Monday, March 22, 2010

2002ರ ಎಲಿಫಂಟ್ ಸೆನ್ಸಸ್ ಹಾಗು ಕುಡಿಯೋ ನೀರು...

ಫಿಲಂಗಳಲ್ಲಿ ಕಾಡು, ದಟ್ಟವಾದ ಹಸಿರು ಗಿಡ ಮರ, ನದಿ, ಪ್ರಾಣಿಗಳನ್ನು ನೋಡಿ ಪುಲ್ ಇಂಪ್ರೆಸ್ ಆಗಿ 2001ರ ಅಕ್ಟೋಬರ್ ತಿಂಗಳಲ್ಲಿ ಟೈಗರ್ ಸೆನ್ಸಸ್ಗೆ ಅಂತ 3 ದಿನ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಆ ಮಳೆ ಹಾಗು ಮಂಜಿನಲ್ಲಿ ಕಡಿಮೆ ಅಂದ್ರು 40 ಕಿಲೋಮೀಟರು ಅನ್ನು ಸರ್ವೇ ಮಾಡಿದ್ದೆವು. ಆಗ 5 ಜನ ಹೋಗಿದ್ವಿ ಅದ್ರಲ್ಲಿ ಇಬ್ಬರು ಲೇಡಿಸ್ ಇದ್ರೂ, ಹಂಗಾಗಿ ಫೆಸಿಲಿಟಿ ಸ್ವಲ್ಪ ಚೆನ್ನಾಗೆ ಇತ್ತು. ಪುನಃ 7 ತಿಂಗಳ ನಂತರ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಎಲಿಫಂಟ್ ಸೆನ್ಸಸ್ ಗೆ ಇಷ್ಟ ಹಾಗು ಆಸಕ್ತಿ ಇದ್ದ ಜನ ಬರಬಹುದು ಅಂತ ಪೇಪರನಲ್ಲಿ ಹಾಕಿದಾಗ ನಾನು ಯದು ಮತ್ತೇ ದೀಪುನ ಕರೆದು " ಲೋ ಹೋಗೋಣ ಕಣ್ರೋ... ಮಸ್ತಾಗಿ ಇರುತ್ತೆ, 3 ದಿನನದ್ರು ಈ ಸಿಟಿ ಲೈಪ್ ಬಿಟ್ಟು ಕಾಡು ಸೇರೋಣ" ಅಂತ ಅವರನ್ನು ಮತ್ತು ಅವರ ತಂದೆ ತಾಯೀಯವರನ್ನು ಒಪ್ಪಿಸಿ, ನಮ್ಮ ಅಣ್ಣ ಶಶಿ ದೋಸ್ತ್ ಶ್ರೀಧರನ ತಂದೆ ತಂಗರಾಜುರವರು ರೇಂಜರ್ ಆಗಿದ್ದ ಗುಂಡ್ರೆ ಫಾರೆಸ್ಟ್ ಗೆ ಪೋನ್ ಮಾಡಿಸಿ ಅವರ ಇನ್ ಪ್ಲೋಯನ್ಸ್ ಮಾಡಿಸಿ ಮಧ್ನಾಹ 3 ಗಂಟೆಗೆ ಮೈಸೂರನಿಂದ ಹೋರಟವು

