬಾರ್ಬರಿಕ ಅಂದರೆ ಖತುಶ್ಯಾಮಿಜೀಯ ದರ್ಶನ ಪಡೆಯುತ್ತಾರೆ.
ಹಾಗೆ ಬಾರ್ಬರಿಕನ ಬಾಣ ಕೃಷ್ಣನ ಪಾದದ ಮೇಲೆ ಸುತ್ತು ಹಾಕಿ ಅವನ ಪಾದವನ್ನು ಘಾಸಿಗೊಳಿಸಿತ್ತು. ಹಾಗಾಗಿ ಅದು ಕೃಷ್ಣನ ವೀಕ್ ಪಾಯಿಂಟ್ ಆಗಿತ್ತು. ಕೃಷ್ಣನ ಸಾವು ಕೂಡ ಪಾದಕ್ಕೆ ‘ ಜರ ’ ಎಂಬ ಬೇಟೆಗಾರ ಬಿಟ್ಟ ಬಾಣ ತಾಕಿ ಪ್ರಾಣ ಹೊಯೀತು ಎಂದು ಹೇಳಲಾಗುತ್ತೆ. ಬಾರ್ಬರಿಕನ ಕಥೆ ಗೊತ್ತಿರೋ ಜನರು ಅವನಿಗೆ ಅವಕಾಶ ಸಿಕ್ಕಿದ್ದರೆ ಮಹಾಭಾರತದ ಯುದ್ದದಲ್ಲಿ ಮಹಾಪರಾಕ್ರಮಿ (ಬೆಸ್ಟ್ ವಾರಿಯರ್) ಎನಿಸುತ್ತಿದ್ದ ಅನ್ನುತ್ತಾರೆ. ಅದೇನೇ ಹೇಳಿ ಮನುಷ್ಯನಿಗೆ ಬರೀ ಚಾಣಾಕ್ಷತನ, ಪರಾಕ್ರಮ, ವಿದ್ಯಾ, ಕೌಶಲ್ಯಗಳು ಇದ್ದರೆ ಸಾಲದು. ಅದನ್ನು ಯಾವಾಗ ಹೇಗೆ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಅನ್ನೋ ನಾಲೆಡ್ಜ್ ಇರಬೇಕು. ಬಾರ್ಬರಿಕನು, ತಾನು ಇಂಥವರ ಕಡೆಯೇ ಸೇರಿ ಯುದ್ದ ಮಾಡಬೇಕು... ಅಂತ ಸರಿಯಾದ ಫರಂ (Firm) ಡಿಸಿಷನ್ ತೆಗೆದುಕೊಂಡಿದ್ದರೆ ಮಹಭಾರತದ ಕಥಾ ರೂಪವೇ ಬದಲಾಗುತಿತ್ತೇನೋ. ಈಗಲೂ ಮನಸಿನಲ್ಲಿ ಅದೇ ಪ್ರಶ್ನೆ ಕಾಡುತ್ತಾ ಇದೇ ‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

Thursday, September 2, 2010

Hai 9483478030… Bye 9448657473… & ವೈಶಾಕ್ ಕಾಲಿಂಗ್ ಸುಧಾಕರ್.....

2004ರಲ್ಲಿ BSNL SIM ತಗೋಳೋದು ಅಂದ್ರೆ ಸರಕಾರೀ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಮೆಡಿಕಲ್ ಸೀಟ್ ತಗೆದುಕೊಂಡ ಹಾಗೆ ಇತ್ತು. ಯಪ್ಪಾ…ಏನ್ ಕಾಸ್ಟ್ಲಿ ಗೊತ್ತಾ?. SIM ಬೆಲೆ ನೂರು ರುಪಾಯೀ ಇದ್ರೂ ಬ್ಲಾಕ್ ನಲ್ಲಿ ಅದನ್ನು Rs 800-1000 ರಕ್ಕೆ ಮಾರುತ್ತ ಇದ್ದರು. ಸಾಲದಕ್ಕೆ ಈ BSNL ನೆಟ್ವರ್ಕ್ ಬಗ್ಗೆ ಅವತ್ತು ಜನರಲ್ಲಿ ಇದ್ದ ಭಾವನೆ ಏನೆಂದರೆ ‘ಒಂದು ಊರಿನಲ್ಲಿ ಯಾರದರೊಬ್ಬರ ಮನೆಯಲ್ಲಿ ಒಂದೇ ಒಂದು BSNL ಲ್ಯಾಂಡ್ ಲೈನ್ ಕನೆಕ್ಷನ್ ಇದ್ದರೆ ಸಾಕು ಅಥವಾ BSNL ಲ್ಯಾಂಡ್ ಲೈನ್ ನ ಪೋಲ್ ಇದ್ದರೆ ಸಾಕು, ಇಡಿ ಊರಿನಲ್ಲಿ BSNL ನೆಟ್ವರ್ಕ್ ಸಿಗುತ್ತೆ ’ !! ??. ಸರಿ ನನಗೆ ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಸಿಕ್ಕಿ ನನ್ನನ್ನು ಚಿಕ್ಕಮಗಳೂರಿನ ಕೂಪ್ಪ ಡಿವಿಷನ್ಗೆ ಟ್ರಾನ್ಸವರ್ ಮಾಡಿದಾಗ ಅಲ್ಲಿ ವಾತಾವರಣ ಹೇಗೆ ಇದೆ ಅಂತ ನೋಡಿ ಬರಲು ಹೋಗಿದ್ದಾಗ ತಿಳಿದು ಬಂದ ಸಂಗತಿ ಏನೆಂದರೆ, ಅಲ್ಲಿ BSNL ನೆಟ್ವರ್ಕ್ ಬಿಟ್ಟರೆ ಬೇರೆ ಸಿಗುವುದಿಲ್ಲ ಅನ್ನೋದು. ಅಪ್ಪಾಜಿ ಬೇರೆ “ BSNL SIM ಸಿಗೋದು ಕಷ್ಟ ಕಣಪ್ಪ… SIM ಸಿಕ್ಕರೆ ಒಂದು ಹೊಸ ಮೊಬೈಲ್ ತೆಗೆದು ಕೊಡ್ತೀನಿ…” ಅಂದಿದ್ದರು. ಸರಿ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಫಾರೆಸ್ಟರ್ ಆಗಿ ಕೆಲಸ ಮಾಡುತ್ತಿರುವಾಗ ಅಲ್ಲಿನ BSNL ಆಫೀಸ್ ನವರು BSNL SIM ಗೆ ಅಪ್ಲಿಕೇಶನ್ ಕಾಲ್ ಮಾಡಿದ್ದರು ನಾನು ಹೋಗಿ ಅಪ್ಲಿಕೇಶನ್ ಸಬ್ಮಿಟ್ ಮಾಡಿಬಂದೆ. ಆವಾಗ ಮೇ 2004. ಇದನ್ನು ಈಗಿನ ಕಾಲದಲ್ಲಿ ಜನರಿಗೆ ಹೇಳಿದರೆ ನಂಬುತ್ತಾರೆಯೇ…? “ಏನೋ.. BSNL ನವರು ಈಗ ರೋಡ್ ರೋಡ್ ನಲ್ಲಿ ಮೇಳ ಇಟ್ಟು SIMಗಳನ್ನೂ ಫ್ರೀಯಾಗಿ ಹಂಚುತ್ತಿರುವಾಗ ನೀನು ಅದಕ್ಕೆ ಅಪ್ಲಿಕೇಶನ್ ಹಾಕಿದ್ದ…?” ಅಂತ ಆಶ್ಚರ್ಯ ವ್ಯಕ್ತಪಡಿಸ್ತಾರೆ. ನನಗೆ ಜೂನ್ 2004ರಲ್ಲಿ ಧಾರವಾಡದ ಗುಂಗರಗಟ್ಟಿಯಲ್ಲಿ ಒಂದು ವರ್ಷ ಫಾರೆಸ್ಟರ್ ಟ್ರೈನ್ನಿಂಗ್ ಗೆ ಹಾಕಿದ್ದರು. ಸೊ ಚಿಕ್ಕಮಗಳೂರಿನಿಂದ ರಿಲೀವ್ ಆಗಿ ಧಾರವಾಡಕ್ಕೆ ಬಂದೆ. ಆಗ್ 2004 ರಲ್ಲಿ ನರಸಿಂಹರಾಜಪುರದ ಆಫೀಸ್ ಟೈಪಿಸ್ಟ್ ವಾಣಿ ನನ್ನ ರೊಂ ಮೆಟ್ ಅನಿಲನ ಮೊಬೈಲ್ ಗೆ ಕಾಲ್ ಮಾಡಿ “ರೀ ಸುಧಾಕರ್ congratulation ಕಣ್ರೀ… ನಿಮ್ಮ SIM ಬಂದಿದೆ ರೀ….. Rs 120 ಕಟ್ಟಿ ಬಿಡಿಸಿಕೊಳ್ಳಬೇಕು” ಅಂದರು. ಸರಿ ತಕ್ಷಣ ನಾನು ಒಂದು ಆತರೈಜೇಶನ್ ಲೆಟರ್ ಮತ್ತೇ ದುಡ್ಡು ಎರಡನ್ನು ಕಳಿಸಿ SIM ಬಿಡಿಸಿಕೊಳ್ಳಿ ಅಂತ ಲೆಟರ್ ಬರೆದು ಟೈಪಿಸ್ಟ್ ವಾಣಿಗೆ ಕಳಿಸಿದೆ. ಅದರಂತೆ ಅವರು SIM ತೆಗೆದುಕೊಂಡು ನಾನು ಹೇಳಿದಹಾಗೆ ನನ್ನ ತಂದೆಗೆ ಕೊರಿಯರ್ ಮಾಡಿದರು. ನನ್ನ ತಂದೆ ಆ SIMನ ಜೊತೆ ಆ ಕಾಲಕ್ಕೆ ಐಕಾನ್ ಸೆಟ್ ಆಗಿದ್ದ ನೋಕಿಯಾ 1100 ಅನ್ನು Rs 4800/- ಗೆ ಖರೀದಿ ಮಾಡಿ ಕಳಿಸಿಕೊಟ್ಟರು. ಇದು ನಡೆದಿದ್ದು ಆಗಸ್ಟ್ 2004ರಲ್ಲಿ. ಆದರೆ ನನ್ನ ದುರಾದೃಷ್ಟನೋ ಏನೋ ಅಕ್ಟೋಬರ್ 2004ರ ಮೊದಲ ವಾರ ನನ್ನ ಮೊಬೈಲ್ ಸೆಟ್ಟನ್ನು ನನ್ನ ರೊಂನಲ್ಲೇ ಯಾರೋ ಕದ್ದು ಬಿಟ್ಟರು!!! ಒಳ್ಳೇ ಕಳ್ಳ ನನ್ನ ಮುಂದೇನೇ ಬಂದು, ಮೊಬೈಲ್ ಕದ್ದು ‘ ಜೂಟ್ ’ ಅಂತ ಹೇಳಿ ಓಡಿ ಹೋದಹಾಗೆ ಇತ್ತು ಆ ಅನುಭವ. ಪುನ ನಾನು ನನ್ನ ಮೊಬೈಲ್ ಧಾರವಾಡ್ ಸಿಟಿಯಲ್ಲಿ ಎಲ್ಲೊ ಕಳೆದುಹೋಗಿದೆ ಅಂತ ಕಂಪ್ಲೈಂಟ್ ಲಾಡ್ಜ ಮಾಡಿ, ಮೈಸೂರ್ ಗೆ ಬಂದ ನಂತರ ಡೂಪ್ಲಿಕೆಟ್ SIM ಅನ್ನು ತೆಗೆದುಕೊಂಡೆ. ಇಷ್ಟೆಲ್ಲಾ ಯಾಕೆ ಆ SIM ಬಗ್ಗೆ ಬರೀತಾ ಇದ್ದೀನಿ ಅಂದ್ರೆ ಮೊನ್ನೆ ಜುಲೈ 2010 ರಲ್ಲಿ ನಾನು ಆ ನನ್ನ SIMನ ಚೇಂಜ್ ಮಾಡಿದೆ. ಸೊ ಆ ಚಿಕ್ಕಮಗಳೂರಿನಲ್ಲಿ ತೆಗೆದುಕೊಂಡಿದ್ದ SIM ನಂಬರ್ ನನ್ನ ಜೊತೆ 6 ವರ್ಷ ಇತ್ತು. ಏನ್ ಮಾಡೋದು…? BSNL ನವರು ಯಾವುದೇ SMS ಪ್ಯಾಕೇಜ್ ಅನ್ನು ಒದಗಿಸದ ಕಾರಣ SIM ಚೇಂಜ್ ಮಾಡಬೇಕಾಗಿ ಬಂತು!




ಇವತ್ತಿನ ಕಾಲದ ಜನರ ಮೆಂಟಾಲಿಟಿ ಹೆಂಗಿದೆ ಎಂದರೆ BSNL SIM ಉಪಯೋಗಿಸುವವರು ಅಂದ್ರೆ, ಒಂದೂ ಅವನು ವಯಸ್ಸಾಗಿರೋ ವ್ಯಕ್ತಿ… ಇಲ್ಲವೂ ಅವನು ಆಫೀಶಿಯಲ್ ಆಗಿರ್ತಾನೆ (ಹುಡುಗೀರಂತೂ 99% ಯಾರು BSNL SIM ತಗೆದುಕೊಳ್ಳೋದಿಲ್ಲ ಬಿಡಿ) ಅನ್ನೋ ನಂಬಿಕೆ. ಮೊನ್ನೆ ಹಾಗೆ ಯಾಕೋ ನಂಗೆ ನನ್ನ ಫ್ರೆಂಡ್ಸ್ ಗಳು ಒಬೊಬ್ಬರಾಗಿ ಮಿಸ್ ಆಗಿ ಹೋಗ್ತಾ ಇದ್ದರೆ, ಕಾಂಟಾಕ್ಟ್ ತಪ್ಪಿ ಹೋಗ್ತಾ ಇದೆ, ನನ್ನ ಮತ್ತು ನನ್ನ ಸ್ನೇಹಿತರ ನಡುವಿನ ಗ್ಯಾಪ್ ಜಾಸ್ತಿ ಆಗ್ತಾ ಇದೆ ಅಂತೆಲ್ಲ ಅನ್ನಿಸಿ ನನಗೆ 6 ವರ್ಷ ಕನೆಕ್ಷನ್ ಹಾಗು ಸಾಥ್ ನೀಡಿದ್ದೆ SIM ಚೇಂಜ್ ಮಾಡೋ ಮಹತ್ವವಾದ ನಿರ್ಧಾರ ಕೈಗೊಂಡೆ. SIM ಚೇಂಜ್ ಮಾಡಿ ಎಲ್ಲರಿಗೂ “ಹಲೋ ಸರ್/ ಫ್ರೆಂಡ್ಸ್ ದಿಸ್ ಇಸ್ ಸುಧಾಕರ್(ಲೋಕು) ಪ್ರೊಂ ಸಿ.ಕೆ.ಜಿ.ಬಿ, ಕೆ ಆರ್ ನಗರ್ ( X ಫಾರೆಸ್ಟರ್) ಐ ಹಾವ್ ಚೇಂಜ್ed ಮೈ ನಂಬರ್ ಪ್ಲೀಸ್ ಅಪ್ ಡೇಟ್ ಮೈ ನ್ಯೂ ನಂಬರ್” ಅಂತ ಮೆಸೇಜ್ ಮಾಡಿದೆ. ಅದು ಎಷ್ಟು ಜನರಿಗೆ ತಲುಪಿತೋ, ತಲುಪಿದ ಜನರಲ್ಲಿ ಎಷ್ಟು ಜನ ಓದಿ, ನಂಬರ್ ಅಪ್ ಡೇಟ್ ಮಾಡಿಕೊಂಡರು ಗೊತ್ತಿಲ್ಲ. ಬಟ್ ನನ್ನ ಒಬ್ಬಆತ್ಮಿಯ ಹಳೇ ಗೆಳಯ ವೈಶಾಕ್ ಅಂತೂ ಅಪ್ ಡೇಟ್ ಮಾಡಿಕೊಂಡಿರಲಿಲ್ಲ. ಸರಿ ನನ್ನ ಹೊಸ SIM ನಲ್ಲಿ ದಿನ 300 ಲೋಕಲ್ SMS, 20 ನ್ಯಾಷನಲ್ SMS ಫ್ರೀ… ಅನ್ನೋ ಆಫರ್ ಇತ್ತು. ಸರಿ ಎಲ್ಲರಿಗೂ ಬೆಳಗಿನ ಹೊತ್ತು ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಲು ಶುರು ಮಾಡಿದೆ. ಮಧ್ಯ ಮಧ್ಯ ಕೆಲವರಿಗೆ ನನಗೆ ಬಂದಿದ್ದ ಜೋಕ್ಸ್, ಪಿ.ಜೇ, ಇನ್ನು ಕೆಲವರಿಗೆ ಕೆಲವು ಪೋಲಿ (ನಾನ್ ವೆಜ್) ಮೆಸೇಜ್ ಗಳನ್ನೂ ಫಾರ್ವರ್ಡ್ ಮಾಡ್ತಾ ಇದ್ದೆ. ಅವತ್ತು ಜುಲೈ 2010 ರ ಎರಡನೆ ಶನಿವಾರ ನನ್ನ MBA ಮೂರನೆ ಸೆಮಿಸ್ಟರ್ ನ ಎಕ್ಷಮ್ಸ ನಡೀತಾ ಇದ್ದವು, ನಾನು ಆಫೀಸಿಗೆ 11 ದಿನ ರಜೆ ಹಾಕಿದ್ದೆ. ನನ್ನ ಆಪ್ತ ಸ್ನೇಹಿತ ಪ್ರಸಾದೀ ಕೂಡ ನಾನು MBA ಸೇರಿದ ಒಂದು ವರ್ಷದ ನಂತರ ಅವನು MBA ಗೆ ಸೇರಿದ್ದ. ಅವನದು ಮೊದಲನೆಯ ಸೆಮಿಸ್ಟರ್ ಎಕ್ಷಮ್ಸ ನೆಡಿತಾ ಇತ್ತು. ಇಬ್ಬರು ಇಂಜಿನಿಯರಿಂಗ್ ಓದೋ ಟೈಮ್ನಿಂದಲೂ ಯಾವುದೆ ಎಕ್ಷಮ್ಸ ಬಂದರು ನನ್ನ ಮನೆಯಲ್ಲೇ ಕಂಬೈನ್ ಆಗಿ ಸ್ಟಡೀ ಮಾಡ್ತಾ ಇದ್ದೆವು. ಟೈಮ್ ರಾತ್ರಿ 9.10 ಆಗಿತ್ತು ಪ್ರಸಾದೀ ನನ್ನ ರೂಮಿನ ಅಟ್ಯಾಚ್ಡ್ ಬಾತ್ರೂಂನ ಬಾಗಿಲ ಮೇಲೆ ಇರೋ ಗೋಡೆಗೆ ಹಾಕಿರೋ ಗಡಿಯಾರ ನೋಡಿ “ಮಗ 9.10 ಅಯೀತು… ಯಾಕೋ ಓದಿ… ಓದಿ… ತಲೆ ಬಿಸಿ ಆಗಿದೆ ಸ್ವಲ್ಪ ಸಿಮಿ(ಅವನ ಗರ್ಲ್ ಫ್ರೆಂಡ್) ಜೊತೆ ಮಾತಾಡಿ ಕೊಂಡು ಹಾಗೆ ಊಟ ಮಾಡಿಕೊಂಡು ಬರ್ತನಿ” ಅಂತ ಹೇಳಿ ಹೋದ. ನಾನು ಲೈಟ್ ಆಫ್ ಮಾಡಿ ನನ್ನ ರೂಂ ಇಂದ ಇನ್ನೇನು ಹೊರಗೆ ಬರಬೇಕು ಅಷ್ಟರಲ್ಲಿ ನನ್ನ ಫೋನು ‘When The Thron Bush turns White, That’s when I’ll Come Home….’ ಅಂತ ರಿಂಗ್ ಆಗ ತೊಡಗಿತು. ಫೋನ್ ನೋಡಿದೆ ‘Vaishak calling…’ ಅಂತ ಡಿಸ್ಪ್ಲೇ ಬರ್ತಾ ಇತ್ತು. ಓಹ್ ಸಿಸ್ಯಾ ಏನಪ್ಪಾ ಇದ್ದಕಿದ್ದಂತೆ ನೆನಸಿಕೊಂಡುಬಿಟ್ಟಿದ್ದಾನೆ ಅಂದುಕೊಂಡು ಕಾಲ್ ರಿಸೀವ್ ಮಾಡಿ “ಹಲೋ ಮಗ…..” ಅಂದೆ. ಆ ಕಡೆ ಇಂದ ವೈಶು ಸ್ವಲ್ಪ ಕಿಕ್ಕ್ ವಾಯ್ಸ್ ನಲ್ಲಿ “ಹಲೋ ಯಾರೂ….. ಯಾರು ಇದು…..” ಅಂದ. ನಾನು “ಮಗ ನಾನು… ಸುಧಾಕರ್ ಮೈಸೂರ್ ಇಂದ….. ಯಾಕಲ ಮಗ ನಂಬರ್ ಸೇವ್ ಮಾಡಿಕೊಂಡಿಲ್ಲವಾ...?” ಅಂತ ಕೇಳಿದೆ. ಅದಕ್ಕೆ ವೈಶು “ ಓಹ್.. ನೀನೆನ್ಲಾ….. ?ನಂಬರ್ ಯಾವಾಗ ಚೇಂಜ್ ಮಾಡಿದೆ?” ಅಂತ ಕೇಳಿದೆ. ಅದಕ್ಕೆ ನಾನು “ನಂಬರ್ ಚೇಂಜ್ ಮಾಡಿ 3 ದಿನ ಅಯೀತು… ಕಳಿಸಿದ್ದನಲ್ಲಾ…? ನಂಬರ್ ಅಪ್ ಡೇಟ್ ಮಾಡಿಕೊಳ್ಳಿ ಅಂತ… ಏನ್ ಯಾವದೋ ಹುಡುಗಿ ನಂಬರ್ ಅಂತ ಫುಲ್ ಕುಶ್ ಆಗೀ ಫೋನ್ ಮಾಡಿಬಿಟ್ಟೆನೋ ಅಲ್ಲವಾ..?” ಅಂದೆ. ಅದಕ್ಕೆ ಅವನು “ಹ್ಞೂ…. ಕಾಣಲ ಹುಡ್ಗೀರು F**K GIK ಅನ್ನೋ ಮೆಸೇಜಸ್ ಕಳಿಸ್ತಾರೆ…!!!??? ಲೋ ಯಾರೂ ನಮ್ಮ ಹುಡುಗರೇ ಅಂತ ಗೊತ್ತಿತ್ತು ಬಟ್ ನೀನು ಅಂತ ಗೊತ್ತಿರಲಿಲ್ಲ ಕಣೋ..” ಅಂತ ಹೇಳಿದ. ನಾನಿದ್ದು “ಸರಿ ನಾನು ಮೆಸೇಜ್ ಕಳಿಸೋಕೆ ಶುರು ಮಾಡಿ 3 ದಿನ ಅಯೀತು, ಈಗ ಇವತ್ತು ಡೌಟ್ ಬಂತ ನಿನಗೆ?” ಅಂತ ಕೇಳಿದೆ. ಅವನು ಅದಕ್ಕೆ “ಅವತ್ತೇ ಕೇಳಬೇಕು ಅಂತ ಅಂದು ಕೊಂಡೆ ಕಣೋ… ಕಾಲ್ ಮಾಡೋಣ… ಮಾಡೋಣ… ಅಂತ ಅಂದುಕೊಂಡು ಮರೆತೆ ಹೊಯೀತು… ಇವತ್ತು ನಾವು ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡ್ತಾ ಇದ್ದೆವು, ಎಣ್ಣೆ ಹಾಕಿದ ಮೇಲೆ ಯಾಕೋ ತಲೆ ಕೆಟ್ಟು ಹೊಯೀತು… ಯಾರಪ್ಪ ಇದು…? ನೋಡೋಣ ಅಂತ ಕಾಲ್ ಮಾಡಿದೆ ಅಷ್ಟೇ. ಏನ್ ಮಾಡ್ತಾ ಇದ್ದೆ ?” ಅಂತ ಕೇಳಿದ. “ಏನಿಲ್ಲ ಮಗ MBA ಎಕ್ಷಮ್ಸ ಇತ್ತು ನಾಳೆ, ಓದುತ್ತ ಇದ್ದೆ… ಏನ್ ಸಮಾಚಾರ ? ಫುಲ್ ಟೈಟಾ?” ಅಂದೆ. ಅವನು “ಯೇ… ಇಲ್ಲ ಗುರು ದುಡ್ಡು ಸಾಲಲಿಲ್ಲಾ… ಈಗಷ್ಟ ಸ್ವಲ್ಪ ಹೊತ್ತಿಂದೆ ರೆಸ್ಟೋರೆಂಟ್ ನಿಂದ ಹೊರಗೆ ಎದ್ದು ಬಂದೆವು. ಯಾರೂ 2000 ರೂಪಯೀ ಸಾಲ ತಗೊಂದಡಿದ್ದ ಹಂಗೆ ಅದನ್ನ ಈಸಿಕೊಂಡು ಹೋಗೋಣ ಅಂತ ಗಾಡಿ ತಗೊಂಡು ನಮ್ ಸಿಸ್ಯಾ ಒಬ್ಬನ ಜೊತೆ ಬಂದೆ” ಎಂದ. ನಾನು ಅದಕ್ಕೆ “ ಏನ್ ಗಾಡಿ ಚೇಂಜ್ ಮಾಡಿದ ಗುರು? ಅಥವಾ ಇನ್ನು Rx 135 ನೆ ಓಡಿಸ್ತಾ ಇದ್ದೀಯಾ?” ಅಂದೆ. ಅದಕ್ಕೆ ಅವನು “ ಏನ್ ಮಗಾ ಅವಗಲಿಂದ ಗಾಡಿ ಆನ್ ನಲ್ಲೆ ಇದೆ... Rx ಸೌಂಡ್ ಗೊತ್ತಾಗಲ್ಲವಾ…? ತಡಿ ಒಂದು ನಿಮಿಷ…” ಅಂತ ಹೇಳಿ, ಗಾಡಿ ಮೇಲೆ ಕೂತಿದ್ದ ಅವನ ದೋಸ್ತ್ ಗೆ “ಸಿಸ್ಯಾ ಲೋ ಅಕ್ಸಲಾರೇಟ್ರ್ ರೈಸ್ ಮಾಡ್ಲ…..” ಅಂದ. ಅವನ ಫ್ರೆಂಡ್ ಎಣ್ಣೆ ಹಾಕಿದ್ದನೋ ಇಲ್ಲವೋ ಅಕ್ಸಲಾರೇಟ್ರ್ ಅನ್ನೋ ಫುಲ್ ರೈಸ್ ಮಾಡಿದ ಅನ್ನಿಸುತ್ತೆ, ವೈಶಾಕ್ ನ ಗಾಡಿ ‘Drooooooooooooooooooo… Droonn… Droonn… ಅಂತು.



ವೈಶು ಫೋನ್ ನಲ್ಲಿ “ ಯಂಗೇ…? ಸೌಂಡು…? ಕೇಳಿಸ್ತಾ…? ಅಥವಾ ಇನ್ನೊಂದು ಸಲ ರೈಸ್ ಮಾಡಿಸಲಾ...? ” ಅಂತ ಕೇಳಿದ. ನಾನು “ ಲೋ… ಏನ್ಲಾ ಅದು? ಸಾಕು ಬಿಡಲಾ…” ಅಂದೆ. ವೈಶಾಕ್ ಪುನ್ಹ ಅವನ ಫ್ರೆಂಡ್ ಗೆ ಕೂಗಿ ಹೇಳಿದ “ ಮಗಾ ಸಾಕು ಆಫ್ ಮಾಡ್ಲ…”. ನಾನು, ವೈಶಾಕ್ ಪಿ.ಯು.ಸಿ.ಯಲ್ಲಿ ಓದುವಾಗ ನಮ್ಮ ಜೊತೆ ಜಂಡಾ.., ಎಂ.ಸೀ.., ಸೀನಾ.. ಅನ್ನೋ ಇನ್ನು 3 ಜನ ಫ್ರೆಂಡ್ಸ್ ಇದ್ದರು. ನಾವೆಲ್ಲ ಸಕ್ಕತ್ತು ಕೂಳೆ(Masti) ಮಾಡ್ತಾ ಇದ್ದೆವು. ಅವರನ್ನ ನೆನೆಸ್ಕೊಂಡು ವೈಶು ನ ಕೇಳಿದೆ “ ಮಗ ಜಂಡಾ.., ಎಂ.ಸೀ.., ಸೀನಾ.. ಯಾರದ್ರು ಸಿಕಿದ್ದರೆನೋ…”? ವೈಶು ಅದಕ್ಕೆ “ ಇಲ್ಲ ಗುರು... ಯಾರು ಸಿಕ್ಕಿಲ್ಲ....” ಅಂದ. “ ಮತ್ತೇ… ಮೈಸೂರ್ ಗೆ ಬಾರೋ ಯಾವಾಗಲಾದರು” ಅಂದೆ. ಅವನು “ ಮೈಸೂರ್ ನಲ್ಲಿ ಏನು ಇದೆ ಅಂತ ಬರೋಣ…? ನೀನೆ ಬರ್ಲಾ ಬ್ಯಾಂಗಲೋರ್ ಗೆ ಪಾರ್ಟಿ ಮಾಡ್ಕೊಂಡು ಹೋಗುವಂತೆ. ಜಾಸ್ತಿ ಏನು ಬೇಡ ಒಂದು 2000 ರುಪಾಯೀ ತೆಗೆದುಕೊಂಡು ಬಾ. ನೀನೇನು ಪಾರ್ಟಿಗೆ ದುಡ್ಡು ಹಾಕಬೇಡಪ್ಪ ನಾವೇ ಕೊಡಿಸ್ತಿವಿ... ಬೈ ಚಾನ್ಸ್ ಶಾರ್ಟ್ಜ್(Shortage) ಆದರೆ ಅಂತ ತರೋಕೆ ಹೇಳಿದೆ ಅಷ್ಟೇ… ಓಹ್.. ನನ್ನ ಫ್ರೆಂಡ್ ದುಡ್ಡು ಕೊಟ್ಟಿ ಕಳಿಸಿದಾ ಅನ್ನಿಸುತ್ತೆ… ಪುನ್ಹ ರೆಸ್ಟೋರೆಂಟ್ ಹೋಗ್ಬೇಕು ” ಅಂದ. ನಾನು “ ಯಾವ ಏರಿಯಾ ಮಗಾ...?” ಅಂದೆ. ಅವನು “ ಯಾವದು ರೆಸ್ಟೋರೆಂಟ್ ಇರೋದಾ? ಜಯನಗರ್ ಹತ್ತಿರ ಮಗಾ…” ಅಂದ. ನಾನು “ ಓಹ್… ಏನ್ ಈಗ ಜಯನಗರ್ ಫುಲ್ ಪಾಶ್ & ಕಲರ್ ಪುಲ್ ಏರಿಯಾನಾ...?” ಅಂತ ಕೇಳಿದೆ. ಅವನು “ ಎಣ್ಣೆ ಹೊಡಿದಾಗ ಏನ್ಲಾ ಎಲ್ಲಾ ಏರಿಯಾನು ಕಲರ್ ಪುಲ್ ಆಗೀ ಕಾಣುತ್ತದೆ.… ಸ್ಲಂ ಕೂಡ….!!? ” ಅಂದ. ಓಹೋ… ಇವನು ಫುಲ್ ಜೋಶ್ನಲ್ಲಿ ಇದ್ದಾನೆ…ಇನ್ನು ಯಾವಾಗಲಾದರೂ ಮಾತಾಡೋಣ ಅಂತ ಅನ್ನದು ಕೊಂಡು ನಾನು “ ಮತ್ತೇ ಇನ್ನೇನೂ ಮಗಾ…? ಜಂಡಾ.., ಎಂ.ಸೀ.. ಸಿಕ್ಕಿದ್ದಾರಾ?” ಅಂತ ಪುನ್ಹ ಕೇಳಿದೆ. ಅವನು “ ಯಾಕ್ ಮಗಾ ಫೋನ್ ಇಡಬೇಕೇನ್ಲಾ…? ಇರಿಟೇಟ್ ಆಗ್ತಾ ಇದ್ದೀಯ….? ಕೇಳಿದ್ದನ್ನೇ ಕೇಳ್ತಾ ಇದ್ದೀಯಾ? ಅವಾಗಲೇ ಹೇಳಲಿಲ್ಲವ ಅವರು ಸಿಕ್ಕಿಲ್ಲ ಅಂತ? ”ಅಂದ. ನಾನು “ಹಾಗೇನು ಇಲ್ಲ ಮಗಾ… ಹಳೆ ದೋಸ್ತ್ ಕಾಲ್ ಮಾಡಿದಾಗ ಅವನ ಜೊತೆ ಮಾತಾಡೋ ಖುಷಿ ಬೇರೆ ಯಾವಾಗ ಇರುತ್ತೆ ಹೇಳು?” ಅಂದು . ಪುನ್ಹ “ ಮದುವೆ ಏನ್ ಕಥೇಲಾ..? ಯಾವಗಪ್ಪ ಮದುವೆ ಆಗೋದು?” ಅಂತ ಕೇಳಿದೆ. “ ಇನ್ನು ನೀವೆಲ್ಲ ಇದ್ದಿರಲ್ಲಪ್ಪಾ… ನಮ್ಕಿಂಥ ಮುಂಚೆ ಕೆಲಸಕ್ಕೆ ಸೇರ್ಕಂಡ್ರಿ…ನೀವು ಫಸ್ಟ್ ಆಗಿರಪ್ಪಾ… ನಮ್ಮ ಮನೇಲಿ ಎಲ್ಲಾ ಇಷ್ಟು ಬೇಗ ಮಾಡ್ತಾರೆ? ನಾನು ಏನಾದರು ಅಂದ್ರೆ ‘ಏನ್ ಇವನು ಇನ್ನು ಹುಡುಗ್ ಹುಡುಗುರ್ತಾರಾ ಆಡ್ತಾನೆ…’ ಅಂತಾರೆ. ಯಾವಾಗಲಾದರು ಟಿವಿ 9 ನಲ್ಲಿ ತಕ್ಷಣ ಫೇಮಸ್ ಆಗಿರೋ ಜನ ಬಂದಾಗ ನಾನು ‘ಇವನು 2-3 ವರ್ಷದ ಹಿಂದೆ ನನಗೆ ಪರಿಚಯ ಇದ್ದ!!’ ಎಂದರೆ ಫುಲ್ ಶಾಕ್ ಆಗೀ ‘ಹೊಂ...ಏನೋ ಇವನು....’ ಅಂತಾರೆ…. ಒಂದೊಂದು ಸಲ ಒಂದೊಂದು ತರಾ…ಏನ್ ಮಾಡೋದಪ್ಪ?” ಅಂದ ನಾನು “ ಇನ್ನೇನು ಮಗಾ ಸಮಾಚಾರ… ಊಟ ಅಯೀತಾ..?” ಅಂದೆ ಅವನು “ ಓಹ್ಹ್…. ಗುರು… ಫುಲ್ ಬೇಜಾರ್ ಆಗೀ ಬಿಟ್ಟಿದ್ದೀಯಾ ಬಿಡು. ಸರಿ ಫೋನ್ ಇಡ್ತೀನಿ… ಓಕೆ ನಾ…? ನಾನು Usually ಡ್ರಿಂಕ್ಸ್ ತಗೊಂಡಾಗ ಯಾವಾಗಲು ಯಾರಿಗೂ ಫೋನ್ ಮಾಡಲ್ಲಾ ಮಾಡಿದರೆ ಮಾತ್ರ ಮಾತಾಡುತ್ತಾ ಇರಬೇಕು ಅನ್ನಿಸುತ್ತೆ. ಏನು ಇದು ಯಾರ್ರ್ ನಂಬರು ಅಂತ ತಿಳ್ಕೊಲೋಕೆ ಮಾಡಿದೆ ಅಷ್ಟೇ. ಸರಿ ನೀನು ಓದು ಗುರು… ಟೈಮ್ ವೇಸ್ಟ್ ಮಾಡಬೇಡ… ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ಒಳಗೆ ಹೋದರು… ನಾನು ಹೋಗ್ತೀನಿ… ಪುನ್ಹ ಫೋನ್ ಮಾಡ್ತಿನಿ Bye La…” ಅಂದು ಕಾಲ್ ಕಟ್ ಮಾಡಿದ.



ನನಗಂತೂ ಅವನ ಜೊತೆ ಮಾತಾಡಿದ ಆ 8-9 ನಿಮಿಷ 1 ಗಂಟೆ ಆದಂತೆ ಅನುಭವ ಆಗಿತ್ತು. ನನಗೆ ಮೊದಲಿಂದಲೂ ನನ್ನ ಫ್ರೆಂಡ್ಸ್ ಸರ್ಕಲ್ ನಲ್ಲಿ Especially ವೈಶಾಕ್ ಕಂಡರೆ ಏನೋ ತುಂಬಾ ಇಷ್ಟ. ನನ್ನೋಬ್ಬನಿಗೆ ಅಲ್ಲಾ ಅವನ ಫ್ರೆಂಡ್ಸ್ ಎಲ್ಲರಿಗೂ. ಅವನ ಮುಖ ನೋಡಿದರೆ ಪುಲ್ ಸಿರಿಯಸ್ ಅನ್ನಿಸುತ್ತೆ ಬಟ್ ಯಾವಾಗಲು Superb ಕಾಮಿಡಿ ಡೈಲಾಗ್ಸ್ & ಜೋಕ್ಸ್ ಹೇಳುತ್ತಾ ಇರುತ್ತಾನೆ. ನಾನು ಅವನು 4th Std to 7th Std ಒಟ್ಟಿಗೆ ಓದಿದ್ದಾದರು ಪುನ್ಹ ನಾವು ಕ್ಲೋಸ್ ಆಗಿದ್ದು ಪಿ.ಯು.ಸಿ. ಗೆ ಮರಿಮಲ್ಲಪ್ಪ ಕಾಲೇಜಿಗೆ ಸೇರಿದ ನಂತರ. ಆ ದಿನಗಳಲ್ಲಿ ವೈಶಾಕ್ ಸಿಕ್ಕಿಲ್ಲ ಅಂದಿದ್ದರೆ ಇವತ್ತು ಇರೋ ಸುಧಾಕರ್(Me), ಅವನ ಮಾತು… ಕಥೆ…ಸ್ಟೈಲ್… ಎಲ್ಲಾ ಚೇಂಜ್ ಆಗೀ ಇರುತ್ತಿದವು. 2000-2001 ರಲ್ಲಿ ಕ್ಲಾಸ್ ಬಂಕ್ ಮಾಡಿ ಬಲಮುರಿ, ಚಾಮುಂಡಿ ಬೆಟ್ಟ, ಜಯಶ್ರೀ ಹೋಟೆಲ್, ಫಿಲಂ ಗೆ ಹೋಗುತಿದ್ದ ಆ ದಿನಗಳನ್ನ ನೆನೆಸಿಕೊಂಡರೆ ನನ್ನ ಜೋಶ್ ಬ್ಯಾಟರಿ ಫುಲ್ ಚಾರ್ಜ್ ಆಗೀ ಬಿಡುತ್ತೆ. & I’m always thankful to god since he has blessed me with all right friends at exactly right timings…..