ಮೈಸೂರ್ ಯಿಂದ ಬಂಡೀಪುರಕ್ಕೆ ಹೋಗಿ ಅಲ್ಲಿಂದ ರೇಂಜರ್ ನಮ್ಮನ್ನು ಹಾಗು ನಮ್ಮ ಹಾಗೆ ಸೆನ್ಸಸ್ಗೆ ಬಂದಿದ್ದ ಇನ್ನಿಬ್ಬರನ್ನುಜೀಪ್ ನಲ್ಲಿ ಕರ್ಕೊಂಡು, ಅ ಇಬ್ಬರನ್ನು ನಾಯೀಹಳ್ಳ ಕ್ಯಾಂಪಿಗೆ ಡ್ರಾಪ್ ಮಾಡಿ ನನ್ನನ್ನ , ದೀಪುನ ಹಾಗು ಯದುನ ಕರ್ನಾಟಕ ಹಾಗು ಕೇರಳ ಗಡಿಯಲ್ಲಿರುವ ಪುಲ್ ಡೆನ್ಸ & ತಿಕ್ಕ್ ಅದ ಗುಂಡ್ರೆ ಫಾರೆಸ್ಟ್ ಮಧ್ಯ ಇರುವ ಐ ಬಿ ಗೆ ಡ್ರಾಪ್ ಮಾಡಿದರು. ಅಲ್ಲಿದ್ದ ವಾಚರ ಪುಟ್ಟ ಸ್ವಾಮಿ , ಮಾರ, ಚಂದ್ರು ಹಾಗು ಕುಕ್ ಸುಬ್ಬಣ್ಣಗೆ ರೇಂಜರ್ ರವರು "ಇವರು ನಮ್ಮ ಮಗನ ಫ್ರೆಂಡ್ಸ್ ಗಳು ಚೆನ್ನಾಗಿ ನೋಡಿಕೊಂಡು, ಕಡು ತಿರುಗಿಸಿ, ಸರ್ವೇ ಮಾಡಿಸಿ" ಅಂತ ಹೇಳಿ ನಮ್ಮ ಕಡೆ ತಿರುಗಿ " ಆನೆ ಬಹಳ ಢೇಂಜರ್ ಅನಿಮಲ್ ಕಣ್ರಪ್ಪ, ಹುಷಾರು... ನಾನು ಪುನಃ ಬರತ್ತೀನಿ." ಅಂದು ಹೊರಟುಹೋದರು. journey ಯಿಂದ ಸುಸ್ತಾಗಿದ್ದ ನಾವು ಪುಟ್ಟ ಸ್ವಾಮಿ ಹತ್ತಿರ ನಾವು ನಾಳೆಯಿಂದ 3 ದಿನ ಏನ್ ಮಾಡಬೇಕು?, ಎಷ್ಟು ದೂರ ನಡಿಬೇಕು? ಅಂತ ಕೇಳ್ತಾ ಸುಬ್ಬಣ್ಣ ಮಾಡಿದ್ದ ಅನ್ನ ,ಸಾರು ತಿಂದು, ಇದ್ದ ಕಾಟನಲ್ಲಿ ಮೂರುಜನ ಮಲಗಿದವು.
ಬೆಳಿಗ್ಗೆ ಐ ಬಿ ಹೊರಗಿಂದ ದೀಪು " ಲೋ ಮಗ ಬಾರೂ ಇಲ್ಲಿ ಜಿಂಕೆ, ನವಿಲು ಎಷ್ಟ ಹತ್ತಿರ ಬಂದಿದ್ದವೆ ನೋಡು ಬಾ ಇಲ್ಲಿ" ಎಂದ. ನಾನು ಯದು ಹೊರಗೆ ಬಂದು ನೋಡಿದ ಕೊಡಲೇ ಯದು "ಸಾರ್ಥಕ ಅಯೀತು ಮಗ ಜೀವನ" ಅಂದ. ಐ ಬಿ ಮುಂದೆ ಕರ್ನಾಟಕಗೆ ಹಾಗು ಕೇರಳಗೆ ಬಾರ್ಡರ್ ಹಾಕಿದ ಹಾಗೆ ಕಬಿನಿ ನದಿ ಹರಿತ ಇತ್ತು. ನದಿಯ ಹತ್ತಿರ ಹೋದ್ರೆ 20 ಅಡಿ ಆಳದ ನದಿ ಬೇಸಿಗೆಗೆ 5-6 ಅಡಿಗೆ ಒಣಗಿತ್ತು ಹಾಗು ನೀರು ಒಳ್ಳೆ ನಮ್ಮ ಸೇಟೂ ಹೋಟೆಲ್ ಟೀ ತರಹ ಕೆಂಪಗಿತ್ತು. ಯದು "ಮಗ ಅದೇನ್ಲಾ ನೀರ್ ನಲ್ಲಿ ತೇಲತಾ ಇರೂದು? " ಅಂದ ಅದಕೆ ನಾನು "ಆನೆ ಲದ್ದಿ ಮಗ!!" ಎಂದೆ. ಸರಿ ನಾವು ಮೂವರು ಐ ಬಿ ಗೆ ವಾಪಸ್ಸು ಬಂದು ನಿತ್ಯಕರ್ಮ, ಸ್ನಾನ ಎಲ್ಲ ಮುಗಿಸಿ ಬರುವಷ್ಟರಲ್ಲಿ ಸುಬ್ಬಣ್ಣ ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ರು. "ಏನೇ ಹೇಳಿ ಕಾಡಿನಲ್ಲಿ ಏನ್ ಮಾಡಿ ತಿಂದರು ಮ್ರುಷ್ಟನ್ನದತರಹ ಇರುತ್ತೆ" ಅಂದ ದೀಪು ಉಪ್ಪಿಟ್ಟು ತಿನ್ನುತ. ನಾನು ಪುಟ್ಟ ಸ್ವಾಮಿ ಗೆ "ಸರ್ ಈ ಕಾಡಲ್ಲಿ ಸ್ನಾನಕ್ಕೆ, ಅಡುಗೆಗೆ ನೀರು ಎಲ್ಲಿಂದ ತರ್ತೀರ?" ಎಂದೇ ಅದಕ್ಕೆ ಪುಟ್ಟ ಸ್ವಾಮಿ "ಐ ಬಿ ಮುಂದೇನೆ ನದಿ ಇಟ್ಕೊಂಡು ನೀರಿಗೆ ಯಾಕೆ ಅಲೆಯೋಣ ಸರ್ !!!" ಅಂದ. ತಕ್ಷಣ ನಾನು, ದೀಪು, ಯದು ಮೂವರು ಆನೆ ಲದ್ದಿ ತೇಲತ ಇದ್ದ ಅ ನದಿ ನೆನಸ್ಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು . ಮಾರನಿಗೆ ಅರ್ಥವಾಗಿ "ಏನ್ ತಲೆ ಕೆಡಿಸ್ಕೊಳಬೇಡಿ ಸರ್... ಚೆನ್ನಾಗಿ ಕಾಯಿಸಿ ಅಡುಗೆಗೆ ಉಪಯೋಗಿಸುದು" ಅಂದ.

ಸರಿ ತಿಂಡಿ ನಂತರ ಸೆನ್ಸಸ್ಗೆ ಹೊರಟೆವು. ಹೊರಡೋ ಮುಂಚೆ ಪುಟ್ಟ ಸ್ವಾಮಿ ನಮಗೆಲ್ಲ ಕಾಡಿನಲ್ಲಿ ಹೇಗಿರಬೇಕು ಅಂತ ಬ್ರೀಫೀಂಗ ಮಾಡಿದರು. " ಯಾರು ಕಾಡಿನಲ್ಲಿ ಅನವಶ್ಯಕವಾಗಿ ಹಾಗು ಜೋರಾಗಿ ಮಾತಾಡಬೇಡಿ, ನಮ್ಮ ಜೊತೇನೆ ಇರಿ ಅಲ್ಲಿ ಇಲ್ಲಿ ಹೋಗಬೇಡಿ" ಅಂತೆಲ್ಲ ಹೇಳಿದ್ರು. ನಂತರ 10 ಕಿಲೋಮೀಟರು ಟ್ರೆಕ್ ಮಾಡಿದೆವು"... ಆನೆ, ಅದರ ಲದ್ದಿ, ಅದರ ನಿಶಾನೆಗಳನ್ನು ಹುಡುಕಿಕೊಂಡು. ಉಪ್ಪಿಟ್ಟು ಆಗಲೇ ಕರಗಿಹೋಗಿತ್ತು. ಯದು "ಮಧ್ನಹದ ಊಟ ಎಲ್ಲಿ?"ಎಂದು ಚಂದ್ರನ್ನ ಕೇಳಿದ. ಅದಕ್ಕೆ ಪುಟ್ಟ ಸ್ವಾಮಿ "ಊಟ? ರಾತ್ರಿನೇ..." ಅಂದ್ರು. ನನಗಂತು ಕೋಪಹತಿಹೋಯಿತು "ನನ್ನ ಕೈಲಿ ಇನ್ನು ನಡಿಯಕ್ಕೆ ಆಗಲ್ಲ" ಅಂದೆ. ಮಾರ ಅದಕ್ಕೆ " ಇಲ್ಲೇ ಇನ್ನು 1 ಕಿಲೋಮೀಟರು ಚೆನ್ನಮ್ಮನ ಕೆರೆ ಸಿಗುತ್ತೆ, ಅಲ್ಲಿ ಸಂಜೆವರೆಗೂ ಕೂತು ಆನೆ ಕಾಯಬೇಕು. ಸ್ವಲ್ಪ ಕಡಲೆಪುರಿ ಹಾಗು ಬಿಸ್ಕತ್ ಇದೆ ಬನ್ನಿ" ಅಂದ. ನಂತರ ಅ ದಿನ ಕೆರೆ ಹತ್ತಿರ ಮರದ ಬಳಿ ಕೂತು ಕೆರೆಗೆ ಎಷ್ಟು ಆನೆ ನೀರು ಕುಡಿಯೋಕೆ ಬಂತು, ಗಂಡೂ , ಹೆಣ್ಣೂ , ಮರಿನೂ , ಅದರ ಅಂದಾಜು ವಯಸ್ಸು... ಇವೆಲ್ಲ ಮಾಹಿತಿ ಬರಕೋಬೇಕಿತ್ತು. ಯದು ದೀಪು ಡಬ್ಬಲ್ ಬ್ಯಾರನ್ gun ಅನ್ನು ಅರ್ಧ ಅರ್ಧ ಗಂಟೆ ಒಬ್ಬರು ಅಂತ ಶಿಫ್ಟ್ ನಲ್ಲಿ ಹಿಡಿದುಕೊಂಡು ಕೂತಿದ್ದರು.