Saturday, June 26, 2010

‘ ಈಜು ಕಲಿಯೂ ಮುಂಚೆ ಸಾವಿನ ಮನೆಯ ಕದ ತಟ್ಟಿ ಬಂದ ಆ ದಿನದ ನೆನಪು…’

ಕಳೆದ 2 ತಿಂಗಳಿಂದ ನಂಗೆ ಬೆಳಿಗ್ಗೆ 5.40 ಕ್ಕೆ ಸರಿಯಾಗಿ ಎಚ್ಚರ ಆಗಿಬಿಡುತ್ತಿದೆ. ಮುಂಚೆ ಅಂದ್ರೆ 2 ವರ್ಷದಿಂದ ರಾತ್ರಿ 2.15ಕ್ಕೆ ಎದ್ದು Computer ಆನ್ ಮಾಡಿ ನೆಟ್ ಕನೆಕ್ಟ್ ಆಗೀ Torrents ನೆಲ್ಲ ಡೌನ್ಲೋಡ್ ಗೆ ಇಟ್ಟುಪುನ 2.30 ಗೆ ಮಲಗುತ್ತಿದ್ದೆ ಆದರೆ ಈಗ ಎಚ್ಚರ ಆಗೋದೇ 5.40ಕ್ಕೆ. ಎದ್ದು ಹಾಸಿಗೆ ಕ್ಲೀನ್ ಮಾಡಿ, ನಿತ್ಯಕರ್ಮ ಮುಗಿಸಿ Computer ಆನ್ ಮಾಡಿ ಡೌನ್ಲೋಡ್ ಗೆ ಹಾಕುವಷ್ಟರಲ್ಲಿ 6.15 ಆಗಿರುತ್ತೆ. ಅಷ್ಟುಹೊತ್ತಿಗೆ ಅಪ್ಪಾಜಿ ಬಂದು ‘ಏನಪ್ಪಾ ಸ್ವಿಮ್ಮಿಂಗ್ ಗೆ ಹೋಗ್ತೀಯಾ?’ ಅಂತ ಕೇಳ್ತಾರೆ. ನಾನು ‘ಹ್ಞೂ... ಹೋಗುತೀನಿ...’ಅಂತೇನೆ. ಹಾಗೆ ಹೇಳಿದ ತಕ್ಷಣ ಅವರು ಗ್ಯಾರೇಜ್ ಲಾಕ್ ಓಪನ್ ಮಾಡಿ ನನ್ನ ಸ್ಪ್ಲೆಂಡರ್ ಬೈಕ್ ನ ಹೊರಗೆ ನಿಲ್ಲಿಸುತ್ತಾರೆ. ನಾನು ಗಾಡಿ ತಗೊಂಡು 6.15 ಕ್ಕೆ ಬಿಟ್ಟರೆ ವಾಪಸು 7.35 ಕ್ಕೆ ಸ್ವಿಮ್ಮಿಂಗ್ ಮುಗಿಸಿ ಬರ್ತೇನೆ. ಇದು ಸಧ್ಯಕ್ಕೆ 2 ತಿಂಗಳಿಂದ ರೂಟೀನ್ ಆಗಿಬಿಟ್ಟಿದೆ. ಮೊನೆ ಅಂದ್ರೆ ಜೂನ್ 2010 ರ ಮೊದಲವಾರ. ಅವತ್ತು ಶುಕ್ರವಾರ ರಾತ್ರಿ MBA Assignments ಸಬ್ಮಿಟ್ ಮಾಡಲು ನಾಳೆನೇ ಲಾಸ್ಟ್ ಡೇಟ್. ಆಫೀಸ್ ಯಿಂದ ಸಂಜೆ ಬೇಗ ಬಂದವನೆ ಬರೆಯೋಕೆ ಕೂತುಕೊಂಡಿದ್ದೆ. ಊಟಕ್ಕೆ 20 Minutes ಬ್ರೇಕ್ ಬಿಟ್ಟರೆ ಅವತು ಸಂಜೆ 7.30 To 11.45 ವರೆಗೆ ಎಲ್ಲ 6 ಪೇಪರ್ Assignments ಮುಗಿಸಿದಾಗ ಏನೋ ನೆಮ್ಮದಿ. ಲಾಸ್ಟ್ 3 ಸೆಮಿಸ್ಟೆರ್ ಯಿಂದ ಆ ಫೀಲಿಂಗ್ ಗೇ ಹಾಗೆ... ಸೆಮಿನಾರ್ & Assignments ಮುಗಿಸಿಬಿಟ್ಟರೆ ಅರ್ಧ ಸೆಮಿಸ್ಟೆರ್ ಮುಗಿಸಿದಹಾಗೆ. ಹಾಗೆ ಬರೆದು ಮುಗಿಸಿ ಎಲ್ಲಾ ಎತ್ತಿಟ್ಟು ಮಲಗಬೇಕು ಅನ್ನುವಷ್ಟರಲ್ಲಿ ಜೋರಾಗಿ ಮಳೆ ಶುರು ಅಯೀತು. ನನ್ನ ಹಾಸಿಗೆ ಕಿಟಕಿ ಪಕ್ಕ ಇರುವುದರಿಂದ ಮಳೆಯ ಎರಚಲು ಹೊಡೆಯೋಕೆ ಶುರು ಅಯೀತು ತಕ್ಷಣ ಕಿಟಕಿ ಕ್ಲೋಸ್ ಮಾಡಿದೆ. ಕಿಟಕಿ ಕ್ಲೋಸ್ ಮಾಡಿದ ಒಂದು 20 ಸೆಕೆಂಡ್ ನಂತರ ಹಿಂದೆಂದೂ ನನ್ನ ಜೀವನದಲ್ಲಿ ಕೇಳದಷ್ಟು ಜೋರಾಗಿ ಒಂದು ಸಿಡಿಲು ‘ಡಮ್ಮಾರ್...’ ಅಂತ ಹೊಡಿತು. ಒಂದು ಕ್ಷಣ ಹಾಸಿಗೇಲಿ ಬೆಚ್ಚಿದೆ! ತಕ್ಷಣ ಕರೆಂಟ್ ಕೂಡ ಹೊಯೀತು. ಇನ್ನೇನು ಮಾಡೋದು ಅಂತ ಹಾಗೆ ಕಣ್ಣು ಮುಚ್ಚಿ ನಿದ್ರೆಗೆ ಜಾರಿದೆ.

ಬೆಳಿಗ್ಗೆ ಸರಿಯಾಗಿ 5.40 ಎಚ್ಚರ ಅಯೀತು. ಅಲ್ಲೇ ಕಿಟಕಿ ಪಕ್ಕ ಸಣ್ಣದಾಗಿ ಮಳೆ ಹನಿ ಬೀಳೋ ಸದ್ದು. ‘ವಾ.... ಮಳೆ ! ಸ್ವಿಮ್ಮಿಂಗ್ ಏನ್ ಮಾಡೋದಪ್ಪ?...’ ಅನ್ನಿಸಿತು. ಕೂಡಲೆ ಎದ್ದು Computer ಆನ್ ಮಾಡಿ ಡೌನ್ಲೋಡ್ ಗೆ ಹಾಕಿ ನಂತರ ಬಾತ್ರೂಮ್ ಗೇ ಹೋಗಿ ಫ್ರೆಶ್ ಆಗೀ ಬಂದೆ. ಮಳೆ ಸ್ವಲ್ಪ ಕಡಿಮೆ ಆಗಿದೆ ಅನ್ನಿಸಿತು. ಸರಿ ಸ್ವಿಮ್ಮಿಂಗ್ ಹೋಗೋಣ ಅಂತ ಗಾಡಿ ಸ್ಟಾರ್ಟ್ ಮಾಡಿ ಮನೆಯಿಂದ ಹೊರಟೆ. ಮಳೆಗೆ ಇಡೀ ಮೈಸೂರು ಒದ್ದೆ ಆಗಿತ್ತು. ನಮ್ಮ ಮನೆ ಮುಂದೆ ಇದ್ದ ಟಾರ್ ರೋಡ್ ಅನ್ನು ಗುಡಿಸಿ.. ಒರೆಸಿ.. ಸಾರಿಸಿದ ಹಾಗ ಇತ್ತು. ನಮ್ಮ ಮನೆ ರಸ್ತೇಲಿ ನೆಟ್ಟಿದ್ದ ಮಹಾಗನಿ, ಹೊಂಗೆ, ಮೇ ಫ್ಲೋವರ್ ಮುಂತಾದ ಮರಗಳೆಲ್ಲ ಸ್ನಾನಾ ಮಾಡಿ ಫ್ರೆಶ್ ಆಗೀ ನಿಂತಿರುವ ರೀತಿ ಇತ್ತು. ಕೆಲವೊಂದು ಕಡೆ ಗುಲ್ಮೊಹರ್(ಮೇ ಫ್ಲೋವರ್) ನ ಕೆಂಪು ಹೂವುಗಳು ಮಳೆ ಗಾಳಿಗೆ ಉದುರಿ ರಸ್ತೆಗೆಲ್ಲ ರೆಡ್ ಕಾರ್ಪೆಟ್ ಹಾಸಿದಂತೆ ಕಾಣುತಿತ್ತು.
‘ಅಬ್ಬ!!!.... ಇವತ್ತು ಸ್ವಿಮ್ಮಿಂಗ್ ಗೆ ಹೋಗದೆ ಮಲಗಿದ್ದರೆ ಎಂಥ ಒಳ್ಳೆ ವಾತಾವರಣ ನೋಡು ಚಾನ್ಸ್ ಮಿಸ್ ಆಗ್ತಾ ಇತ್ತಲ್ಲ...’ ಅನ್ನಿಸಿತು. ಹಾಗೆ ಚರ್ಚ್ ಪಕ್ಕ ಇದ್ದ ಪೋಲಿಸ್ ಸ್ಟೇಷನ್ ದಾಟಿ ಮುಂದೆ ಸಾಗಿ ವಿಶ್ವಮಾನವ ಡಬಲ್ ರೋಡಿಗೆ Join ಆದೆ. ಸಾಕಷ್ಟು ಜನ ರಸ್ತೆಯ ಎರಡು ಭಾಗದಲ್ಲೂ ವಾಕ್ ಮಾಡುತ್ತಿದ್ದರು. ಗಾಡಿನ ನಾನು ಇವತ್ತು ಸ್ವಲ್ಪ ಸ್ಲೋ ಆಗೀ ಅಂದ್ರೆ, ಅಂದಾಜು 35 kms ಸ್ಪೀಡ್ ನಲ್ಲಿ ಓಡಿಸ್ತಾ ಇದ್ದೆ. ತಣ್ಣನೆಯ ಶೀತ ಗಾಳಿ ನನ್ನ ಮುಖ ಸವರಿ ಹೋದ ಅನುಭವ ಆಗ್ತ ಇತ್ತು. ಏನೇ ಹೇಳಿ.. ಬೆಳಗ್ಗೆ ಈ ರೀತಿ ಚನ್ನಾಗಿ ಮಳೆ ಬಿದ್ದ ನಂತರ ಇರುವ ತಂಪು ಹವಾಮಾನದಲ್ಲಿ, ಸುತ್ತ ಮುತ್ತ ಹಸಿರು ಇರೋ ಜಾಗದಲ್ಲಿ ಒಮ್ಮೆ ದೀರ್ಘವಾಗಿ ಉಸಿರೆಳೆದು ಕೊಂಡು Lungs fill ಮಾಡಿಕೊಂಡರೆ, ಆಗ ಸಿಗುವ ಆನಂದನೇ ಬೇರೆ... ಅವತ್ತು ನನಗೆ ‘ Feel The Nature ’ ಅನ್ನೋ ವಾಕ್ಯದ ನಿಜವಾದ ಅನುಭವ ಆಯಿತು. ‘ಮೈಸೂರ್ ನಂತಹ ಊರಿನಲ್ಲಿ ಸೆಟ್ಲ್ ಅಗೀರೋದು ನನ್ನ ಪುಣ್ಯ..’ಅಂತ ಅನ್ನಿಸಿತು. ಯಾರೇ ಮೈಸೂರ್ ಬಗ್ಗೆ ಕೇಳಲಿ, ನಾನಂತೂ ಯಾವಾಗಲು ಮೈಸೂರ್ ಅಂತ ಕೂಲ್, ಬೆಸ್ಟ್ ಟೂರೀಸಂ, ಹಿಸ್ಟಾರಿಕಾಲ್, ಕಲ್ಚರಲ್ ಸಿಟಿ , ಸೈಟಿಫಿಕಲಿ Important ಆದ ಜಾಗ ಇನ್ನೊದು ಇಲ್ಲ ಅಂತೆನೆ. ಕರೆಕ್ಟ್ ಆಗೀ ಪ್ಲಾನ್ ಮಾಡಿದರೆ ಮೈಸೂರ್ ಸುತ್ತ ಮುತ್ತ ವಿತಿನ್ 90 kms radius ನಲ್ಲಿ ಬೇಕಾದ್ರೆ 10 ದಿನ ಬೋರ್ ಆಗದ ಹಾಗೆ ತಿರುಗಾಡೋ ಜಾಗಗಳಿವೆ. ಹಾಗೆ ಯಾವಾಗಲು ನನ್ನ ತಂಗಿ ರಾಜಮಣಿ ಹೇಳುತಿದ್ದ ಮಾತು ನೆನಪಿಗೆ ಬಂತು. ಅವಳು ‘ಏನೇ ಹೇಳು ಲೋಕು ನಮ್ಮ ನಮ್ಮ ಊರು ನಮಗೆ ಸವಿ ಬೆಲ್ಲ ಅಲ್ಲವ...?’ ಅನ್ನುತಿದ್ದಳು. ಪಿ.ವಿ.ಆರ್. ಒಂದನ್ನಾ ಬಿಟ್ಟು ಮೈಸೂರ್ ನಲ್ಲಿ ಏನು ಇಲ್ಲ ಅನ್ನೋ ಹಾಗೆ ಇಲ್ಲಾ ಅಲ್ಲವಾ..? ಅಂತ ಯೋಚನೆ ಮಾಡುವಷ್ಟರಲ್ಲಿ ಸರಸ್ವತಿಪುರಂನಾ J S S ಗರ್ಲ್ಸ್ ಕಾಲೇಜ್ ಪಕ್ಕ ಇರೋ ಮೈಸೂರು ಯೂನಿವೆರ್ಸಿಟಿ ಸ್ವಿಮ್ಮಿಂಗ್ ಪೂಲ್ ಬಂತು.

ಗಾಡಿ ಸ್ಟ್ಯಾಂಡಿನಲ್ಲಿ ಹೆಚ್ಚಿಗೆ ಗಾಡಿಗಳು ಇರಲಿಲ್ಲ. ನಾನು ನನ್ನ ಗಾಡಿ ನಿಲ್ಲಿಸಿ Entrance ಗೆ ಬಂದೆ. Entranceನಲ್ಲಿ ಟಿಕೆಟ್ ಕೌಂಟರ್ ಇದೆ. ಅಲ್ಲೆ ಪಕ್ಕ ಬಲಕ್ಕೆ ಒಂದು ಪ್ಯಾಸೇಜ್ ಲ್ಲಿ ಟಿಕೆಟ್ ಹರಿಯುವವನು (ಪಾಸು ಚೆಕ್ ಕೂಡ ಮಾಡ್ತಾನೆ...) ನಿಂತಿರ್ತನೆ. ಅವನಿಗೆ ಪಾಸು ತೋರಿಸಿ ಒಳಗೆ ಎಂಟರ್ ಆದೆ. ಅಲ್ಲಿ ಎಂಟರ್ ಆದ ಕೊಡಲೇ ಎಡ ಹಾಗು ಬಲಕ್ಕೆ ಒಂದೊಂದು ದೊಡ್ಡ ಸಂಪಿಗೆ ಮರ ಸಿಗುತ್ತದೆ. ಹಾಗೆ ಇನ್ನು ಎರಡು ಹೆಜ್ಜೆ ಮುಂದೆ ಹೋದರೆ ಕಾಣುತ್ತೆ ಸ್ವಿಮ್ಮಿಂಗ್ ಪೂಲ್. ಮೈಸೂರ್ ಗೆ ಅತ್ಯಂತ ದೊಡ್ಡದು ಈ ಮೈಸೂರು ಯೂನಿವೆರ್ಸಿಟಿ ಸ್ವಿಮ್ಮಿಂಗ್ ಪೂಲ್.
100 ಅಡಿ ಉದ್ದ, 50 ಅಡಿ ಅಗಲ. ಆಳ 3 ರಿಂದ 12 ಆಡಿವರೆಗೆ ಇದೆ. ಒಂದು ಬದಿಯಲ್ಲಿ ಒಂದು ಕಾರಿಡಾರ್ ಇದೆ. ಜನರೆಲ್ಲಾ ತಮ್ಮ ಬಟ್ಟೆ, ಟವಲ್ ಅಲ್ಲಿ ಇಡುತಾರೆ, ಅಲ್ಲೇ ಸ್ವಲ್ಪ ಮುಂದಕ್ಕೆ ಹೋದರೆ Toilet ಹಾಗು ಜನರಲ್ Shower bath ಇದ್ದಾವೆ. ಅಲ್ಲಿ Shower ನಲ್ಲಿ ಸ್ನಾನ ಮಾಡಿಯೇ ಪೂಲ್ ಗೆ ಇಳಿಬೇಕು. ಇನ್ನೊಂದು ಬದಿಯಲ್ಲಿ 8 palm ಮರಗಳನ್ನು ನೆಟ್ಟಿದ್ದಾರೆ. 12 ಅಡಿ ಆಳ ಇರು ದಡದಲ್ಲಿ 2 ಜಂಪಿಂಗ್ ಪ್ಲಾಟ್ ಫಾರ್ಮಗಳು ಇದ್ದಾವೆ. ಅದರ ಮುಂದೆ ಒಂದು ದೊಡ್ಡ Fountain ಇದೆ. ಇವತ್ತು ಬೆಳಿಗ್ಗೆ ಮಳೆ ಆಗೋ ಎಲ್ಲ ಲಕ್ಷಣ ಇದ್ದಿದರಿಂದೆನೋ ಪೂಲ್ ನಲ್ಲಿ ಹೆಚ್ಚಿಗೆ ಜನ ಇರ್ಲಿಲ್ಲ. ಜಾಸ್ತಿ ಅಂದ್ರೆ 15 ಜನ ಇದ್ರೂ ಅಷ್ಟೇ. ಸರಿ ನಾನು ಸ್ವಿಮ್ಮಿಂಗ್ Shorts ಹಾಕಿಕೊಂಡು Shower ನಲ್ಲಿ ಸ್ನಾನ ಮಾಡಿ 12 ಅಡಿಗೆ ಬಂದು ಡೈವ್ ಮಾಡಿದೆ. ಹಾಗೆ ಸ್ವಿಮ್ ಮಾಡ್ತಾ, ಫ್ಲೊಟ್ ಮಾಡ್ತಾ 5 ಅಡಿವರೆಗೂ ಬಂದು ಹಾಗೆ ಪೂಲ್ ನ Edgeಗೆ ಒರಗಿ ನಿಂತೆ. ಇದೇ ಒಂದ್ 45 ದಿನಗಳ ಹಿಂದೆ ನೀರೆಂದರೆ ಭಯ, ಹೆದರಿಕೆ ಇದ್ದ ನಾನು ಇವತ್ತು ಪೂಲ್ ನ ಯಾವುದೇ ಮೂಲೇಲಿ, ಎಷ್ಟೇ ಆಳದಲ್ಲಿ ಎತ್ತಾಕಿದರು ಸ್ವಿಮ್ ಮಾಡಿ, ಫ್ಲೊಟ್ ಆಗ್ತಾ ಮೇಲೆ ಬರಬಲ್ಲೆ ಅನ್ನಿಸಿತು.

ಹಾಗೆ ಇದ್ದಕಿದ್ದಂತೆ ನನಗೆ ಫೆಬ್ರುವರಿ 2005 ರಲ್ಲಿ ಉತ್ತರ ಕರ್ನಾಟಕದಲ್ಲಿನ ಪ್ರಸಿದ್ದ ಸ್ಥಳ ‘ಉಳವಿ’ ಹತ್ತಿರ ಇರುವ ‘ಗುಂದು’ ಅನ್ನೋ ಊರಿನ ಸಮೀಪ ಇದ್ದ ‘ಕಾನೇರಿ’ ನದಿಯ ದಡದಲ್ಲಿ ನಡೆದ ಒಂದು ಘಟನೆ ನೆನಪಾಯೀತು. ಆಗ ಇನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಟ್ರೇನಿಂಗ್ ನಲ್ಲಿ ಇದ್ದೆ. ಉಳವಿಯಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತದೆ. ಅಲ್ಲಿ ಜನರು ಜಾತ್ರೆ ಯಿಂದ ವಾಪಸ್ಸು ಕಾಡು ದಾರಿಯಲ್ಲಿ ಬರುವಾಗ ಕಾಡಿನಲ್ಲಿ ಬೆಳೆದಿರುವ ನಾಗ ಬೆತ್ತ ಗಿಡದಲ್ಲಿ ಬೆತ್ತದ ಕೋಲನ್ನು(Stick) ಕಡಿದುಕೊಂಡು ಮನೆಗೆ ತೆಗೆದುಕೊಂಡು ಹೋಗ್ತಾರೆ. ಹೀಗೆ ಜಾತ್ರೆ ಯಿಂದ ಬರುವಾಗ ಬೆತ್ತವನ್ನು ತಂದರೆ ಮನೆಗೆ ಒಳ್ಳೆಯದಾಗುತ್ತೆದೆ ಅನ್ನೋ ನಂಬಿಕೆ. ಹೀಗೆ ಬೆತ್ತ ಕಡಿಯಲು ಕಾಡು ನುಗ್ಗಿ ಇಡೀ ಕಾಡು ಹಾಳು ಮಾಡ್ತಾರೆ ಅಂತ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಉಳವಿ ಜಾತ್ರೆ ಟೈಮ್ ನಲ್ಲಿ ಉಳವಿ ಸುತ್ತ ಮುತ್ತ ಮೈನ್ ರೋಡ್ ನಲ್ಲಿ 6 – 7 ಚೆಕ್ ಪೋಸ್ಟ್ ಮಾಡಿ ಅಲ್ಲಿ 15 - 20 ಜನರನ್ನು ಡೆಪ್ಯೂಟ್ ಮಾಡ್ತಾರೆ. ಅಲ್ಲಿ ಜಾತ್ರ ಮುಗಿಯುವಷ್ಟು ದಿನ Day & Night ಶಿಫ್ಟ್ ನಲ್ಲಿ Staff ಗಳು ಜಾತ್ರೆಗೆ ಹೋಗಿ ಬರೋ ಗಾಡಿಗಳನ್ನೆಲಾ ಚೆಕ್ ಮಾಡಿ ಬೆತ್ತ ಇದ್ದರೆ Seizeಮಾಡಬೇಕು. ಹಾಗೆ ನನ್ನನ್ನು ಸೇರಿ 15 ಜನರನ್ನ (ನನ್ನ Batch Foresterಗಳನ್ನು) ‘ಗುಂದು’ ಗೆ ಹಾಕಿದ್ದರು.
ಅಲ್ಲಿ ಒಂದು ಕ್ರಾಸಿಂಗ್ ಹತ್ತಿರ ಟೆಂಪೊರರಿ ಚೆಕ್ ಪೋಸ್ಟ್ create ಮಾಡಿ ಅಲ್ಲೇ ಅಕ್ಕ ಪಕ್ಕ ಟೆಂಟ್ ನ Pitchಮಾಡಿ (ಟೆಂಟ್ ನ ಆರು ಸೈಡ್ ಅನ್ನು, ನೆಲಕ್ಕೆ ಹೂಳಿರುವ ರಾಡ್ ಗೆ ಕಟ್ಟುವುದಕ್ಕೆ ಟೆಂಟ್ Pitching ಅಂತಾರೆ) ಒಂದು ಟೆಂಟ್ ನಲ್ಲಿ ಆರು ಜನ ಇರುವಂತೆ ಹಾಗು ಅಲ್ಲೇ ಪಕ್ಕ 2 kms ದೂರದಲ್ಲಿ ಇದ್ದ I B ಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ದಿನ ಬೆಳಿಗ್ಗೆ ಫ್ರೆಶ್ ಆಗಲು, Toilet ಹಾಗು ಸ್ನಾನಕ್ಕೆ ಗುಂದಿನಿಂದ 8 kms ದೂರದಲ್ಲಿ ‘ಕಾನೇರಿ’ ನದಿ ಹರಿಯುತ್ತಿತು ಅದಕ್ಕೆ ಅಡ್ಡಲಾಗಿ ಒಂದು ಸೇತುವೆ ಕತ್ತಲಾಗಿತ್ತು. ಸೇತುವೆ ಪಕ್ಕ ಇಳಿಜಾರಿನಲ್ಲಿ ನಿಧಾನವಾಗಿ ಇಳಿದು ಕಾನೇರಿ ನದಿಯ ದಡದಲ್ಲಿ ಎಲ್ಲ ಮುಗಿಸಿಕೊಳ್ಳಬೇಕಿತ್ತು. ಡೈಲಿ ನಮ್ಮನ್ನು ಕರೆದೊಯ್ಯಲು ಒಂದು ಸ್ವರಾಜ್ ಮಜ್ದಾ ಗಾಡಿ ವ್ಯವಸ್ಥೆ ಮಾಡಿದ್ದರು. ನಾನು ಮೊದಲನೇ ದಿನ ಅಲ್ಲಿಗೆ ಹೋದಾಗ ಈಜಲು ಹೋಗದೆ ನದಿಯ ದಡದಲ್ಲೇ ಸ್ನಾನ ಮಾಡಿ ಎದ್ದು ಬಂದಿದ್ದೆ.

ಎರಡನೆ ದಿನ ನನ್ನ ಫ್ರೆಂಡ್ಸ್ ಎಲ್ಲಾ jolly ಆಗೀ ನೀರಿನಲ್ಲಿ ಈಜುವುದನ್ನು ನೋಡಿ, ನನಗೂ ಆಸೆಯಾಗಿ ನೀರಿಗಿಳಿದೆ. ನಾನು 1st & 2nd P U ನಲ್ಲಿದ್ದಾಗ ಫ್ರೆಂಡ್ಸ್ ಜೊತೆ ಮೈಸೂರ್ ಇಂದ 25 kms ದೂರದಲ್ಲಿರೋ ಬಲಮುರಿ ಹಾಗು ಎಡಮುರಿ ಅನ್ನೋ ಚಿಕ್ಕ ಫಾಲ್ಸ್ಗೆ ಕಾಲೇಜ್ ಬನ್ಕ್ ಮಾಡಿ ತಿಂಗಳಿಗೆ 1 ಬಾರಿನಾದರು ಹೋಗ್ತಾ ಇದ್ದೆ. ಅಲ್ಲಿ 3 – 4 ಅಡಿ ಆಳದಲ್ಲಿ ಕೈ ಕಾಲು ಆಡಿಸಿದ್ದ ಅನುಭವ ಬಿಟ್ರೆ, ಬೇರೆ ಯಾವತ್ತು ನೀರಿನಲ್ಲಿ ಈಜಾಡಿರಲಿಲ್ಲ. ಆ ಧೈರ್ಯದ ಮೇಲೆ ನದಿಗೆ ಬಿದ್ದು ಈಜಲು ಶುರುಮಾಡಿದೆ. ದಡದಿಂದ ಸುಮಾರು 10 ಅಡಿ ಈಜಿ ಮುಂದೆ ಹೋದೆ . ಎಲ್ಲ ಸರಿಯಾಗೆ ಇತ್ತು. ಕೈ ಕಾಲನ್ನು ನೀರಿನಲ್ಲಿ ಸ್ಯಕ್ಲಿಂಗ್ (cycling) ರೀತಿ ಅಡಿಸ್ತಾ ಇದ್ದೆ. ಗ್ರಚಾರ ಅಂತಾರಲ್ಲ ಹಾಗೆ, ಯಾಕೋ ಒಮ್ಮೆ ಇದಕಿದ್ದಂತೆ ಈಗ ನೀರಿನ ಆಳ ಎಷ್ಟಿದೆ ನೋಡೋಣ ಅಂತ ಅನ್ನಿಸಿ ಕೈ ಕಾಲು ಆಡಿಸುವುದನ್ನು ಬಿಟ್ಟೆ ನೋಡಿ...., ಅಬ್ಬಾ….! ಕಾಲಿಗೆ ಏನು ಸಿಕ್ತಿಲ್ಲ... ಇದ್ದಕಿದ್ದಂತೆ ಮುಳುಗಲು ಶುರು ಮಾಡಿದೆ... ಎಷ್ಟೇ ಪ್ರಯತ್ನಪಟ್ಟರು ಕೈ ಕಾಲು ಆಡಿಸಲು ಆಗ್ತಾ ಇಲ್ಲ. ಒಂದ್ ಸಲ ನೀರ್ ಕುಡಿದು, ಉಸಿರು ಸಿಕ್ಕಿ, ನೀರು ನೆತ್ತಿಗೆ ಏರಿದ ಹಾಗೆ ಆಗೀ ಕೆಮ್ಮಿದೆ. ಯಾಕೋ ಇವತ್ತು ನಾನು ಬದುಕಿ ಉಳಿಯೋದಿಲ್ಲ ಅನ್ನಿಸಿಬಿಟ್ಟಿತು! ಜೀವ ಭಯ ಒಮ್ಮೆಲೆ ಮನಸ್ಸಿಗೆ ನುಗ್ಗಿ ಬಂತು. ಪಕ್ಕದಲ್ಲೇ ಈಜುತಿದ್ದ ಯಾದವ್ ಅನ್ನುವವನಿಗೆ ನಾನು ಹೇಗೂ ಕಷ್ಟ ಪಟ್ಟು ‘ ರೀ... ಯಾದವ್.. ಯಾಕೋ ಮುಳಗುತ್ತ ಇದ್ದೀನಿ ಸ್ವಲ್ಪ ಕೈ ಕೊಡಿ...’ ಅಂದು ಪುನಃ ಮುಳುಗಿದೆ. ಅವನು ನಾನು ತಮಾಷೆ ಮಾಡ್ತಾ ಇದ್ದೀನಿ ಅಂತ ‘ಯೆ.. ಸಾಕು ಬನ್ನಿ ಸುಧಾಕರ್ ಡ್ರಾಮಾ ಮಾಡಬೇಡಿ..’ ಅಂತ ಹೇಳಿ, ಈಜಿ ಮುಂದೆ ಹೋದ. ನೀರನಲ್ಲಿ ಮುಳಗುತ್ತಿದ್ದ ನನಗೆ ಆ ಕ್ಷಣದಲ್ಲೂ ಯಾದವ್ ಮೇಲೆ ಸಿಕ್ಕಪಟ್ಟೆ ಕೋಪ ಬಂತು. ತಕ್ಷಣ ಪಕ್ಕ ನೋಡಿದೆ ಇನ್ನೊಬ್ಬ Batch mate ನರೇಶ್ ಕಾಣಿಸಿದ. ಅವನು ಸ್ನಾನ ಮುಗಿಸಿ ಎದ್ದು ದಡದಲ್ಲಿ ಟವಲ್ ನಿಂದ ಮೈ ಒರೆಸಿಕೊಳ್ತಾ ಇದ್ದ. ನಾನು ‘ ನರೇಶ………’ ಅಂತ ಕೂಗಿ ಪುನ ಮುಳುಗಿದ. ಕೈ ಮೇಲೆ ಇತ್ತು. ಅಬ್ಬ.. ಇವತ್ತಿಗೂ ನರೇಶ್ ನನ್ನ ಕೆಲವು ಸಲ ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳುತೇನೆ. ನನಗೆ ಈಜು ಬಾರದೆ ಮುಳುಗುತ್ತಿದ್ದನು ನೋಡಿದ ಅವನು ತಕ್ಷಣ ನೀರಿಗೆ ಧುಮುಕಿ ಹತ್ತಿರ ಬಂದು ಕೈ ಚಾಚಿ ನೀಡಿದ. ಅವನ ಕೈ ಮುಟ್ಟಿದ ಆ ಕ್ಷಣ ನನಗೆ ಪುನರ್ಜನ್ಮವಾದಂತೆ ಆಯಿತು. ಹಾಗೆ ನರೇಶನ ಕೈ ಹಿಡಿದುಕೊಂಡು ತಕ್ಷಣ ನೀರಿನ ಮೇಲಕೆ ಬಂದೆ. ಹಾಗೆ ಅವನ್ನ ಹಿಡ್ಕೊಂಡೆ ದಡ ಸೇರಿದೆ. ಏನ್ ಒಂಥರಾ ಷಾಕ್ ಆಗೀ Trance ಗೆ ಹೋಗಿಬಿಟ್ಟೆ. ನರೇಶ ಪುನಃ ಮೈ ಒರಸಿಕೊಂಡು ಬಂದು‘ ಏನೋ ಮಾರಾಯ ಈಜು ಬರೋಲ್ಲ ಅಂದ್ರೆ ಯಾಕ ಅಷ್ಟು ದೂರ ಹೋಗ್ಬೇಕು?..’ ಅಂದ. ಯಾದವ್ ಬಂದು ‘ರೀ ಸುಧಾಕರ್. ಸಾರೀ ಮಾ.. ನನಗೆ ನಿಜವಾಗಲು ನಿಮಗೆ ಈಜು ಬಾರದೆ ಇರೋ ವಿಷಯ ಗೊತ್ತಿರಲಿಲ್ಲ...’ ಅಂದ. ನಾನು 2 ದಿನ ಇಡೀ ಗರ ಬಡಿದವನಂತೆ ಆಗಿ ಬಿಟ್ಟಿದ್ದೆ. ಏನೋ ಒಂಥರಾ ಸಾವಿನ ಹತ್ತಿರ ಹೋಗಿ ಬಂದ ಅನುಭವ. ಅವತ್ತು ನನ್ನ ಅಪ್ಪಾಜಿಯನ್ನು ಮನಸ್ಸಿನಲ್ಲೇ ಸ್ವಲ್ಪ ಬೈದುಕೊಂಡೆ. ನನನ್ನು ಚಿಕ್ಕ ವಯಸ್ಸಿನಲ್ಲೆ ಅವರು ಸ್ವಿಮ್ಮಿಂಗ್ ಸೇರಿಸಿದ್ರೆ ,ಇವತ್ತು ಹಾಗಾಗುತ್ತಿರಲಿಲ್ಲ ಅನ್ನಿಸಿತು.
ಹಾಗೆ ಆ ಘಟನೆ ಯೋಚನೆ ಮಾಡುತ್ತಾ. ಪುನಃ ಪೂಲ್ ನ ಸೆಂಟರ್ ಗೆ ಹೋಗಿ ಇನ್ನೊಂದು Length ಮುಗಿಸಿ ಬಂದೆ. ಪುನಃ 5 ಅಡಿಯ ಕಟ್ಟೆಯ ಬದಿಗೆ ಒರಗಿ ನಿಂತು ಮರಿಮಲ್ಲಪ್ಪ ಸ್ಕೂಲ್ ನಲ್ಲಿ 9th Standard ಓದುತ್ತಿದಾಗ ಕ್ಲಾಸ್ ನಲ್ಲಿ ನನ್ನ ಪಕ್ಕ ಕೂತುಕೊಳ್ಳುತಿದ್ದ ‘ಅಗಿನೇಶ್’ ನನ್ನು ನೆನೆಸಿಕೊಂಡೆ. ಆ ಕಾಲಕ್ಕೆ ಅವನದು ಸ್ವಲ್ಪ Big Shot ಫ್ಯಾಮಿಲಿ. ಅವನ ಮನೇಲಿ ಕಂಪ್ಯೂಟರ್ ಇತ್ತು. ಅದ್ರಲ್ಲಿ Astro ಅನ್ನೋ ಒಂದು DOS Software ಇತ್ತು. ಅದು ಯಾರದಾದರೂ ಹುಟ್ಟಿದ ಟೈಮ್, ಡೇಟ್, ಹುಟ್ಟಿದ ಜಾಗದ Lat & Long ಕೊಟ್ಟರೆ, ಅವರ ಮುಂದಿನ ಭವಿಷ್ಯವನ್ನು Notepad ನ Text ಫಾರ್ಮಾಟ್ ನಲ್ಲಿ 5 – 6 pageಗಳಷ್ಟು ವಿವರಣ ಕೊಡ್ತಾ ಇತ್ತು. ಹಾಗೆ ಒಮ್ಮೆ ನಾನು ಅಗಿನೇಶ್ ಗೆ ನನ್ನ ಡಿಟೈಲ್ಸ್ ಎಲ್ಲಾ ಕೊಟ್ಟು ಕಳಿಸಿದ. ಅವನು ನನ್ನ ಭವಿಷ್ಯವನ್ನು Computer ನಲ್ಲಿ ಪ್ರಿಂಟ್ ಮಾಡಿ ತಂದುಕೊಟ್ಟ. ಒಮ್ಮೆ ಅದನ್ನು ಫುಲ್ ಓದಿದೆ. ಅದನ್ನು ನಂಬಬಾರದು ಅಂತ ಅನ್ನಿಸಿತು. ಆದರೆ ಅದ್ರಲ್ಲಿ (ನನ್ನ ಪ್ರಿಂಟ್ಡ್ ಭವಿಷ್ಯದಲ್ಲಿ) ನನ್ನ ಎಡ ಭಾಗದ Chest ನಲ್ಲಿ ಒಂದು ಮಚ್ಚೆ ಇರುತ್ತೆ ಅಂತ ಕೊಟ್ಟಿದ್ದರು. ಏನೋ ಕಾಕತಾಳಿಯ ಅನ್ನುವಂತೆ ನಿಜವಾಗಿಯೂ ನನಗೆ ನನ್ನ ಎದೆಯ ಎಡಭಾಗದಲ್ಲಿ ಒಂದು ಮಚ್ಚೆ ಇದೆ! ಆ ಪ್ರಿಂಟ್ ನಲ್ಲಿ ಇನ್ನು ಏನೇನೊ ಇತ್ತು. ಬಟ್ Important ಆಗೀ ಇದ್ದ ಇನ್ನೊಂದು ಸಂಗತಿ ಅಂದ್ರೆ ನನಗೆ 22 ನೇ ವಯಸಿನಲ್ಲಿ ಹಾಗು 32 ನೇ ವಯಸಿನಲ್ಲಿ ‘ ಐ ಮೇ ಮೀಟ್ ವಿಥ್ ಎನ್ ವಾಟರ್ ಆಕ್ಸಿಡೆಂಟ್ ( I may meet with an water Accident ) ಅಂತ ಇತ್ತು ಆನೋ ವಿಷಯ ನೆನಪಾಗಿ, ತಕ್ಷಣ ನನಗೆ ಗುಂದಿನ ಕಾನೇರಿ ನದಿಯಲ್ಲಿ ನಡೆದ ಘಟನೆ ನೆನಸಿಕೊಂಡು ‘ಎಲ್ಲ ಬಡ್ಡಿ ಮಗಂದು… ಇದೂ ನಿಜ ಆಗಿಹೊಯಿತಲ್ಲಾ...’ ಅಂತ ಅನ್ನಿಸಿತು. ಹಾಗೆ “ Next In Any Age I’m Ready To battle With Water ” ಅಂತ ಅನ್ನಿಸಿತು.