ಆನೆ ಲೆಕ್ಕ ಹಾಕ್ತ, ಕಾಡು ಬಗ್ಗೆ ಪುಟ್ಟ ಸ್ವಾಮಿ, ಮಾರ, ಚಂದ್ರನ್ನ ಪ್ರಶ್ನೆ ಕೇಳ್ತಾ ಸಂಜೆ ಅಯೀತು. ವಾಪಸ್ಸು ಐ ಬಿ ಗೆ ನೆಡೆದು ಬರ್ತಾ ಹೊಟ್ಟೆ ಹಸಿದು ಸುಸ್ತಾಗಿತ್ತು. ಪುಟ್ಟ ಸ್ವಾಮಿ ಬೇರೆ "ಕತ್ತಲಾಗ್ತಾ ಇದೆ ಸದ್ದು ಮಾಡದೇ ಬೇಗ ಬೇಗ ನೆಡಿರಿ ಸರ್" ಅಂತ ಇದ್ರೂ. ಬಯಾರಿಕೆಗೆ ಆಗಿ ನೀರು ಕುಡಿಯೋಣ ಅಂತ ಬಾಟಲ್ ನೋಡಿದ್ರೆ ಅ ನೀರಿನ ದಟ್ಟ ಬಣ್ಣ ನೋಡಿ ಕುಡಿಯಲು ಮನಸಾಗದೆ ನೀರು ಬಾಯಿಗೆ ಹಾಕಿ ಮುಕ್ಕಳಿಸಿ ಪುನಃ ಉಗಿದೆ. ಮೊದಲ ಸಾರಿಗೆ ನಮ್ಮ ಮೂವರಿಗೂ ಯಾಕೂ ಸೆನ್ಸಸ್ಗೆ ಬಂದಿದ್ದು ತಪ್ಪಾಯೀತು ಅಂತ ಅನ್ನಿಸ್ತು. ನಂತರ ಮಾರ " ಸರ್ ನಿಮಗೆ ಅಭ್ಯಾಸ ಇಲ್ಲ ನೋಡಿ ಅದಕ್ಕೆ ಸುಸ್ತು. ರಾತ್ರಿ ಉಟಕ್ಕೆ ಸುಬ್ಬಣ್ಣ ಮೀನು ಸಾರು ಮಾಡಿರ್ತಾನೆ. ಚೆನ್ನಾಗಿ ಊಟ ಮಾಡುರಂತೆ ಬೇಗ ನೆಡಿರಿ" ಅಂದ.