ಪುನಃ 12 ಫೀಟ್ ನ ಒಂದು ತುದಿಯಲ್ಲಿಗೆ ಬಂದು, Back Stroke ನಲ್ಲಿ ಸ್ವಿಮ್ ಮಾಡುತ್ತ ಮನಸಿನಲ್ಲಿ ಹಾಗೆ ನನ್ನ ಫ್ರೆಂಡ್ ‘Dr, ದಿಲೀಪ್’ ನ ನೆನೆಸಿಕೊಂಡೆ, ಅವತ್ತು ಸಂಜೆ ಅವನು ಸಿಕ್ಕಿಲ್ಲ ಅಂದ್ರೆ ಇವತ್ತು ನಾನು ಈಜು ಕಲಿಯೋಕೆ ಸಾಧ್ಯನೇ ಇರ್ತಿರಲಿಲ್ಲವೇನೋ ಅನ್ನಿಸಿತು. 2 ತಿಂಗಳ ಹಿಂದ ತಾನೆ ಅವನು ಅನೆಸ್ತೆಶಿಯಾದಲ್ಲಿ P G ಮುಗಿಸಿ ಬಿಜಾಪುರದಿಂದ ಮೈಸೂರ್ ಗೆ ವಾಪಾಸಾಗಿದ್ದ.
ಅವನನ್ನು ಭೇಟಿ ಮಾಡಲು ಹೋದೆ. ಸುಮಾರು ತಿಂಗಳ ನಂತರ ಸಿಕ್ಕಿದ ಅವನ ಜೊತೆ ಅದು ಇದು ಮಾತಾಡುತ್ತಾ ಸಿಟಿ ವಿಷ್ಯ ಬಂತು. ಸಿಟಿ ಅಂದ್ರೆ ನನ್ನಇನ್ನೊಬ್ಬ ಫ್ರೆಂಡ್ ‘ಸತೀಶ್’ ಅಂತ. ಅವನು ಸ್ಕೂಲ್, ಕಾಲೇಜ್ ನಲ್ಲಿ ನನ್ನ ಸೀನಿಯರ್. ಯಾವಾಗಲು ‘ಮಗ ಸಿಟಿ(City) ಗೆ ಹೋಗೋಣ’ ಅನ್ನುತಾ ಇರುತ್ತಾನೆ, ಅದಕ್ಕೆ ಎಲ್ಲರೂ ಅವನನ್ನು ‘ಸಿಟಿ’ ಅಂತಾರೆ. So ದಿಲೀಪನಿಗೆ ನಾನು ‘ಮಗ ಸಿಟಿ ಹೇಗೆ ಇದ್ದಾನೆ?...’ ಅಂದೆ. ಅವನು ‘ಸಿಟಿ ಬಿಡು ಮಗ.. ಲೈಫ್ ನ ಫುಲ್ ಫ್ಲೆಡ್ಜ (Full Fledge) ನಲ್ಲಿ ಎಂಜಾಯ್ ಮಾಡ್ತಾ ಇದ್ದಾನೆ..., ವಾರಕ್ಕೆ ಬೆಳಗಿನ ಹೊತ್ತು 5 ದಿನ ಸ್ವಿಮ್ಮಿಂಗ್, ಸಂಜೆ 3 ದಿನ ಮರ್ಷಿಯಾಲ್ ಆರ್ಟ್ಸ್, ಇನು 3 ದಿನ ಸಂಜೆ ಡಾನ್ಸ್, ವೀಕ್ಎಂಡ್ ನಲ್ಲಿ ಬೆಳಿಗ್ಗೆ ಚಾಮುಂಡಿಬೆಟ್ಟ ಹತ್ತುತಾನೆ, ಸಂಜೆ ಪಾರ್ಟಿಗಳು… ಫುಲ್ Fitness freak ಆಗಿ ಬಿಟ್ಟಿದ್ದಾನೆಮಗಾ ಅವನು’ ಅಂದ. ಪುನಃ ‘ಸುಧಾ ಲೆ... ನಿನಗೆ ಸ್ವಿಮ್ಮಿಂಗ್ ಬರುತ್ತಾ?...’ ಅಂದ. ನಾನು ‘ಇಲ್ಲ ಮಗ… ಕಲಿಬೇಕು ಅಂತ ಆಸೆ, ಅದರೆ ಒಬ್ಬನೇ ಹೋಗೋಕೆ ಬೋರ್. ಯಾರೂ Company ಇಲ್ಲ...’ ಅಂದೆ. ತಕ್ಷಣ ದಿಲೀಪ್ ‘ಮಗ ನಾನು ವೊಕಾರ್ಟ್ ಹಾಸ್ಪಿಟಲ್ ಗೆ ರಿಪೋರ್ಟ್ ಮಾಡೋದು ಇನ್ನು 8 ದಿನ ಇದೆ(ಅವನಿಗೆ ವೊಕಾರ್ಟ್ ಹಾಸ್ಪಿಟಲ್ ನಲ್ಲಿ ಪ್ರಾಕ್ಟೀಸ್ ಕಮ್ ವರ್ಕ್ ಮಾಡಲು ಆಫರ್ ಬಂದಿತ್ತು) ನಾಳೆ ಇಂದ ಇಬ್ಬರು ಸ್ವಿಮ್ಮಿಂಗ್ ಗೆ ಹೋಗೋಣ, 8 ಡೇಸ್ ಕಂಪನಿ ಕೊಡ್ತೀನಿ Next ನೀನು ಒಬ್ಬನೇ ಹೂಗಲು ಅಭ್ಯಾಸ ಮಾಡ್ಕೋ ಮಗ.. ಅದು ಅಲ್ಲದೆ ಡ್ರೈವಿಂಗ್ & ಸ್ವಿಮ್ಮಿಂಗ್ ಇವೆಲ್ಲ ಬೇಸಿಕ್ ಸರ್ವೈವಲ್ ಸ್ಕಿಲ್ಲ್ಸ್ (Basic survival skills) ಅಲ್ಲವಾ...? ಇನ್ನೇನೋ, ಲೈಫ್ ನಲ್ಲಿ ಇನ್ನು 2 ರಿಂದ 3 ವರ್ಷ ಅಷ್ಟೇ ಆಮೇಲೆ ಮದುವೆ ಆಗ್ತೀವಿ... ಅಮೇಲೆ ಫ್ಯಾಮಿಲಿ ಮ್ಯಾನ್ ಲೈಫ್. So ಈ 2 – 3 ವರ್ಷ ನಾದರು LETS LIVE FOR OURSELF ಮಗ.., LETS ENJOY, LETS HAVE SOME HEALTHY HABBITS...’ ಅಂತೆಲ್ಲ ಹೇಳಿ ಫುಲ್ ಜೋಶ್ ತರಿಸಿಬಿಟ್ಟ. ಟೈಮ್ 10.15 pm ಅಗೀತ್ತು. ಇಬ್ಬರು ಅಕ್ಷಯ ಭಂಡರ್ ನಲ್ಲಿರೋ ‘ಪಯೋನೀರ್’ ಸ್ಪೋರ್ಟ್ಸ್ ಅಂಗಡಿಗೆ ಹೋಗಿ ತಲಾ 150 ರೊಪಾಯಿಯಂತೆ 2 ಸ್ವಿಮ್ಮಿಂಗ್ Shorts ನ Purchase ಮಾಡಿದೆವು. ಮಾರನೆ ದಿನದಿಂದ ಶುರುವಾಗಿತ್ತು ನನ್ನ ಸ್ವಿಮ್ಮಿಂಗ್ ಪ್ರಾಕ್ಟೀಸ್. ಸುಮಾರು ದಿನದಿಂದ ನನ್ನ ಮನಸ್ಸಲ್ಲಿ ‘ನಾನು ಸ್ವಿಮ್ಮಿಂಗ್ ಸೇರಲು ಕಾರಣ ಏನು?...’ ಅಂತ ಮೂಡುತ್ತಿದ್ದ ಪ್ರಶ್ನೆಗೆ ಉತ್ತರ ಇವತ್ತು ಸಿಕ್ಕಿದಂತೆ ಆಯಿತು.

ಇದೆಲ್ಲ ಯೋಚನೆ ಮಾಡ್ತಾ ಹಾಗೆ ಸ್ವಿಮ್ಮಿಂಗ್ ಪೂಲ್ ನ ಒಂದು ಬದಿಯಲ್ಲಿನ ಸೆಂಟರ್ ನಲ್ಲಿ ಇದ್ದ ಒಂದು Exit ಸ್ಪೇಸ್ ಮೇಲೆ ತೂಗು ಹಾಕಿದ್ದ 'ಅಜಂತಾ' ಗಡಿಯಾರವನ್ನು ನೋಡಿದೆ. ಆದು 7.10 ತೋರಿಸ್ತಾ ಇತ್ತು. ಇನ್ನು 5 ನಿಮಿಷ ಇದೆ, ಲಾಸ್ಟ್ ಒಂದು Length ಮಾಡಿ ಹೊರಡೋಣ ಅಂತ ಅಂದುಕೊಂಡು, ಪುನಃ ನೀರಿನಲ್ಲಿ ಮುಳುಗಿ 12 ಫೀಟ್ ಕಡೆ ಸ್ವಿಮ್ ಮಾಡಲು ಶುರು ಮಾಡಿದೆ.

Saturday, June 5, 2010

ರಾಗಿ ತೂರುವ ಹಾಡಿನಿಂದ ತಾನ್ಸೇನ್ ನ ‘ದೀಪಕ್ ರಾಗ’ದವರೆಗೆ…

ಅವತ್ತು ನನ್ನ ಅತ್ತಿಗೆ ಮನೆಯವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ನನ್ನ ಅಣ್ಣ ಶಶಿ ಕೂಡ ಏಪ್ರಿಲ್ ಮೊದಲನೆ ವಾರ ಬಾಂಬೆಯಿಂದ 4 ದಿನ ಮೈಸೂರಿನಲ್ಲಿ ಇದ್ದು ಹೋಗೋಣ ಅಂತ ಬಂದಿದ್ದ. ಅತ್ತಿಗೆ ತಂದೆ ‘ಪಾಪಣ್ಣ’ ಅಂಕಲ್ ನಮ್ಮ ಮೈಸೂರು ತಾಲ್ಲೋಕು ಪಂಚಾಯಿತಿ E O ಆಗಿದ್ದರೆ. ಅವರಿಗೆ ಬಿಡುವು ಸಿಗುವುದೇ ಅಪರೂಪ ಹಾಗೆ ಸಿಕ್ಕಿದಾಗ ನಮ್ಮ ಮನೆಗೆ ಬಂದು ಅಪ್ಪಾಜಿ ಮತ್ತೇ ಅಮ್ಮನನ್ನು ಮಾತನಾಡಿಸಿಕೊಂಡು ಹೋಗ್ತಾ ಇರ್ತಾರೆ. ಅವತ್ತು ಅಮ್ಮ ಹಾಗು ಅತ್ತಿಗೆ ಸೇರಿ ಮಟ್ಟನ್ ಫ್ರೈ & ಸಾಂಬಾರ್, ಚಿಕನ್ ಕಬಾಬ್, ಎಗ್ಗ್ ಫ್ರೈ, ಚಪಾತಿ, ಇನ್ನು ಏನೇನೋ ಮಾಡದಿದ್ದರೂ. ಎಲ್ಲರೂ ಊಟ ಮಾಡಿ ಆಯಿತು. ಯಾಕೋ ಈ 2010 ರ ಬೇಸಿಗೆಯ ದಗೆ ಸಿಕ್ಕಪಟ್ಟೆ ಇತ್ತು. ಮೈಸೂರಿನಲ್ಲಿ ಕೆಲವೊಂದು ದಿನ ತಾಪಮಾನ 38 ಡಿಗ್ರಿ ಗೆ ಏರಿತ್ತು!. ಮೈಸೂರ್ ನಲ್ಲೆ 38 ಡಿಗ್ರಿ ಅಂದ್ರೆ ಇನ್ನು ಬಳ್ಳಾರಿ, ಬೆಳಗಾಂನ ತಾಪಮಾನ ಉಹಿಸೂಕೆ ಆಗುತ್ತಾ??? ನಾವು 1st ಫ್ಲೂರ್ ನಲ್ಲಿ ಮನೆ ಕಟ್ಟುವಾಗ ಮಾಡಿದ್ದ ಒಂದು ಒಳ್ಳೆ ಕೆಲಸವೇನೆಂದರೆ ಮುಂದೆ Sit out / Balcony ಗೆ ಅಂತ 22 ಅಡಿ ಉದ್ದ ಹಾಗು 5 ಅಡಿ ಅಗಲ ಸ್ಪೇಸ್ ಅನ್ನು ಬಿಟ್ಟಿದ್ದು. ಸಂಜೆ ಹೊತ್ತು ಕೂತು ಮಾತನಾಡಲು, ಊಟ ಆದ ಮೇಲೆ ತಿರುಗಾಡಲು, ಎಲ್ಲದಕ್ಕೂ Perfect ಆಗಿತ್ತು. ಸರಿ ಅವತ್ತು ಊಟ ಆದ ಮೇಲೆ ಅತ್ತಿಗೆ ತಂದು ಚಾಪೆ ಹಾಸಿದರು. ಸಮಯ ರಾತ್ರಿ 9.40 ಆಗಿತ್ತು. ಪಾಪಣ್ಣ ಅಂಕಲ್ ಮತ್ತೆ ಚಂದ್ರ ಆಂಟಿ ಚಾಪೆ ಮೇಲೆ ಕೂತಿದ್ದರು. ನಾನು, ಶಶಿ, ಅತ್ತಿಗೆ, ಪುಟ್ಟು(ಅತ್ತಿಗೆ ತಂಗಿ) ನಾಲ್ಕು ಜನ ಶೂ ಬಾಕ್ಸ್ ಗೆ ಅಂತ ಮಾಡಿಸಿದ್ದ ಬಾಕ್ಸ್ ಮೇಲೆ ಕೂತಿದ್ದೆವು. ಅಮ್ಮ ಮತ್ತೇ ಅಪ್ಪಾಜಿ ಚೇರ್ ತಂದು ಅದರೆ ಮೇಲೆ ಕೂತಿದ್ದರು. ನನ್ನ ಶರ್ಟ್, ಬನಿಯನ್ ಎಲ್ಲಾ ಬೆವರಿಗೆ ಒದ್ದೆಯಾಗಿತ್ತು. ಏನ್ ಶೆಕೆ ತಡಿಯೋಕೆ ಆಗ್ತಾನೆ ಇರಲಿಲ್ಲ. ಪಾಪಣ್ಣ ಅಂಕಲ್ ಅಪ್ಪಾಜಿಗೆ ‘ಏನ್ ಸರ್ ಇದು? ಮೈಸೂರ್ ನಲ್ಲಿ ಈ ಮಟ್ಟ ಶೆಕೆ... ಏನ್ ಮನುಷ್ಯ ಬದುಕೋಕೆ ಆಗುತ್ತ ಸರ್?...’ ಅಂದರು. ಚಂದ್ರ ಆಂಟಿ ಇದ್ದು ‘ ಸುತ್ತಮುತ್ತ ಇರೋ ಮರಗಳ ಒಂದಾದ್ರೂ ಎಲೆ ಅಲ್ಲಾಡುತ್ತ ಇಲ್ಲವಲ್ರಿ ನೋಡಿ..’ ಅಂತ ಪಾಪಣ್ಣ ಅಂಕಲ್ ಗೆ ಹೇಳಿದರು. ನಮ್ಮ ಮನೆ ಮುಂದೆ ಒಂದು ಹೊಂಗೆ ಮರ ಹಾಗು ಒಂದು ಸಂಪಿಗೆ ಮರನ ಅಪ್ಪಾಜಿ ಸುಮಾರು 15 - 16 ವರ್ಷದ ಹಿಂದೆನೇ ತಂದು ನೆಟ್ಟಿದ್ದರು.

ಅಪ್ಪಾಜಿ ಚಂದ್ರ ಆಂಟಿ ಹಾಗು ಅಂಕಲ್ ಮಾತು ಕೇಳಿ ‘ ಸರ್ ಹಿಂದಿನ ಕಾಲದಲ್ಲಿ ರಾಗಿ ಹಾಗು ಬತ್ತನಾ ಗದ್ದೆ ಹಾಗು ರಸ್ತೆಗಳಲ್ಲಿ ತೋರುತಿದ್ದಾಗ ಒಂದು ಹಾಡು ಹೇಳ್ತಾ ಇದ್ದರು ನೆನಪಿದಿಯಾ ಸರ್?..’ ಅಂತ ಪಾಪಣ್ಣ ಅಂಕಲ್ ಗೆ ಕೇಳಿದರು. ಪಾಪಣ್ಣ ಅಂಕಲ್ ‘ಅದೇನೋ ಹೇಳ್ತಾರೆ ಸರ್… ಈಗ ನೆನಪಿಗೆ ಬರ್ತಾ ಇಲ್ಲ ’ಅಂದ್ರು. ಅದಕ್ಕೆ ಅಪ್ಪಾಜಿ ‘ ಸರ್ ಬತ್ತ ಹಾಗು ರಾಗಿನ ಗಾಳಿಗೆ ತುರುವಾಗ ಅವರು ತೂರೋ ದಿಕ್ಕಿನಲ್ಲೇ ಗಾಳಿ ಬರಲಿ ಅಂತ ಹೊಯಿಲ್ ಗೋ ವಾಸುದೇವ... ಹೊಯಿಲ್ ಗೋ... ಅಂತಾರೆ, ಕೆಲವು ಸಲ ಕಾಕತಾಳಿಯ ಅನ್ನುವಂತೆ ಅವರು ಆ ರೀತಿ ಹೇಳಿದ ತಕ್ಷಣ ಗಾಳಿನು ಬೀಸಿಬಿಡುತ್ತೆ… ಹಾಗೆ ಈಗ ನಾವು ಅ ಹಾಡು ಹೇಳಿ ಗಾಳಿ ಬರಿಸ್ಕೋಬೇಕು… ಥೂ… ಏನ್ ಶೆಕೆ ಅಪ್ಪ...’ ಅಂತ ನಿಟ್ಟುಸಿರು ಬಿಟ್ಟರು. ಯಾಕೋ ಶೆಕೆ ಹೆಚ್ಚಾದಂತೆ ಆಗೀ ನಾನು ನಾನ್ ರೂಮಿಗೆ ಹೋಗಿ ಫ್ಯಾನಿನ ಸ್ಪೀಡನ್ನು ೫ ಕ್ಕೆ ಏರಿಸಿ ಹಾಗೆ ಹಾಸಿಗೆ ಮೇಲೆ ಉರುಳಿಕೊಂಡೆನು. ಪಾಪಣ್ಣ ಅಂಕಲ್, ಚಂದ್ರ ಆಂಟಿ, ಪುಟ್ಟು ಎಲ್ಲರೂ ಲೇಟ್ ಅಯೀತು ಪುನಃ ಇನ್ನೊಮ್ಮೆ ಬರ್ತೀವಿ ಅಂತ ಹೇಳಿ ಹೊರಟರು.

ನನಗಂತು ಅಪ್ಪಾಜಿ ಹೇಳಿದ ‘ಹೊಯಿಲ್ ಗೋ ವಾಸುದೇವ…’ ಅನ್ನೋ ಒಂದು ಹಾಡಿನಿಂದ ಗಾಳಿಯನ್ನು (ಅದರೆ ದಿಕ್ಕು ಹಾಗು ವೇಗವನ್ನು) ಕಂಟ್ರೋಲ್ ಮಾಡೋದು ನಿಜನಾ?... ಈ ರೀತಿ ನೈಸರ್ಗಿಕ ಶಕ್ತಿಗಳನ್ನು ಮನುಷ್ಯ ಯಾವಾಗಲಾದರು ನಿಜವಾಗಿಯೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದನಾ?... ಇದು ಸಾಧ್ಯನಾ?... ಅಂತೆಲ್ಲ ಯೋಚಿಸಿದೆ. ಹಾಗೆ ಯಾವುದಾದ್ರು ವಿಷಯಗಳನ್ನು ಅದರಲ್ಲೂ ಮೂಢ ನಂಬಿಕೆ ಹಾಗು ವಿಜ್ಞಾನ ವಿಷಯಗಳಿಗೆ ತಾಳೆ ಹಾಕಿಕೊಂಡಿರು ಕುತೂಹಲಕಾರಿ ವಿಷಯಗಳನ್ನ ಕುರಿತು ಯೋಚಿಸುವಾಗ ನನ್ನ ಒಳಮನಸ್ಸು (ಸಬ್ ಕಾನ್ಷಿಯಸ್ ಮೈಂಡ್) ತಕ್ಷಣ Respond ಮಾಡುತ್ತೆ. ಈ ಬಾರಿ ಅದು ತಾನ್ ಸೇನ್ ನ ಹೆಸರನ್ನು ಸೂಚಿಸುವ ಮೂಲಕ Respond ಮಾಡಿತ್ತು. YES ಕರೆಕ್ಟ್!!!! ಮಹಾರಾಜ್ ಅಕ್ಬರ್ ಆಸ್ಥಾನದಲ್ಲಿದ್ದ ಪ್ರಖ್ಯಾತ ಗಾಯಕ ತಾನ್ಸೇನ್ ಹೀಗೆ ಪ್ರಕೃತಿಯ(ನೈಸರ್ಗಿಕ) ಶಕ್ತಿ ಗಳನ್ನೂ ತನ್ನ ಸಂಗೀತದ ಮೂಲಕ ನಿಯಂತ್ರಿಸುತಿದ್ದನಂತೆ!. ತಾನ್ಸೇನ್ ತನ್ನ ಸಂಗೀತದಿಂದ ಹಾಗು ರಾಗಗಳಿಂದ ಅದ್ಬುತಗಳನ್ನು ಸೃಷ್ಟಿಸುತಿದ್ದನಂತೆ. ತಾನ್ಸೇನ್ ಅವನು ಹಾಡುತಿದ್ದ ವಿಶಿಷ್ಟ ರಾಗದಿಂದ ಚಿತ್ರ ಬಿಡಿಸುತಿದ್ದ, ಮಳೆ ಬರಿಸುತಿದ್ದ ಅಷ್ಟೆ ಅಲ್ಲದೆ ‘ದೀಪಕ ರಾಗ’ ಹಾಡಿ ಖಾಲಿ ಶೂನ್ಯದಿಂದ ಬೆಂಕಿ ಹತ್ತಿಸಿ, ದೀಪಗಳು ಉರಿಯುವಂತೆ ಮಾಡುತಿದ್ದನಂತೆ. ನಾನು ಟೈಮ್ ನೋಡಿದೆ 10.25 Pm ಅಗಿತ್ತು. ಏನ್ ಇಷ್ಟು ಬೇಗ ಮಲಗೋದು? ಅಂತ ಯೋಚಿಸಿ ಎದ್ದು ಕಂಪ್ಯೂಟರ್ ಆನ್ ಮಾಡಿ ಇಂಟರ್ನೆಟಗೆ ಕನೆಕ್ಟ್ ಆದೆ. ಅಡ್ರೆಸ್ ಬಾರ್ ನಲ್ಲಿ ಗೂಗಲ್ ಅಂತ ಟೈಪ್ ಮಾಡಿ, ಗೂಗಲ್ ನ ಸೈಟ್ ನಲ್ಲಿ ತಾನ್ಸೇನ್ ಮತ್ತು ಅವನ ಸಂಗೀತದ ಬಗ್ಗೆ ಗೂಗಲ್ ಮಾಡಿದೆ. ಮುಂದಿನ 1 ಗಂಟೆ ಕ್ರಿ.ಷ. 1525 ಕ್ಕೆ ಹೋಗಿ ತಾನ್ಸೇನ್ ಬಗ್ಗೆ ಇಂಟರ್ನೆಟ್ನಲ್ಲಿ ಲಭ್ಯವಿದ್ದ ಎಲ್ಲಾ ಮಾಹಿತಿ ಜಾಲಾಡಿ ವಾಪಸು ಬಂದೆ.

ತಾನ್ಸೇನ್ ಸಾಕಷ್ಟು ಜನ ತಿಳಿದಿರುವ ಹಾಗೆ ಅವನ ಮೂಲ ಮತ ಇಸ್ಲಾಂ ಅಲ್ಲ. ತಾನ್ಸೇನ್ ಒಬ್ಬ ಬ್ರಾಹ್ಮಣ. ಅವನು ಹುಟ್ಟಿದ್ದು ಕ್ರಿ.ಷ.1492ರಲ್ಲಿ ಅಂತ ಕೆಲವೊಂದು ದಾಖಲೆಗಳು ತಿಳಿಸಿದರೆ ಮತ್ತೆ ಕೆಲವು ಕ್ರಿ.ಷ. 1506 ಅಂತ ತಿಳಿಸುತ್ತವೆ. ತಾನ್ಸೇನ್ ನ ಹುಟ್ಟಿದ ವರ್ಷದ ಬಗ್ಗೆ ಇನ್ನು ಗೊಂದಲವಿದೆ. ಗ್ವಾಲಿಯರ್ ಹತ್ತಿರವಿರುವ ‘ಬೆಹತ್’ ಎಂಬ ಗ್ರಾಮದಲ್ಲಿ ವಾಸವಿದ್ದ ಮಕರಂದ ಪಾಂಡೆ ದಂಪತಿಗಳಿಗೆ ಹಲವು ವರ್ಷ ಮಕ್ಕಳಿರಲಿಲ್ಲವಂತೆ. ಒಂದು ದಿನ ಆ ದಂಪತಿಗಳು ಆ ಊರಿನಲ್ಲಿ ಬೀಡು ಬಿಟ್ಟಿದ್ದ ಸಂತ ಪೀರ್ ಮೊಹಮ್ಮೆದ್ ಘಾಸ್ ಹತ್ತಿರ ಹೋಗಿ ಬೇಡಿಕೊಂಡಾಗ, ಅವನು ಅವರಿಬ್ಬರಿಗೆ ಆಶಿರ್ವದಿಸಿ ಮಕರಂದ ಪಾಂಡೆಯ ಬಲಗೈಗೆ ಒಂದು ದಾರ ಕಟ್ಟಿದನಂತೆ. ಆ ಘಟನೆ ನೆಡೆದ ಕೆಲವೇ ದಿನದಲ್ಲಿ ಮಕರಂದ ಪಾಂಡೆ ಮಡದಿಯು ಒಂದು ಗಂಡುಮಗುವಿಗೆ ಜನ್ಮ ಕೊಟ್ಟಳು. ಮಕರಂದ ಪಾಂಡೆಯು ಆ ಮಗುವಿಗೆ ‘ರಾಮ್ ತನು’ ಎಂದು ಹೆಸರಿಟ್ಟನು. ಈ ರಾಮ್ ತನುನೇ ಮುಂದೆ ಭಾರತದ ಅತ್ಯಂತ ಪ್ರಖ್ಯಾತ ಸಂಗೀತಗಾರ ‘ತಾನ್ಸೇನ್’ ಆಗಿ ಬೆಳೆದ. ತಾನ್ಸೇನ್ ನನ್ನು ಅವನ ತಂದೆ ತಾಯಿ ಪ್ರೀತಿಯಿಂದ ‘ತನ’ ಮತ್ತು ‘ಮುಕುಲ್’ ಅಂತ ಕರೆಯುತಿದ್ದರಂತೆ. ತಾನ್ಸೇನ್ ನಿಗೆ ಬಾಲ್ಯದಲ್ಲಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಅಭ್ಯಾಸವಾಗಿತ್ತು. ಅವನು ಪ್ರಕೃತಿಯಲ್ಲಿ ಕೇಳಿಬರುವ ಎಲ್ಲ ಶಬ್ದಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತಿದ್ದನಂತೆ. ಒಮ್ಮೆ ತಾನ್ಸೇನನು ಕಾಡಿನಲ್ಲಿ ಪಕ್ಷಿ ಗಳ ಕಲರವ ಕೇಳುತಿದ್ದಾಗ ಯಾವೂದೊ ಒಂದು ಪಕ್ಷಿಯು ವಿಚಿತ್ರವಾಗಿ ಒಂದು ಇಂಪಾದ ರಾಗ ಹೊರಡಿಸಿದಾಗ ಅಲ್ಲೇ ಇದ್ದ ಒಂದು ಚಿಕ್ಕ ಒಣಗಿದ ಗಿಡದ ಬಳ್ಳಿಯು ಬೆಂಕಿ ಹತ್ತಿಕೊಂಡಿತಂತೆ!. ಈ ಘಟನೆಯೇ ಅವನು ಮುಂದೆ ದೀಪಕ್ ರಾಗ ಕಂಡುಹಿಡಿಯಲು ಪ್ರೇರಣೆಯಾಯಿತು ಅಂತ ಒಂದು ಕತೆ ಹೇಳುತ್ತದೆ. ಒಮ್ಮೆ ಅವನು ಕಾಡಿನ ದಾರಿಯಲ್ಲಿ ಹುಲಿಯ ಧ್ವನಿಯನ್ನು ಅನುಕರಣೆ ಮಾಡುತಿದ್ದಾಗ ಅದನ್ನು ಕೇಳಿದ ಹರಿದಾಸ್ ಎಂಬ ಸಂಗೀತದ ಗುರು ಇವನ ಪ್ರತಿಭೆಯನ್ನು ಮೆಚ್ಚಿ, ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ,ತಮ್ಮ ಎಲ್ಲ ಸಂಗೀತದ ವಿದ್ಯೆಯನ್ನು ಅವನಿಗೆ ಧಾರೆ ಎರೆಯಲು ನಿರ್ಧರಿಸಿದರು. ಅವರಿಂದ ಸಾಕಷ್ಟು ವಿದ್ಯಾ ಕಲಿತ ಮೇಲೆ ತಾನ್ಸೇನ್ ಅವರ ತಂದೆಗೆ ಹುಷಾರಿಲ್ಲದ ಕಾರಣ ಅವರಲ್ಲಿಗೆ ಹಿಂದಿರುಗಿದ. ಪುನ ಕೆಲ ಕಾಲ ಬಿಟ್ಟು ಅವರ ತಂದೆಯ ಮಾತಿನಂತೆ ಮೊಹಮ್ಮೆದ್ ಘಾಸ್ ಎಂಬುವರ ಹತ್ತಿರ ಸಂಗೀತ ಅಭ್ಯಾಸ ಮಾಡಲು ಸೇರಿದನು. ಅಲ್ಲಿ ಸಂಗೀತ ಕ್ಷೇತ್ರದಲ್ಲಿ ಉನ್ನತವಾಗಿ ಪರಿಣಿತಿ ಪಡೆದು ಗ್ವಾಲಿಯರ್ ರಾಜನ ಆಸ್ತಾನದಲ್ಲಿ ಗಾಯಕನಾಗಿ ಸೇರಿದ. ಅಲ್ಲಿ ಆಸ್ತಾನದಲ್ಲಿ ಸೇವಕಿಯಗಿದ್ದ ‘ಹುಸನಿ’ ಎಂಬವಳನ್ನು ಮದುವೆಯಾದ ಅಂತ ಹಲವು ಪುಸ್ತಕಗಳು ತಿಳಿಸುತ್ತವೆ. ತಾನ್ಸೇನ್ ನ ಖ್ಯಾತಿ ದಿನದಿಂದ ಬೆಳದಂತೆ. ಅಕ್ಬರ್ ಮಹಾರಾಜನು ಆ ಗ್ವಾಲಿಯರ್ ರಾಜನಿಗೆ ತಾನ್ಸೇನ್ ನನ್ನು ತನ್ನ ಆಸ್ತಾನಕ್ಕೆ ಕಳುಹಿಸಲು ಆದೇಶಿಸಿದ.

ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ತುಂಬಾ ಬೇಗ ಪ್ರಸಿದ್ದಿಯಾದ. ಅಲ್ಲಿಯ ಜನರಿಗೆ ಅವನು ಸಂಗೀತದ ಮಾಂತ್ರಿಕ ಎಂದು ಅರಿವಾಯಿತು. ತಾನ್ಸೇನ್ ನು ಸಂಗೀತ ಲೋಕದಲ್ಲಿರುವ ಎಲ್ಲ ರಾಗಗಳ ಮೇಲೆ ನಿಯಂತ್ರಣ ಹೊಂದಿದ್ದಾನೆ ಮತ್ತು ಅವುಗಳನ್ನು ಹಾಡುವ ಮೂಲಕ ಅದ್ಬುತ ಹಾಗು ವಿಸ್ಮಯ ಗಳನ್ನೂ ಸೃಷ್ಟಿಸುತಾನೇ ಎಂದೆಲ್ಲ ಜನ ಹೇಳುತ್ತ ಇದ್ದರು. ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ದಿನಾಲೂ ಅಕ್ಬರ್ ಮಹಾರಾಜನಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಹಾಗು ಬೆಳಗಿನ ಜಾವದಲ್ಲಿ ಎದ್ದೇಳಲು ಸಹಾಯವಾಗುವಂತೆ ಇಂಪಾದ ರಾಗಗಳನ್ನು ಹಾಡುತ್ತಿದ್ದನು ಅಂತ ಹೇಳಲಾಗಿದೆ. ತಾನ್ಸೇನ್ ನು ಭಾರತದ ಶಾಸ್ತ್ರಿಯ ಸಂಗೀತದ ರಾಗವನ್ನು ಅರೇಬಿಕ್ ಹಾಗು ಪೆರ್ಸಿಯ ರಾಗಗಳೊಂದಿಗೆ ಸೇರಿಸಿ ಹೊಸದಾದ ರಾಗಗಳನ್ನೂ ಸೃಷ್ಟಿಸುತ್ತಿದ್ದ. ಒಮ್ಮೆ ಅಕ್ಬರನ ಸೈನಿಕರು ಕಾಡಿನಲ್ಲಿ ಒಂದು ಕಾಡಾನೆಯನ್ನು ಹಿಡಿದುಕೊಂಡು ಬಂದು, ಅದನ್ನು ಪಳಗಿಸುವಲ್ಲಿ ವಿಫಲರಾಗಿ ನಂತರ ಆ ಕಾಡಾನೆಯು ಅರಮನೆ ಆವರಣದಲ್ಲಿ ಸಿಕ್ಕ ಸಿಕಲ್ಲಿ ನುಗ್ಗಿ ಇನ್ನೇನು ಸಾಕಷ್ಟು ಹಾನಿ ಮಾಡಬೇಕು ಅನ್ನುವಷ್ಟರಲ್ಲಿ ತಾನ್ಸೇನ್ ನು ತನ್ನ ಒಂದು ವಿಶಿಷ್ಟ ರಾಗದಿಂದ ಆನೆಗೆ ಮೋಡಿ ಮಾಡಿ ಅದನ್ನು ಪಳಗಿಸಿ ನಿಯಂತ್ರಣಕ್ಕೆ ಬರುವಂತೆ ಮಾಡಿದನು. ಅಷ್ಟೇ ಅಲ್ಲದೆ ‘ಸಂಧ್ಯಾ ರಾಗ’ ಎಂಬ ರಾಗವನ್ನು ತಾನ್ಸೇನ್ ನು ಬೆಳಗಿನ ಅಥವಾ ಮಧ್ಯಾನದ ಹೊತ್ತು ಹಾಡುತ್ತಿದ್ದರೆ, ಸೂರ್ಯನ ಕಿರಣಗಳು ಮಂಕಾಗಿ, ಅವನು ಹಾಡುತಿದ್ದ ಸುತ್ತ ಮುತ್ತ ವಾತವರಣದಲ್ಲಿ ಸಂಜೆಯಾಗಿದೆ ಏನೋ ಎಂಬಂತೆ ಬಾಸವಾಗುತ್ತಿತಂತೆ!. ತಾನ್ಸೇನ್ ನು ಅಕ್ಬರನ ಆಸ್ತಾನದಲ್ಲಿ ಬರೀ ಗಾಯಕನಲ್ಲದೆ ಆ ಕಾಲದಲ್ಲಿ ಅವನ(ಅಕ್ಬರನ) ಆಸ್ತಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ ೯ ಜನರಲ್ಲಿ ಅಂದ್ರೆ ನವರತ್ನಗಳು ಎಂದು ಕರೆಯುತಿದ್ದವರಲ್ಲಿ ಪ್ರಮುಖನಾಗಿದ್ದ.[ ಅಕ್ಬರನ ಆಸ್ತಾನದಲ್ಲಿದ್ದ ನವರತ್ನಗಳು ಎಂದು ಹೆಸರಾಗಿದ್ದವರು ಯಾರು ಯಾರೆಂದರೆ... 1) ಅಬುಲ್ ಫಾಜ್ಲ್ – ‘ಅಕ್ಬರ್ ನಾಮ’ ಕೃತಿಯ ಲೇಖಕ. ಇವನು ಅಕ್ಬರ್ ನ ಆಸ್ತಾನದಲ್ಲಿ ಆಡಳಿತಕಾರಿಯಗಿದ್ದ. 2) ಫೈಜಿ - ಅಬುಲ್ ಫಾಜ್ಲ್ ನ ತಮ್ಮ. ಅಕ್ಬರ್ ಮಗನ ಗುರು ಹಾಗು ಒಳ್ಳೆ ಕವಿ. 3) ತಾನ್ಸೇನ್ 4) ಬೀರ್ ಬಲ್ – ಬೀರ್ ಬಲ್ ನ ಬಗ್ಗೆ ಕೇಳದವರಿಲ್ಲ ಬಿಡಿ. ಆದರು ಬೀರ್ ಬಲ್ ‘ಬ್ರಹ್ಮ’ ಎಂಬ ಕಾವ್ಯನಾಮದೊಂದಿಗೆ ಅನೇಕ ಕವಿತೆ ರಚಿಸಿರುವುದು ಅನೇಕ ಜನರಿಗೆ ಗೊತಿಲ್ಲದ ವಿಷಯವಾಗಿದೆ. ಅವುಗಳು ಈಗಲೂ ಭರತ್ ಪುರ್ ನ ವಸ್ತುಸಂಗ್ರಹಾಲಯದಲ್ಲಿದೆ. ಬೀರ್ ಬಲ್ ನ್ನು ಅಫ್ಘಾನಿ ಬುಡ ಕಟ್ಟು ಸೈನ್ಯದೊಂದಿಗಿನ ಯುದ್ದದಲ್ಲಿ ಮರಣಿಸಿದನು. 5) ರಾಜ ತೊದರ್ ಮಲ್ – ಅಕ್ಬರ್ ನ ವಿತ್ತ ಮಂತ್ರಿ 6) ರಾಜ ಮಾನ್ ಸಿಂಗ್ – ಅಂಬರ್ ಸಂಸ್ಥಾನದ ರಜಪುತ್ ರಾಜ 7) ಅಬ್ದುಲ್ ರಹಿಮ್ ಖಾನ್ – ಅಕ್ಬರ್ ಆಸ್ತಾನದ ಕವಿ 8) ಫಾಗಿರ್ ಅಜಿಯಾ ದಿನ್ 9) ಮುಲನ್ ದೋ ಪೈಝಾ, ಇವರಿಬ್ಬರು ಅಕ್ಬರ್ ನ ಆಪ್ತ ಸಲಹಗಾರರಾಗಿದ್ದರಂತೆ]

ಅಕ್ಬರನು ತಾನ್ಸೇನ್ ಗೆ ಪ್ರೀತಿಯಿಂದ ‘ ಮಿಯನ್ ’ ಎಂಬ ಬಿರುದು ಕೊಟ್ಟಿದ. ಎಲ್ಲರೂ ತಾನ್ಸೇನ್ ನನ್ನು ‘ ‘ಮಿಯನ್ ತಾನ್ಸೇನ್’ ’ಎಂದೆ ಕೂಗತೊಡಗಿದ್ದರು. ‘ಮಿಯನ್’ ಎಂದರೆ ಕಲಿತಿರುವ ಮನಷ್ಯ ಎಂದರ್ಥವಂತೆ. ಅಕ್ಬರ್ ನೊಂದಿಗೆ ತಾನ್ಸೇನ್ ನ ಈ ಆತ್ಮಿಯ ಒಡನಾಟ ಅನೇಕ ಜನರಿಗೆ ಹಿಡಿಸಲಿಲ್ಲ. ಅನೇಕರು ಅಸೂಯೆ ಪಟ್ಟರು. ಹೇಗಾದರೂ ಮಾಡಿ ಅವನನ್ನು ಒಂದು ಬಾರಿ ಯಾವುದಾದರು ಸವಾಲಿನಲ್ಲಿ ಸೋಲಿಸಿ ಅಥವಾ ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಕ್ಬರ್ ರಾಜನಿಂದ ದೂರ ಮಾಡಬೇಕು ಎಂದು ಅವನ ವೈರಿಗಳು ಹೊಂಚು ಹಾಕಿ, ಅಕ್ಬರ್ ರಾಜನ ಬಳಿಗೆ ಹೋಗಿ ತಾನ್ಸೇನ್ ನು ಈಗ ಹೊಸ ರಾಗ ಕಲಿತಿದ್ದು, ಆ ರಾಗ ಹಾಡಿದರೆ ದೀಪಗಳು ತಾವಾಗಿಯೇ ಹತ್ತಿಕೊಳ್ಳುತ್ತವೆಯಂತೆ ಎಂದು ಹೇಳಿದರು. ಅಕ್ಬರನಿಗೆ ಆಶ್ಚರ್ಯವಾಗಿ ತಾನ್ಸೇನ್ ನನ್ನು ಕರೆಸಿ ಈ ಬಗ್ಗೆ ವಿಚಾರಿಸಲಾಗಿ ತಾನ್ಸೇನ್ ನು ಹೌದು ಆ ರೀತಿಯ ಒಂದು ರಾಗವಿದ್ದು ಅದಕ್ಕೆ ‘ದೀಪಕ್ ರಾಗ’ ಎಂದು ಹೆಸರು, ಅದನ್ನು ಹಾಡಿದರೆ ಸುತ್ತ ಮುತ್ತಲಿನ ವಾತವರಣವು ಬಿಸಿಯಾಗಿ ದೀಪಗಳಿದ್ದರೆ ಹತ್ತಿಕೊಳ್ಳುತವೆ. ಆದರೆ ಆ ರಾಗ ಹಾಡಿದರೆ ನನ್ನ ದೇಹದಲ್ಲಿ ಉಷ್ಣ ಹೆಚ್ಚಾಗಿ ನನ್ನ ದೇಹವೇ ಉರಿದು ಹೋಗುವ ಸಾಧ್ಯತೆ ಹೆಚ್ಚು, ಹಾಗಾಗಿ ನಾನು ‘ದೀಪಕ್ ರಾಗ’ವನ್ನು ಹಾಡುವುದಿಲ್ಲ ಎಂದು ತಿಳಿಸಿದನು. ಆದರೆ ರಾಜ ಅಕ್ಬರನು ನೀನು ದೀಪಕ್ ರಾಗವನ್ನು ಹಾಡಲೇಬೇಕು ಅಂತ ಒತ್ತಾಯ ಮಾಡಿದಾಗ ತಾನ್ಸೇನ್ ನು 15 ದಿನಗಳ ಕಾಲಾವಕಾಶವನ್ನು ಕೇಳಿಕೊಂಡನು. ತಾನ್ಸೇನ್ ನು ದೀಪಕ್ ರಾಗ ಹಾಡಿ ಮುಗಿಸಿದ ಕೂಡಲೆ ಅವನ ದೇಹದ ತಾಪಮಾನ ಜಾಸ್ತಿ ಆಗಿ ತಾನು ಉರಿದು ಹೋಗುವ ಮುನ್ನ ಯಾರಾದರು ಮಳೆ ಬರಿಸುವಂತಹ ‘ ಮೇಘ ಮಲ್ಹರ್’ ಎಂಬ ರಾಗವನ್ನು ಹಾಡಬೇಕು. ಅದನ್ನು ಹಾಡಿದರೆ ವಾತಾವರಣ ತಂಪಾಗಿ ತಾನ್ಸೇನ್ ನ ಜೀವ ಉಳಿಯಬಹುದು. ಹಾಗಾಗಿ ತಾನ್ಸೇನ್ ನು ಆ ರಾಗವನ್ನು ತನ್ನ ಮಗಳಿಗೆ(ಕೆಲವರ ಪ್ರಕಾರ ಅವನ ಪತ್ನಿಗೆ) ಈ ‘ ಮೇಘ ಮಲ್ಹರ್’ ರಾಗ ಹೇಳಿಕೊಡುತ್ತಾನೆ. 15 ದಿನ ಕಳೆದು ರಾಜ ಅಕ್ಬರ್ ನ ಆಸ್ತಾನದಲ್ಲಿ ತಾನ್ಸೇನ್ ನು ‘ದೀಪಕ್ ರಾಗ’ ಹಾಡಲು ಎಲ್ಲ ಸಿದ್ಧತೆ ಮಾಡಿಕೊಂಡು ಹಾಡಲು ಶುರುಮಾಡಿದನು. ಅರಮನೆಯಲಿದ್ದ ಗಿಡ ಮರಗಳ ಎಲೆ ಎಲ್ಲ ಒಣಗಿ ಉದುರಿದವು, ಅರಮನೆ ಕೊಳದಲಿದ್ದ ನೀರು ಬೆಚ್ಚಗಾಗಿ ಕುದಿಯತೊಡಗಿತು, ಸುತ್ತ ಮುತ್ತಲಿದ್ದ ಹಕಿಗಳು ಹಾರಡ ತೊಡಗಿದವು ಇಡೀ ವಾತವರಣವು ಬಿಸಿಯಾಗಿ ಆಸ್ತಾನದ ಸುತ್ತ ಎಣ್ಣೆ ತುಂಬಿಸಿ ಇಟ್ಟಿದ್ದ ದೀಪಗಳೆಲ್ಲಾ ಒಮ್ಮೆಲೇ ‘ದಿಗ್’ ಎಂದು ಹತ್ತಿಕೊಂಡವಂತೆ!!!.

ತಾನ್ಸೇನ್ ನು ಕೂಡಲೇ ಹಾಡುವುದನ್ನು ನಿಲ್ಲಿಸಿ, ಆಸ್ತಾನದಿಂದ ಹಾಗು ಅರಮನೆಯ ಹೊರಗೆ ಓಡಿ ಊರ ಮಧ್ಯದಲ್ಲಿದ್ದ ಬಯಲಿನಲ್ಲಿ ನಿಂತನು. ಅಷ್ಟರಲ್ಲಾಗಲೇ ಅವನು ಹೇಳಿಕೊಟ್ಟ ‘ ಮೇಘ ಮಲ್ಹರ್’ ರಾಗವನ್ನು ಅವನ ಮಗಳು ಹಾಡಲಾರಂಭಿಸಿದ್ದಳಂತೆ. ಕೆಲ ಹೊತ್ತಿನಲ್ಲೇ ಜೋರಾಗಿ ಮಳೆಯಾಗಿ, ಇಡೀ ವಾತಾವರಣ ತಂಪಾಗಿ ತಾನ್ಸೇನ್ ನ ದೇಹದ ಉಷ್ಣವೂ ಕಡಿಮೆಯಾಗಿ ಅವನ ಜೀವ ಉಳಿದುಕೊಂಡಿತು.

ಈ ಕಥೆಯನ್ನು ಗುಜರಾತ್ ಕಡೆಯ ಜನಗಳು ಇನ್ನೊಂದು ರೀತಿ ಹೇಳುತ್ತಾರೆ. ತಾನ್ಸೇನ್ ನು ಆ ರೀತಿ ‘ದೀಪಕ್ ರಾಗ’ ಹಾಡಿ ದೀಪಗಳನ್ನು ಹತ್ತಿಸಿದ ಮೇಲೆ ದೇಹದ ಉಷ್ಣ ಜಾಸ್ತಿಯಾಗಿ ಅಕ್ಬರ್ ನ ಆಸ್ತಾನ ಬಿಟ್ಟು ಊರೂರು ಅಲೆಯುತ್ತ ‘ವದ್ ನಗರ’ಕ್ಕೆ ಬಂದನಂತೆ. ಅಲ್ಲಿ ‘ತನ’ ಮತ್ತು ‘ರಿರಿ’ ಎಂಬ ಇಬ್ಬರು ಚಿಕ್ಕ ಹುಡುಗಿಯರು ಇದ್ದರು.ಅವರು ಆ ಚಿಕ್ಕ ವಯಸ್ಸಿಗೆ ತುಂಬಾ ಚೆನ್ನಾಗಿ ಸಂಗೀತ ಕಲಿತಿದ್ದರಂತೆ. ಆ ಹುಡುಗಿಯರಿಗೆ ತಾನ್ಸೇನ್ ಎಂಬ ಮಹಾ ಸಂಗೀತಗಾರ ಈ ರೀತಿ ನರಳುತ್ತ ತಮ್ಮ ಊರಿಗೆ ಬಂದಿರುವ ವಿಷಯ ಗೊತ್ತಾಗಿ ಅವನ ಬಳಿ ಹೋಗಿ ‘ ಮೇಘ ಮಲ್ಹರ್’ ರಾಗ ಹಾಡಿ ಅವನ ವ್ಯಾಧೆಯನ್ನು ದೂರ ಮಾಡಿ ಅವನ ಜೀವ ಉಳಿಸಿದರಂತೆ. ಈ ವಿಷಯ ಅಕ್ಬರ್ ನ ಕಿವಿಗೆ ಬಿದ್ದು ಅವನು ಆ ಇಬ್ಬರು ಹುಡುಗಿಯರನ್ನು ತನ್ನ ಆಸ್ತಾನಕ್ಕೆ ಕರೆಸಲು ಅಪ್ಪಣೆ ಮಾಡಿ, ಆ ಹುಡುಗಿಯರು ಬರಲು ಒಪ್ಪದಿದ್ದಾಗ ಸೈನಿಕರನ್ನು ಕಳುಹಿಸಿ ಬಲವಂತವಾಗಿ ಕರೆತರಲು ನಿರ್ಧರಿಸಿದನು. ಈ ವಿಷಯ ‘ತನ’ ಮತ್ತು ‘ರಿರಿ’ ಗೆ ಗೊತ್ತಾಗಿ ‘‘ತಾವು ಹಾಡುವುದೇನಿದ್ದರು ಅದು ದೇವರಿಗೆ ಮಾತ್ರ, ಡೆಲ್ಲಿ ಸುಲ್ತಾನರಿಗೆ ಅಲ್ಲ!’’ ಅಂತೆ ಹೇಳಿ ಇಬ್ಬರು ಆ ಊರಿನ ಮಧ್ಯದಲ್ಲಿ ಇದ್ದ ಬಾವಿಗೆ ಹಾರಿ ಪ್ರಾಣ ತ್ಯಜಿಸಿದರಂತೆ. ಅ ಊರಿನವರು ಅ ಬಾವಿ ಸುತ್ತ ಸುಂದರ ಉದ್ಯಾನವನವನ್ನು ಕಟ್ಟಿದ್ದಾರೆ. ಅಹಮದಾಬಾದ್ ನಿಂದ 60 Kms ದೊರದಲ್ಲಿರು ಈ ‘ವದ್ ನಗರ’ದಲ್ಲಿರೋ ಆ ಬಾವಿ ಇವತ್ತಿಗೂ ಒಂದು ಪ್ರೇಕ್ಷಣಿಯ ಸ್ಥಳವಾಗಿದೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಯವರು ಆ ‘ವದ್ ನಗರ’ ಊರಿನವರೇ. ತಾನ್ಸೇನ್ ಬಗ್ಗೆ ಅನೇಕ ಚಲನ ಚಿತ್ರ ಗಳು ಬಂದಿವೆ. 1943 ರಲ್ಲಿ ಜಯಂತ ದೇಸಾಯಿ ನಿರ್ದೆಶಿಸಿದ್ದ ‘’ತಾನ್ಸೇನ್’’ ಚಿತ್ರಕ್ಕೆ ಕೇಂ ಚಂದ್ ಪ್ರಕಾಶ್ ಅದ್ಬುತ ಸಂಗೀತ ನೀಡಿದ್ದರಂತೆ. ಆ ಚಿತ್ರದ ಒಂದು ಹಾಡದ ‘ ಜಗ ಮಗ್ ಜಗ ಮಗ್ ದಿಯಾ ಜಲವೋ…’ ಎಂಬ ಹಾಡಿನಲ್ಲಿ ‘ದೀಪಕ್ ರಾಗ’ ಅಳವಡಿಸಲಾಗಿದೆಯಂತೆ. ತಕ್ಷಣ ಆ ಹಾಡನ್ನು ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ಕೇಳಿದೆ. 2-3 ಬಾರಿ ಕೇಳಿದಾಗ ಮೇಲೆ ಹಾಡೇನೋ ಇಷ್ಟವಾಯಿತು ಆದರೆ ಬೇಸಿಗೆ ಶೆಕೆಯ ಕಾರಣ ಬಂದ ಬೆವರು ಬಿಟ್ಟರೆ, ನನಗೆ ವಾತಾವರಣ ಬಿಸಿಯಾದ ಯಾವ ಅನುಭವ ಬರಲಿಲ್ಲ!. ತಾನ್ಸೇನ್ ನು ದುರ್ಬರಿ ಕನಡ, ಮಿಯನ್ ಕಿ ತೋಡಿ, ಮಿಯನ್ ಕಿ ಮಲ್ಹರ್, ಮಿಯ ಕಿ ಸಾರಂಗ್ ಅನ್ನೋ ರಾಗ ರಚಿಸಿದ್ದಾನೆ. ಪ್ರಖ್ಯಾತ ದ್ರುಪದ ಶೈಲಿಯಲ್ಲಿ ಹಾಡುವುದನ್ನು ಮೊದಲಿಗೆ ಶುರು ಮಾಡಿದ್ದೂ ತಾನ್ಸೇನ್ ನನೆ ಅನ್ನುತ್ತಾರೆ. ತಾನ್ಸೇನ್ ನು 1589 ರಲ್ಲಿ ಮರಣ ಹೊಂದಿದ ನಂತರ ಅವನನ್ನು ಗ್ವಾಲಿಯರ್ ನಲ್ಲಿರುವ ಅವನ 2ನೇ ಗುರು ಮೊಹಮ್ಮೆದ್ ಘಾಸ್ ನ ಸಮಾಧಿ ಹತ್ತಿರ ಮಣ್ಣು ಮಾಡಿದರಂತೆ. ತಾನ್ಸೇನ್ ನ ಮರಣದ ಸಮಯದಲ್ಲಿ ಅಕ್ಬರ್ ಅವನ ಪಕ್ಕದಲ್ಲಿದನಂತೆ.


ತಾನ್ಸೇನ್ ನ ಸಮಾದಿ ಪಕ್ಕ ಒಂದು ಹುಣಸೇ ಮರ ಇದೆ. ಆ ಮರದ ಎಲೆಯನ್ನು ಜಿಗಿದರೆ ಯಾರಾದರು ಸರಿ, ಅವರ ಧ್ವನಿ ಸುಧಾರಿಸುವುದು ಅಂತ ಇವತ್ತಿಗೂ ಜನ ನಂಬುತ್ತಾರೆ. ಪ್ರತಿವರ್ಷ ಡಿಸೆಂಬರ್ ನಲ್ಲಿ ಗ್ವಾಲಿಯರ್ ನಲ್ಲಿ ಒಂದು ವಾರ್ಷಿಕ ಸಂಗೀತೋತ್ಸವ ವನ್ನು ತಾನ್ಸೇನ್ ನ ನೆನಪಿಗೋಸ್ಕರ ನಡೆಸುತ್ತಾರೆ. ಏನೇ ಹೇಳಿ ನಮ್ಮ ಭಾರತದಲ್ಲಿ ಇಂತಹ ಒಬ್ಬ ಮಹಾನ್ ಸಂಗೀತಗಾರನಿದ್ದ ಅನ್ನೋದೆ ಒಂದು ಹೆಮ್ಮೆಯ ವಿಷಯ.
ಇಷ್ಟೆಲ್ಲಾ ಇಂಟರ್ನೆಟ್ನಲ್ಲಿ ಬ್ರೌಸ್ ಮಾಡಿ ಮುಗಿಸಿದಾಗ 11.45 Pm ಆಗಿತ್ತು. ಒಂದುವರೆ ಗಂಟೆ ಕಂಪ್ಯೂಟರ್ ಮಾನಿಟರ್ ನೋಡಿ.. ನೋಡಿ.. ಕಣ್ಣು Strain ಆಗಿತ್ತು. Comp ಆಫ್ ಮಾಡಿ, ಲೈಟ್ ಎಲ್ಲಾ ಆಫ್ ಮಾಡಿ ಮಲಗಿದ 7-8 ನಿಮಿಷದಲ್ಲಿ ಕರೆಂಟ್ ಹೊಯೀತು. ಫ್ಯಾನ್ ಆಫ್ ಆಗೀ ಶೆಕೆ ಶುರು ಅಯೀತು... ಸರಕಾರ ಹಾಗು ಕೆ.ಯಿ.ಬಿ.ಯವರನ್ನು ಶಪಿಸಿ, ತಾನ್ಸೇನ್ ಇದ್ದಿದ್ದರೆ ಅವನನ್ನು ಒಂದು ಕಡೆ ಕೂರಿಸಿ ಪವರ್ ಸ್ಟೇಷನ್ ನಲ್ಲಿದ್ದ Turbine ಗಳು ತಿರುಗುವಂತೆ ಹೊಸ ರಾಗ ಸೃಷ್ಟಿಸಿ, ಎಲ್ಲ ಪವರ್ ಸ್ಟೇಷನ್ ಗಳಲ್ಲೂ Loud Speaker ಹಾಕಿಸಿ ಆತನಿಂದ ಆ ರಾಗ ಹಾಡಿಸಬಹುದಿತ್ತಲ್ಲಾ ಎಂದೆನಿಸಿ ನಗು ಬಂದು ಹಾಗೆ ನಿದ್ರೆಗೆ ಜಾರಿದೆ.


Monday, May 3, 2010

ನಾನು ಮೊದಲ ಸಲ ಮೊಬೈಲ್ ನಲ್ಲಿ ‘ಹಲೋ’ ಅಂದಾಗ….

ಅವತ್ತು ಸೋಮವಾರ. 2 ದಿನದ ಹಿಂದೆ ಫಾರೆಸ್ಟ್ ಡಿಪಾರ್ಟ್ಮೆಂಟನ ಫಾರೆಸ್ಟರ್ ರೆಕ್ರೋಟಮೆಂಟ್ ಗೆ ಅಂತ ನಮ್ಮ ಮೈಸೂರ್ ನಲ್ಲಿ ಇರೋ ರೇಸ್ ಕೋರ್ಸ್ ನಲ್ಲಿಯ 2 Kms ಟ್ರ್ಯಾಕ್ ನಲ್ಲಿ 12 1/2 ರೌಂಡ್ಸ್ ನ ಫಿಸಿಕಲ್ ಟೆಸ್ಟ್ ಗೆ ಅಂತ ಓಡಿ, ಮಾರನೆ ದಿನ ಅಂದ್ರೆ ಭಾನುವಾರ ನಜರ್ಬಾದ್ ಹತ್ತಿರ ಇರೋ ಪೋಲಿಸ್ ಅಕಾಡೆಮಿಯಲ್ಲಿ ರಿಟನ್ ಟೆಸ್ಟ್ ಬರೆದಾಗಿತು. ಫಿಸಿಕಲ್ ಟೆಸ್ಟ್ ದಿನ ಡಾಕ್ಯುಮೆಂಟ್ ವೆರಿಫಿಕೇಷನ್ ಮಾಡಿದ್ದರು, ಬಟ್ ನನ್ನ ಒರಿಜಿನಲ್ ಸರ್ಟಿಫಿಕೆಟ್ಸ್ ಎಲ್ಲಾ N I E ಕಾಲೇಜ್ ನವರಿಗೆ ಸರಂಡರ್ ಮಾಡಿದ್ದರಿಂದ ಡಿಪಾರ್ಟ್ಮೆಂಟನವರು ನಂಗೆ ನನ್ನ ಒರಿಜಿನಲ್ ಡಾಕ್ಯುಮೆಂಟ್ಸ್ನ ಸೋಮವಾರ ತೋರಿಸಲು ಹೇಳಿದ್ದರು. So ಅವತ್ತು ಅಮ್ಮ ಮಾಡಿದ್ದ ಉಪ್ಪಿಟ್ಟು ತಿಂದು ನನ್ನ ಗಾಡಿ ಹೀರೋ ಪುಚ್ 2G ಯಲ್ಲಿ ಅರಣ್ಯ ಭವನಕ್ಕೆ ಹೋಗಿ ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ನೆಲ್ಲ ತೋರಿಸಿ ವಾಪಸ್ಸು ಮನೆಗೆ ಬಂದಾಗ 11.30ಆಗಿತ್ತು. ಅವಾಗ ಅಂದ್ರೆ 2004 ರಲ್ಲಿ ನಾವು ಇನ್ನು ಓದುತ್ತಾ ಇದ್ದೆವು, ಮೊಬೈಲ್ ಆಗಷ್ಟೇ ಮಾರ್ಕೆಟ್ ಗೆ ಬಂದಿತ್ತು. ಎಲ್ಲೊ ತೀರ ರಿಚ್ & ಪಾಶ್ ಹುಡುಗರು ಅಥವಾ ಹುಡುಗೀರ ಹತ್ತಿರ ಮಾತ್ರ ಮೊಬೈಲ್ ಇತ್ತು. ಇನ್ ಕಮ್ಮಿಂಗ್ ಕಾಲಿಗೂ ಕೂಡ ದುಡ್ಡು ಕಟ್ ಆಗುತ್ತಿದ್ದ ಕಾಲ ಅದು. ನಾವಂತೂ ಯಾರ ಜೊತೆ ಮಾತನಾಡಬೇಕಾದರು ಲ್ಯಾಂಡ್ ಲೈನ್ ನೇ ಉಪಯೋಗಿಸಬೇಕಾಗಿತ್ತು. ಅವಗಂತೂ ನಮ್ಮ ಫ್ರೆಂಡ್ಸ್, ರಿಲೇಟಿವ್ಸ್ ಎಲ್ಲರ ಮನೆ ಲ್ಯಾಂಡ್ ಲೈನ್ ನಂಬರ್ ಗಳು ಬಾಯಲ್ಲಿ(ನೆನಪಿನಲ್ಲಿ) ಇರುತ್ತಿದ್ದವು (ನಂಬರ್ ಗಳು ಕೂಡ ಈಗಿನ ಮೊಬೈಲ್ ತರಾ 10 ಡಿಜಿಟ್ ಆಗಿರದೆ ಬಾರೆ ೬ ಡಿಜಿಟ್ಸ್ ಮಾತ್ರ ಇತ್ತು). ಸರಿ ಅಮ್ಮ ಹೊರಗೆ ಕೂತು ಮಧ್ಯಾನದ ಅಡಿಗೆಗೆ ಅಕ್ಕಿ ಆರಿಸ್ತ ಇದ್ದರು, ನಾನು ಅಮ್ಮನ ಜೊತೆ ಅದು-ಇದು ಮಾತಾಡುತ್ತ ಕೂತಿದ್ದೆ. ನಮ್ಮ ಲ್ಯಾಂಡ್ ಲೈನ್ ಫೋನ್ ರಿಂಗ್ ಅಯೀತು. ಹೋಗಿ ನಾನೆ ರಿಸೀವ್ ಮಾಡಿ ‘ಹಲೋ...’ ಅಂದೆ.- ನನ್ನ ಇಂಜಿನಿಯರಿಂಗ್ ಕ್ಲಾಸ್ ಮೆಟ್ ಅಶ್ರೀಥ್ ಪ್ರಾಣೇಶ್ ಆ ಕಡೆ ಲೈನ್ ನಲ್ಲಿ ಇದ್ದ. ಅವನು ‘ಸುಧಾ ಲೇ.. ಫಂಕ್ಷನ್ ಗೆ ಬರ್ತೀಯೋ... ಇಲ್ಲವೋ? ’ ಅಂದ ತಕ್ಷಣ ನೆನಪಾಯಿತು ಇವತ್ತು ಅವನ ಅಕ್ಕ ಹಾಗು ಭಾವ ಮಂಡ್ಯದ ಗುತ್ತಲು ಕಾಲೋನಿಯಲ್ಲಿ ಹೊಸದಾಗೀ ಕಟ್ಟಿದ್ದ ಮನೆ ಗೃಹಪ್ರವೇಶ ಅಂತ. ಒಂದು ವಾರದ ಹಿಂದೆನೇ ಇನ್ವೈಟ್ ಮಾಡಿದ್ದ. ನನಗೆ ಮರೆತು ಹೋಗಿತ್ತು. ನಾನು ‘ಲೋ ನೆನ್ನೆನಾದರು ನೆನಪು ಮಾಡೋದಲ್ಲವಾ?..., ಮಧ್ಯಾನ ಆಗ್ತಾ ಬಂತು... ಏನ್ ಮಾಡ್ಲಿ?’ ಅಂದೆ. ಅವನು ‘ ಲೋ ಮಗ ಮಂಡ್ಯ ಏನ್ ಬರಿ 40 Kms ಮೈಸೂರಿಂದ. ಬಾರಲಾ... ಸಂಜೆ ಬೇಗ ಹೋಗೋವಂತೆ’ ಅಂದ. ನಾನು ಅವನ ಅಕ್ಕನ ಮನೆ ಎಲ್ಲಿ ಬರುತ್ತೇ ಅಂತ ಸರಿಯಾಗೀ ಡಿಟೈಲ್ಸ್ ಕೇಳಿಕೊಂಡು ಫೋನ್ ಇಟ್ಟೆ. ಸರಿ ನಾನು ನನ್ನ ಗಾಡಿ ಹೀರೋ ಪುಚ್ ನಲ್ಲೆ ಹೋಗೋಣ ಅಂತ ಡಿಸೈಡ್ ಮಾಡಿ ಅಮ್ಮನಿಗೆ ಮಂಡ್ಯಗೆ ಫಂಕ್ಷನ್ ಗೆ ಹೋಗಿ ಸಂಜೆ ಒಳಗೆ ಬರ್ತೀನಿ ಅಂತ ಹೇಳಿ ಹೊರಟೆ. ಅಮ್ಮಂಗೆ ಗಾಡಿಲೀ ಹೋಗೋ ವಿಷ್ಯ ಹೇಳಲಿಲ್ಲ. ಯಾವಾಗಲು ಅಷ್ಟೇ ಎಲ್ಲಾದರು ಗಾಡಿಲಿ ಟ್ರಿಪ್ ಹೊರಟರೆ ಬಸ್ಸಲ್ಲಿ ಅಂತ ಸುಳ್ಳು ಹೇಳಿ, ಬಂದ ಮೇಲೆ ನಿಜ ಹೇಳ್ತಾ ಇದ್ದೆ. ಮಧ್ಯಾನ 12.00 ಕ್ಕೆ ಮನೆ ಬಿಟ್ಟು ಯದು ಮನೆ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಯಾಕೋ ನನ್ನ ಮನಸ್ಸು ‘ಯದುನೂ ಕರ್ಕೊಂಡು ಹೋಗು’ ಅಂತ ಹೇಳಿತು. So ಗಾಡಿನ ಅವನ ಮನೆ ಮುಂದೆ ಸ್ಟಾಪ್ ಮಾಡಿ ಯದುನ ಕರೆದು ‘ಮಂಡ್ಯಗೆ ಬರ್ತೀಯಾ?’ ಅಂತ ಕೇಳಿದೆ. ಅವನು ಇವತ್ತು ಸಂಜೇನೆ ವಾಪಸ್ಸು ಬರಬೇಕು ಅನ್ನೋ ಕಂಡಿಷನ್ ಹಾಕಿ, ನಾನು ಅದಕ್ಕೆ ಒಪ್ಪಿದ ಮೇಲೆ ‘ಬರ್ತೀನಿ’ ಅಂತ ಹೇಳಿದ. ಅವನ ಮನೆಯಿಂದ ಹೊರಡೋ ಮುಂಚೆ ಅವನು ಕೂಗಿ ಹೇಳಿದ ‘ಅಮ್ಮ ಇಲ್ಲೇ ಹೋಗ್ಬರ್ತೀನಿ’ ಅಂತ. ನಾನು ತಿರುಗಿ ಅವನ ಮುಖ ನೋಡಿ ‘ಯಾಕಲಾ ಮಂಡ್ಯಗೆ ಹೋಗ್ಬರ್ತೀನಿ ಅಂತ ಹೇಳಲ್ಲವ?’ ಅಂದೆ. ಅದಕ್ಕೆ ಅವನು ‘ಏ... ನಡಿ ಮಗ… ಅವನ್ನೆಲ್ಲ ಹೇಳ್ತಾ ಕೂತ್ಕಳಕ್ಕೆ ಆಗಲ್ಲ…!!!’ಅಂದ.


ಸರಿ ನನ್ನ ಹೀರೋ ಪುಚ್ ನಲ್ಲಿ ನಾನು ಯದು ಮಂಡ್ಯ ಗೆ ಹೊರಟೆವು. ಹೀರೋ ಪುಚ್ ನಲ್ಲಿ ಮ್ಯಾಕ್ಷಿಮಮ್ಮ್ ಸ್ಪೀಡ್ 50-60 Kms ಅಷ್ಟೇ. ಇನ್ನು ಸ್ಪೀಡ್ ಆಗೀ ಓಡ್ಸಿದ್ರೆ ಗಡಿ ಫುಲ್ ಶೇಕ್ ಆಗ್ತಾ ಇತ್ತು. ಮಧ್ಯ ಶ್ರೀರಂಗಪಟ್ಟಣದಲ್ಲಿ ಒಂದು ಪಿಟ್ ಸ್ಟಾಪ್ ಕೊಟ್ಟು ಮಧ್ಯಾನ 1.45 ಕ್ಕೆ ಪ್ರಾಣೇಶ್ ನ ಅಕ್ಕನ ಮನೆ ಹತ್ತಿ ಹೋದೆವು. ಪ್ರಾಣೇಶ ಫುಲ್ ಖುಷಿ ಆಗೀ ‘ಅಂತೂ ಬಂದಲ್ಲ ಮಗ...’ ಅಂದ. ಪ್ರಾಣೇಶ ಅವನ ಮನೆಯವರಿಗೆ ಪರಿಚಯ ಮಾಡಿಸಿ ಒಳ್ಳೆ ಊಟ ಹಾಕಿಸಿದ. ಆಮೇಲೆ ಸುಮಾರೋತ್ತು Exam, ಕಾಲೇಜು, Result ಅಂತೆಲ್ಲಾ ಮಾತಾಡಿ, ನಾನು ಅವನಿಗೆ ‘ಸರಿ ಮಗ ಹೊರಟೆ...’ ಅಂದೆ. ಅವನು ‘ಲೋ ಇವತ್ತು ಇಲ್ಲೇ ಇರೋ ಮಗ...’ ಅಂತ ಹಿಂಸೆ ಮಾಡಲು ಶುರು ಮಾಡಿದ. ಸರಿ ನಾನು ಅವನ ಹಿಂಸೇನ ತಡಿಲಾರದೆ ‘ಇಲ್ಲ ಮಗ ಇಲ್ಲೇ ಮಂಡ್ಯದಿಂದ 10 Kms ದೂರದಲ್ಲಿ ನನ್ನ ದೊಡ್ಡಮ್ಮನ ಊರು ಲೋಕಸರ ಇದೆ, ಅಲ್ಲಿಗೆ ಹೋಗಬೇಕು...’ಅಂತ ಸುಳ್ಳು ಹೇಳಿ ಯದುನ ಕರ್ಕೊಂಡು ಮಂಡ್ಯ ಸಿಟಿ ಹತ್ತಿರ ಬಂದೆ. ಯಾಕೋ ಮನಸ್ಸಿನಲ್ಲಿ ನಿಜವಾಗಲು ಯಾಕೆ ನಾನು ದೊಡ್ಡಮ್ಮನ ಊರಿಗೆ ಹೋಗಬಾರದು ಅಂತ ಅನ್ನಿಸಿತು. ಯದು ಕೇಳಿದರೆ ಅವನು ‘ ಮಗ ನನ್ನ ಮೈಸೂರು ಬಸ್ಗೆ ಹತ್ತಿಸಿ ನೀನು ಒಬ್ಬನೇ ಹೊಗಲ...’ ಅಂತ ಅನ್ನೋಕೆ ಶುರು ಮಡಿದ. ನಾನು ಅದಕ್ಕೆ ‘ಮಗ ಯಾರಿಗದ್ರು ನಮ್ಮ ಫ್ರೆಂಡ್ಸ್ ಗೆ ಕಾಲ್ ಮಾಡಿ ನಿನ್ನ ಮನೆಗೆ ಏನೋ ಎಮರ್ಜೆನ್ಸಿ ಬಂದು ಯದು ಬೆಂಗಳೂರಿಗೆ ಹೋದ... ಅಂತ ತಿಳಿಸೋಕೆ ಹೇಳೋಣ ಬಿಡು....’ ಅಂತ ಹೇಳಿ ಕಷ್ಟ ಪಟ್ಟು ಒಪ್ಪಿಸಿದ್ದಾಯಿತು (ಯದು ಮನೇಲಿ ಲ್ಯಾಂಡ್ ಲೈನ್ ಫೋನ್ ತೆಗೆಸಿಬಿಟ್ಟಿದ್ದರು). ಹಾಗೆ ನಮ್ ಫ್ರೆಂಡ್ ವಿಕ್ಕಿ ಗೆ ಕಾಲ್ ಮಾಡಿ ಯದು ಮನೆಗೆ ವಿಷಯ ತಿಳಿಸಲು ಹೇಳಿದೆನು. ಅಮೇಲೆ ನನ್ನ ಮನೆಯ ಲ್ಯಾಂಡ್ ಲೈನ್ ಗೆ ಕಾಲ್ ಮಾಡಿ ಅಮ್ಮನಿಗೆ ಇವತ್ತು ಲೋಕಸರಕ್ಕೆ ಹೋಗಿ Halt ಅಗೀದ್ದು ನಾಳೆ ಸಂಜೆ ಬರ್ತೀನಿ ಅಂತ ತಿಳಿಸಿದೆ. ನಾನು & ಯದು ಊರಿಗೆ ಸ್ವಲ್ಪ ಲೇಟ್ ಆಗೀ ಹೋಗೋಣ ಅಂತ ಡಿಸೈಡ್ ಮಾಡಿ ಅಲ್ಲೇ ಸ್ವಲ್ಪ ಸುತ್ತಲು ನಿರ್ದರಿಸಿದೆವು. ಆ ರೀತಿ ಮಾಡಲು ಒಂದು ಕಾರಣ ಇತ್ತು. 2004 ರಲ್ಲಿ ನನಗೆ ಮಂಡ್ಯದ ಒಂದು ಹುಡುಗಿ ಮೇಲೆ ಕ್ರಶ್(Crush) ಆಗಿತು!!!. ಅವಳನ್ನು ನೋಡಲು ಸಾಕಷ್ಟು ಬಾರಿ ಮಂಡ್ಯ ಗೆ ಹೋಗಿಬಂದಿದ್ದೆ. So ನಾನು ಯದು ಸುತ್ತುವಾಗ ಅವಳು By chance ಸಿಕ್ಕಿದ್ರೆ! ಅಂತ ಲೇಟ್ ಆಗೀ ಹೊರಡೋಣ ಅಂತ ಯದುಗೆ ಹೇಳಿದೆ. ಮಂಡ್ಯ ಪೇಟೇ ಬೀದಿಲಿ ಯಾವುದೂ ಸ್ಟುಡಿಯೋ ಮುಂದೆ “10 ರೊಪಾಯಿಗೆ 20 ಪಾಸ್ಪೋರ್ಟ್ ಫೋಟೋ” ಅಂತ ಬೋರ್ಡ್ ಹಾಕಿದ್ದರು. ನಾನು ಯದು ಮುಖ ಮುಖ ನೋಡಿಕೊಂಡು ಅಲ್ಲಿ ಅಂಗಡಿಗೆ ಹೋಗಿ ವಿಚಾರಿಸಿದೆವು. ಅಂಗಡಿಯವನು ಈಗ ಫೋಟೋ ತೆಗೆದರೆ ನಾಳೆ ಸಿಗತ್ತೆ ಅಂದ. ಸರಿ ನಾವು ಯಾಕೆ ಟ್ರೈ ಮಾಡಬಾರದು ಅಂತ ಡಿಸೈಡ್ ಮಾಡಿ ಅಲ್ಲೇ ಇದ್ದ ಬೋರ್ ವೆಲ್ ನಲ್ಲಿ ಮುಖ ತೊಳೆದು. ನೀಟ್ ಆಗೀ ತಲೆ ಬಾಚಿ ಫೋಟೋ ಗೆ ಫೋಸು ನೀಡಿ ಅಡ್ವಾನ್ಸ್ ಅಂತ ಇಬ್ಬರಿಂದ ರೂ 10 ನೀಡಿ ಅಲ್ಲಿಂದ ಲೋಕಸರಕ್ಕೆ ಹೊರೆಟೆವು. ಹೊರಟಾಗ ಕತ್ತಲೆಯಾಗಿತ್ತು. ಸಮಯ ರಾತ್ರಿ ಸುಮಾರು 7.15 ಆಗಿತ್ತು. ಮಂಡ್ಯದಿಂದ ಲೋಕಸರಕ್ಕೆ ‘ಮಂಗಲ’ ಎಂಬ ಗ್ರಾಮ ದಾಟಿ ಹೋಗಬೇಕು. ಚಿಕ್ಕ ತಾರು ರಸ್ತೆ. ಎರಡು ಕಡೆ ಕಬ್ಬಿನ ಗದ್ದೆ. ಕಣ್ಣಿಗೆ ಏನು ಕಾಣಿಸದಷ್ಟು ಕಗ್ಗತ್ತಲು. ಒಂದು ಕ್ಷಣ ಯಾಕೋ ನಂಗೂ ಯದುಗೂ ಹೆದರಿಕೆ ಅಯೀತು. ನನಗಂತು ಇಂತ ಟೈಮ್ ನಲ್ಲಿ ಬರಿ ಕೆಟ್ಟ ಯೋಚನೆಗಳೇ ಬರುತ್ತವೆ ‘ಟೈರ್ ಪಂಕ್ಚರ್ ಆದರೆ ಏನ್ ಮಾಡೋದು?...’ ‘ಯಾರದ್ರು ಅಡ್ಡ ಹಾಕಿ ನಮ್ಮತ್ತಿರ ಇರೋದೆಲ್ಲ ಕಿತ್ತುಕೊಂಡು ಹೋದರೆ ಏನ್ ಮಾಡೋದು?...’ ಹಾಗೆ ಹೀಗೆ ಯೋಚನೆ ಮಾಡ್ತಾ ದಾರಿ ಸವೆಸಿ, ಊರಿನ ಮುಂದೆ ಇದ್ದ ಕಾಲುವೆ ಹಾಗು ಸೇತುವೆ ದಾಟಿ ದೊಡ್ಡಮ್ಮನ ಮನೆಗ ಬಂದಾಗ ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯ!. ನಮ್ಮಣ್ಣ ರಾಜೇಶ ‘ಲೋ ಲೋಕು ಏನ್ ಸಡನ್ ಆಗಿ, ಅದು ಇಷ್ಟು ಹೊತ್ತಿನಲ್ಲಿ?!’ ಅಂತ ಕೇಳಿದ. ಉಳಿದವರು ಅಂದ್ರೆ ನನ್ನ ತಂಗಿರು, ನನ್ನ ಅಕ್ಕ, ದೊಡ್ಡಮ್ಮ, ಭಾವ ಕೂಡ ಅದೆ ಪ್ರಶ್ನೆ ಕೇಳೋ ಹಾಗೆ ನೋಡಿದರು. ನಾನು ಅದಕ್ಕೆ ‘ಏನ್ ಇಲ್ಲಾ... ಮಂಡ್ಯದಲ್ಲಿ ಫ್ರೆಂಡ್ ಮನೆ ಗೃಹ ಪ್ರವೇಶ ಇತ್ತು, ಅಲ್ಲಿಂದ ಹೊರಡೋದು ಲೇಟ್ ಅಯೀತು. ಹಾಗೇ ನಿಮ್ಮನೆಲ್ಲಾ ನೋಡಿಕೊಂಡು ಹಾಲ್ಟ್ ಆಗೀ ನಾಳೆ ಹೋಗೋಣ ಅಂದುಕೊಂಡು ಬಂದೆ’ ಅಂತ ಹೇಳಿದೆ. (ಯದುನ 2 ವರ್ಷದ ಹಿಂದೆ ರಾಕಾಸಮ್ಮ ಹಬ್ಬಕ್ಕೆ ಇದೇ ಊರಿಗೆ ಕರೆದುಕೊಂಡು ಬಂದಿದ್ದರಿಂದ ಅವನನ್ನು ಪರಿಚಯ ಮಾಡಿಸುವ ಅವಶ್ಯಕತೆ ಬಿಳಲಿಲ್ಲ).