ನಾನು ಮತ್ತು ದೀಪು ಮೊದಲಿಂದ ಮೀನು ತಿನ್ನುತ ಇರಲಿಲ್ಲ ಅದಕ್ಕೆ ಬರಿ ಸಾರು ಹಾಕಿಸಿಕೊಂಡಿದ್ದೆವು. ನಾನು ಯದುಗೆ "ಮಗ ಮೀನು ಹೇಗಿದೆ?" ಅಂತ ಕೇಳಿದೆ. ಯದು "ಯಾರಿಗೆ ಗೊತ್ತು!!!" ಅಂದ, ಅದಕ್ಕೆ ದೀಪು "ಮತ್ತೆ 2 ಮೀನು ಹಾಕಿಸಿಕೋಂಡಿದ್ದಿಯಲ್ಲೊ ?!" ,ಅಂದ ಅದಕ್ಕೆ ಯದು " ಲೋ ನದಿಲಿ ಯಾವುದು ಸತ್ತೊಗಿರು ಮೀನು ತಂದು ಸಾರು ಮಾಡವ್ರೆ ಮೀನು ತಿನೋಣ ಅಂತೆ ಎಳೆದು ಎಳೆದು ಸಾಕಾಯಿತು ರಬ್ಬರ್ ತರಹ ಎಕ್ಷಪ್ಯಾಂಡ ಆಗುತ್ತೆ ಅಷ್ಟೇ, ತಿನ್ನೋಕೆ ಆಗ್ತಾ ಇಲ್ಲ... ಇಡಿ ನೀ ಟ್ರೈ ಮಾಡು" ಅಂತ ಒಂದು ಮೀನನ್ನು ನನ್ನ ತಟ್ಟೆಗೆ ಹಾಕೋಕೆ ಬಂದ. ನಾ ಅಲ್ಲಿಂದ ಎದ್ದು ಹೋದೆ. ಅವತ್ತು ಸಿಕ್ಕಪಟ್ಟೆ ನಡೆದ್ದುದರಿಂದ ಬೇಗ ನಿದ್ದೆ ಬಂತು.