ಸರಿ ನನ್ನ ಅಕ್ಕ ಸವಿತಾ ಒಳ್ಳೆ ಮುದ್ದೆ & ಹುರಳಿ ಉಪ್ಪಿನ ಸಾರು ಮಾಡಿ ಕೊಟ್ಟಳು. ಅದ್ಬುತವಾಗಿತ್ತು!!! ಊಟ ಮಾಡಿ ಎಲ್ಲರು ಮಲಗಿದರು. ನಾನು ಯದು ಮಲಗಿರುವಾಗ ಅವನು ಇದ್ದಕ್ಕಿದ್ದಂತೇನೆ ‘ಮಗ ಇಲ್ಲಿಂದ ಬೆಂಗಳೂರು ಎಷ್ಟು Kms?’ ಅಂತ ಕೇಳಿದ. ಅದಕ್ಕೆ ನಾನು ‘ಯಾಕೋ ಮಗ...?’ ಅಂದೆ. ಅದಕ್ಕೆ ಅವನು ‘ಬೆಂಗಳೂರಿನ ನಾಗರಬಾವಿಯಲ್ಲಿರೋ ನನ್ನ ಕಸಿನ್ ಅನಿಲ ಒಂದು ಮೊಟರೋಲಾ ಮೊಬೈಲ್ ಸೆಟ್ ಇಟ್ಟುಕೊಂಡಿದ್ದಾನೆ. ಬೆಂಗಳೂರುಗೆ ಬಂದ್ರೆ ಅದನ್ನ ನನಗೆ ಕೊಡ್ತೀನಿ ಅಂತ ಪ್ರಾಮಿಸ್ ಮಾಡಿದ್ದ. ಅದಕ್ಕೆ ಏನ್ ನಾಳೆ ಬೆಂಗಳೂರುಗೆ ಹೋಗಿ ಬಂದುಬಿಡೋಣ?!!!’ ಅಂದ. ನಾನು ಯೋಚನೆ ಮಾಡಿದೆ ಮೈಸೂರ್ ಗೆ ಹೋಗಿ ಮಾಡೋ ಕೆಲಸನಾದರು ಏನು...? ಬೆಂಗಳೂರುಗೆ ಹೋಗಿಬರೋಣ ಅಂತ ಅಂದುಕೊಂಡು ‘ಸರಿ ಮಗ ಹೋಗೋಣ... ಆದರೆ ಬಸ್ ಚಾರ್ಜ್?.... ಒಂದು ಕಡೆಗೆ ಆಗುತ್ತೆ.. ರಿಟರ್ನ್ ಬರೋಕೆ ದುಡ್ಡು ಇಲ್ಲವಲ್ಲ’ಅಂದೆ. ಅದಕ್ಕೆ ಯದು ‘ಲೋ ನನ್ನ ಕಸಿನ್ ಅನಿಲ್ ಕೊಡ್ತಾನೆ ಬಿಡಲಾ...’ಅಂದ. ಸರಿ ರಾತ್ರಿ ಮಲಗೀ ಬೆಳಿಗ್ಗೆ ಬೇಗ ಎದ್ದೆವು. ದೊಡ್ಡಮ್ಮ ಮತ್ತು ನನ್ನ ಅಕ್ಕಂದಿರು ಅಲ್ಲೇ ಊರಿನಲ್ಲಿ ಒಂದು ದಿನ ಊಳಿಯೂಕೆ ಎಷ್ಟು ಹಿಂಸೆ ಮಾಡಿದರು, ಬೆಂಗಳೂರಿನಲ್ಲಿ ಒಂದು Important ಫಂಕ್ಷನ್ ಇದೆ ಅಂತ ಹೇಳಿ ನಾವಿಬ್ಬರು ಬೆಳಿಗ್ಗೆ 6.30ಕ್ಕೆ ಹೊರಟುಬಿಟ್ಟೆವು. ಮಂಡ್ಯಗೆ ಹೋಗಿ ಅಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ಗಾಡಿ ಪಾರ್ಕ್ ಮಾಡಿ, ಬಸ್ ಹತ್ತಿ ಬೆಂಗಳೂರುಗೆ ಹೋಗೋಣ ಅಂತ ರಾತ್ರಿ ಪ್ಲಾನ್ ಮಾಡಿದ್ದೇವು. ಮಂಡ್ಯಗೆ ಬರುವಾಗ ‘ಮಂಗಲ’ ದಾಟಿ ಮುಂದೆ ಬಂದರೆ ಅಲ್ಲೇ ‘ಹನಿಯಂಬಾಡಿ’ ಅನ್ನೋ ಇನ್ನೊಂದು ಊರು ಇದೆ. ಅಲ್ಲಿ ಒಂದು ಸ್ಟಾಪ್ ಕೊಟ್ಟು, ಅಲ್ಲೇ ಒಂದು ಶೆಡ್ಡು ಹೋಟೆಲ್ ನಲ್ಲಿ ನಾನು ಯದು ಟೀ ಕುಡಿಯುತ್ತ ನಿಂತೆವು. ಟೀ ಕುಡಿವಾಗ ನಾನು ‘ಮಗ ಏನ್ಲಾ.. ನೆನ್ನೆ ಮಧ್ಯಾನ ದಿಂದ ಸಂಜೆವರೆಗೂ ಮಂಡ್ಯ ಬೀದಿ ಬೀದಿ ಸುತ್ತಿದರು ಅವಳು ಸಿಗಲಿಲ್ಲವಲ್ಲೋ?...’ ಅಂದೆ. ಯದು ಅದಕ್ಕೆ ‘ಬೇಜಾರ್ ಮಾಡ್ಕೋಬೇಡ ಬಿಡು ಮಗ...’ಅಂದ. ನಾನು ‘ಲೋ ಯದು ಯಾಕೊ ನನ್ನ ಮನಸ್ಸು ಹೇಳ್ತಾ ಇದೆ ಅವಳು ಈಗ ಸಿಗ್ತಾಳೆ ಅಂತ’ ಅಂದೆ. ಯದು ತಕ್ಷಣ ‘ಅದು ಹೇಗೆ ಅಷ್ಟು ಗ್ಯಾರೆಂಟಿಯಾಗಿ ಹೇಳ್ತೀಯ ಮಗ?’ ಅಂದ. ‘ಅದನ್ನೇ ಮಗ 6th ಸೆನ್ಸ್ ಅನ್ನೋದು...’ ಅಂತ ನಾನು ಯದುಗೆ ಹೇಳಿದೆ. ಸರಿ ಯದು ಯಾಕೋ ನಾನು ಅವಳನ್ನು ನೋಡದೆ ಬೇಜಾರ್ ಆಗಿರೋದರಿಂದ ಏನ್ ಏನೋ ಮಾತಾಡುತ್ತಾ ಇದ್ದೀನಿ ಅನ್ಕೋಕೊಂಡ ಅನ್ನಿಸುತ್ತದೆ. ಟೀ ಕುಡಿದ ಮೇಲೆ ಅಲ್ಲಿಂದ ಹೊರಟೆವು. ಗಾಡಿಯನ್ನು ಯದು ಓಡಿಸ್ತಾ ಇದ್ದ. ನಮ್ ಗಾಡಿ ಹೊಸಳ್ಳಿ ಬಿಟ್ಟು ಮಂಡ್ಯ ಎಂಟರ್ ಆಗಬೇಕು.ನಾನು ಇವತ್ತಿನವರೆಗೂ ಆಶ್ಚರ್ಯಪಡೋ ಅಂತ ಒಂದು ಸನ್ನಿವೇಶ ನಡೆದುಹೋಯಿತು. ಯದು ಗಾಡಿ ಓಡಿಸ್ತಾ ಇದ್ದ. ನಾನು ಮುಂದೆ ರೋಡ್ ನೋಡ್ತಾ ಇದ್ದೆ, ಇದ್ದಕಿದ್ದಂತೆ ಒಂದು 400 ರಿಂದ 500 ಮೀಟರ್ ದೂರದಲ್ಲಿ ಅವಳ ಗಾಡಿ ಕಾಣಿಸಿತು. ನನಗೆ ಆ ಕ್ಷಣ ‘ಶಾಕ್ ಆಫ್ ದಿ ಲೈಫ್’ ಅಯೀತು. ಇದೇನು ನನ್ನ ಭ್ರೆಮೆಯೇ ಅಂತ ಡೌಟ್ ಆಗೀ ಸರಿಯಾಗೀ ಇನ್ನೊಮ್ಮೆ ಕಣ್ಣು ಅರಳಿಸಿ ನೋಡಿದೆ. ಡೌಟೆ ಇಲ್ಲ. ಅವಳೇ!!! ಆದರೆ ಅವಳ ಹಿಂದ ಯಾರೋ ಕೂತಿದ್ದರು. ಸರಿ ತಕ್ಷಣ ಯದುಗೆ ‘ಮಗ ಸ್ವಲ್ಪ ಗಾಡಿ ನಿಲ್ಲಿಸೋ..’ ಅಂದೆ. ಯದು ‘ಯಾಕ್ ಮಗ?...ಏನಾದರು ಬಿದ್ದು ಹೊಯೀತಾ?’ ಅಂತ ಕೇಳಿದ. ನಾನು ‘ಲೋ ಫಸ್ಟ್ ಗಾಡಿ ನಿಲ್ಲಿಸೋ... ಅವಳು ನಮ್ಮ ಮುಂದೆನೆ ಬರ್ತಾ ಇದ್ದಾಳೆ…’ ಅಂದೆ. ಯದು ತಕ್ಷಣ ಗಾಡಿನಾ ಸೈಡ್ ಗೆ ಹಾಕಿ ‘ಏನ್ ಮಗ ತಮಾಷೆ ಮಾಡ್ತಾ ಇದ್ದೀಯ?... ಎಲ್ಲಿ ಅವಳು ತೋರಿಸು?’ ಅಂದ. ಅಷ್ಟರಲ್ಲಿ ಅವಳು ಮಂಡ್ಯದ ಮೇನ್ ರೋಡ್ ಗೆ ಜಾಯಿನ್ ಆಗೀ ಬಿಟ್ಟಳು. ಸರಿ ನಾನು ಯದುಗೆ ‘ ಮಗ ಜಸ್ಟ್ ಪಾಸ್ ಅದಳು ಕಣ್ಲ… ಅವಳ ಹಿಂದೆ ಯಾರೋ ಕೂತಿದ್ದರು… ಎಲ್ಲೊ ಏನೋ ತರೋದಿಕ್ಕೆ ಹೋಗಿರಬಹುದು, ಒಂದು ಕೆಲಸ ಮಾಡಣ... ಮುಂದೆ ಯಾವುದಾದ್ರು ಟೀ ಅಂಗಡಿಲೀ ಟೀ ಕುಡಿತಾ ನಿಲ್ಲೋಣ... ವಾಪಸ್ಸು ಇದೇ ದಾರಿಲಿ ಬರಬಹುದು’ ಅಂತ ಹೇಳಿದೆ. ನಂತರ ಇಬ್ಬರು ಟೀ ಅಂಗಡಿಗೆ ಹೋಗಿ ಸ್ಪೆಷಲ್ ಟೀಗೆ ಆರ್ಡರ್ ಮಾಡಿ ನಿಂತೆವು. ಸರಿಯಾಗೀ 15 ನಿಮಿಷ ಬಿಟ್ಟು ಅವಳು ವಾಪಸ್ಸು ಅದೇ ದಾರಿಲೀ ಬಂದಳು. ನಾನು ಅವಳು ನನ್ನ ಗಮನಿಸಲೀ ಅಂತ ಅಂಗಡಿಯಿಂದ ಹೊರಗೆ ನಿಂತಿದ್ದೆ. ಬಟ್ ಅವಳು ನನ್ನ ನೋಡದೆ ಹಾಗೆ ಪಾಸ್ ಆಗ್ತಾ ಇದ್ದಳು. ನಾನು ಕೂಡಲೆ ‘ರೀ……….’ ಅಂದೆ. ಸಧ್ಯ ತಿರುಗಿ ನೋಡಿದಳು!. ಒಂದು ಕ್ಷಣ ಅವಳ ಮುಖದಲ್ಲಿ ಫುಲ್ ಗಾಬರಿ & ಶಾಕಿಂಗ್ Expression!!!. ಗಾಡಿ ‘U’ Turn ಮಾಡಿ ಹತಿರ ಬಂದಳು ‘ಏನ್ರೀ ನೀವು...? ಇಷ್ಟು ಬೆಳಗ್ಗೆ.... ಅದು ನಮ್ಮೂರಲ್ಲಿ?...’ ಅಂತ ಕೇಳಿದಳು. ನಾನು ‘ಏನಿಲ್ಲ ರೀ... ನಮ್ಮ ಊರು ಇಲ್ಲೇ 10 Kms ದೂರದಲ್ಲಿದೆ. ಒಂದು ಫಂಕ್ಷನ್ ಇತ್ತು ಮುಗಿಸಿ ಈಗ ಬಂದೆ. ಬೆಂಗಳೂರುಗೆ ಹೋಗಬೇಕಿತ್ತು. ಹಾಗೆ ಇಲ್ಲೇ ನಾನು, ಯದು ಟೀ ಕುಡಿತಾ ನಿಂತೆವು ಮತ್ತೆ ಇವನು ನನ್ನ ಫ್ರೆಂಡ್ ಯದು ಡಿಪ್ಲೋಮೋ ಮಾಡ್ತಾ ಇದ್ದಾನೆ’ ಅಂತ ಯದುನಾ ಪರಿಚಯ ಮಾಡಿಸಿದೆ. ಪುನಃ ‘ನೀವು ಎಲ್ಲಿ ಗೆ ಹೋಗಿದ್ದರಿ ಇಷ್ಟು ಬೆಳಗ್ಗೆನೆ?’ ಅಂದೆ. ಅವಳು ಅದಕ್ಕೆ ‘ನನ್ನ ಕಸಿನ್ ಬೆಂಗಳೂರಿಂದ ಬಂದಿದ್ದ. ವಾಪಸ್ಸು ಹೋಗ್ತಾ ಇದ್ದ. So ರೈಲ್ವೆ ಸ್ಟೇಷನ್ ಗೆ ಡ್ರಾಪ್ ಮಾಡಲು ಹೋಗಿದ್ದೆ. ರೀ ಮನೆಗೆ ಬನ್ರಿ ಅಮ್ಮನ್ನ ಪರಿಚಯ ಮಾಡಿಸ್ತೀನಿ... ತಿಂಡಿ ತಿಂದು ಹೋಗುವಿರಂತೆ’ ಅಂದಳು. ನಾನು ‘ನಿನ್ನ ನೋಡಿದ್ದೇ ಸಾಕಮ್ಮ... ಫುಲ್ ಖುಷಿ ಆಗಿಬಿಟ್ಟಿದ್ದಿನಿ...ಸಾಕು’ ಅಂತ ಮನಸಲ್ಲಿ ಅಂದುಕೊಂಡು ‘ಇಲ್ಲ ಬಿಡ್ರಿ ಇನ್ನೊಮ್ಮೆ ಬರ್ತೀನಿ. ಸ್ವಲ್ಪ ಅರ್ಜೆಂಟ್ ಆಗೀ ಬೆಂಗಳೂರುಗೆ ಹೋಗ್ಬೇಕು ಯದು ಮೊಬೈಲ್ Purchase ಮಾಡಬೇಕಂತೆ’ ಅಂದೆ ಅವಳು ‘ಹೌದ?... ಮೊಬೈಲಾ.....?’ ಅಂದಳು. 2004 ರಲ್ಲಿ ಹಾಗಿತ್ತು ಮೊಬೈಲ್ purchase ಮಾಡೋದು, ಇಟ್ಟುಕೊಳ್ಳೋದು ಅಂದ್ರೆ ದೊಡ್ಡ ವಿಷಯನೆ. ಸರಿ ಅವಳಿಗೆ ಬೈ ಹೇಳಿ ನಾನು ಮತ್ತೆ ಯದು ಬಸ್ ಸ್ಟ್ಯಾಂಡ್ ಗೆ ಬಂದು ಗಾಡಿ ನಿಲ್ಲಿಸಿ ಬೆಂಗಳೂರ್ ಬಸ್ ಹತ್ತಿದವು. ಮಧ್ಯಾನ 1 ಗಂಟೆ ಮಜೆಸ್ಟಿಕ್ ರೀಚ್ ಆದೆವು. ಯದು ಅವನ ಕಸಿನ್ ಗೆ ಫೋನ್ ಮಾಡಿದ. ಅವನು ನಮಗೆ ವಿಜಯನಗರ್ ಗೆ ಬರಲು ಹೇಳಿ ನಮ್ಮನು ಅಲ್ಲಿ ಪಿಕ್ ಮಾಡುವುದಾಗಿ ತಿಳಿಸಿದ. ಸರಿ ವಿಜಯನಗರಕ್ಕೆ ಹೋದೆವು. ಅವನು ಕೂಡ ಬಂದು ಪಿಕ್ ಮಾಡಿದ. ನಾಗರಬಾವಿಯಲ್ಲಿರೋ ಅವನ ಮನೆಗೆ ಕರೆದುಕೊಂಡು ಹೋದ. ಯದು ಕಸಿನ್ ಅನಿಲನ ತಾಯೀ ಒಳ್ಳೆ ಅಡಿಗೆ ಮಾಡಿದ್ದರು. ಹೊಟ್ಟೆ ತುಂಬಾ ಊಟ ಮಾಡಿ ರೆಸ್ಟ್ ಮಾಡಲು ಅವರ ಮನೆಯ ಫಸ್ಟ್ ಫ್ಲೋರ್ ನಲ್ಲಿದ್ದ ಅನಿಲನ ರೂಮಿಗೆ ಹೋದೆವು. ಅನಿಲ ಒಂದು ಕವರ್ ತಂದು ಅದರಲ್ಲಿದ್ದ ಮೊಬೈಲ್ ಹೊರಗೆ ತೆಗೆದ. ಅದು ಒಂದು ಚಿಕ್ಕ ಓವೆಲ್ ಶೇಪ್ ನಲ್ಲಿದ್ದ ಬಿಳಿ ಮೋಟರೋಲ c 200 ಸೆಟ್. ತೆಗೆದ ಮೊಬೈಲ್ ನನ್ನು ಯದು ಗೆ ಕೊಟ್ಟು ಅನಿಲ ‘ಯದು ಸೆಟ್ ತಂದು ಒಂದು ತಿಂಗಳಾಗಿತ್ತು, ನನ್ನ ಫ್ರೆಂಡ್ ಒಬ್ಬ use ಮಾಡ್ತಾ ಇದ್ದ. Spice sim ಇದೆ. ನೋಡಪ್ಪ ನಿಂಗೆ ಪ್ರಾಮಿಸ್ ಮಾಡಿದ ಹಾಗೆ ಸೆಟ್ ಕೊಡ್ತಾ ಇದ್ದೀನಿ... ತಗೋ..’ ಅಂದ.

ನಾನು ಯದು ಮುಖ ನೋಡಿದೆ ಫುಲ್ ಖುಷಿ & ವಿವರಿಸಲಾಗದ ಆನಂದದಲ್ಲಿದ್ದ… ಯದು ಒಂದೆರೆಡು ನಿಮಿಷ ಮೊಬೈಲ್ ನೋಡಿ ಅದನ್ನ ನನ್ನ ಕೈಗೆ ಕೊಟ್ಟ. ನನಗೂ ತುಂಬಾ ಸಂತೋಷ ಆಯಿತು ಯಾಕಂದ್ರೆ ನಾನು ನನ್ನ ಕೈಯಲ್ಲಿ ಹಿಡಿದಿದ್ದು ನಮ್ ಗ್ಯಾಂಗ್ ಹುಡುಗರ 1st ಮೊಬೈಲ್ ಅನ್ನ. ಸರಿ ಸ್ವಲ್ಪ ಹೊತ್ತು ಬಿಟ್ಟು ಯದು & ನಾನು ಅನಿಲನಿಗೆ ನಾವು ಇನ್ನು ಮೈಸೂರ್ ಗೆ ಹೋಗಬೇಕು ಅಂತ ಹೇಳಿ ಹೊರಟೆವು. ನಾನು ಯದು ಗೆ ಏನೋ ಸಿಗ್ನಲ್ ಕೊಡ್ತಾ ಇದ್ದೆ ಅನಿಲ ‘ಏನ್ ಸುಧಾಕರ ಅದು?’ ಅಂದ. ನಾನು ಏನು ಹೇಳಲಿಲ್ಲ. ಯದು ಕೂಡಲೆ ‘ಲೋ ಅನಿಲ ನಾವು ತಂದ ದುಡ್ಡೆಲ್ಲ ಖರ್ಚಾಯೀತು. ಈಗ ಬಸ್ ಚಾರ್ಜ್ ಗೆ ಸ್ವಲ್ಪ ದುಡ್ಡು ಕೊಡೂ’ ಅಂದ. ‘ಓಹ್ಹ್ ’ ಅಂತ ಹೇಳಿ ಅನಿಲ 150 ರುಪಾಯಿಯನ್ನು ಯದುಗೆ ಕೊಟ್ಟ. ಸರಿ ಅಲ್ಲಿಂದ ಅನಿಲನಿಗೆ ಬೈ ಹೇಳಿ ನಾನು ಯದು ಮಜೆಸ್ಟಿಕ್ ಗೆ ಬಂದೆವು. ಅಲ್ಲಿ ಮಂಡ್ಯ ಬಸ್ ಗೆ ಕಾಯುತ್ತಿದಾಗ ನಾನು ‘ಮಗ ಅನಿಲ ಬರೆದುಕೊಟ್ಟ ನಿನ್ ಮೊಬೈಲ್ ನಂಬರ್ ನ ಅಲ್ಲಿರೋ ಕಾಯಿನ್ ಬಾಕ್ಸ್ ನಲ್ಲಿ ಡೈಯಲ್ ಮಾಡ್ಲ...’ ಅಂತ ಹೇಳಿ ಜೋಬಿಂದ 1 Rupee ಕಾಯಿನ್ ಕೊಟ್ಟೆ. ಯದು ಮೊಬೈಲ್ ನನ್ನ ಕೈಲೀ ಕೊಟ್ಟು ಹೋಗಿ ನಂಬರ್ ಡೈಯಲ್ ಮಾಡಿದ. ಇಲ್ಲಿ ನನ್ನ ಕೈನಲ್ಲಿ ಮೊಬೈಲ್ ರಿಂಗ್ ಅಯೀತು. ನನಗೆ ರಿಸೀವ್ ಮಾಡೋ ಬಟ್ಟನ್ ಯಾವುದು ಅಂತ ಒಂದು ಕ್ಷಣ ಕನ್ಫ್ಯೂಸ್ ಅಯೀತು. ಗ್ರೀನ್ ಕಾಲರ್ ಬ್ಯಾಕ್ ಗ್ರೌಂಡ್ ನಲ್ಲಿ ಫೋನ್ ಸಿಂಬಲ್ ಇದ್ದ ಬಟ್ಟನ್ ಒತ್ತಿ ‘ಹಲೋ’ ಅಂದೆ. ಮೊಬೈಲ್ ನಲ್ಲಿ ಯದು ವಾಯ್ಸ್ ಕೇಳಿತು ‘ಎನಲಾ ಮಗ? ನನ್ನ ವಾಯ್ಸ್ ಕೇಳ್ತಾ ಇದ್ದೀಯ?... ನಿಂದು ಕೇಳ್ತಾ ಇದೆ...’ ಅಂದ ನಾನು ‘ಹ್ಞೂ ಕಾಣಲ...’ ಅಂತ ಹೇಳಿ, ಯಾರಾರು ನನ್ನನ ನೋಡ್ತಾ ಇದ್ದರಾ ಅಂತ ಸುತ್ತ ನೋಡಿದೆ. ಯದು ಕಾಲ್ ಕಟ್ ಮಾಡಿ ಬಂದ. ನನಗಂತೂ ಒಂದು ಕಾಲ್ಗಂಟೆ ಮೊಬೈಲ್ ಓನರ್ ಯದುಗಿಂತ ಖುಷಿ ಆಗಿತ್ತು. ಸರಿ ಅಮೇಲೆ ಮಂಡ್ಯ ಬಸ್ ಕ್ಯಾಚ್ ಮಾಡಿ ಮಂಡ್ಯ ರೀಚ್ ಆದಾಗ ಸಂಜೆ 6.30 ಆಗಿತ್ತು. ಇನ್ನೇನು ಮಂಡ್ಯ ಸ್ಟ್ಯಾಂಡ್ದಿಂದ ನಮ್ ಗಾಡಿ ತಗೊಂಡು ಹೋರಾಡಬೇಕು ಅನ್ನುವಷ್ಟರಲ್ಲಿ ಯದು ‘ಮಗ.... ಫೋಟೋ...?’ ಅಂದ. ನಾನು ಗಾಡಿಯನ್ನು ಮಂಡ್ಯದ ಪೇಟೆ ಬೀದಿಗೆ ತಿರುಗಿಸಿದೆ. ಅಲ್ಲಿ ಹೋಗಿ ನಮ್ಮ ಫೋಟೋನ ಕಲೆಕ್ಟ್ ಮಾಡಿದೆವು. ಫೋಟೋಗಳು ಚೆನ್ನಾಗಿ ಬಂದಿರಲಿಲ್ಲ. ಅವನು ಕ್ಯಾಮೆರನಾ ಟ್ರೈಪೋಡ್ ಸ್ಟ್ಯಾಂಡ್ ನಲ್ಲಿ ಇಟ್ಟು ಕ್ಲಿಕ್ ಮಾಡದೆ ಹಾಗೆ ಕೈನಲ್ಲೇ ಅವನ ಕತ್ತಿನ ಹತ್ತಿರ ಇಟ್ಟಿಕೊಂಡು, Display ನೋಡುತ್ತಾ ಕ್ಲಿಕ್ ಮಾಡಿದ್ದ. ನಾವು ಗಳು ಕೂಡ ಕ್ಯಾಮೆರಾ ಲೆನ್ಸ್ ನೋಡದೆ ಪೆದ್ದು ಪೆದ್ದಾಗೆ ಅವನ ಕಣ್ಣನ್ನು ನೋಡ್ತಾ ಇದ್ದೆವು ಅನ್ಸುತ್ತೆ. ನಮ್ಮ ಕಣ್ಣು ಗಳು ಫೋಟೋದಲ್ಲಿ ಆಕಾಶವನ್ನು ನೋಡುತ್ತಾ ಇದ್ದ ಹಾಗೆ ಇತ್ತು. ನನಗೆ ಆ Momentನಲ್ಲಿ ಯಾವಾಗಲು ನನ್ನ ಅಮ್ಮ ಹೇಳುತ್ತಿದ್ದ ‘ ಕಾಸಿಗೆ ತಕ್ಕ ಹಾಗೆ ಕಜ್ಜಾಯ...’ ಅನ್ನೋ ಗಾದೆ ಮಾತು ನೆನಪಿಗೆ ಬಂತು. ಟೈಮ್ ಬೇರೆ ಆಗ್ತಾ ಇತ್ತು ಸರಿ ಅಲ್ಲಿಂದ ಸೀದಾ ಮೈಸೂರ್ ಗೆ ಹೊರೆಟೆವು. ನಿಧಾನವಾಗಿ ಓಡಿಸ್ಕೊಂಡು ಪಟ್ನದಲ್ಲಿ ಒಂದು ಸ್ಟಾಪ್ ಕೊಟ್ಟು ಟೀ ಕುಡಿದು, ಮೈಸೂರ್ ರೀಚ್ ಆಗೀ ಕುವೆಂಪು ನಗರ್ ಕಾಂಪ್ಲೆಕ್ಸ್ ಹತ್ತಿರ ಬಂದಾಗ ಟೈಮ್ ರಾತ್ರಿ 8.40 ಆಗಿತ್ತು. ಯದು ‘ಇಲ್ಲೇ ನಿಲ್ಲಿಸು ಮಗ... ಮನೆವರೆಗೂ ಡ್ರಾಪ್ ಬೇಡ’ ಅಂದ. ನಾನು ‘ಯಾಕಲಾ?...’ ಅಂದೆ. ಯದು ಅದಿಕ್ಕೆ ‘ಲೋ ನೀನು ಬಂದರೆ ನನ್ನ ಜೊತೆ ನಿನ್ನನ್ನು ಸೇರಿಸಿ ಉಗಿತಾರ. ಏನ್ ಇಲ್ಲೇ ಎಲ್ಲೊ ಹೋಗಿ ಬರ್ತೀನಿ ಅಂತ ಹೇಳಿ 2 ದಿನ ಆಮೇಲೆ ಬರ್ತಾ ಇದ್ದಿರಲ್ಲ ಅಂತ !... ಹೇಗೋ ಒಬ್ಬನೇ ಮ್ಯಾನೇಜ್ ಮಾಡ್ತೀನಿ ನೀನು ಒಂದೆರೆಡು ದಿನ ಮನೆ ಹತ್ತಿರ ಬರಬೇಡ’ ಅಂದ. ಸರಿ ನಾನು ಯದುಗೆ ಬೈ ಹೇಳಿ ಮನೆಗೆ ಬಂದು ಸೇರಿದೆ. ಫುಲ್ ಸುಸ್ತಾಗಿತ್ತು 2 ದಿನ ನನ್ನ ಹೀರೋ ಪುಚ್ ನಲ್ಲಿ ಅಷ್ಟೆಲ್ಲಾ ಸುತ್ತಾಡಿದು ನನಗೇನೇ ಆಶ್ಚರ್ಯ ಆಗಿತ್ತು. ಯದುಯಿಂದ ಅವನ ಮೊಬೈಲ್ ನಂಬರ್ ತಗೊಂಡಿದ್ದನಲ್ಲಾ, ರಾತ್ರಿ ಮಲಗೋ ಮುಂಚೆ ಅವನ ಮೊಬೈಲ್ ಗೆ ನಮ್ಮನೆ ಲ್ಯಾಂಡ್ ಲೈನ್ ನಿಂದ ಒಂದು ಮಿಸ್ ಕಾಲ್ ಕೊಟ್ಟು ಮಲಗಿದೆ. ಇವತ್ತಿಗೂ ಅಷ್ಟೇ Coincidence & 6th sense ಇವುಗಳ ವಿಷಯವಾಗಲೀ ಅಥವಾ 1st ಟೈಮ್ ಮೊಬೈಲ್ ನಲ್ಲಿ ಮಾತಾಡಿದ ಅನುಭವದ ವಿಷಯಗಳ ಚರ್ಚೆ ಬಂದರೆ ಅವತ್ತಿನ ಯದು ಜೊತೆಗಿನ ಆ ಅನುಭವಗಳು ತಕ್ಷಣ ನೆನಪಾಗ್ತವೆ.


Saturday, April 24, 2010

2005ರ ನನ್ನ Birthday...

ನಾನು ಜುಲೈ 2004 ರ ಮೊದಲ ವಾರದಲ್ಲಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜಿನ ಬಾಯ್ಸ್ ಹಾಸ್ಟೆಲ್ ನಲ್ಲಿ ನನ್ನ ಡಿಪಾರ್ಟ್ಮೆಂಟಲ್ Exam ಗೋಸ್ಕರ ಉಳಿದುಕೊಂಡಿದ್ದೆ. ಅಲ್ಲಿದ್ದಾಗ ನನ್ನ ಜೊತೆ ಕೆಲಸ ಮಾಡುತ್ತಿದ್ದ ಗೌಂಕರ್ ಫೋನ್ ಮಾಡಿ ‘ಸರ್ ನಿಮಗೆ ಜುಲೈ 14th ರಿಂದ ಧಾರವಾಡದ ಗುಂಗರಗಟ್ಟಿಯಲ್ಲಿ 1 Year ಟ್ರೈನಿಂಗ್ ಗೆ ಲೆಟರ್ ಕಳಿಸಿದ್ದಾರೆ’ ಅಂತ ಹೇಳಿದಮೇಲೆ ಸ್ವಲ್ಪ ನೆಮ್ಮದಿಯಾಯಿತು. ಕಾರಣ 2004ರಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟನವರು ಕರ್ನಾಟಕದಲ್ಲಿ 4 ಕಡೆ ಟ್ರೈನಿಂಗ್ ಕೊಡ್ತಾಇದ್ದರು. ಕುಶಾಲ್ ನಗರ, ಗುಲ್ಬರ್ಗ, ತಟ್ಟಿಹಳ್ಳ( ಯೆಲ್ಲಾಪುರ) ಹಾಗು ಧಾರವಾಡ್. ಇವುಗಳಲ್ಲಿ ತಟ್ಟಿಹಳ್ಳದಲ್ಲಿ ಟ್ರೈನಿಂಗ್ ಅಂದ್ರೆ ಪನಿಶ್ಮೆಂಟ್ ಅಂತಾನೆ. ಅಲ್ಲಿ ಜನ ನೋಡ್ಬೇಕು ಅಂದ್ರೆ 20 Kms ಕಾಡಿಂದ ಹೊರಗೆ ಬರಬೇಕು. So ನರಸಿಂಹರಾಜಪುರ ರೇಂಜ್ ನಿಂದ 13th ರಿಲೀವ್ ಆಗಿ ಜುಲೈ 14th ಮೈಸೂರಿನಿಂದ ಶಿವಮೊಗ್ಗ, ಅಲ್ಲಿಂದ ಹುಬ್ಬಳ್ಳಿ ಅಲ್ಲಿಂದ ಧಾರವಾಡ್ ಗೆ ಬಂದು ಸಂಜೆ 5 ಗಂಟೆಗೆ ಇಳಿದಿದ್ದಾಯಿತು. ನಮ್ಮ ಟ್ರೈನಿಂಗ್ ಸೆಂಟರ್ ಇದ್ದದ್ದು ಗುಂಗರಗಟ್ಟಿ ಎಂಬ ಜಾಗದಲ್ಲಿ. ಅದು ಧಾರವಾಡ್ – ಬೆಳಗಾಂ ರೋಡ್ (Puna - Belgaum NH) ನಲ್ಲಿ 14 Kms ಬಂದರೆ ಅಲ್ಲಿ ಇಡಿ ದೇಶಕ್ಕೆ ತ್ರಿವರ್ಣದ ರಾಷ್ಟ್ರಬಾವುಟ ಸಪ್ಪ್ಲಯ್ ಮಾಡೂ ಗರಗ ಎಂಬ ಊರಿನ ರಸ್ತೆ ಸಿಗುತೆ. ಆ ಕ್ರಾಸ್ ನಿಂದ 800 Mts ದೂರದಲ್ಲಿ ಇದ್ದ Telco factory ಮುಂದೆ ಇತ್ತು ನಮ್ಮ ಫಾರೆಸ್ಟ್ ಟ್ರೈನಿಂಗ್ ಸೆಂಟರ್.
ಒಟ್ಟು 68 ಜನ 17th ಬ್ಯಾಚ್ ಫಾರೆಸ್ಟ್ ರ್ ನ 1Year ಟ್ರೈನಿಂಗ್ ಗೆ ಬಂದಿದ್ದರು. ಟ್ರೈನಿಂಗ್ ಸೆಂಟರ್ ಎಂಟ್ರೆನ್ಸ್ ನಲ್ಲಿ ಒಂದು ದೊಡ್ಡ ಗೇಟ್ ಇದೆ. ಅಲ್ಲಿಂದ ಒಳಗೆ 1 Km ಸ್ಟ್ರೈಟ್ ಟಾರ್ ರೋಡ್ ಇತ್ತು ಅದು ನಮ್ಮ ಟ್ರೈನಿಂಗ್ ಸೆಂಟರ್ ನ ಮೈನ್ ಬಿಲ್ಡಿಂಗ್ ಗೆ ಜಾಯಿನ್ ಆಗ್ತಾ ಇತು. ಟ್ರೈನಿಂಗ್ ಸೆಂಟರ್ ನಲ್ಲಿ ಒಟ್ಟು 5 ಬ್ಲಾಕ್ ಗಳು ಇದ್ದವು. ನಂದು ಕಡೆ ಬ್ಲಾಕ್ ನಲ್ಲಿ ಲಾಸ್ಟ್ ರೂಂ. ರೂಂ ನಂ 8.
ಸರಿ ಬಂದ ದಿನವೇ ಎಲ್ಲರ ಪರಿಚಯ ಅಯಿತು. ಅಲ್ಲಿ ಟ್ರೈನಿಂಗ್ ನಲ್ಲಿ PT ಮಾಸ್ಟರ್ ಆಗಿ ಅಲ್ಲೇ ಗುಂಗರಗಟ್ಟಿ ಸಮೀಪ ನೀರಲಕಟ್ಟಿ ಎಂಬ ಊರಿನ X ಆರ್ಮಿ ಮ್ಯಾನ್ ಅಡಿವೆಪ್ಪ ಎಂಬವ ಇದ್ದ. ದಪ್ಪ ಆಸಾಮಿ. ಒಂದು Angleನಲ್ಲಿ ಹ್ಯಾಪಿ ಮ್ಯಾನ್ ತರಹ ಕಾಣ್ತಾ ಇದ್ದ. ಲವ್ ಅಟ್ ಫಸ್ಟ್ ಸೈಟ್ ತರ ನನಗೆ ಅವನ ಮೇಲೆ ಹೇಟ್ ಅಟ್ ಫಸ್ಟ್ ಸೈಟ್ ಅಯೀತು!!!. ನಮ್ ಟ್ರೈನಿಂಗ್ ರೋಟಿನ್ ಹೇಗಿತು ಅಂದ್ರೆ… ಬೆಳಿಗ್ಗೆ 5.30 ಕ್ಕೆ PT ಅಡಿವೆಪ್ಪ ಎದ್ದು ವಿಷಲ್ ಹಾಕ್ತ ಇದ್ದ, ನಾವುಗಳು ಒಂದು ರೂಂನಲ್ಲಿ ಐದೈದು ಜನಾವಿದ್ದು ಎಲ್ಲ ನಿತ್ಯಕರ್ಮ ಮುಗಿಸಿ, ಬ್ರಶ್ ಮಾಡಿ ರೆಡಿ ಆಗಿ ವೈಟ್ ಟಿ-ಶರ್ಟ್, ವೈಟ್ ನಿಕ್ಕರ್, ಜಾಗಿಂಗ್ ಶೂ ಹಾಕಿಕೊಂಡು ಫೀಲ್ಡ್ ನಲ್ಲಿ Exact 5.50ಕ್ಕೆ ಫಾಲ್ ಇನ್ ಆಗಬೇಕಿತು. ಟ್ರೈನಿಂಗ್ ನಲ್ಲಿ ತಿಂಗಳಿಗೊಬ್ಬ ಲೀಡರ್ ಅಂತ ಮಾಡ್ತಾ ಇದ್ದರು, ಅವನು ಎಷ್ಟು ಜನ ಬಂದಿದ್ದರೆ? ಯಾರು ಬಂದಿಲ್ಲ? ಯಾಕೆ ಬಂದಿಲ್ಲ?ಅಂತ ತಿಳಿದು PT ಮಾಸ್ಟರ್ಗೆ ರಿಪೋರ್ಟ್ ಮಾಡಿದ ನಂತರ ಜಾಗಿಂಗ್ ಶುರು. ಡೈಲಿ ಮಿನಿಮಮ್ಮ್ 8-10 Kms ಓಡಬೇಕಿತ್ತು. ಅಮೇಲೆ ಸ್ವಲ್ಪ Exercise. 7.15 ಕ್ಕೆ ಓಡಿ ಬಂದು ತಿಂಡಿ ತಿಂದು, 8.00 ಕ್ಕೆ ರೂಮ್ ಗೆ ಹೋಗಿ ಸ್ನಾನ ಮಾಡಿ ಬುಕ್ಸ್ ತಗೊಂಡು ನಮ್ ರೂಂ ಗಳಿಂದ 1 km ದೂರದಲಿದ್ದ ಮೈನ್ ಬಿಲ್ಡಿಂಗ್ ನ ಕ್ಲಾಸ್ ರೂಂ ಗೆ Exact 9.00 ಗೆ ರೀಚ್ ಆಗ್ತಾ ಇದ್ದೆವು. ಅಲ್ಲಿ ಕ್ಲಾಸ್ ಇರುತ್ತಿತು. ಟೀ ಬ್ರೇಕ್ 11.00ಕ್ಕೆ. ಊಟ 1.00 ರಿಂದ 2.00 ರವರೆಗೆ. 2.00 ರಿಂದ 4.00 Field ವರ್ಕ್. ಗುಂಡಿ ಅಗೆಯೋದು, ರಸ್ತೆ ಸರಿ ಮಡೋದು, ಪ್ಲಾಂಟೇಶನ್ ಕ್ಲಿನ್ ಮಾಡೋದು. ಮತ್ತೆ 4.00 ಕ್ಕೆ ಟೀ. 4.30 ಟು 6.00 ಗೇಮ್ಸ್ (ಆಟ ಆಡ್ಲೆಬೇಕಿತ್ತು) ನಂತರ 8.30 ಕ್ಕೆ ಊಟ. ಅಮೇಲೆ ರೆಸ್ಟ್. 1 ವರ್ಷ ಲೈಫ್ ಹೀಗೆ ಇತ್ತು. ನಮ್ಮ ಫಾರೆಸ್ಟ್ ರ್ ನ ಟ್ರೈನಿಂಗ್ ಗೆ Usually ACF ನ ಚೀಫ್ ಟ್ರೈನರ್ ಆಗೀ ಮಾಡ್ತಾರೆ. ನಮ್ಮ ಟ್ರೈನಿಂಗ್ ನಲ್ಲಿ 2-3 ಜನ ACF ‘s ಚೇಂಜ್ ಆದರು. But ಮಜೋರಿಟಿ ಟ್ರೈನಿಂಗ್ ಮುಗೀಯೋವರೆಗೂ ಕುಲಕರ್ಣಿ ಎಂಬ ACF ಇದ್ದರು.