ಸರಿ ಸೆನ್ಸಸ್ನ ಎರಡನೇ ದಿನ ಬೆಳಿಗ್ಗೆ ಎದ್ದು ರೆಡಿ ಆಗಿ ಸುಬ್ಬಣ್ಣನ ಸ್ಪೆಷಲ್ ಚಿತ್ರಾನ್ನ ತಿಂದು ನಂತರ ಯಾಕು ಇರಲಿ ಅಂತ ಸ್ವಲ್ಪ ಚಿತ್ರಾನ್ನ ನ ಪಾರ್ಸಲ್ ಮಾಡಿಕೊಂಡು ಹೊರೆತವು. ಪುನಃ ಬೇರೆ ರೂಟನಲ್ಲಿ ಅದೇ ಚೆನ್ನಮ್ಮನ ಕೆರೆಗೆ ಕರ್ಕೊಂಡುಬಂದ್ರು. ಆದ್ರೆ ಇವತ್ತು ಬಂದದ್ದು ಶಾರ್ಟ್ಕಟ್ ದಾರಿ. ನೆನ್ನೆ ನಾವು ನಡೆಯಲು ಗೋಳಡಿದ್ದರ ಎಫೆಕ್ಟ್ ಅದು. ಸರಿ ಇವತು ಯಾರ ಮುಖ ನೋಡಿದ್ದವು ಏನು ಕೆರೆ ಹತ್ತಿರ ಒಂದ ಆನೇನು ಸುಳಿಲಿಲ್ಲ . ಮಧ್ನಾಹ 1.30 ಗೆ ಚಿತ್ರಾನ್ನ ತಿಂದೆವು. ನಂತರ ನೀರು ಮುಕ್ಕಳಿಸಿದೆವು!!.. ಆಮೇಲೆ 2.30 ಕೆ ಸುಮಾರು 12-13 ಆನೆ ಇದ್ದ ಒಂದು ಗುಂಪು(ಅದ್ರಲ್ಲಿ 2 ಮರಿ) ಕೆರೆಗೆ ಬಂತು. ಸರಿ ಆನೆಗಳ ಡೀಟೇಲ್ಸ ಬರೆದುಕೊಂಡೆವು. ಮಧ್ಯ ನನಗೆ ಕೆಮ್ಮು ಬಂದು ಸ್ವಲ್ಪ ಜೋರಾಗಿಯೇ ಕೆಮ್ಮಿದೆ. ಯದು,ದೀಪು , ಪುಟ್ಟ ಸ್ವಾಮಿ, ಮಾರ,ಚಂದ್ರು ಎಲ್ಲ ನನ್ನ ಕಡೆಗೆ ನೋಡಿದರು. ತಕ್ಷಣ ಆನೆಗಳು ನೀರಿನಲ್ಲಿ ಆಟ ಆಡೋದು ನಿಲ್ಲಿಸಿ ನಮ್ಮ ಕಡೆ ನೋಡಿದವು. ಮಾರ , ಚಂದ್ರ ಅಲರ್ಟ್ ಆಗಿ ಎದ್ದು ಮರಗಳು ಇರುವ ಸೈಡಿಗೆ ಹೋಗಿ ಎಂದು ಸನ್ನೆ ಮಾಡಿದರು. ನಿಧಾನವಾಗಿ ಮರಗಳ ಹತ್ತಿರ ಹೋಗಿ ನಿಂತವು. ಆನೆಗಳು ಸ್ವಲ್ಪ ಹೊತ್ತು ನಮ್ಮ ಕಡೆ ಗುರಾಇಸಿ ಪುನಃ ಆಡಲು ಶುರು ಮಾಡಿದವು.