ನನ್ನ ರೂಂ (ರೂಂ 8) ನಂ ಟ್ರೈನಿಂಗ್ ಕ್ಯಾಂಪಸ್ ನ ಒಂದು ತುದಿಲೀ ಇತು. ನಮ್ ಟ್ರೈನಿಂಗ್ ಹುಡುಗರು ಎಲ್ಲಾ ನನ್ನ ರೂಂಗೆ ಬರ್ತಾ ಇದ್ದರು. ಕಾರ್ಡ್ಸ್ ಆಡೋಕೆ, ಮ್ಯೂಸಿಕ್ ಕೇಳೋಕೆ, Discussion ಮಾಡೋಕೆ, ಲೈಟ್ ಆಗೀ ಪಾರ್ಟಿ ಮಾಡೋಕೆ, ಇನ್ನು ಏನ್ ಏನೋ ಕೆಲಸಗಳಿಗೆ ನನ್ನ ರೂಂ ಫೇಮಸ್ ಆಗಿತ್ತು. Even ಟ್ರೈನಿಂಗ್ ಫೋನ್ ಕೂಡ ನಮ್ ರೂಂ ನಲ್ಲೆ ಇತ್ತು. ರೂಂ8 It was Noting But a Club!.

ನಾನು, ಗಿರಿ, ರಾಕೇಶ್, ಅನಿಲ್ ಎಲ್ಲ ಅಕ್ಕ ಪಕ್ಕ ರೂಂ ನಲ್ಲಿ ಇದ್ದೆವು. 68 ಜನ ಟ್ರೈನೀಸ್ ನಲ್ಲಿ ಮಜೋರಿಟಿ ನಾರ್ತ್ ಕರ್ನಾಟಕ ಹುಡುಗರು ಇದ್ದರು. ನನಗೆ ತಿಳಿದಿರೋ ಹಾಗೆ ನಾರ್ತ್ ಕರ್ನಾಟಕ ಜನ ನಮ್ಮ ಸೌತ್ ಕರ್ನಾಟಕ (ಅಂದ್ರೆ ಮೈಸೂರ್, ಮಂಡ್ಯ, ತುಮಕೂರ್, ಹಾಸನ್) ಜನರ ರೀತಿ ಹಾರ್ಡ್Rash ಇಲ್ಲ. ಅವರು ತುಂಬಾ ಸಾಫ್ಟ್ & Humbel ಜನ. ಟ್ರೈನಿಂಗ್ ನಲ್ಲಿ ನಾವು ಸ್ವಲ್ಪ ಜನ ಅಂದ್ರೆ ನಾನು, ರೋಹಿತ್, ರಾಕಿ, ಅನಿಲ್ ಇವರೆಲ್ಲ Rash ಬಾಯ್ಸ್ ಅಂತ ಹೇಳ್ತಾ ಇದ್ದರು. ಅದರಲ್ಲೂ ನನಗೆ ಬ್ಯಾಡ್ ಬಾಯ್(Bad Boy) ಅನ್ನೋ ಪಟ್ಟ ಸಿಕ್ಕಿತು ( Especially ಕರಾಟೆ ಪ್ರಾಕ್ಟೀಸ್ ನಲ್ಲಿ ನಾನು & ಗಿರೀಶ್ ಫೈಟ್ ಮಾಡುವಾಗ, ಅವನ ಕೈನ ನಾನು ಫ್ರ್ಯಾಕ್ಚರ್ ಮಾಡಿದಾಗ!!!). ಅಡಿವೆಪ್ಪನಿಗೆ ಸುಮಾರು ಜನ ಟ್ರೈನೀಸ್ ಮರ್ಯಾದಿ ಕೊಡ್ತಾ ಇದ್ದರು. ಆದರೆ ನಾನು ಮತ್ತೆ ಇನ್ನು ಇತರ ಹುಡುಗರು ಬರಿ ಉಲ್ಟಾ ಮಾತಾಡುತ್ತ ಇದ್ದೆವು. ನನ್ನ ಕಂಡರೆ ಭಯಂಕರ ಉರಿ ಅವನಿಗೆ!. ಯಾವಾಗಲು ‘ ಏ ಸುಧಾಕರ್, ನೀನು ಟ್ರೈನಿಂಗ್ ನಲ್ಲಿ Groupism ಮಾಡ್ತಿಯೇನೋ. ನಿನ್ನನ್ನ ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಹಾಕ್ತೀನಿ’ ಅಂತ ಇದ್ದ. ನನ್ನ ಮೇಲೆ ಕಂಪ್ಲೈಂಟ್ ಹೇಳಲು ಯಾವಾಗಲು ಚಾನ್ಸ್ ಕಾಯ್ತಿದ್ದ


ಅವತು Jan 13th 2005. ಟ್ರೈನಿಂಗ್ ಶುರು ಆಗೀ 183 ದಿನಗಳಗಿದ್ದವು. ಅವತು ನನ್ನ 21st Birthday. 13 ಅನ್ನು ಜಗತ್ತಿನ ಎಷ್ಟೋ ದೇಶದ ಜನರು unlucky ನಂಬರ್ ಅಂತ ಭಾವಿಸ್ತಾರೆ. ಅದರಲ್ಲೂ 13th Friday ಅಂದರೆ ಪ್ರೇತಾತ್ಮ, ಭೂತ ಲೋಕದಲ್ಲಿ ಅದೊಂದು ವಿಶೇಷ ದಿನ. 13th Friday ಹೆಸರಿನ ಎಷ್ಟೋ Horror ಚಿತ್ರಗಳು ಇಂಗ್ಲಿಷ್ ನಲ್ಲಿ ರಿಲೀಸ್ ಆಗಿವೆ. But ನನಗೆ 13 ಫೇವರೇಟ್ ನಂಬರ್. ನಾನು ಹುಟ್ಟಿದು 13th Friday ದಿನವೇ!!! ನನ್ನ Birthday ಬಗ್ಗೆ ನನ್ನ ರೂಂಮೆಟ್ ಗಳಿಗೆ ಮಾತ್ರ ಗೊತ್ತಿತು. ಅವತ್ತು asusual 5.30 ಕ್ಕೆ ಎದ್ದು ಬ್ರುಶ್ ಮಾಡಿ PTಗೆ ರೆಡಿ ಆದೆ. ನಮ್ಮ ಜಾಗಿಂಗ್ ಗ್ರೌಂಡ್ ನಮ್ಮ ಕ್ಯಾಂಪಸ್ ನ ಸೆಂಟರ್ ನಲ್ಲಿತ್ತು. ರೆಗ್ಯುಲರ್ 400 mtsಗಳ ಟ್ರ್ಯಕ್ ಅದು . ದಿನವು PT ಅಡಿವೆಪ್ಪ 15-18 ರೌಂಡ್ ಅಂದ್ರೆ 6-8 kms ನಮ್ಮೆಲ್ಲರನ್ನೂ ಓಡಿಸ್ತಾಇದ್ದ. Initial 5 ರೌಂಡ್ಸ್ slow ಆಗೀ ಹಾಗು ಬರ್ತಾ ಬರ್ತಾ ಸ್ಪೀಡ್ ಆಗೀ ಓಡಬೇಕಿತು. So ಅವತ್ತು ಯಾಕೋ ಅಡಿವೆಪ್ಪ ಆರು ಏಳು ರೌಂಡ್ಸ್ ಆದಮೇಲೆ ‘ಓಡಿರೋ ಸ್ಪೀಡ್ ಆಗೀ ಓಡಿರಿ’ ಅಂತಿದ್ದ. ನಾವು ಸ್ಪೀಡ್ನ ಪಿಕ್ ಅಪ್ ಮಾಡಿಕೊಂಡೆವು. ಅಡಿವೆಪ್ಪ ‘‘ಇನ್ನು ಸ್ಪೀಡ್...ಇನ್ನು ಸ್ಪೀಡ್...’ ಅಂತ ಇದ್ದೆ. ಯಾಕೋ ನಂಗು, ರಾಕಿಗು, ರೋಹಿತಂಗು ರೇಗಿ ಹೊಯಿತು. ತಕ್ಷಣ ನಿಂತು ಬಿಟ್ಟೆವು. ನಾವು ನಿಂತ ಮೇಲೆ ಸ್ಲೋ ಆಗೀ ಎಲ್ಲರೂ ನಿಲ್ಲತೊಡಗಿದರು. ಅಡಿವೆಪ್ಪ ಬಂದು ‘ ‘ಏ ಯಾಕೋ ನಿಂತಿರಿ? ಓಡಿರೋ...’ ಅಂದ ನಾನು ‘ ಏನ್ ಸರ್? ಎಷ್ಟು ಸ್ಪೀಡ್ ಆಗೀ ಅಂತ ಓಡೋಕೆ ಅಗುತ್ತೆ?, ಏನ್ ಲಿಮಿಟ್ ಬೇಡವ?’ ಅಂದೆ. ರಾಕಿ ಇದ್ದು ‘ ಸರ್ ನಾವು ಓಡೋ ಅರ್ಧ ಸ್ಪೀಡ್ ನಲ್ಲಿ ನೀವು2 ರೌಂಡ್ ಹಾಕಿ ಸಾಕು’ ಅಂದುಬಿಟ್ಟ. ಅಷ್ಟು ಸಾಕಿತ್ತು ಅಡಿವೆಪ್ಪನಿಗೆ ‘ಸರಿ ನೀವು ಓಡೋದಿಲ್ಲ ಅಲ್ಲವ? ನನ್ನ ಮಾತು ಕೇಳದಿದ್ದ- ಮೇಲೆ ನಾನು ನಿಮಗೆ PT ಕ್ಲಾಸ್ ತಗೋಳಲ್ಲ’ ಅಂತ ಹೇಳಿ ಜಾಗಿಂಗ್ ಗ್ರೌಂಡ್ ನಿಂದ ಅವನ ರೂಮಿಗೆ ಹೊರಟು ಹೋದ. ನಾವುಗಳು ಸ್ವಲ್ಪ ಹೊತ್ತು ಕಾದು ನಮ್ಮ ಪಾಡಿಗೆ ನಾವು ಗ್ರೌಂಡಿನಿಂದ ರೂಂಗೆ ಹೋದವು.
ಬೆಳಗೆ ACF ಕುಲಕರ್ಣಿ ಕ್ಲಾಸ್ ನಲ್ಲಿ ಪಾಠ ಮಾಡುವಾಗ ಅಡಿವೆಪ್ಪ ಬಂದು ನಿಂತ. ಕುಲಕರ್ಣಿ ಸರ್ ‘ಏನ್ರೀ ಅಡಿವೆಪ್ಪ ಬಂದಿದು?’ ಅಂದ್ರು . ಅದಿಕ್ಕೆ ಅಡಿವೆಪ್ಪ ‘ ಸರ್ ನಾನು ಇನ್ನು ಈ ಬ್ಯಾಚ್ ಗೆ PT ಕ್ಲಾಸ್ Conduct ಮಾಡಲ್ಲ ಸರ್, ಆ ಬಗ್ಗೆ ಲೆಟರ್ ಕೊಡೋಕೆ ಬಂದೆ ಅಷ್ಟೇ...’ ಅಂದ.

ತಕ್ಷಣ ಆಲ್ಮೋಸ್ಟ್ ಲಾಸ್ಟ್ Row ನಲ್ಲಿ ಕೂತಿದ್ದ ನಾನು, ರಾಕಿ, ಅನಿಲ್ ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಕುಲಕರ್ಣಿ ಸರ್ ‘ ಯಾಕ್ರಿ PT ಕ್ಲಾಸ್ ತಗೊಳಲ್ಲ? ಏನಾಯೀತು?’ ಅಂತ ಕೇಳಿದ್ರು. ಅಡಿವೆಪ್ಪ ಶುರು ಮಾಡಿಬಿಟ್ಟನಲ್ಲಪ್ಪ ‘ ಸರ್ ಇವರ್ಯಾರು ನನ್ನ ಮಾತು ಕೇಳಲ್ಲ, ಆ ಸುಧಾಕರ್ Groupism ಮಾಡ್ತಾನೆ, ಅವನ ಜೊತೆ ರಾಕೇಶ್, ಅನಿಲ್ ಇನ್ನು ಸುಮಾರು ಜನ ನನಗೆ ತಿರುಗಿ ಉಲ್ಟಾ ಮಾತಾಡುತ್ತಾರೆ’ ಅಂತ ಕಂಪ್ಲೈಂಟ್ ಮಾಡಿದ. ACF ಕುಲಕರ್ಣಿ ‘ ಸುಧಾಕರ್ ಸ್ಟ್ಯಾಂಡ್ ಅಪ್’ ಅಂದ್ರು ನಾನು ಎದ್ದು ನಿಂತೆ. ಅವರು ‘ಏನ್ರೀ ಇದೆಲ್ಲ?’ ಅಂದ್ರು. ನಾನು ‘ ಸರ್ ನಮ್ಮದೇನೂ ತಪಿಲ್ಲ... ಬೇಕಂತನೆ ಸಿಕ್ಕಪಟ್ಟೆ ಓಡಿಸ್ತಾರೆ, ನಮ್ಮೇಲೆ ಯಾಕ ಸಿಟ್ಟು ಅವರಿಗೆ ಅಂತ ಗೊತ್ತಿಲ್ಲ... ಸುಮ್ಮ ಸುಮ್ಮನೆ ಕಂಪ್ಲೈಂಟ್ ಮಾಡ್ತಾ ಇದ್ದರೆ, Groupism ಅಂದ್ರೆ ನನಗೆ ಏನು ಅಂತಾನೆ ಗೊತ್ತಿಲ್ಲ… ನನ್ನ ಯಾಕ ಅದನ ಮಾಡ್ಲೀ…’ ಅಂತ ನನ್ನ ಮಾತು ಮುಗಿಸೋವಷ್ಟರಲ್ಲಿ ACF ಅವರು ‘SHUT UP ಸುಧಾಕರ್….. ಡೋಂಟ್ ಆಕ್ಟ್ ಸ್ಮಾರ್ಟ್. ಟ್ರೈನಿಂಗ್ ನಲ್ಲಿ ಟ್ರೈನೀ ತರಾ ಇರೋದು ಕಲಿತಿಕೋ....’ ಅಂತ ಹೇಳಿ ಅಡಿವೆಪ್ಪನ ಕಡೆ ತಿರುಗಿ ‘ ರೀ ಅಡಿವೆಪ್ಪ ಇವತ್ತು ಯಾರೆಲ್ಲ PT ಮಾಡದೆ Boycott ಮಾಡಿ ಗಲಾಟೆ ಮಾಡಿದರು ಅವರನ್ನೆಲ್ಲಾ ಮಧ್ಯಾನ ಫೀಲ್ಡ್ ವರ್ಕ್ ಟೈಂನಲ್ಲಿ ಅದೇ ಗ್ರೌಂಡ್ ನಲ್ಲಿ... ಬಿಸಿಲಿನಲ್ಲಿ ಓಡಿಸಿ… ಅದೇ ಇವರ ಪನಿಶ್ಮೆಂಟ್... ಈಗ ಹೋಗಿ...’ ಅಂತ ಹೇಳಿ ಏನೋ ಬರಿಯೋಕೆ ಬೋರ್ಡ್ ಕಡೆ ತಿರುಗಿದರು. ಅಡಿವೆಪ್ಪ ಒಂದು ಸಲ ನನ್ನ ಕಡೆ ನೋಡಿ, ಲೈಟ್ ಆಗೀ ಸ್ಮೈಲ್ ಬೇರೆ ಕೊಟ್ಟ!!! ನಂತರ ಅಲ್ಲಿಂದ ಹೊರಟುಹೋದ. ಸುಮಾರು ಹುಡುಗರು ನನ್ನ ಕಡೆ ತಿರುಗಿ ‘ಅಯ್ಯೋ ಪಾಪ’ ಅನ್ನೋ ರೀತಿ ನೋಡಿದರು.

ಸರಿ ಮಧ್ಯಾನ ಊಟದ ಟೈಮ್ ನಲ್ಲಿ ನನ್ನ ರೂಂ ಮೆಟ್ಸ್ ಎಲ್ಲರಿಗೂ ‘ ‘ಇವತ್ತು ಸುಧಾಕರ್ ನ Birthday, ಇವತ್ತೆ ಅವನಿಗೆ ಭರ್ಜರಿ ಪನಿಶ್ಮೆಂಟ್’ ಅಂತ ಹೇಳ್ತಾಇದ್ದರು . ಊಟದ ಹಾಲ್ ನಲ್ಲಿ ಅವತು ನನ್ನ Birthday & ಪನಿಶ್ಮೆಂಟ್ ವಿಷಯವೇ ಸೆಂಟರ್ ಆಪ್ಫ್ ಅಟ್ರ್ಯಕ್ಶನ್. ನಮ್ಮ ಟ್ರೈನಿಂಗ್ ನಲ್ಲಿ ಇದ್ದ 6 ಜನ Ladies ಪೈಕಿ ಯೋಗೇಶ್ವರಿ ಬಂದು ‘ ರೀ ಸುಧಾಕರ್ ಹೋಗಿ ACF ಹತ್ರ, ಇವತ್ತು ನನ್ನ Birthday, ಪನಿಶ್ಮೆಂಟ್ ನಾಳೆ ತೊಗೋತೀನಿ ಸಾರ್!!!!??? ಅಂತ ಕೇಳ್ಕೋಳಿ’ ಅನ್ನೋ ಖತರ್ನಾಕ್ ಸಲಹೆ ಕೊಟ್ಟಳು. ಸರಿ ಊಟ ಅಯೀತು ಕಾಕೀ ಶರ್ಟ್ & ಕಾಕೀ ನಿಕ್ಕರ್ ಹಾಕಿಕೊಂಡು ರೂಂನಿಂದ ಹೊರಡುವಾಗ ನನ್ನ ತಂಗಿ ರಾಜಮಣಿ ಕಾಲ್ ಮಾಡಿದಳು. ಫೋನ್ ನಲ್ಲಿ ಅವಳು ‘ ಲೋಕು (ಮೈ ಪೆಟ್ ನೇಮ್) ಹ್ಯಾಪಿ Birthday ಕಣೋ… ಏನ್ ಫುಲ್ ಜಾಲಿನಾ ಇವತ್ತು? ಯಾರ ಯಾರ ಏನ್ ಏನ್ ಗಿಫ್ಟ್ ಕೊಟ್ಟರೋ?’ ಅಂದಳು. ಆಗ ನಾನು ‘ ಇವತ್ತು ನನ್ನ Birthday ಸೂಪರ್ ಕಣೆ, ನಮ್ ACF ಸಕ್ಕತ್ತಾಗಿರೋ ಗಿಫ್ಟ್ ಕೊಟ್ಟಿದಾರೆ, ಎಲ್ಲ ನಿನಗೆ ನೈಟ್ ಡಿಟೈಲ್ ಆಗೀ ಹೇಳ್ತಿನಿ’ ಅಂತ ಹೇಳಿ ಫೋನ್ ಇಟ್ಟೆ.


ಸರಿ ನಂತರ ಅಡಿವೆಪ್ಪ ಬಂದು ನನ್ನ ಸೇರಿದಂತೆ 5 ಜನರ ಹೆಸರು ಹೇಳಿ ‘ನೀವೆಲ್ಲ 2 ರಿಂದ 4 ಗಂಟೆ ವರೆಗೆ ಜಾಗಿಂಗ್ ಟ್ರ್ಯಕ್ ನಲ್ಲಿ ಓಡಿ...’ ಅಂತ ಹೇಳಿ, ನಾವು ಸರಿಯಾಗೀ ಓಡುತೀವೊ ಇಲ್ಲವೋ ಅಂತ ನೋಡಲು ಒಬ್ಬ ಟ್ರೈನೀನ ಕಾವಲು ಹಾಕಿ ಹೋದ. ಅವತ್ತು ಸಿಕ್ಕಪಟ್ಟೆ ಬಿಸಿಲು. ಧಾರವಾಡದ ಬಿಸಿಲು ಅಂದ್ರೆ ಕೇಳಬೇಕೆ??? ಒಂದು 40 ನಿಮಿಷ ಅಯೀತು. ಮಧ್ಯದಲ್ಲಿ ಯಾರೋ ಅಡಿವೆಪ್ಪ ಹತ್ತಿರ ಹೋಗಿ ‘ಇವತ್ತು ಸುಧಾಕರ್ ನ Birthday, ಯಾಕೆ ಪನಿಶ್ಮೆಂಟ್ ಕೊಟ್ಟಿರಿ?’ ಅಂತ ಹೇಳಿದ್ದಾರೆ. ನಂತರ ಅವನು ಬಂದು ‘ಏ ಸುಧಾಕರ ಸಾಕು ನೀನು ಓಡ ಬೇಡ ಕಣೋ, ಯಾಕೋ ನಿನ್ನ Birthday ಅಂತ ಹೇಳಿಲ್ಲ ನೀನೂ...ನಿಲ್ಲಿಸೋ’ ಅಂದ. ನಾನು ನಿಂತು, ಒಂದು ಸಲ ಅವನ ಕಡೆ ಲುಕ್ ಕೊಟ್ಟು ಪುನ್ಹ ಓಡೋಕೆ ಶುರುಮಾಡಿದೆ. ಅವನಿಗೂ ಏನ್ ಅನ್ನಿಸಿತೋ ಏನೋ ಅಲ್ಲಿಂದ ಹೊರಟು ಹೋದ. So ಅವತ್ತು ನಮ್ಮ 5 ಜನಕ್ಕೂ ಫುಲ್ ಸುಸ್ತೋ ಸುಸ್ತು.

ಸಂಜೆ 4 ಗಂಟೆ ಅಯೀತು. ಟೀ ಬ್ರೇಕ್. ನಂತರ ಗೇಮ್ಸ್ ನಲ್ಲಿ ಯಾಕೋ ಅಡಿವೆಪ್ಪ ಮಂಕಾಗಿ ಇದ್ದ. ನಾನು ಮಾಮೂಲೀ ಹುಡುಗರ ಜೊತೆ ಕೂಳೆ (Masti) ಮಾಡಿಕೊಂಡೆ ಇದ್ದೆ. ಅವತ್ತು ಮೆಸ್ಸಿ(Mess)ಗೆ ಸಾಮಾನು ತರುವವರ ಹತ್ತಿರ ಎಲ್ಲರಿಗೂ ಕೊಡೋಣ ಅಂತ ಸ್ವೀಟ್ಸ್ ತರಿಸಿದೆ. ಸಂಜೆ ಸ್ನಾನ ಮಾಡಿದ ಕೂಡಲೆ ನನ್ನ ಮನಸ್ಸಿನಲ್ಲಿ ಈಗ ACF ಹತಿರ ಹೋಗಿ ‘ ಸರ್, ಈವತು ನನ್ನ Birthday, ಸ್ವೀಟ್ ತಗೋಳಿ...’ ಅಂದ್ರೆ ಅವರ Expression ಹೇಗಿರುತ್ತೆ? ಅಂತ ಯೋಚಿಸಿ. ಕೊಡಲೇ ಸ್ವೀಟ್ ಪ್ಯಾಕೆಟ್ ತೆಗೆದುಕೊಂಡು ನನ್ನ ಸೈಕಲ್ ನಲ್ಲಿ (ಟ್ರೈನಿಂಗ್ ಚೀಫ್ ಹೊಸ್ಮಟ್ ರವರು ಎಲ್ಲರಿಂದ 2000 ರು ಕಲೆಕ್ಟ್ ಮಾಡಿ ಸೈಕಲ್ ಕೊಡಿಸಿದ್ದರು) ACF ಚೇಂಬರ್ಗೆ ಹೋದೆ. But ಅವರು ಅಲ್ಲಿ ಇರಲಿಲ್ಲ. Peonನಿಂದ ಅವರು 20 ನಿಮಿಷ ಹಿಂದೆ ಬೆಳಗಾಂನಲ್ಲಿ ಇರುವ ತಮ್ಮಮನೆಗೆ ಹೋದರೆಂದು ತಿಳಿಯಿತು. ತಕ್ಷಣ ಫೋನ್ ಮಾಡಿದೆ. ಫೋನ್ ರಿಂಗ್ ಅಗುತ್ತಿದ್ದಂತೆ ಅವರು ‘ ಹಲೋ ಯಾರು?’ಅಂದರು. ನಾನು ‘ ಸರ್ ಗುಡ್ ಇವಿನಿಂಗ್, ಸುಧಾಕರ್ ಸರ್’ ಅಂದೆ. ಅವರು ‘ಏನ್ ಹೇಳಿ… ಏನ್ ಪುನ್ಹ ಅಡಿವೆಪ್ಪ ಹಾಗು ನಿಮ್ಮದು ಗಲಾಟೆನ?’ ಅಂದ್ರು. ನಾನು 'ಹಾಗೇನು ಇಲ್ಲ ಸರ್… ಇವತ್ತು ನನ್ನ Birthday.ನಿಮಗೆ ಸ್ವೀಟ್ ಕೊಡೋಣ ಅಂತ ಬಂದಿದೆ. ನೀವು ಇರಲಿಲ್ಲ, ಎಲ್ಲಿ ಇದ್ದೀರಿ? ಅಂತ ಫೋನ್ ಮಾಡಿದೆ ಅಷ್ಟೇ’ ಅಂದೆ. ಅವರು ‘ಓಹ್ಹ್ಹ್…’ ಅಂದು ಒಂದು 5-6 ಸೆಕೆಂಡ್ ಬಿಟ್ಟು ಫೋನ್ ಕಟ್ ಮಾಡಿದರು. ನನಗಂತು ಏನೋ ಮನಸ್ಸಿಗೆ ಒಂದು ರೀತಿ ಸಮಾಧಾನ ಅಯೀತು. ಹಾಯ್ ಎನ್ನಿಸಿತು!!. ನಾನು ನನ್ನ Birthday.ವಿಷಯ ಹೇಳಿದಾಗ ಅವರ ಮುಖ ಹೇಗಾಯಿತೋ ಅನ್ನೋ ಕಲ್ಪನೆ ಮಾಡಿಕೊಳ್ಳುತ ರೂಂ ಗೆ ಬಂದೆ. ಬಂದ 15 ನಿಮಿಷಕ್ಕೆ ಶರತ್ ಶೆಟ್ಟಿ ಫೋನ್ ಮಾಡಿ ‘ಸುಧಾ ಲೇ... ACF ಬಂದಿದ್ದರೆ. ಮೆಸ್ ಹತ್ತಿರ ಬರ್ಲಾ ಮಗಾ...’ ಅಂದ ತಕ್ಷಣ ಸೈಕಲ್ ತಗೊಂಡು ಮೆಸ್ ಹತ್ತಿರ ಹೋದೆ. ಅಲ್ಲಿ ACF ಸುತ್ತ ಎಲ್ಲ ಟ್ರೈನೀಸ್ ನಿಂತಿದ್ದರು. ACF ನನ್ನ ಹತ್ತಿರ ಬಂದು ‘I’m Sorry ಸುಧಾಕರ್… ನಿಮ್ಮ Birthday ದಿನನೇ ಪನಿಶ್ಮೆಂಟ್ ಕೊಟ್ಟುಬಿಟ್ಟೆ. ಯಾವುದೆ ಹಾರ್ಡ್ ಫೀಲಿಂಗ್ಸ್ ಇಟ್ಟು ಕೊಳ್ಳಬೇಡಪ್ಪ… ನಾನು 10 kms ದೂರ ಹೋಗಿದೆ, ಯಾಕೋ ಬೇಜಾರ್ ಆಗಿ ವಾಪಸ್ ಬಂದೆ’ ಅಂತ ಹೇಳಿ ಬೇರೆ ಟ್ರೈನೀಸ್ ಕಡೆ ತಿರುಗೀ ‘ ನೀವಾರು ಯಾರದ್ರು ಹೇಳ್ಬಾರ್ದ ಅವನ Birthday ಅಂತ?’ ಅಂದು, ಸ್ವೀಟ್ ತಗೊಂಡು ತಿಂದು ಪುನ್ಹ Wishes ಹೇಳಿ ಹೊರಟುಹೋದರು. ನಂತರ ಎಲ್ಲರಿಗೂ ಸ್ವೀಟ್ಸ್ ಕೊಟ್ಟು Birthday ಸೆಲೆಬ್ರೆಟ್ ಮಾಡಿ ನನ್ನ ರೂಂ ಗೆ ಹೋದೆ. ಅವತು ನನ್ನ ಮೈಂಡ್ ಫುಲ್ Calm ಆಗಿ ಇತ್ತು. ACF ಪಾಪ ಒಳ್ಳೆಯವರು ಅನ್ನಿಸ್ತು. Next ಯಾವಗಲಾದ್ರು ಚಾನ್ಸ್ ಸಿಕ್ಕಿದಾಗ ಅಡಿವೆಪ್ಪ ನನ್ನನ್ನು ಸಿಕ್ಕಿಸಿದ ಹಾಗೆ ನಾನು ಅವನನ್ನು ಸಿಕ್ಕಿಸಬೇಕು ಅನಿಸ್ತು.
ಎಲ್ಲರೂ ಹೇಳ್ತಾರೆ Birthday ದಿನ ಅತ್ತರೆ ಇಡೀ ವರ್ಷ ಅಳ್ತೀಯ, ಬೇಜಾರ್ ಮಾಡಿಕೊಂಡರೆ ಇಡೀ ವರ್ಷ ಬೇಜಾರಾಗಿ ಇರ್ತಿಯಾ ಅಂತ But ಅವತು ಪನಿಶ್ಮೆಂಟ್ ತಗೊಂಡ ನನಗೆ ಇಡೀ ವರ್ಷ ಯಾವುದೆ ತುಂಬಾ ಬೇಜಾರ್ ಆಗೂ ಅಂತ ಘಟನೆ ನೆಡಿಲಿಲ್ಲ. ಯಾರದ್ರು Birthday ದಿನ ಹುಷಾರಾಗಿ ಇರಬೇಕು ಅಂತ Advice ಮಾಡಿದರೆ ಅಥವಾ ಯಾರಿಗದ್ರು ಹೇಳ್ತಾ ಇದ್ದರೆ ನನಗೆ 2005 ರ ನನ್ನ Birthday ನೆನಪಿಗೆ ಬಂದು ಸುಮ್ಮನಾಗ್ತಿನಿ.

Saturday, April 10, 2010

ಗಿಟಾರ್... ಆತ್ಮದ ಶಾಪ… & ದೇ ಡೈಡ್ ಯಂಗ್…

ಮೊದಲಿಂದಲೂ ನನಗೆ ಗಿಟಾರ್ ಮ್ಯೂಸಿಕ್ ಅಂದ್ರೆ ಇಷ್ಟ. ಅದರಲ್ಲೂ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ನನ್ನ ಫೇವರೇಟ್. ಹಾಗೆ ಒಮ್ಮೆ ನನ್ನ ಮೊಬೈಲ್ ಗೆ ರಿಂಗ್ ಟೋನ್ ಹುಡುಕುವಾಗ ‘ದಿ ಕ್ರೌ’ (THE CROW) ಅನ್ನೋ ಹೆಸರಿನ ರಿಂಗ್ ಟೋನ್ ಸಿಕ್ಕಿತು. ಅದನ್ತು ಹೆವಿ ಹಾರ್ಡ ರಾಕ್ ಗಿಟಾರ್ ಟೋನ್. ನಾನಂತು ಅದನ್ನು ಸಾಕಷ್ಟು ಸಲ ಕೇಳಿ ಅದನ್ನು ನನ್ನ ಫ್ರೇಂಡ್ಸ ಗೆ ಕೇಳಿಸಿ ‘ಇದನ್ನು ನುಡಿಸಿದ ಅಂದ್ರೆ, ಹೀ ನೋಸ ಎವೆರಿತಿಂಗ ಅಬೌಟ್ ಗಿಟಾರ್ ಅಂತನೆ ಅರ್ಥ ' ಅಂತ ಹೇಳ್ತಾ ಇದ್ದೆ. So ಹಾಗೆ ಅದು THE CROW ಫಿಲಂ ಟ್ಯೂನ್ ಅಂತ ಗೊತ್ತಾಯಿತು. ಫಿಲಂ ಡೌನ್ಲೋಡ್ ಮಾಡಿದೆ. ಅ ಫಿಲಂ ನಲ್ಲಿ ನಟಿಸಿರೋದು ಒಂದು ಕಾಲದಲ್ಲಿ ಕರಾಟೆ ಹಾಗು ಮಾರಷಲ್ ಆರ್ಟ್ಸ್ ಸಾಮ್ರಾಜ್ಯದ ಅನಭಿಶ್ಯ್ಕ್ತ ದೊರೆ ಆಗಿದ ಬ್ರೂಸ್ ಲೀ ಮಗ ಬ್ರಾಂಡನ್ ಲೀ!... ಬ್ರೂಸ್ ಲೀ ಗೆ ಮಗ ಇದ್ದ ವಿಷ್ಯ ನನಗೆ ಗೊತ್ತಿರಲಿಲ್ಲ. ನಾನು ಫಿಲಂ ನೋಡಿದೆ. ಅದು ಒಬ್ಬ ಮ್ಯೂಸೀಷಿಯನ ಪುನರ್ಜನ್ಮ ಪಡೆದು ತನ್ನ ಪ್ರೇಯಸಿ ಯನ್ನು ಕೊಂದವರ ವಿರುದ್ದ ಸೇಡು ತೀರಿಸಿಕೊಳ್ಳುವ ಸ್ಟೋರಿ. ಯಾವುದೇ ಫಿಲಂ ನೋಡಿದರು ನಂತರ ಇಂಟರ್ನೆಟ್ನಲ್ಲಿ ಅ ಫಿಲಂ ಬಗ್ಗೆ, ಆಕ್ಟರ್ಸ್ ಬಗ್ಗೆ, ಬೇರೆ ಎಲ್ಲ ಇನ್ಫಾರ್ಮಶನ್ ನೋಡೋದು ನನ್ನ ಅಭ್ಯಾಸ ಹಾಗೆ THE CROW ಫಿಲಂ ರಿವ್ಯೂ ಓದಿದಾಗ ನನಗೆ ತುಂಬಾ ಶಾಕ್ ಅಯೀತು... ಆ ಚಿತ್ರದ ನಾಯಕ ಬ್ರೂಸ್ ಲೀ ಮಗ ಬ್ರಾಂಡನ್ ಲೀ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಒಂದು ಗನ್ ಫೈರ್ ಸೀನನಲ್ಲಿ ಬೈಯ ಚಾನ್ಸ್ ಗನ್ ನಲ್ಲಿ ಒರಿಜಿನಲ್ ಬುಲ್ಲೆಟ್ ಇದ್ದು ಅದು ಬ್ರಾಂಡನ ಲೀ ಮೇಲೆ ಫೈರ್ ಆಗಿ ಅ ದಿನವೇ ಮೃತಪಟ್ಟನು . So ಅವನ ಅಸಹಜ ಸಾವಿನ ಬಗ್ಗೆ ಕುತೊಹಲ ಮೂಡಿ ಇಂಟರ್ನೆಟ್ ಹೊಕ್ಕಾಗ ನನಗೆ ಸಿಕ್ಕ ಮಾಹಿತಿ ಏನಂದರೆ...


ಆವತ್ತು ಮಾರ್ಚ್ 31, 1993 ಸಮಯ: ಬೆಳಗಿನ ಜಾವ 12.30, ಸ್ಥಳ : ಕಾರೋಲ್ಕೋ ಸ್ಟುಡಿಯೊಸ್ (ಈಗಿನ ಸ್ಕ್ರೀನ್ ಗೇಮ್ಸ್) ವಿಲ್ ಮಿಂಗ್ಟನ್, ನಾರ್ತ್ ಕ್ಯಾರೊಲಿನ, ಬ್ರೂಸ್ಲೀ ಮಗ ಬ್ರಾಂಡನ್ ಲೀಯ ನಾಯಕತ್ವದ ಚಿತ್ರ THE CROW ಚಿತ್ರೀಕರಣ ನೆಡಿತಾಇತ್ತು. ಚಿತ್ರೀಕರಣ ಶೇಕಡಾ 90% ಮುಗಿದಿತ್ತು. ಇನ್ನು ಬರಿ 8 ದಿನಗಳ ಚಿತ್ರೀಕರಣ ಬಾಕಿ ಇತು. ನಾಯಕ ಎರಿಕ್ ಡ್ರವೆನ್(ಬ್ರಾಂಡನ್ ಲೀ) ತನ್ನ ಹಾಗು ತನ್ನ ಗರ್ಲ್ ಫ್ರೆಂಡ್ ಅಪಾರ್ಟಮೇಂಟ್ನಲ್ಲಿ ಅವನ ಗರ್ಲ್ ಫ್ರೆಂಡ್ ನನ್ನು ಹೊಡೆದು ಮಾನಭಂಗ ಮಾಡುವಾಗ ಅಪಾರ್ಟಮೇಂಟ್ಗೆ ನುಗ್ಗುವ ಸೀನ್. ಅಗ್ಗ ಪ್ಲೇಬಾಯ್ (ಮೈಕಲ್ ಮಸ್ಸಿ) ಎಂಬ ವಿಲನ್ ಲೀ ಗೆ ಶೋಟ್ ಮಾಡ್ಬೇಕಾಗಿರುತ್ತೆ. ಶೂಟಿಂಗ್ ಶೇಡ್ಯೋಲ್ ಪ್ರಕಾರ ಎಲ್ಲ ನಡೆದಿತ್ತು. ಬ್ರಾಂಡನ್ ಲೀ ‘Hang Man’s joke’ ಎಂಬ ಫ್ರೇಸ್ ಇದ್ದ ಟೀ-ಶರ್ಟ್ ಮೇಲೆ ಬ್ಲಾಕ್ ಜಾಕೆಟ್ ಹಾಕಿಕೊಂಡು ರೂಮಿಗೆ ನುಗ್ಗುತ್ತಾನೆ. ಮೈಕಲ್ ಮಸ್ಸಿ ತನ್ನ ಬಳಿ ಇದ್ದ .44 ಕ್ಯಾಲಿಬೇರ್ ರಿವಾಲ್ವರ್ ಇಂದ 10-12 ಅಡಿ ದೂರದಿಂದ ಬ್ರಾಂಡನ್ ಲೀಗೆ ಗುಂಡು ಹಾರಿಸುತ್ತಾನೆ. ತಕ್ಷಣ ಬ್ರಾಂಡನ್ ಲೀ ತನ್ನ ಬಲ ಪಕ್ಕೆ ಹಿಡಿದುಕೊಂಡು ಕೆಳಗೆ ಬೀಳುತ್ತಾನೆ, ಬಿದ್ದು ತನಗೆ ತೀವ್ರವಾಗಿ ಗಾಯವಾಗಿದೆ ಎಂದು ಸನ್ನೆ ಮಾಡಿ ತೋರಿಸ್ತಾನೆ. ಆದರೆ ಎಲ್ಲರು ಅವರವರ ಪಾತ್ರದ ಅಭಿನಯದಲ್ಲಿ ತಲ್ಲಿನರಾಗಿದ್ದರಿಂದ ಯಾರಿಗೂ ತಕ್ಷಣ ಬ್ರಾಂಡನ್ ಲೀನ ಗಮನಿಸಲು ಸಾಧ್ಯವಾಗಿಲ್ಲ. ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ‘ಕಟ್’ ಅಂತ ಹೇಳೋ ಮುಂಚೆ ಮೈಕಲ್ ಮಸ್ಸಿ ಹಾರಿಸಿದ್ದ ಬುಲೆಟ್ ಬ್ರಾಂಡನ್ ಲೀ ನ ಹೊಟ್ಟೆಯನ್ನು ದೊಡ್ಡ ತೂತು ಮಾಡಿ ಜೀರ್ಣಾಅಂಗದ ಅಕ್ಕಪಕ್ಕ ಇದ್ದ ಎಷ್ಟೋ ಅಂಗಗಳನ್ನು ಸೀಳಿ ಹೋಗಿ ಬೆನ್ನ ಮೊಳೆ ಪಕ್ಕ ಲಾಡ್ಜ್ ಆಗಿತ್ತು. ಬ್ರಾಂಡನ್ ಲೀ ಗೆ ಬಿದ್ದಿರುವುದು ನಿಜವಾದ ಗುಂಡು ಅಂತ ತಿಳಿದ ತಕ್ಷಣ ಅವನ್ನು ನ್ಯೂ ಹನೋವೆರ್ ಹಾಸ್ಪಿಟಲ್ ಗೆ ಕರೆದು ಕೊಂಡು ಹೋಗಿ 6 ತಾಸು ಆಪರೇಷನ್ ಮಾಡಿ ಬುಲೆಟ್ ತೆಗೆದರು. ಗುಂಡು ತೆಗೆಯುವಾಗ ಹಾಗು ಆಪರೇಷನ್ ವೇಳೆಯಲ್ಲಿ ತುಂಬಾ ರಕ್ತ ಸ್ರಾವವಾಗಿ, ಅವನಿಗೆ 60 ಪಿಂಟ್(28 ಲೀಟರ್) ರಕ್ತ ಕೊಡಲಾಗಿತು. ಇಷ್ಟಾದರು ಬ್ರಾಂಡನ್ ಲೀ ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುಂಡು ತಗುಲಿದ 13 ತಾಸು ಬಳಿಕ ಅವನು ಮೃತನಾದ. ಮಾರ್ಚ್ 31st 1993 ರ ಮಧ್ಯಾನ 1.03 ನಿಮಿಷಕ್ಕೆ ಬ್ರಾಂಡನ್ ಲೀ ಸತ್ತಿದ್ದಾನೆಂದು ಘೋಷಿಸಲಾಯಿತು. ಸಾಯಲು ಕಾರಣ (Cause Of Death) ವನ್ನು GSW – Gun Shot Wound ಎಂದು ದಾಖಲಿಸಲಾಯಿತು. ಆಗ ಅವನಿಗೆ ಕೇವಲ 28 ವರ್ಷ ಹಾಗು ಅವನ ಪ್ರೇಯಸಿ ಎಲಿಜ ಒಟ್ಟಿಗೆ ಅವನ ಮದುವೆಗೆ ಇನ್ನು ಬರೇ 2 ವಾರ ಬಾಕಿ ಇತ್ತು…





BRANDON BRUCE LEE(01-02-1965 – 31-03-1993)


ಈ ಪ್ರಕರಣದ ಬಗ್ಗೆ ತನಿಖೆ ನಡೆದಾಗ ಶೋಟಿಂಗ್ ಸಿಬ್ಬಂದಿಗಳ ಬೇಜವಾಬ್ದಾರಿತನ ಹಾಗು ಅನಾನುಭಾವಿ ಕೆಲಸಗಾರರುಗಳೇ ಕಾರಣ ಎಂದು ವರದಿಮಾಡಿದರು. ಯಾರಿಗೂ ಗೊತ್ತಿಲ್ಲದ ಹಾಗೆ ನಕಲಿ ಗುಂಡಿನ ಜಾಗದಲ್ಲಿ ಅಸಲಿ ಗುಂಡು ಲೋಡ್ ಆಗಿ ಬ್ರಾಂಡನ್ ಲೀ ನ ಬಲಿಪಡೆದಿತ್ತು. ಗುಂಡು ಹಾರಿಸಿದ್ದ ಮೈಕಲ್ ಮಸ್ಸಿ ಹಿಂದೆನೂ ಒಂದು ಕ್ಯಾಮೆರಾ ಇದ್ದು, ಅದು ಬ್ರಾಂಡನ್ ಲೀ ಗುಂಡು ತಗುಲಿದುದ್ದನ್ನು ಸರಿಯಾಗಿ ಸೆರೆ ಹಿಡಿದಿತ್ತಂತೆ. ಆದರೆ ಅದನ್ನು ಡೆವಲಪ್ ಮಾಡದೆ ಹಾಗೆ ನಾಶಪಡಿಸಿದರಂತೆ. ಚಿತ್ರ ನಟ ಮೈಕಲ್ ಮಸ್ಸಿ ಬ್ರಾಂಡನ್ ಲೀ ಸಾವಿಗೆ ಕಾರಣನಲ್ಲ ಇದು ಕೇವಲ ಆಕಸ್ಮಿಕ ಅಪಘಾತ ಎಂದು ಪರಿಗಣಿಸಿ ಅವನ ಮೇಲೆ ಯಾವ ಕ್ರಿಮಿನಲ್ ಆರೋಪವನ್ನು ಹೊರಿಸಲಿಲ್ಲ. ಈ ಬಗ್ಗೆ ಅವನ ತಾಯೀ ಲಿಂಡಾ ಲೀ ಚಿತ್ರ ತಂಡದವರ ಮೇಲೆ ಕೇಸು ಹಾಕಿ, ಬಹಿರಂಗ ಪಡಿಸದ ಅನುಕಂಪ ಮೊತ್ತವನ್ನು ಪಡೆದರು. ಬ್ರಾಂಡನ್ ಲೀ ಯಾ ಸಂಸ್ಕಾರದ ದಿನ ಅವನ ತಾಯೀ ಜಗತ್ತಿನ ಎಲ್ಲ ಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಚಿತ್ರೀಕರಣದ ವೇಳೆಯಲ್ಲಿ ಸುರಕ್ಷಿತ ಕ್ರಮಗಳ (safety measures) ಬಗ್ಗೆ ಹೆಚ್ಚು ಸೀರಿಯಸ್ ಆಗಿರಲು ಮನವಿಮಾಡಿಕೊಂಡರು.


ಬ್ರಾಂಡನ್ ಲೀ ನನ್ನು ವಾಶಿಂಗ್ಟನ್ನ ಸಿಟಲ್ ನಲ್ಲಿರುವ ಲೇಕ್ ವ್ಯೂ ಸೆಮೆಂಟರಿ ಪಾರ್ಕ್ ನಲ್ಲಿ ಅವನ ತಂದೆ ಬ್ರೂಸ್ ಲೀ ಸಮಾಧಿ ಪಕ್ಕ ಹೂಳಲಾಯಿತು. ಆ ಜಾಗವನ್ನು ತನ್ನ ತಾಯೀ ಲಿಂಡಾ ಲೀ ತನ್ನ ಸಾವಿನ ನಂತರ ತನಗಾಗಿ ಮೀಸಲಿಟ್ಟಿಕೊಂಡಿದ್ದಳಂತೆ.



THE CROW ಚಿತ್ರದ ಚಿತ್ರೀಕರಣವು 90% ಮುಗಿದು ಬಾಕಿ ಕೆಲವೊಂದು ಸೀನ್ ಗಳನ್ನು ಬ್ರಾಂಡನ್ ಲೀ ಯ ಗೈರಿನಲ್ಲಿ ಅವನ ಡೂಪ್ ಬಳಸಿ ಹಾಗೆ ಕೆಲವು ಸ್ಪೆಷಲ್ ಎಫೆಕ್ಟ್ ಬಳಸಿ ಮುಗಿಸಲಾಯಿತು. ಚಿತ್ರ ಮುಗಿಸಲು ಅವನ ಪ್ರೇಯಸಿ ಎಲಿಜ ಹಾಲ್ಟ್ನ್ ಹಾಗು ಅವಳ ತಾಯೀ ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ಗೆ ತುಂಬಾ ಸಹಕರಿಸಿದರು. THE CROW ಕೊನೆಗೆ ಮೇ 1994ರಲ್ಲಿ ಬಿಡುಗಡೆಗೊಂಡಿತು. ಹಾಗು ನಿರೀಕ್ಷೆಗೂ ಮೀರಿ ಚಿತ್ರ ಜನಪ್ರಿಯವಾಯಿತು.


THE CROW ಚಿತ್ರೀಕರಣದ ವೇಳೆ ಬ್ರಾಂಡನ್ ಲೀ ಸಾವಲ್ಲದೇ ಇನ್ನು ಅನೇಕ ಅಪಘಾತಗಳು ಸಂಭವಿಸಿದವಂತೆ ಶೂಟಿಂಗ್ ನ ಮೊದಲನೆ ದಿನವೇ ಮೆಟಲ್ ಗ್ರೈಂಡರ್ಗೆ ಹೈ ಟೆನ್ಶನ್ ವೈರ್ ಶಾರ್ಟ್ ಆಗೀ ಒಬ್ಬ ಆಚಾರಿಯ(carpenter) ತನ್ನ ಮುಖ,ಎದೆ ಎಲ್ಲ ಸುಟ್ಟಿಕೊಂಡನಂತೆ, ಇನ್ನೊಬ್ಬ ಕೆಲಸಗಾರನ ಕೈಗೆ scredriver ಸೀಳಿ ನುಗಿತಂತೆ, ಯಾರಿಗೂ ತಿಳಿಯದ ರೀತಿ ಒಂದು ಇಡೀ ಲಾರಿ ತುಂಬಾ ಇದ್ದ ಶೂಟಿಂಗ್ ಸೆಟ್ ನ ಸಾಮಾನು ಬೆಂಕಿಗೆ ಯಲ್ಲಿ ಬೆಂದುಹೋಯಿತಂತೆ, ಸ್ಟಂಟ್ ಮ್ಯಾನ್ ಒಬ್ಬನು ಮೇಲಿಂದ ಬಿದ್ದು ಕೈ,ಕಾಲು,ಎದೆ ಮೂಳೆ(ರಿಬ್ಸ್) ಎಲ್ಲಾ ಮುರಿದುಕೊಂದಡನಂತೆ. ಮತ್ತು ಮಾರ್ಚ್ 1993 ರ ಮೊದಲ ವಾರ ಬಿರುಗಾಳಿ ಬಂದು ಶೂಟಿಂಗ್ ಸೆಟ್ ನ ಅನೇಕ ಭಾಗವನ್ನು ಹಾಳುಮಾಡಿತಂತೆ.


ಬ್ರಾಂಡನ್ ಲೀ ಯಂತೆ ಅವನ ತಂದೆ ಬ್ರೂಸ್ ಲೀ ಕೂಡ ಕೇವಲ ತಮ್ಮ 32 ವಯಸ್ಸಿನಲ್ಲೇ ಅತ್ಯಂತ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಬ್ರೂಸ್ ಲೀ ಕೂಡ ತನ್ನ ಕಡೆ ಚಿತ್ರ ‘ದಿ ಗೇಮ್ ಆಫ್ ದಿ ಡೆತ್ ’ ನ ಸ್ಕ್ರಿಪ್ಟ್ ಅನ್ನು ನಾಯಕಿ ಬೆಟ್ಟಿ ಟಿಂಗ್ ಪೆಯಿಯೊಂದಿಗೆ ತನ್ನಮನೆಯಲ್ಲಿ ಚರ್ಚಿಸುತ್ತಿದ್ದಾಗ ಅವನಿಗೆ ತಲೆನೋವು ಬಂತಂತೆ. ಆಗ ಬೆಟ್ಟಿ EQUAGESIC ಅನ್ನು ಅಸ್ಪಿರ್ನ್ ಮಾತ್ರೆ ನೀಡಿದಳು. ಅದನ್ನು ನುಂಗಿ ಮಲಗಿದ ಬ್ರೂಸ್ ಲೀ ಪುನಃ ಎದ್ದೇಳಲೇಇಲ್ಲವಂತೆ. ಬ್ರೂಸ್ ಲೀ ಸಾವಿನ ಬಗ್ಗೆ ಜನರಿಗೆ ಸಾಕಷ್ಟು ಸಂಶಯವಿತ್ತು. ಅವನನ್ನು ಅವನ ವೈರಿಗಳು ಕೊಲೆ ಮಾಡಿದರು, ಅವನನ್ನು ಹೊಡೆದಾಟದಲ್ಲಿ ಮುಗಿಸಲಾಯಿತು, DRUGS OVERDOSE ಇಂದ ಕೊಲ್ಲಲಾಯಿತು ಅಂತೆಲ್ಲ ವದಂತಿ ಇದ್ದವಂತೆ. ಅದರೆ ಅವನ್ ಮರಣೋತ್ತರ ಪರೀಕ್ಷೆ ಮಾಡಿದ ಡಾಕ್ಟರ ಬ್ರೂಸ್ ಲೀ ಗೆ Medicine ನ ವ್ಯತ್ಯಾಸ ಹಾಗು ಇನ್ನಿತರ ಕಾರಣಗಳಿಂದ ಅವನ ಮೆದಳು ಉಬ್ಬಿ, ಅವನು ಗಾಢ ನಿದ್ರೆಗೆ ಹೋಗಿ ಪುನಃ ಎಚ್ಚರವಾಗದೆ ಮೃತಪಟ್ಟಿದಾನೆ ಎಂದು ಘೋಷಿಸಿದರು.





BRUCE LEE(27-11-1940 – 20-07-1973)


ಇದೆಲ್ಲರ ನಡುವೆ ತಂದೆ ಮಗ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಲು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಎಂಬ ಚಿಕ್ಕ ಸನ್ಯಾಸಿ(Monk) ನ ಶಾಪ ಕಾರಣ ಎಂದು ಸಾಕಷ್ಟು ಜನ ನಂಬಿದ್ದಾರೆ. ಬ್ರೂಸ್ ಲೀ ಗೆ ಯಾವಾಗಲು ಒಂದು ಕನಸು ಬೀಳುತ್ತಿತಂತೆ. ಆ ಕನಸಿನಲ್ಲಿ ಒಂದು ಧ್ವನಿ ‘ನಿನ್ನ ಅಪ್ಪ ತನ್ನ 64 ನೇ ವಯಸ್ಸಿನಲ್ಲಿ ಸಾಯುತ್ತಾನೆ, ನೀನು ಅವನ ಆಯಸ್ಸಿನ ಅರ್ಧದಷ್ಟು ಸಹ ಬದುಕುವುದಿಲ್ಲ’ ಎಂದು ಹೇಳಿತಂತೆ. ಈ ಬಗ್ಗೆ ಬ್ರೂಸ್ ಲೀ ಯು ಅವನ ಅಪ್ಪ ಬಳಿ ವಿಚಾರಿಸಿದಾಗ ಅವನ ಅಪ್ಪ ‘ಅದು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಯಾ ಧ್ವನಿ, ಅವನು ಸಾಯುವಾಗ ನನ್ನ ಸಮಾಧಿ ಪಕ್ಕ ಯಾರನ್ನು ಹೂಳಬೇಡಿ ಎಂದಿದ್ದ. ಆದರೆ ಅಲ್ಲಿ ನಿನ್ನ ತಾತ ನನ್ನು ಹೂತಿದ್ದಾರೆ’ ಅಂದನಂತೆ. ಯಾವಾಗ ಬ್ರೂಸ್ ಲೀ ಗೆ ಅ ಧ್ವನಿ ಕನಸಿನಲ್ಲಿ ಬರುವುದು ಹೆಚ್ಚಾಯಿತೋ ಆಗ ಅವನು ಹಾಂಗ್ ಕಾಂಗ್ ಬಿಟ್ಟು ಅಮೆರಿಕಾಗೆ ಬಂದು ಬಿಟ್ಟ. ಅಮೆರಿಕಾಗೆ ಬಂದರು ಸಹ ಅ ಧ್ವನಿ ಅವನ ಕನಸಿನಲ್ಲಿ ಬಂದು ಕಾಡುವುದು ತಪ್ಪಲಿಲ್ಲವಂತೆ. ಒಂದು ದಿನಇದ್ದಕಿದ್ದಂತೆ ಪುನ ಅ ಧ್ವನಿ ಕನಸಿನಲ್ಲಿ ಬಂದು ‘ ನೀನು ನಿನ್ನ ಜೀವನದಲ್ಲಿ ತುಂಬಾ ಸಾಧಿಸಿ ನಿನ್ನ 32ನೆ ವಯಸ್ಸಿಗೆ ಸಾಯುತ್ತಿಯ ಹಾಗು ನಿನ್ನ ಮಗ ಕೂಡ ಅವನಿಗೆ ಮಕ್ಕಳಾಗುವ ಮೊದಲೆ ಸಾಯುತ್ತಾನೆ’ ಅಂದಿತಂತೆ. ಅದರಂತೆ ಬ್ರೂಸ್ ಲೀ ಯ ತಂದೆ 64 ನೆ ವಯಸ್ಸಿಗೆ ತೀರಿಕೊಂಡರು. ಬ್ರೂಸ್ ಲೀ 1973 ರಲ್ಲಿ ತನ್ನ 32 ವಯಸ್ಸಿನಲ್ಲಿ ಸತ್ತ. ಸಾಯುವ ಮೊದಲೆ ಅವನು ಆ ಧ್ವನಿಯಿಂದ ಪಾರಗಲು ಇತರ ಫೆನ್ಗ್ಷಿ ಮಾಸ್ಟರ್ ಬಳಿ ಹೋಗಿ ಪರಿಹಾರ ಗಳನ್ನೂ ಕೇಳಿದ್ದನಂತೆ. ಹಾಗೆ ಅವನ ಮಗ ಕೂಡ ಅವನ ತನ್ನ ಮದುವೆ ಇನ್ನು 2 ವಾರವಿದೆ ಅಂತನೇ ದಾರುಣವಾಗಿ ಚಿತ್ರಿಕರಣದ ವೇಳೆ ಸತ್ತ. ಇವತ್ತು ಕೂಡ ಬ್ರೂಸ್ ಲೀ ಯಾ ಫ್ಯಾಮಿಲಿ ಅಂದ್ರೆ ಅವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ಒಂದೂ Divorce ಆಗಿದ್ದರೆ, ಇಲ್ಲಾ ಸತ್ತುಹೋಗಿದ್ದಾರೆ, ಇಲ್ಲ ಅಂದ್ರೆ ದೀವಾಳಿಯಾಗಿದ್ದರೆ ಮತ್ತು ಅವರು ಇವೆಲ್ಲ ಆ ಫೆನ್ಗ್ಷಿ ಮಾಸ್ಟರ್ ಸುಂಗ್ ಲಿಯ ಆತ್ಮದ ಶಾಪ ಅಂತರಂತೆ...


ಇದೆಲ್ಲಾ ಓದಿದ ನಂತರ, ಪುನಃ ನಾನೂ ನನ್ನ ಕಂಪ್ಯೂಟರ್ ನಲ್ಲಿದ್ದ ‘THE CROW’ ಸಿನಿಮಾ ದ 65 ನಿಮಿಷ 11 ಸೆಕೆಂಡ್ ನಲ್ಲಿ ಬರುವ ಆ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ಸೀನ್ ನೋಡಿ, ಹಾಗೆ 11 ನಿಮಿಷ 46 ಸೆಕೆಂಡ್ ನಲ್ಲಿ ಬರುವ ಬ್ರಾಂಡನ್ ಲೀ (ಎರಿಕ್ ದ್ರವೆನ್) ಕೊಲೆಯಾಗು ಸೀನ್ ನೋಡಿ ಕಂಪ್ಯೂಟರ್ Off ಮಾಡಿದ ನಂತರ ನನ್ನ ಮನಸ್ಸಿನಲ್ಲಿ ಇವೆಲ್ಲ ನಿಜವೆ?... ಯಾವುದೋ ಆತ್ಮದ ಶಾಪ ಒಬ್ಬ ಮನುಷ್ಯನ ಜೀವನವನ್ನು ಇಷ್ಟರಮಟ್ಟಿಗೆ ಹಾಳುಮಾಡುತ್ತದೆಯೇ? ಅನ್ನೋ ಪ್ರಶ್ನೆ ಮೂಡಿ, ಉತ್ತರ ಸಿಗದೆ ಹಾಗೆ ಸುಮ್ಮನಾದೆ...





Wednesday, March 31, 2010

‘ಎಷ್ಟು ಖರ್ಚು ಮಾಡಿದರು ನಿನ್ನನ ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅನ್ನೋ ಕೊರಗು…

ಪ್ರೀತಿಯ Tiger ,

ನಿನ್ನ ಹೆಸರು ಕೇಳಿದರೆ ಏನೋ ರೋಮಾಂಚನ!!!! ನನಗಷ್ಟೇ ಅಲ್ಲ ಜಗತ್ತಿನ ಬಹಳಷ್ಟು ಜನಕ್ಕೆ. ವಿಶ್ವದಾದ್ಯಂತ ನಿನ್ನನ್ನು ಎಲ್ಲರೂ ಈ ಭೂಮಿಯ ಮೋಸ್ಟ್ charismatic ಪ್ರಾಣಿ ಅಂತರೆ. ನಿನ್ನ ರಾಜಗಂಭಿರ್ಯ, ನಿನ್ನ ಬಲಶಾಲಿತನ, ನಿನ್ನ ಬುದ್ದಿವಂತಿಕೆ ಎಂಥವರಲ್ಲಿಯು ಅಚ್ಚರಿ ಹುಟ್ಟಿಸದೆ ಇರಲಾರದು. ಒಬ್ಬ ಮನುಷ್ಯ ಏನೆಲ್ಲಾ ಗುಣಗಳು ತನ್ನಲ್ಲಿರಬೇಕು ಅಂತ ಬಯಸುತ್ತಾನೋ ಆ ಗುಣಗಳೆಲ್ಲ ನಿನ್ನಲ್ಲಿ ವಂಶಪರ್ಯಂಪರವಾಗಿ ಬಂದಿದೆ ಅನಿಸುತ್ತದೆ. ನಿನಗೆ ಆಂಗ್ಲರು Tiger ಅಂತ ಇಟ್ಟಿರೋ ಹೆಸರಿನ ಮೂಲ ಯಾವುದು ಗೊತ್ತ? ಅದು ಗ್ರೀಕ್ ನ TIGRIS ಎಂಬ ಶಬ್ದದಿಂದ ಬಂದಿರುತ್ತದೆ . ಈ TIGRIS ಪದವು ಪೆರ್ಸಿಯ ಮೂಲದಾಗಿದ್ದು ಅದು ಬಾಣ (Arrow) ಎಂಬ ಅರ್ಥವನ್ನು ಹಾಗು ಪ್ರಾಣಿಯ ವೇಗವನ್ನು ಸೂಚಿಸುತ್ತದೆಯಂತೆ.

ಹಿಂದಿನಿಂದಲೂ ನೀನೊಂಥರ ‘Big sport thing’ ಅಂತಾರಲ್ಲ ಹಾಗೆ. ಹಿಂದಿನ ರಾಜ ಮಹಾರಾಜರಿಗೆ ನಿನ್ನ ಬೇಟೆ ಆಡುವುದೇ ಒಂದು ಹೆಮ್ಮೆಯ ವಿಷಯವಾಗಿತ್ತಂತೆ. ಕಾಡಿನಲ್ಲಿ ಮಚನ್ ಕಟ್ಟಿ ನಿಮ್ಮವರನ್ನ ಬೇಟೆ ಆಡುತ್ತಾ ಇದ್ದರು. ಹಾಗೆ ಊರಿನವರೆಲ್ಲಾ ಸೇರಿ ನಿನ್ನನು ಹೆದರಿಸಿ ಓಡಿಸಿ ಒಂದು ಕಡೆ ಸೇರಿಸಿ ಬೇಟೆ ಆಡುತ್ತಾ ಇದ್ದರು. ನನಗಂತು ನಿನ್ನ ಚರ್ಮ ಎಂದರೆ ತುಂಬಾ ಇಷ್ಟ. ಅ ಚರ್ಮದ ಮೇಲೆ ಇರೋ ಪಟ್ಟಿಗಳು ಎಂಥ ನೋಡುಗರನ್ನು ಸೆಳೆಯುತ್ತವೆ. ನಿಮ್ಮಲ್ಲಿ ಎಷ್ಟೋ ಹುಲಿಗಳಿಗೆ 100ಕಿಂತ ಹೆಚ್ಚು ಪಟ್ಟಿಗಳಿರುತ್ತವೆಯಂತೆ. ಇನ್ನೊಂದು ವಿಸ್ಮಯಕಾರಿ ಅಂಶ ಎಂದರೆ ನಿಮ್ಮಲೂ ನಮ್ಮ ಮನುಷ್ಯರ ಕೈ ಬೆರಳಿನ ಗುರುತಿನ ಹಾಗೆ ಒಂದು ಹುಲಿಯ ಚರ್ಮದ ಪಟ್ಟಿ, ಪಟ್ಟಿಯರೀತಿ, ವಿನ್ಯಾಸ ಇನ್ನೊಂದು ಹುಲಿಯ ತರಹ ಇರುವುದಿಲ್ಲ.(ಯಾವುದೇ 2 ಹುಲಿಗೆ ಒಂದೆ ರೀತಿ ಪಟ್ಟಿ ಇರುವುದಿಲ್ಲ)

ಸಾಂಸ್ಕೃತಿಕವಾಗಿಯೂ ಜಗತ್ತಿನಲ್ಲಿ ನಿನಗೆ ಎಷ್ಟು ಮನ್ನಣೆ ಉಂಟು ಗೊತ್ತ? ಏಷಿಯಾ ಹಾಗು ಸುತ್ತಮುತ್ತ ಎಷ್ಟೋ ರಾಷ್ಟ್ರಗಳಲ್ಲಿ ಕಾಡಿನರಾಜ ಎಂದು ಸಿಂಹದ ಬದಲಾಗಿ ನಿನ್ನ ಆಯ್ಕೆಮಾಡಿದ್ದರೆ. ಚೀನಾ ದೇಶದ ಮುಖ್ಯ ರಾಶಿ ಪ್ರಾಣಿ ನೀನು. ನಮ್ಮ ಇತಿಹಾಸ, ಪುರಾಣ ನೋಡಿದರು ನಿನ್ನ ಉಲ್ಲೇಖವೇ. ಹೊಯ್ಸಳ ಸಾಮ್ರಾಜ್ಯದ ಚಿನ್ನ್ಹೆ, ತಾಯೀ ಚಾಮುಂಡೇಶ್ವರಿಯ ವಾಹನ, ಸ್ವಾಮಿ ಐಯ್ಯಪ್ಪನ ವಾಹನ, etc. ಅಷ್ಟೇ ಅಲ್ಲದೆ jungle book ಎಂಬ ಕಾದಂಬರಿಯಲ್ಲಿ ನಿನ್ನನ್ನು ಒಮ್ಮೆ ವಿಲ್ಲನ್ (ಶೇರ್ ಖಾನ್) ಆಗಿ ಸಹ ತೋರಿಸಲಾಗಿದೆ. ಮತ್ತೆ ನನ್ನ ಫೇವರಿಟ್ ಕಾರ್ಟೂನ್ calvin & hobbes ನಲ್ಲಿ calvin ನ imaginary ಫ್ರೆಂಡ್ಆಗಿ (doll) ಇಡೀ ಜಗತ್ತಿನಲ್ಲಿ ಮಿಂಚಿದ್ದಿಯ.

ಮೊನ್ನೆ ಅನಿಮಲ್ ಪ್ಲಾನೆಟ್ ಎಂಬ ಚಾನೆಲ್ 73 ದೇಶದಲ್ಲಿ ನೆಡಸಿದ ಜಗತಿನ ಅತ್ಯಂತ ಅಚ್ಚು ಮೆಚ್ಚು ಪ್ರಾಣಿ ಸಮೀಕ್ಷೆಯೆಲ್ಲಿ ನಿನ್ನನೇ ಹೆಚ್ಹು ಜನ ಆಯ್ಕೆ ಮಾಡಿದ್ದಾರೆ. ಹುಲಿ 21%, ನಾಯೀ 20%, ಡಾಲ್ಫಿನ್ 13% , ಕುದುರೆ 10%, ಸಿಂಹ 9%, ಹಾವುಗಳು 8% ಹಾಗು ಉಳಿದ ಮುಂತಾದ ಪ್ರಾಣಿಗಳು.

ನಿನ್ನನ್ನ ನಾನು ವೈಲ್ಡ್ ಆಗೀ ನೋಡಬೇಕು ಅಂತ ಪಣತೋಟ್ಟಿ 2001ರಿಂದಲೂ ಹುಡುಕಲು ಶುರುಮಾಡಿದೆ. 3 ದಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿನ್ನ ಸೆನ್ಸಸ್ಗೆ ಬಂದು 40-50 ಕಿಲೋಮೀಟರ ಕೋರ್ ಜೋನನಲ್ಲೆಲ್ಲೆ ಅಲೆದೆ. ನಿನ್ನನ್ನು ಹುಡುಕಲು ಹೋಗಿ ಕಾಡಿನಮೇಲೆ ಪ್ರೀತಿ ಉಂಟಾಗಿ ಫಾರೆಸ್ಟ್ ಡಿಪಾರ್ಟ್ಮಂಟ ಸೇರಿ ಪುನ್ಹಃ ನಿನ್ನನ್ನು ಈ ಬಾರಿ ನೋಡಲೇ ಬೇಕೆಂದು wildlife ರೀಜನ್ ನ ಇನ್ಟಿರಿಯರ್ ಜಾಗಕೆ ಡೇಪ್ಟೇಷನ್ ಬಂದು ಹಗಲು ರಾತ್ರೀ ಸುತ್ತಿದೆಷ್ಟು? ಮೈಸೂರ್ zooಗೆ ಹೋದಾಗ ಯಾವ ಪ್ರಾಣಿನು ನೋಡದೆ ಸೀದಾ ನಿನ್ನ ಮನೆ ಹತಿರ ಬಂದು ಕಣ್ಣುತುಂಬ ನಿನ್ನ ನೋಡಿ ಸಂತೋಷ ಪಡುತ್ತಿದ್ದೆ. ಇವತ್ತು ಇದನ್ನೆಲ್ಲಾ ಯಾಕೆ ನಿಂಗೆ ಬರೆದು ಹೇಳ್ತಾ ಇದ್ದಿನಿ ಅಂದ್ರೆ ನಾನು ಸೆನ್ಸಸ್ಗೆ ಹೋದಾಗ ಅಂದರೆ 2002 ರಲ್ಲಿ ನೀನು ಮತ್ತು ಇತರ ಎಲ್ಲ ಹುಲಿಗಳ ಸಂಖ್ಯೆ 3642(Tigers ಲೆಫ್ಟ್ ಇನ್ ವೈಲ್ಡ್ ಇನ್ ಇಂಡಿಯಾ) ಅಂತ ತಿಳಿಸಿದರು. ಅದೇ 2009 - 10 ರ ಸೆನ್ಸಸ್ ರಿಪೂರ್ಟನಲ್ಲಿ ನಿಮ್ಮಗಳ ಸಂಖ್ಯೆ ಕೇವಲ 1411. ಯಾಕೋ ನಿನ್ನ ವೈಲ್ಡ್ ಆಗೀ ಕಾಡಿನಲ್ಲಿ ನೋಡಬೇಕು ಎಂಬ ಕನಸು ಕನಸಾಗೇ ಉಳಿಯುತ್ತಾ ಅಂತ ಡೌಟ್.

ನಿಮ್ಮಗಳ ಸಂಖ್ಯೆ ಇಷ್ಟು ಕಡಿಮೆಯಾಗಲು ಕಾರಣ ನಿನಗೆ ಗೊತ್ತ? ಮೊದಲಿಗೆ ನಮ್ಮಜನಗಳು ನಿಮ್ಮ ಕಾಡನ್ನು ಹಾಳುಮಾಡ್ತಾಇರೊದು. ಅವರು ಹೀಗೆ ಮಾಡಿದರೆ ನೀನು ಎಲ್ಲಿ ಇರ್ತೀಯ? ಜಾಗವೇ ಇಲ್ಲದೆ ನಿನ್ನ ಸಂಥಾನಾಭಿವ್ರುದ್ಧಿಯು ಹೇಗೆ ಸಾಧ್ಯ? ಅಂತೆಲ್ಲ ನಮ್ಮ ಜನಗಳು ಯೋಚನೆ ಮಾಡುವುದೇ ಇಲ್ಲ. ಎರಡನೆ ಕಾರಣ ಅಂದ್ರೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಮತ್ತು ನಿನ್ನ ದೇಹಕ್ಕಿರುವ ಬೆಲೆ. ನಮ್ಮ ದೇಶದಲ್ಲಿ 2008 ರಲ್ಲಿ 28 ಹುಲಿ, 2007 ರಲ್ಲಿ 30 ಹಾಗು 2009 ರಲ್ಲಿ 65 ಹುಲಿಗಳನ್ನು ಕೊಂದಿದ್ದಾರೆ. ಕೇಳಿದರೆ ಮೈಜುಮ್ಮಯೆನ್ನುತೆ ಅಲ್ಲಾ? ಅದು ಬರೀ ಸಿಕ್ಕಿ ಕೇಸ್ ಬುಕ್ ಅಗೀರೋ ಸಂಖ್ಯೆ, ಸಹಜ ಸಾವು ಅಂತ, ಬೆಳಕಿಗೆ ಬರದೆ ಇರೋಂಥಹ ಸಂಖ್ಯೆ ಇನ್ನು ಜಾಸ್ತಿ. ಭಾರತದಲ್ಲಿ 1994 – 2004 ರ ತನಕ 10 ವರ್ಷಗಳಲ್ಲಿ 684 ಹುಲಿ ಬೇಟೆ ಪ್ರಕರಣಗಳು ದಾಖಲಾಗಿವೆ.

ಈಗ ನಾನು ಹೇಳೋ ವಿಷಯ ಕೇಳಿದ್ರೆ ನಿನ್ನಷ್ಟು ಆಶ್ಚರ್ಯ ಹಾಗು ಅಸಹ್ಯ ಪಡೋ ಪ್ರಾಣಿ ಭೊಮಿ ಮೇಲೆ ಮತ್ತೊಂದು ಇರಲಾರದು. ಇವತ್ತಿನಂತೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಬೆಲೆ ಬರೊಬ್ಬರಿ $ 10000 ಡಾಲರ್ಸ್!!!. ಅದು ಇಡಿಯಾಗಿ. ನಿನ್ನ ಕತ್ತರಿಸಿ ತುಂಡು ತುಂಡು ಮಾಡಿ ಮಾರಿದರೆ ನಿನ್ನ ಬೆಲೆ ಆಗ $ 50000…!!!! ನಿಮಗಳಿಗೆ ಗೊತಿಲ್ಲದ ಹಾಗೆ ಮನುಷ್ಯರು ನಿಮಗೆ ಹೇಗೆ ಬೆಲೆ ನಿರ್ಧಾರ ಮಾಡಿದರೆ ನೋಡು. ನಿನ್ನ ದೇಹದ ಪ್ರತಿ ಭಾಗ ಕೂಡಾ ಬೇಡಿಕೆಯಲ್ಲಿದೆ. ನಿನ್ನ ದೇಹದ ಭಾಗಗಳನ್ನು ಹೆಚ್ಚಾಗಿ ಏಷಿಯಾ ಹಾಗು ಸುತ್ತ ಮುತ್ತಲ್ಲಿ ಸಂಪ್ರದಾಯಕ ಔಷಧಿಗೆ ಬಳಸುತ್ತಾರೆ. ನಿನ್ನ ಬ್ರೈನ್ ಮೊಡವೆ ಹಾಗು ಆಲಸ್ಯ ಓಡಿಸುವ ಔಷಧಿಗೆ, ನಿನ್ನ ಮೀಸೆ ಹಲ್ಲುನೋವಿಗೆ, ಕಣ್ಣು ಮೂಗು ಮಲೇರಿಯಾ ಔಷಧಿಗೆ. ಮೂಳೇಗಳು ಹುಣ್ಣು ಹಾಗು ಟೈಫೈಡ ನಿವಾರಿಸಲು. ನಿನ್ನ ಅತ್ಯಾಕರ್ಶಕ ಚರ್ಮದ ಬೆಲೆ ಗೊತ್ತ? ಕನಿಷ್ಟ ಎಂದರು $ 15000. ಹಾಂಕಾಂಗ್ ನಲ್ಲಿ ನಿನ್ನ ಮೂಳೇಪುಡಿ ಕೆಜಿಗೆ $ 3600 ಅಂತೆ. ತೈವಾನ್ ನಲ್ಲಿ ನಿನ್ನ ಕಣ್ಣುಗಳ ಬೆಲೆ $175 – $250… ನಿನ್ನನ್ನು ಔಷಧಿಗೆ ಬರಿ ಏಷಿಯಾ ಅಲ್ಲದೆ ಲಂಡನ, ಬರ್ಮಿಂಗಹಾಂ, ಮಾನ್ಚಿಸ್ಟರ್, ಮುಂತಾದ ದೇಶಗಳಲ್ಲೂ ಉಪಯೋಗಿಸುತ್ತಾರೆ. 1998 ರಲ್ಲಿ WWF ಎಂಬ ಸಂಸ್ಥೆಯು ಜಕಾರ್ಥ ಎಂಬಲ್ಲಿ ನಡುರಸ್ತೆಯಲ್ಲಿ 2 ಹುಲಿ ಮರಿಗಳನ್ನೂ ಪೆಟ್ ಶಾಪ್ ನಲ್ಲಿ ಓಪನ್ ಆಗೀ ಮಾರುತ್ತಿದ್ದರ ಬಗ್ಗೆ ವರದಿ ಮಾಡಿತ್ತು.