ನಂತರ ಮಾರ " ಮರಿಯಾನೆ ಇದ್ದಾರೆ ಆನೆಗಳು ಚಾರ್ಜ್ ಮಾಡೋದು ಜಾಸ್ತಿ ಅದಕ್ಕೆ ಸರ್ ಸದ್ದು ಮಾಡಬೇಡಿ..." ಅಂದ. ನಾನು ದೀಪು ಮತ್ತು ಯದುಗೆ "ನೋಡಿರೂ ಅನೆ ಬೈ ಚಾನ್ಸ್ ಅಟ್ಯಾಕ್ ಮಾಡಿದ್ರೆ !!!? ನೇರ ಓಡಬೇಡಿ ಜಿಗ ಜ್ಯಗ್ ಆಗಿ ಕಾಡೊಳಗೆ ಓಡಿ..." ಅಂತ ಯಾವುದು ಬುಕ್ಕಿನಲ್ಲಿ ಓದಿದ್ದ ಪಾಯಿಂಟ್ ನೆನಪಾಗಿ ಹೇಳಿದೆ. ಅವತ್ತು ಏನ್ ಗ್ರಚಾರ ಕೆಟ್ಟಿತ್ತೊ ಏನೋ? ದೀಪು ತನ್ನ ಕೈಯಲ್ಲಿದ್ದ gunನಿಂದ ಇದ್ದಕಿದ್ದಂತೆ ಅಚಾನಕ್ ಆಗಿ ಕ್ಲಿಕ್ ಅಂತ ಜೋರಾಗಿ ಸೌಂಡ್ ಮಾಡಿಸಿಬಿಟ್ಟ!!!. ತಕ್ಷಣ ೪-೫ ಆನೆಗಳು ಮರಿಯನೆಗಳನ್ನು ಸುತ್ತುವರಿದವು. 2 ದೊಡ್ಡ ಆನೆಗಳು ನಮ್ಮಕಡೆಗೆ ತಿರುಗಿ ಚಾರ್ಜ್ ಮಾಡಲು ರೇಡಿಯಾದವು. ನಾನು, ನನ್ನ ಪಕ್ಕ ದೀಪು, ಅವನ್ ಪಕ್ಕ ಯದು, ನಮ್ಮ ಮುಂದೆ ಮಾರ. ನಾನು & ಯದು ತಿರುಗಿನೋಡಿದರೆ ಚಂದ್ರ ಆಗಲೇ 8-9 ಅಡಿ ದೂರದಲ್ಲಿದ್ದ ಮರ ಹತ್ತಿಬಿಟ್ಟಿದ್ದಾನೆ!!!!!! ಪುಟ್ಟ ಸ್ವಾಮಿ ಯಂತು ಹತ್ತಿರದಲೆಲ್ಲೂ ಕಾಣದಹಾಗೆ ಪೋಟ್(ಎಸ್ಕೇಪ್) ಆಗಿಬಿಟ್ಟಿದ್ದ...ಮಾರ ಕೂಡಲೇ ದೀಪಯಿಂದ ಗನ ತೆಗೆದುಕೊಂದು ತೋಟ(ಬುಲೆಟ್) ಲೋಡ್ ಮಾಡಿಕೊಂಡ. 2 ಆನೆಗಳಲ್ಲಿ 1 ಅನೆ 2 ಹೆಜ್ಜೆ ಮುಂದೆ ಹಾಕಿದ ಕೂಡಲೆ ಮಾರ gunಅನ್ನು ಮೇಲೆ ಮಾಡಿ airfire ಮಾಡಿದ. ಅನೆ ನಿಂತಿತು.2-3 ನಿಮಿಷ ಏನು movements ಇಲ್ಲ... ಪುನಃ ಮಾರ ಮತ್ತೊಂದು ಸಲ airfire ಮಾಡಿದ. ಆಗ ಅನೆಗಳೆಲ್ಲ ನಿಧಾನವಾಗಿ ಕಾಡಿನಲ್ಲಿ ಮರೆಯಾದವು. ಆಮೇಲೆ ಹಿಂದಯಿಂದ ಪುಟ್ಟ ಸ್ವಾಮಿ "ನೋಡಿ ನಿಮ್ಮಿಂದ ಹೇಗೆ ಆಗಿ ಬಿಟ್ಟಿತು...? ಏನು ಪುಣ್ಯ gun fire ಅಯೀತು... stuck ಆಗಿದ್ದರೆ..?" ಅಂತ ಗೊಣಗುತ್ತ ಬಂದ. ಚಂದ್ರ ಕೂಡ "ನಮ್ಮ ಹೆಂಡತಿ ಮಕ್ಕಳ ಗತಿ ಏನು ಸರ್?" ಅನ್ಕೊಂಡು ಮರ ಇಳಿದು ಬಂದ. ಮಾರ ಮಾತ್ರ ಏನು ಹೇಳದೆ "ಹುಷಾರಾಗಿ ನೆಡಿರಿ ಸಾರ್.. ವಾಪಸ್ಸು ಐ ಬಿ ಗೆ ಹೋಗೋಣ" ಅಂತ ಮುಂದೆ ಹೆಜ್ಜೆ ಹಾಕಿದ. ನನಗೆ, ದೀಪುಗೆ, ಯದುಗೆ ಇದ್ದಕಿದ್ದಂತೆ ಮಾರನ ಮೇಲೆ ಗೌರವ, ಭಕ್ತಿ ಮೂಡಿದ ಹಾಗೆಆಯಿತು . ಆಗಿದ್ದ ಗಾಬರಿಗೆ ನಾವು ಬಾಟಲ್ ನಲ್ಲಿದ್ದ ನೀರನ್ನು (ಲದ್ದಿ ನೀರನ್ನು!!!?) ಕುಡಿದು ಖಾಲಿ ಮಾಡಿದೆವು.ವಾಪಸ್ಸು ಐ ಬಿ ಗೆ ಬಂದು ಊಟ ಮಾಡಿ ಮಲಗಿದವು.