ಭಾರತದಲ್ಲೆ ಅಲ್ಲ ವಿಶ್ವದಲೆಲ್ಲಾ ನಿಮ್ಮ ಜನಗಳ ಸಂತತಿ ಅಳಿವಿನಲ್ಲಿದೆ. ಇವತ್ತು ಒಟ್ಟರೆ ವಿಶ್ವದಾದ್ಯಂತ ಕಾಡಿನಲ್ಲಿ ಬದುಕಿರುವ ಹುಲಿಗಳ ಸಂಖ್ಯ 3000 –4000 ಅಷ್ಟೇ. ಇದೆ 100 ವರ್ಷಗಳ ಹಿಂದೆ ಅದು 100000 ಇತ್ತು !!!. ನಿಮಲ್ಲಿದ್ದ 9 ಜಾತಿ ಹುಲಿಗಳಲ್ಲಿ ಈಗಾಗಲೇ 3 ಜಾತಿ ಹುಲಿಗಳು (ಬಾಲಿ, ಜಾವನ್ ಮತ್ತು ಕ್ಯಾಸ್ಪಿಯನ್) 1970 ರಲ್ಲೇ ವಿನಾಶಗೊಂಡಿದ್ದು ಉಳಿದ ಜಾತಿಗಳಾದ ಬಂಗಾಲ ಹುಲಿ – 1411, ಇಂಡೊಚೀನ ಹುಲಿ – 600 ರಿಂದ ೮೦೦, ದಕ್ಷಿಣ ಚೀನಾ ಹುಲಿ ಕಾಡಿನಲ್ಲಿ ಇದ್ದ ಎಲ್ಲ ಹುಲಿ ವಿನಶಗೊಂದಿದ್ದು ಬರಿ zooನಲ್ಲಿ 15 ರಿಂದ 20 ಹುಲಿ ಇದೆ, ಸೈಬಿರಿಯಾದ ಹುಲಿ - ಅಂದಾಜು 400, ಸುಮಾತ್ರದ ಹುಲಿ 300 ರಿಂದ 350 ಕಡೆಯದಗೀ ಮಲ್ಲೆಶಿಯಾದ ಹುಲಿ 400 ಇವೆ ಎಂದು ಅಂದಾಜಿಸಲಾಗಿದೆ.

ಸಂಸಾರ್ ಚಂದ್,ತಿನ್ಲಿ, ಮೊಹಮ್ಮೆದ್ ಯಾಕುಬ್, ಶಬೀರ್ ಹಸ್ಸನ್ ಖುರೇಷಿ ಅಂತ ಪಾಪಿ ಗಳು ನಿನ್ನ ವಂಶವನ್ನೇ ನಿರ್ಮೂಲನ ಮಾಡಲು ಪಣತೊಟ್ಟಿರುವಂತೆ ನಿನ್ನವರನ್ನು ಬೇಟೆ ಆಡಿ ಕೊಂದು ಹೊರದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು (ಸದ್ಯ ಈಗ ಎಲ್ಲರೂ ಜೈಲಿನಲ್ಲಿದ್ದಾರೆ). ಕಡೇಲಿ ಹೇಳಿದನಲ್ಲ ಖುರೇಷಿ ಅಂತ ಅವನನ್ನು January 2000ರಲ್ಲಿ ಕಾಗಾ ಎಂಬ ಕೇಸ್ ನಲ್ಲಿ ಹಿಡಿದಾಗ ಅವನಿಂದ ವಶ ಪಡಿಸಿಕೊಂಡ ವಸ್ತುಗಳ ಲಿಸ್ಟ್ ನೋಡಿದರೆ ಸುಸ್ತಾಗುತ್ತೆ... 70 ಚಿರತೆ ಚರ್ಮ, 18000 ಚಿರತೆ ಉಗುರು, 4 ನಿಮ್ಮವರ(ಹುಲಿ) ಚರ್ಮ, 132 ನಿಮ್ಮವರ(ಹುಲಿ) ಉಗುರು, 221 ಕೃಷ್ಣ ಮೃಗದ ಚರ್ಮ. ಇಂಥ ನೀಚಜನರಿಗೆ ಏನು ಶಿಕ್ಷೆ ಕೊಡಬೇಕು ನೀನೆ ಹೇಳು…?

ಹೇಗೋ ಸದ್ಯ ಈಗ ಜನ ಎಚ್ಚೆತ್ತುಕೂಂಡಿದ್ದಾರೆ. ಎಲ್ಲಾ ಕಡೆ ನಿನ್ನ ಹಾಗು ನಿಮ್ಮವರನ್ನು ಉಳಿಸುವ ಜಾಥ ನಡೀತಾ ಇದೆ. ನೀನು ಆಹಾರ ಸರಪಳಿಯಲ್ಲಿರೂ ಮುಖ್ಯ ಜೀವಿ, ನೀನೇ ಹೋದರೆ ಇಡೀ ecosystem ಹಾಳಾಗುತ್ತೆ. ನಾನಂತು ನನ್ನ ಸ್ನೇಹಿತರಿಗೆ, ನನ್ನ ಜೊತೆ ಕೆಲ್ಸಮಾಡುವವರಿಗೆ ಆಗಾಗ ನಿನ್ನನು ಉಳಿಸಲು ನಮ್ ಕೈಯಲಿ ಎನ್ ಎನ್ ಮಾಡಬಹುದು ಅಂತ ಹೇಳ್ತಾ ಇರ್ತೆನೆ.

‘ ಆದಷ್ಟು ಕಾಡನ್ನು ಅದರ ಪರಿಸರವನ್ನು ಹಾಳು ಮಾಡಬೇಡಿ’
‘ಒಳ್ಳೆ ಜವಬ್ದಾರಿ ಪ್ರವಾಸಿಗರಾಗಿ ವರ್ತಿಸಿ’
‘ಕಾಡಿಗೆ ಹೋದಾಗ ಅಲ್ಲಿ ಹೆಜ್ಜೆ ಗುರುತು ಬಿಟ್ಟು ಏನು ಬಿಡಬೇಡಿ ಹಾಗೆ ಅಲ್ಲಿಂದ ವಾಪಸ್ಸು ಬರುವಾಗ ನೆನಪು ಬಿಟ್ಟು ಏನನ್ನೂ ತರಬೇಡಿ’
‘ಬೇಟೆ ಹಾಗು ಬೇಟೆ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋಗಿ ತಿಳಿಸಿ’
‘ನಿರ್ಧಾರ ತೆಗೆದುಕೊಳೊ ಅಧಿಕಾರಿಗಳಿಗೆ (prime minister & local MP) ಹುಲಿ ಅಳಿವಿನಂಚಿನಲ್ಲಿರುವುದರ ಬಗ್ಗೆ ಪತ್ರ ಬರೆಯಿರಿ’

ಎಂದೆಲ್ಲ ಹೇಳ್ತಾ ಇರ್ತೆನೆ. ನಿನ್ನನು ಉಳಿಸಲು ನನ್ನ ಕೈಲೀ ಏನು ಸಾಧ್ಯವೂ ಅದನ್ನೆಲ್ಲಾ ಮಾಡ್ತಾ ಇದ್ದೇನೆ. ಅದರೆ ಎಲ್ಲಿವರಗೆ ಫಾರೆಸ್ಟ್ ಡಿಪಾರ್ಟ್ಮಂಟನಲ್ಲಿ ಖಾಲಿ ಇರುವ ಪೋಸ್ಟ್ ಗಳನ್ನೂ ಭರ್ತಿ ಮಾಡುವುದಿಲ್ಲವೊ, ಕಾಡಿನ ಅಕ್ಕಪಕ್ಕ ಇರುವ ಜನರನ್ನು, ಊರನ್ನು ಸ್ಥಳಾಂತರ ಮಾಡುವುದಿಲ್ಲವೂ ಅಲ್ಲಿಯವರೆಗೂ ನಿನ್ನನ್ನು, ನಿಮ್ಮವರನ್ನು ಉಳಿಸೋದು ಕಷ್ಟ.

ನಮ್ಮ ಭಾರತ ಸರ್ಕಾರ ಕೂಡ ಮುಂದಿನ 5 ವರ್ಷಕ್ಕೆ ನಿನ್ನನ್ನು ಹಾಗು ನಿಮ್ಮವರನ್ನು ಉಳಿಸಲು $150 million dollars ಅನುದಾನವನ್ನು ಮಿಸಲಿಟ್ಟಿದೆ. ಜಗತ್ತಿನಾದ್ಯಂತ ನಿನ್ನನು ಉಳಿಸಲು ಸಾವಿರಾರು ಕೊಟ್ಯಾಂತರ ರೂಪಾಯಿಯನ್ನು ವ್ಯಯಿಸುತ್ತಿದ್ದಾರೆ. ಆದರೆ ಈಗ ಸಧ್ಯ ನನ್ನಲಿ ಇರುವ ಕೊರಗು ಏನೆಂದರೆ ‘ ಎಷ್ಟು ಖರ್ಚು ಮಾಡಿದರು ನಿನ್ನನು ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅಂತ.

ಇಂತಿ
ಜಗತ್ತಿನಲ್ಲಿ ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುವವ....

Monday, March 22, 2010

2002ರ ಎಲಿಫಂಟ್ ಸೆನ್ಸಸ್ ಹಾಗು ಕುಡಿಯೋ ನೀರು...

ಫಿಲಂಗಳಲ್ಲಿ ಕಾಡು, ದಟ್ಟವಾದ ಹಸಿರು ಗಿಡ ಮರ, ನದಿ, ಪ್ರಾಣಿಗಳನ್ನು ನೋಡಿ ಪುಲ್ ಇಂಪ್ರೆಸ್ ಆಗಿ 2001ರ ಅಕ್ಟೋಬರ್ ತಿಂಗಳಲ್ಲಿ ಟೈಗರ್ ಸೆನ್ಸಸ್ಗೆ ಅಂತ 3 ದಿನ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಆ ಮಳೆ ಹಾಗು ಮಂಜಿನಲ್ಲಿ ಕಡಿಮೆ ಅಂದ್ರು 40 ಕಿಲೋಮೀಟರು ಅನ್ನು ಸರ್ವೇ ಮಾಡಿದ್ದೆವು. ಆಗ 5 ಜನ ಹೋಗಿದ್ವಿ ಅದ್ರಲ್ಲಿ ಇಬ್ಬರು ಲೇಡಿಸ್ ಇದ್ರೂ, ಹಂಗಾಗಿ ಫೆಸಿಲಿಟಿ ಸ್ವಲ್ಪ ಚೆನ್ನಾಗೆ ಇತ್ತು. ಪುನಃ 7 ತಿಂಗಳ ನಂತರ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಎಲಿಫಂಟ್ ಸೆನ್ಸಸ್ ಗೆ ಇಷ್ಟ ಹಾಗು ಆಸಕ್ತಿ ಇದ್ದ ಜನ ಬರಬಹುದು ಅಂತ ಪೇಪರನಲ್ಲಿ ಹಾಕಿದಾಗ ನಾನು ಯದು ಮತ್ತೇ ದೀಪುನ ಕರೆದು " ಲೋ ಹೋಗೋಣ ಕಣ್ರೋ... ಮಸ್ತಾಗಿ ಇರುತ್ತೆ, 3 ದಿನನದ್ರು ಈ ಸಿಟಿ ಲೈಪ್ ಬಿಟ್ಟು ಕಾಡು ಸೇರೋಣ" ಅಂತ ಅವರನ್ನು ಮತ್ತು ಅವರ ತಂದೆ ತಾಯೀಯವರನ್ನು ಒಪ್ಪಿಸಿ, ನಮ್ಮ ಅಣ್ಣ ಶಶಿ ದೋಸ್ತ್ ಶ್ರೀಧರನ ತಂದೆ ತಂಗರಾಜುರವರು ರೇಂಜರ್ ಆಗಿದ್ದ ಗುಂಡ್ರೆ ಫಾರೆಸ್ಟ್ ಗೆ ಪೋನ್ ಮಾಡಿಸಿ ಅವರ ಇನ್ ಪ್ಲೋಯನ್ಸ್ ಮಾಡಿಸಿ ಮಧ್ನಾಹ 3 ಗಂಟೆಗೆ ಮೈಸೂರನಿಂದ ಹೋರಟವು

ಮೈಸೂರ್ ಯಿಂದ ಬಂಡೀಪುರಕ್ಕೆ ಹೋಗಿ ಅಲ್ಲಿಂದ ರೇಂಜರ್ ನಮ್ಮನ್ನು ಹಾಗು ನಮ್ಮ ಹಾಗೆ ಸೆನ್ಸಸ್ಗೆ ಬಂದಿದ್ದ ಇನ್ನಿಬ್ಬರನ್ನುಜೀಪ್ ನಲ್ಲಿ ಕರ್ಕೊಂಡು, ಅ ಇಬ್ಬರನ್ನು ನಾಯೀಹಳ್ಳ ಕ್ಯಾಂಪಿಗೆ ಡ್ರಾಪ್ ಮಾಡಿ ನನ್ನನ್ನ , ದೀಪುನ ಹಾಗು ಯದುನ ಕರ್ನಾಟಕ ಹಾಗು ಕೇರಳ ಗಡಿಯಲ್ಲಿರುವ ಪುಲ್ ಡೆನ್ಸ & ತಿಕ್ಕ್ ಅದ ಗುಂಡ್ರೆ ಫಾರೆಸ್ಟ್ ಮಧ್ಯ ಇರುವ ಐ ಬಿ ಗೆ ಡ್ರಾಪ್ ಮಾಡಿದರು. ಅಲ್ಲಿದ್ದ ವಾಚರ ಪುಟ್ಟ ಸ್ವಾಮಿ , ಮಾರ, ಚಂದ್ರು ಹಾಗು ಕುಕ್ ಸುಬ್ಬಣ್ಣಗೆ ರೇಂಜರ್ ರವರು "ಇವರು ನಮ್ಮ ಮಗನ ಫ್ರೆಂಡ್ಸ್ ಗಳು ಚೆನ್ನಾಗಿ ನೋಡಿಕೊಂಡು, ಕಡು ತಿರುಗಿಸಿ, ಸರ್ವೇ ಮಾಡಿಸಿ" ಅಂತ ಹೇಳಿ ನಮ್ಮ ಕಡೆ ತಿರುಗಿ " ಆನೆ ಬಹಳ ಢೇಂಜರ್ ಅನಿಮಲ್ ಕಣ್ರಪ್ಪ, ಹುಷಾರು... ನಾನು ಪುನಃ ಬರತ್ತೀನಿ." ಅಂದು ಹೊರಟುಹೋದರು. journey ಯಿಂದ ಸುಸ್ತಾಗಿದ್ದ ನಾವು ಪುಟ್ಟ ಸ್ವಾಮಿ ಹತ್ತಿರ ನಾವು ನಾಳೆಯಿಂದ 3 ದಿನ ಏನ್ ಮಾಡಬೇಕು?, ಎಷ್ಟು ದೂರ ನಡಿಬೇಕು? ಅಂತ ಕೇಳ್ತಾ ಸುಬ್ಬಣ್ಣ ಮಾಡಿದ್ದ ಅನ್ನ ,ಸಾರು ತಿಂದು, ಇದ್ದ ಕಾಟನಲ್ಲಿ ಮೂರುಜನ ಮಲಗಿದವು.
ಬೆಳಿಗ್ಗೆ ಐ ಬಿ ಹೊರಗಿಂದ ದೀಪು " ಲೋ ಮಗ ಬಾರೂ ಇಲ್ಲಿ ಜಿಂಕೆ, ನವಿಲು ಎಷ್ಟ ಹತ್ತಿರ ಬಂದಿದ್ದವೆ ನೋಡು ಬಾ ಇಲ್ಲಿ" ಎಂದ. ನಾನು ಯದು ಹೊರಗೆ ಬಂದು ನೋಡಿದ ಕೊಡಲೇ ಯದು "ಸಾರ್ಥಕ ಅಯೀತು ಮಗ ಜೀವನ" ಅಂದ. ಐ ಬಿ ಮುಂದೆ ಕರ್ನಾಟಕಗೆ ಹಾಗು ಕೇರಳಗೆ ಬಾರ್ಡರ್ ಹಾಕಿದ ಹಾಗೆ ಕಬಿನಿ ನದಿ ಹರಿತ ಇತ್ತು. ನದಿಯ ಹತ್ತಿರ ಹೋದ್ರೆ 20 ಅಡಿ ಆಳದ ನದಿ ಬೇಸಿಗೆಗೆ 5-6 ಅಡಿಗೆ ಒಣಗಿತ್ತು ಹಾಗು ನೀರು ಒಳ್ಳೆ ನಮ್ಮ ಸೇಟೂ ಹೋಟೆಲ್ ಟೀ ತರಹ ಕೆಂಪಗಿತ್ತು. ಯದು "ಮಗ ಅದೇನ್ಲಾ ನೀರ್ ನಲ್ಲಿ ತೇಲತಾ ಇರೂದು? " ಅಂದ ಅದಕೆ ನಾನು "ಆನೆ ಲದ್ದಿ ಮಗ!!" ಎಂದೆ. ಸರಿ ನಾವು ಮೂವರು ಐ ಬಿ ಗೆ ವಾಪಸ್ಸು ಬಂದು ನಿತ್ಯಕರ್ಮ, ಸ್ನಾನ ಎಲ್ಲ ಮುಗಿಸಿ ಬರುವಷ್ಟರಲ್ಲಿ ಸುಬ್ಬಣ್ಣ ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ರು. "ಏನೇ ಹೇಳಿ ಕಾಡಿನಲ್ಲಿ ಏನ್ ಮಾಡಿ ತಿಂದರು ಮ್ರುಷ್ಟನ್ನದತರಹ ಇರುತ್ತೆ" ಅಂದ ದೀಪು ಉಪ್ಪಿಟ್ಟು ತಿನ್ನುತ. ನಾನು ಪುಟ್ಟ ಸ್ವಾಮಿ ಗೆ "ಸರ್ ಈ ಕಾಡಲ್ಲಿ ಸ್ನಾನಕ್ಕೆ, ಅಡುಗೆಗೆ ನೀರು ಎಲ್ಲಿಂದ ತರ್ತೀರ?" ಎಂದೇ ಅದಕ್ಕೆ ಪುಟ್ಟ ಸ್ವಾಮಿ "ಐ ಬಿ ಮುಂದೇನೆ ನದಿ ಇಟ್ಕೊಂಡು ನೀರಿಗೆ ಯಾಕೆ ಅಲೆಯೋಣ ಸರ್ !!!" ಅಂದ. ತಕ್ಷಣ ನಾನು, ದೀಪು, ಯದು ಮೂವರು ಆನೆ ಲದ್ದಿ ತೇಲತ ಇದ್ದ ಅ ನದಿ ನೆನಸ್ಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು . ಮಾರನಿಗೆ ಅರ್ಥವಾಗಿ "ಏನ್ ತಲೆ ಕೆಡಿಸ್ಕೊಳಬೇಡಿ ಸರ್... ಚೆನ್ನಾಗಿ ಕಾಯಿಸಿ ಅಡುಗೆಗೆ ಉಪಯೋಗಿಸುದು" ಅಂದ.

ಸರಿ ತಿಂಡಿ ನಂತರ ಸೆನ್ಸಸ್ಗೆ ಹೊರಟೆವು. ಹೊರಡೋ ಮುಂಚೆ ಪುಟ್ಟ ಸ್ವಾಮಿ ನಮಗೆಲ್ಲ ಕಾಡಿನಲ್ಲಿ ಹೇಗಿರಬೇಕು ಅಂತ ಬ್ರೀಫೀಂಗ ಮಾಡಿದರು. " ಯಾರು ಕಾಡಿನಲ್ಲಿ ಅನವಶ್ಯಕವಾಗಿ ಹಾಗು ಜೋರಾಗಿ ಮಾತಾಡಬೇಡಿ, ನಮ್ಮ ಜೊತೇನೆ ಇರಿ ಅಲ್ಲಿ ಇಲ್ಲಿ ಹೋಗಬೇಡಿ" ಅಂತೆಲ್ಲ ಹೇಳಿದ್ರು. ನಂತರ 10 ಕಿಲೋಮೀಟರು ಟ್ರೆಕ್ ಮಾಡಿದೆವು"... ಆನೆ, ಅದರ ಲದ್ದಿ, ಅದರ ನಿಶಾನೆಗಳನ್ನು ಹುಡುಕಿಕೊಂಡು. ಉಪ್ಪಿಟ್ಟು ಆಗಲೇ ಕರಗಿಹೋಗಿತ್ತು. ಯದು "ಮಧ್ನಹದ ಊಟ ಎಲ್ಲಿ?"ಎಂದು ಚಂದ್ರನ್ನ ಕೇಳಿದ. ಅದಕ್ಕೆ ಪುಟ್ಟ ಸ್ವಾಮಿ "ಊಟ? ರಾತ್ರಿನೇ..." ಅಂದ್ರು. ನನಗಂತು ಕೋಪಹತಿಹೋಯಿತು "ನನ್ನ ಕೈಲಿ ಇನ್ನು ನಡಿಯಕ್ಕೆ ಆಗಲ್ಲ" ಅಂದೆ. ಮಾರ ಅದಕ್ಕೆ " ಇಲ್ಲೇ ಇನ್ನು 1 ಕಿಲೋಮೀಟರು ಚೆನ್ನಮ್ಮನ ಕೆರೆ ಸಿಗುತ್ತೆ, ಅಲ್ಲಿ ಸಂಜೆವರೆಗೂ ಕೂತು ಆನೆ ಕಾಯಬೇಕು. ಸ್ವಲ್ಪ ಕಡಲೆಪುರಿ ಹಾಗು ಬಿಸ್ಕತ್ ಇದೆ ಬನ್ನಿ" ಅಂದ. ನಂತರ ಅ ದಿನ ಕೆರೆ ಹತ್ತಿರ ಮರದ ಬಳಿ ಕೂತು ಕೆರೆಗೆ ಎಷ್ಟು ಆನೆ ನೀರು ಕುಡಿಯೋಕೆ ಬಂತು, ಗಂಡೂ , ಹೆಣ್ಣೂ , ಮರಿನೂ , ಅದರ ಅಂದಾಜು ವಯಸ್ಸು... ಇವೆಲ್ಲ ಮಾಹಿತಿ ಬರಕೋಬೇಕಿತ್ತು. ಯದು ದೀಪು ಡಬ್ಬಲ್ ಬ್ಯಾರನ್ gun ಅನ್ನು ಅರ್ಧ ಅರ್ಧ ಗಂಟೆ ಒಬ್ಬರು ಅಂತ ಶಿಫ್ಟ್ ನಲ್ಲಿ ಹಿಡಿದುಕೊಂಡು ಕೂತಿದ್ದರು.

ಆನೆ ಲೆಕ್ಕ ಹಾಕ್ತ, ಕಾಡು ಬಗ್ಗೆ ಪುಟ್ಟ ಸ್ವಾಮಿ, ಮಾರ, ಚಂದ್ರನ್ನ ಪ್ರಶ್ನೆ ಕೇಳ್ತಾ ಸಂಜೆ ಅಯೀತು. ವಾಪಸ್ಸು ಐ ಬಿ ಗೆ ನೆಡೆದು ಬರ್ತಾ ಹೊಟ್ಟೆ ಹಸಿದು ಸುಸ್ತಾಗಿತ್ತು. ಪುಟ್ಟ ಸ್ವಾಮಿ ಬೇರೆ "ಕತ್ತಲಾಗ್ತಾ ಇದೆ ಸದ್ದು ಮಾಡದೇ ಬೇಗ ಬೇಗ ನೆಡಿರಿ ಸರ್" ಅಂತ ಇದ್ರೂ. ಬಯಾರಿಕೆಗೆ ಆಗಿ ನೀರು ಕುಡಿಯೋಣ ಅಂತ ಬಾಟಲ್ ನೋಡಿದ್ರೆ ಅ ನೀರಿನ ದಟ್ಟ ಬಣ್ಣ ನೋಡಿ ಕುಡಿಯಲು ಮನಸಾಗದೆ ನೀರು ಬಾಯಿಗೆ ಹಾಕಿ ಮುಕ್ಕಳಿಸಿ ಪುನಃ ಉಗಿದೆ. ಮೊದಲ ಸಾರಿಗೆ ನಮ್ಮ ಮೂವರಿಗೂ ಯಾಕೂ ಸೆನ್ಸಸ್ಗೆ ಬಂದಿದ್ದು ತಪ್ಪಾಯೀತು ಅಂತ ಅನ್ನಿಸ್ತು. ನಂತರ ಮಾರ " ಸರ್ ನಿಮಗೆ ಅಭ್ಯಾಸ ಇಲ್ಲ ನೋಡಿ ಅದಕ್ಕೆ ಸುಸ್ತು. ರಾತ್ರಿ ಉಟಕ್ಕೆ ಸುಬ್ಬಣ್ಣ ಮೀನು ಸಾರು ಮಾಡಿರ್ತಾನೆ. ಚೆನ್ನಾಗಿ ಊಟ ಮಾಡುರಂತೆ ಬೇಗ ನೆಡಿರಿ" ಅಂದ.

ನಾನು ಮತ್ತು ದೀಪು ಮೊದಲಿಂದ ಮೀನು ತಿನ್ನುತ ಇರಲಿಲ್ಲ ಅದಕ್ಕೆ ಬರಿ ಸಾರು ಹಾಕಿಸಿಕೊಂಡಿದ್ದೆವು. ನಾನು ಯದುಗೆ "ಮಗ ಮೀನು ಹೇಗಿದೆ?" ಅಂತ ಕೇಳಿದೆ. ಯದು "ಯಾರಿಗೆ ಗೊತ್ತು!!!" ಅಂದ, ಅದಕ್ಕೆ ದೀಪು "ಮತ್ತೆ 2 ಮೀನು ಹಾಕಿಸಿಕೋಂಡಿದ್ದಿಯಲ್ಲೊ ?!" ,ಅಂದ ಅದಕ್ಕೆ ಯದು " ಲೋ ನದಿಲಿ ಯಾವುದು ಸತ್ತೊಗಿರು ಮೀನು ತಂದು ಸಾರು ಮಾಡವ್ರೆ ಮೀನು ತಿನೋಣ ಅಂತೆ ಎಳೆದು ಎಳೆದು ಸಾಕಾಯಿತು ರಬ್ಬರ್ ತರಹ ಎಕ್ಷಪ್ಯಾಂಡ ಆಗುತ್ತೆ ಅಷ್ಟೇ, ತಿನ್ನೋಕೆ ಆಗ್ತಾ ಇಲ್ಲ... ಇಡಿ ನೀ ಟ್ರೈ ಮಾಡು" ಅಂತ ಒಂದು ಮೀನನ್ನು ನನ್ನ ತಟ್ಟೆಗೆ ಹಾಕೋಕೆ ಬಂದ. ನಾ ಅಲ್ಲಿಂದ ಎದ್ದು ಹೋದೆ. ಅವತ್ತು ಸಿಕ್ಕಪಟ್ಟೆ ನಡೆದ್ದುದರಿಂದ ಬೇಗ ನಿದ್ದೆ ಬಂತು.

ಸರಿ ಸೆನ್ಸಸ್ನ ಎರಡನೇ ದಿನ ಬೆಳಿಗ್ಗೆ ಎದ್ದು ರೆಡಿ ಆಗಿ ಸುಬ್ಬಣ್ಣನ ಸ್ಪೆಷಲ್ ಚಿತ್ರಾನ್ನ ತಿಂದು ನಂತರ ಯಾಕು ಇರಲಿ ಅಂತ ಸ್ವಲ್ಪ ಚಿತ್ರಾನ್ನ ನ ಪಾರ್ಸಲ್ ಮಾಡಿಕೊಂಡು ಹೊರೆತವು. ಪುನಃ ಬೇರೆ ರೂಟನಲ್ಲಿ ಅದೇ ಚೆನ್ನಮ್ಮನ ಕೆರೆಗೆ ಕರ್ಕೊಂಡುಬಂದ್ರು. ಆದ್ರೆ ಇವತ್ತು ಬಂದದ್ದು ಶಾರ್ಟ್ಕಟ್ ದಾರಿ. ನೆನ್ನೆ ನಾವು ನಡೆಯಲು ಗೋಳಡಿದ್ದರ ಎಫೆಕ್ಟ್ ಅದು. ಸರಿ ಇವತು ಯಾರ ಮುಖ ನೋಡಿದ್ದವು ಏನು ಕೆರೆ ಹತ್ತಿರ ಒಂದ ಆನೇನು ಸುಳಿಲಿಲ್ಲ . ಮಧ್ನಾಹ 1.30 ಗೆ ಚಿತ್ರಾನ್ನ ತಿಂದೆವು. ನಂತರ ನೀರು ಮುಕ್ಕಳಿಸಿದೆವು!!.. ಆಮೇಲೆ 2.30 ಕೆ ಸುಮಾರು 12-13 ಆನೆ ಇದ್ದ ಒಂದು ಗುಂಪು(ಅದ್ರಲ್ಲಿ 2 ಮರಿ) ಕೆರೆಗೆ ಬಂತು. ಸರಿ ಆನೆಗಳ ಡೀಟೇಲ್ಸ ಬರೆದುಕೊಂಡೆವು. ಮಧ್ಯ ನನಗೆ ಕೆಮ್ಮು ಬಂದು ಸ್ವಲ್ಪ ಜೋರಾಗಿಯೇ ಕೆಮ್ಮಿದೆ. ಯದು,ದೀಪು , ಪುಟ್ಟ ಸ್ವಾಮಿ, ಮಾರ,ಚಂದ್ರು ಎಲ್ಲ ನನ್ನ ಕಡೆಗೆ ನೋಡಿದರು. ತಕ್ಷಣ ಆನೆಗಳು ನೀರಿನಲ್ಲಿ ಆಟ ಆಡೋದು ನಿಲ್ಲಿಸಿ ನಮ್ಮ ಕಡೆ ನೋಡಿದವು. ಮಾರ , ಚಂದ್ರ ಅಲರ್ಟ್ ಆಗಿ ಎದ್ದು ಮರಗಳು ಇರುವ ಸೈಡಿಗೆ ಹೋಗಿ ಎಂದು ಸನ್ನೆ ಮಾಡಿದರು. ನಿಧಾನವಾಗಿ ಮರಗಳ ಹತ್ತಿರ ಹೋಗಿ ನಿಂತವು. ಆನೆಗಳು ಸ್ವಲ್ಪ ಹೊತ್ತು ನಮ್ಮ ಕಡೆ ಗುರಾಇಸಿ ಪುನಃ ಆಡಲು ಶುರು ಮಾಡಿದವು.

ನಂತರ ಮಾರ " ಮರಿಯಾನೆ ಇದ್ದಾರೆ ಆನೆಗಳು ಚಾರ್ಜ್ ಮಾಡೋದು ಜಾಸ್ತಿ ಅದಕ್ಕೆ ಸರ್ ಸದ್ದು ಮಾಡಬೇಡಿ..." ಅಂದ. ನಾನು ದೀಪು ಮತ್ತು ಯದುಗೆ "ನೋಡಿರೂ ಅನೆ ಬೈ ಚಾನ್ಸ್ ಅಟ್ಯಾಕ್ ಮಾಡಿದ್ರೆ !!!? ನೇರ ಓಡಬೇಡಿ ಜಿಗ ಜ್ಯಗ್ ಆಗಿ ಕಾಡೊಳಗೆ ಓಡಿ..." ಅಂತ ಯಾವುದು ಬುಕ್ಕಿನಲ್ಲಿ ಓದಿದ್ದ ಪಾಯಿಂಟ್ ನೆನಪಾಗಿ ಹೇಳಿದೆ. ಅವತ್ತು ಏನ್ ಗ್ರಚಾರ ಕೆಟ್ಟಿತ್ತೊ ಏನೋ? ದೀಪು ತನ್ನ ಕೈಯಲ್ಲಿದ್ದ gunನಿಂದ ಇದ್ದಕಿದ್ದಂತೆ ಅಚಾನಕ್ ಆಗಿ ಕ್ಲಿಕ್ ಅಂತ ಜೋರಾಗಿ ಸೌಂಡ್ ಮಾಡಿಸಿಬಿಟ್ಟ!!!. ತಕ್ಷಣ ೪-೫ ಆನೆಗಳು ಮರಿಯನೆಗಳನ್ನು ಸುತ್ತುವರಿದವು. 2 ದೊಡ್ಡ ಆನೆಗಳು ನಮ್ಮಕಡೆಗೆ ತಿರುಗಿ ಚಾರ್ಜ್ ಮಾಡಲು ರೇಡಿಯಾದವು. ನಾನು, ನನ್ನ ಪಕ್ಕ ದೀಪು, ಅವನ್ ಪಕ್ಕ ಯದು, ನಮ್ಮ ಮುಂದೆ ಮಾರ. ನಾನು & ಯದು ತಿರುಗಿನೋಡಿದರೆ ಚಂದ್ರ ಆಗಲೇ 8-9 ಅಡಿ ದೂರದಲ್ಲಿದ್ದ ಮರ ಹತ್ತಿಬಿಟ್ಟಿದ್ದಾನೆ!!!!!! ಪುಟ್ಟ ಸ್ವಾಮಿ ಯಂತು ಹತ್ತಿರದಲೆಲ್ಲೂ ಕಾಣದಹಾಗೆ ಪೋಟ್(ಎಸ್ಕೇಪ್) ಆಗಿಬಿಟ್ಟಿದ್ದ...ಮಾರ ಕೂಡಲೇ ದೀಪಯಿಂದ ಗನ ತೆಗೆದುಕೊಂದು ತೋಟ(ಬುಲೆಟ್) ಲೋಡ್ ಮಾಡಿಕೊಂಡ. 2 ಆನೆಗಳಲ್ಲಿ 1 ಅನೆ 2 ಹೆಜ್ಜೆ ಮುಂದೆ ಹಾಕಿದ ಕೂಡಲೆ ಮಾರ gunಅನ್ನು ಮೇಲೆ ಮಾಡಿ airfire ಮಾಡಿದ. ಅನೆ ನಿಂತಿತು.2-3 ನಿಮಿಷ ಏನು movements ಇಲ್ಲ... ಪುನಃ ಮಾರ ಮತ್ತೊಂದು ಸಲ airfire ಮಾಡಿದ. ಆಗ ಅನೆಗಳೆಲ್ಲ ನಿಧಾನವಾಗಿ ಕಾಡಿನಲ್ಲಿ ಮರೆಯಾದವು. ಆಮೇಲೆ ಹಿಂದಯಿಂದ ಪುಟ್ಟ ಸ್ವಾಮಿ "ನೋಡಿ ನಿಮ್ಮಿಂದ ಹೇಗೆ ಆಗಿ ಬಿಟ್ಟಿತು...? ಏನು ಪುಣ್ಯ gun fire ಅಯೀತು... stuck ಆಗಿದ್ದರೆ..?" ಅಂತ ಗೊಣಗುತ್ತ ಬಂದ. ಚಂದ್ರ ಕೂಡ "ನಮ್ಮ ಹೆಂಡತಿ ಮಕ್ಕಳ ಗತಿ ಏನು ಸರ್?" ಅನ್ಕೊಂಡು ಮರ ಇಳಿದು ಬಂದ. ಮಾರ ಮಾತ್ರ ಏನು ಹೇಳದೆ "ಹುಷಾರಾಗಿ ನೆಡಿರಿ ಸಾರ್.. ವಾಪಸ್ಸು ಐ ಬಿ ಗೆ ಹೋಗೋಣ" ಅಂತ ಮುಂದೆ ಹೆಜ್ಜೆ ಹಾಕಿದ. ನನಗೆ, ದೀಪುಗೆ, ಯದುಗೆ ಇದ್ದಕಿದ್ದಂತೆ ಮಾರನ ಮೇಲೆ ಗೌರವ, ಭಕ್ತಿ ಮೂಡಿದ ಹಾಗೆಆಯಿತು . ಆಗಿದ್ದ ಗಾಬರಿಗೆ ನಾವು ಬಾಟಲ್ ನಲ್ಲಿದ್ದ ನೀರನ್ನು (ಲದ್ದಿ ನೀರನ್ನು!!!?) ಕುಡಿದು ಖಾಲಿ ಮಾಡಿದೆವು.ವಾಪಸ್ಸು ಐ ಬಿ ಗೆ ಬಂದು ಊಟ ಮಾಡಿ ಮಲಗಿದವು.

ಮಾರನೇ ದಿನ ನಾವು ಎದ್ದು, ನಮಗೆ ಸುಸ್ತಾಗಿದೆ ನಾವು ಬರುವುದಿಲ್ಲ, ನೀವೇ ಹೋಗಿ ಬನ್ನಿ ಪ್ಲಿಜ್ ಎಂದೆವು. ಸರಿ ಎಂದು ಮಾರ, ಚಂದ್ರ ಸರ್ವೆಗೆ ಹೊರಟರು. ನಾವು ಸುಬ್ಬಣ್ಣ ಮಾಡಿದ್ದ ಉಪ್ಪಿಟ್ಟು ತಿಂದು ಅಲ್ಲೇ ಐ ಬಿ ಸುತ್ತ ತಿರುಗುತ್ತ ಟೈಮ್ ಪಾಸ್ ಮಾಡಿದವು. ಮಧ್ನಹದ ಹೊತ್ತಿಗೆ ರೇಂಜರ್ ಜೀಪಿನಲ್ಲಿ ಬಂದರು. ಯದು ತಕ್ಷಣ ಹೋಗಿ ಜೀಪ್ಯೆಲ್ಲ ಹುಡುಕಾಡಿ ಅರ್ಧ ಬಾಟಲ್ ಬಿಸ್ಲಾರಿ ನೀರು ತಂದ ನಾನು,ದೀಪು,ಯದು ಮೂರೂ ಜನ ಶುದ್ದ ನೀರು ಕುಡಿದು ಸಂತೊಷಪಟ್ಟೆವು!!!. ಮಾಡಿದ್ದ ಸರ್ವೇ, ಬರೆದುಕೊಂಡಿದ್ದ ಡೀಟೇಲ್ಸ ಎಲ್ಲಾ ರೇಂಜರ್ ಗೆ ಕೊಟ್ಟು ನಂತರ ಎಲ್ಲರಿಗು ವಿದಾಯ ಹೇಳಿ ರೇಂಜರ್ ಜೀಪ್ನಲ್ಲಿ ಹಚ. ಡಿ. ಕೋಟೆ ವರೆಗೆ ಡ್ರಾಪ್ ಮಾಡಿಸಿಕೊಂಡು ಅಲ್ಲಿಂದ ಮೈಸೂರು ಬಸ್ ಹತ್ತಿದವು.

ಇವತ್ತಿಗೂ ಅಷ್ಟೇ ಯಾರಾದರು ಕುಡಿಯವ ನೀರಿನ ಬಗ್ಗೆ ಕಾಮೆಂಟ್ ಮಾಡಿ, ಸರಿ ಇಲ್ಲ, ಧೂಳ್ ಇದೆ , ಕಸ ಇದೆ ಅಂದರೆ ನಾನಾಗಲಿ, ದೀಪು ಆಗಲಿ, ಯದು ಆಗಲಿ " ನಾವು ಎಲಿಫಂಟ್ ಸೆನ್ಸಸ್ ನಲ್ಲಿ ಕುಡಿದ ಗುಂಡ್ರೆ ನದಿ ನೀರಿಗಿಂತನಾ ???!!!" ಅಂತ ಕೇಳ್ತೀವಿ"...