ಮಾರನೇ ದಿನ ನಾವು ಎದ್ದು, ನಮಗೆ ಸುಸ್ತಾಗಿದೆ ನಾವು ಬರುವುದಿಲ್ಲ, ನೀವೇ ಹೋಗಿ ಬನ್ನಿ ಪ್ಲಿಜ್ ಎಂದೆವು. ಸರಿ ಎಂದು ಮಾರ, ಚಂದ್ರ ಸರ್ವೆಗೆ ಹೊರಟರು. ನಾವು ಸುಬ್ಬಣ್ಣ ಮಾಡಿದ್ದ ಉಪ್ಪಿಟ್ಟು ತಿಂದು ಅಲ್ಲೇ ಐ ಬಿ ಸುತ್ತ ತಿರುಗುತ್ತ ಟೈಮ್ ಪಾಸ್ ಮಾಡಿದವು. ಮಧ್ನಹದ ಹೊತ್ತಿಗೆ ರೇಂಜರ್ ಜೀಪಿನಲ್ಲಿ ಬಂದರು. ಯದು ತಕ್ಷಣ ಹೋಗಿ ಜೀಪ್ಯೆಲ್ಲ ಹುಡುಕಾಡಿ ಅರ್ಧ ಬಾಟಲ್ ಬಿಸ್ಲಾರಿ ನೀರು ತಂದ ನಾನು,ದೀಪು,ಯದು ಮೂರೂ ಜನ ಶುದ್ದ ನೀರು ಕುಡಿದು ಸಂತೊಷಪಟ್ಟೆವು!!!. ಮಾಡಿದ್ದ ಸರ್ವೇ, ಬರೆದುಕೊಂಡಿದ್ದ ಡೀಟೇಲ್ಸ ಎಲ್ಲಾ ರೇಂಜರ್ ಗೆ ಕೊಟ್ಟು ನಂತರ ಎಲ್ಲರಿಗು ವಿದಾಯ ಹೇಳಿ ರೇಂಜರ್ ಜೀಪ್ನಲ್ಲಿ ಹಚ. ಡಿ. ಕೋಟೆ ವರೆಗೆ ಡ್ರಾಪ್ ಮಾಡಿಸಿಕೊಂಡು ಅಲ್ಲಿಂದ ಮೈಸೂರು ಬಸ್ ಹತ್ತಿದವು.

ಇವತ್ತಿಗೂ ಅಷ್ಟೇ ಯಾರಾದರು ಕುಡಿಯವ ನೀರಿನ ಬಗ್ಗೆ ಕಾಮೆಂಟ್ ಮಾಡಿ, ಸರಿ ಇಲ್ಲ, ಧೂಳ್ ಇದೆ , ಕಸ ಇದೆ ಅಂದರೆ ನಾನಾಗಲಿ, ದೀಪು ಆಗಲಿ, ಯದು ಆಗಲಿ " ನಾವು ಎಲಿಫಂಟ್ ಸೆನ್ಸಸ್ ನಲ್ಲಿ ಕುಡಿದ ಗುಂಡ್ರೆ ನದಿ ನೀರಿಗಿಂತನಾ ???!!!" ಅಂತ ಕೇಳ್ತೀವಿ"...

3 comments:

  1. Wonderfull Starting Brother.... :)

    Long way to go...Wish you all the Best !!

    ReplyDelete
  2. Machi flashback nenskondu kannalli neer banthu maga, .... Jolly days :-)

    ReplyDelete
  3. Rakesh,
    he loku maga chenag baritya kano. Good narration maga interesting carry on maga regular agi inmele odtini kanla.

    ReplyDelete